Tuesday, December 21, 2010
ಒಲುಮೆ ಸಿರಿಯ ಕಂಡು
ಚಿತ್ರ: ಬಂಗಾರದ ಜಿಂಕೆ
ಸಾಹಿತ್ಯ : ದೊಡ್ಡರಂಗೇಗೌಡ
ಸಂಗೀತ : ವಿಜಯಭಾಸ್ಕರ್
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೦
ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ..
ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ..
ಚೆಂದಾಗಿ ಕೂಡಿದ ಸುಂದರ ಸಮಯ ಕನಸಾಗಿದೆ
ಓಡೋಡಿ ನಲಿದ ಸೊಂಪಾದ ಗಾನವ ಮರೆತಾಗಿದೆ
ಚೆಂದಾಗಿ ಕೂಡಿದ ಸುಂದರ ಸಮಯ ಕನಸಾಗಿದೆ
ಓಡೋಡಿ ನಲಿದ ಸೊಂಪಾದ ಗಾನವ ಮರೆತಾಗಿದೆ
ಮಾತಾಡದೆ..ಬಳಿಬಾರದೆ..
ಮಾತಾಡದೆ..ಬಳಿಬಾರದೆ..ನನ್ನಿಂದ ನೀ ದೂರ ಹೋದೆ
ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ
ನೂರಾರು ಜನ್ಮದ ಅನುಬಂಧ ನಮ್ಮದು ಅರಿವಾಗದೆ
ಒಂದಾಗಿ ಹಾಡಿದ ರಾಗದ ಧಾಟಿಯು ನೆನಪಾಗದೆ
ನೂರಾರು ಜನ್ಮದ ಅನುಬಂಧ ನಮ್ಮದು ಅರಿವಾಗದೆ
ಒಂದಾಗಿ ಹಾಡಿದ ರಾಗದ ಧಾಟಿಯು ನೆನಪಾಗದೆ
ಬೇರಾಗದೆ ದೂರಾಗದೆ
ಬೇರಾಗದೆ ದೂರಾಗದೆ...ನನ್ನನ್ನು ನೀ ಸೇರು ಇಂದೆ
ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ
ಬಾನಿಗೊಂದು ಎಲ್ಲೆ ಎಲ್ಲಿದೆ
ಚಿತ್ರ: ಪ್ರೇಮದ ಕಾಣಿಕೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕರು: ಡಾ|| ರಾಜ್ ಕುಮಾರ್
ವರ್ಷ: ೧೯೭೬
ಬಾನಿಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ...
ಏಕೆ ಕನಸು ಕಾಣುವೆ... ನಿಧಾನಿಸು ನಿಧಾನಿಸು...
ಬಾನಿಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ...
ಏಕೆ ಕನಸು ಕಾಣುವೆ... ನಿಧಾನಿಸು ನಿಧಾನಿಸು...
ಆಸೆ ಎಂಬ ಬಿಸಿಲುಗುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನೂ ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲೀ ವಿನೋದವಾಗಲೀ ಅದೇನೆ ಆಗಲೀ ಅವನೆ ಕಾರಣ
ಬಾನಿಗೊಂದು ಎಲ್ಲೆ ಎಲ್ಲಿದೆ...
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆಯೇತಕೆ ನಿರಾಸೆಯೇತಕೆ ಅದೇನೇ ಬಂದರೂ ಅವನ ಕಾಣಿಕೆ
ಬಾನಿಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ...
ಏಕೆ ಕನಸು ಕಾಣುವೆ... ನಿಧಾನಿಸು ನಿಧಾನಿಸು...
ನಿಧಾನಿಸು ನಿಧಾನಿಸು...
Labels:
೧೯೭೬,
ಉಪೇಂದ್ರ ಕುಮಾರ್,
ಚಿ. ಉದಯಶಂಕರ್,
ಡಾ|| ರಾಜ್ ಕುಮಾರ್,
ಪ್ರೇಮದ ಕಾಣಿಕೆ
Tuesday, December 7, 2010
ಒಲುಮೆ ಪೂಜೆಗೆಂದೇ
ಚಿತ್ರ: ಅನುಪಮ
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಅಶ್ವಥ್-ವೈದಿ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೧
ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ
ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ...
ಮಮತೆ ಮೀಟಿ ಮಿಲನ ಕಂಡೆ ನಿನ್ನ ಸ್ನೇಹ ಸೌಭಾಗ್ಯ ಮಿಂದೆ
ಹರೆಯ ತೂಗಿ ಸನಿಹ ಬಂದೆ ಎಲ್ಲ ಪ್ರೀತಿ ಸಮ್ಮೋಹ ತಂದೆ
ಹರುಷ ತಂದೆ ಹಾದಿಯೇ ಚಂದ
ಹರುಷ ತಂದೆ ಹಾದಿಯೇ ಚಂದ ಒಲವಿನಾಸರೆ ರೋಮಾಂಚ ಬಂಧ
ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ
ಜೊತೆಯ ಸೇರಿ ಬರುವೆ ನಾನು ನನ್ನ ಬಾಳ ಬಂಗಾರ ನೀನು
ಬೆಳಕು ನೀನು ಕಿರಣ ನಾನು ನಿನ್ನ ಕೂಡಿ ಹೊಂಬಿಸಿಲ ಬಾನು
ನಿನಗೆ ನಾನು ನನಗೆ ನೀನು
ನಿನಗೆ ನಾನು ನನಗೆ ನೀನು ಪ್ರೇಮ ಜೀವನ ಎಂದೆಂದೂ ಜೇನು
ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ...
ಸಂಜೀವನ... ಸಂಜೀವನ...
Labels:
೧೯೮೧,
SPB,
ಅನುಪಮ,
ಅಶ್ವಥ್-ವೈದಿ,
ಎಸ್. ಜಾನಕಿ,
ದೊಡ್ಡರಂಗೇಗೌಡ
Friday, December 3, 2010
ಹಾಡು ಹಳೆಯದಾದರೇನು
ಚಿತ್ರ : ಮಾನಸ ಸರೋವರ
ಸಾಹಿತ್ಯ : ಡಾ|| ಜಿ.ಎಸ್.ಶಿವರುದ್ರಪ್ಪ
ಸಂಗೀತ : ವಿಜಯಭಾಸ್ಕರ್
ಗಾಯಕರು : ವಾಣಿ ಜಯರಾಂ
ವರ್ಷ: ೧೯೮೩
ಹಾಡು...ಹಾಡು ...
ಹಾಡು ಹಳೆಯದಾದರೇನು ಭಾವ ನವನವೀನ
ಹಾಡು...ಹಾಡು ...
ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ
ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ
ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ
ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ
ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ
ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ
ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ
ಹಾಡು...ಹಾಡು ...
ಹಾಡು ಹಳೆಯದಾದರೇನು ಭಾವ ನವನವೀನ
Labels:
೧೯೮೩,
ಜಿ.ಎಸ್. ಶಿವರುದ್ರಪ್ಪ,
ಮಾನಸ ಸರೋವರ,
ವಾಣಿ ಜಯರಾಂ,
ವಿಜಯಭಾಸ್ಕರ್
Thursday, December 2, 2010
ಎಂಥಾ ಲೋಕವಯ್ಯಾ
ಚಿತ್ರ:: ನಾರದ ವಿಜಯ
ಸಾಹಿತ್ಯ : ಚಿ. ಉದಯ ಶಂಕರ್
ಸಂಗೀತ: ಅಶ್ವಥ್-ವೈದಿ
ಗಾಯಕರು: ಕೆ.ಜೆ.ಯೇಸುದಾಸ್
ವರ್ಷ: ೧೯೮೦
ಎಂಥಾ ಲೋಕವಯ್ಯಾ.. ಇದು ಎಂಥಾ ಲೋಕವಯ್ಯಾ
ಹೊಸತನವ ಕೊಡುವ ಹೊಸ ವಿಷಯ ಅರಿವ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ
ಇದು ಎಂಥಾ ಲೋಕವಯ್ಯ
ಕಡಲಲ್ಲಿ ಧುಮುಕಿ ಹೋರಾಡುವಾ ಮುಗಿಲೇರಿ ಮೇಲೆ ತೇಲಾಡುವಾ
ಆ ಚಂದ್ರನೆಡೆಗೆ ಹಾರಾಡುವಾ ಗ್ರಹತಾರೆಗಳಿಗೆ ಕೈ ಚಾಚುವಾ
ಜನರಿಂದ ತುಂಬಿ ಮೆರೆವಾ ಆ......
ಜನರಿಂದ ತುಂಬಿ ಮೆರೆವಾ
ಇದು ಎಂಥಾ ಲೋಕವಯ್ಯ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ
ಬಡತನದ ಜೊತೆಗೆ ಬಡಿದಾಡುವಾ ಸುಖವನ್ನು ಅರಸಿ ಅಲೆದಾಡುವಾ
ಹೊಸದನ್ನು ದಿನವು ಹುಡುಕಾಡುವಾ ಛಲವನ್ನು ಬಿಡದೆ ಸೆಣಸಾಡುವಾ
ಜನರಿಂದ ತುಂಬಿ ಮೆರೆವಾ ಆ......
ಜನರಿಂದ ತುಂಬಿ ಮೆರೆವಾ
ಇದು ಎಂಥಾ ಲೋಕವಯ್ಯ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ
ಆ..... .ಆ..... ಆ...... ಆ.......
Labels:
೧೯೮೦,
ಅಶ್ವಥ್-ವೈದಿ,
ಕೆ. ಜೆ. ಯೇಸುದಾಸ್,
ಚಿ. ಉದಯಶಂಕರ್,
ನಾರದ ವಿಜಯ
Friday, November 19, 2010
ನನಗಾಗಿ ಬಂದ
ಚಿತ್ರ: ಬೆಂಕಿಯ ಬಲೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೩
ನನಗಾಗಿ ಬಂದ ಹೊ... ಆನಂದ ತಂದ.. ಹಾ...
ನನಗಾಗಿ ಬಂದ ಆನಂದ ತಂದ ಹೆಣ್ಣೇ ಮಾತಾಡು ಬಾ
ಈ ನಾಚಿಕೆ ನಿನಗೇತಕೆ ಈ ಮೌನವು ಇನ್ನೇತಕೆ
ನನಗಾಗಿ ಬಂದ ಆನಂದ ತಂದ ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..
ನಮಗಾಗೆ ಇಲ್ಲಿ ಮಂಚ ಹಾಕಿದೆ ಘಮಘಮಿಸೊ ಮಲ್ಲೆ ಹೂವ ಚೆಲ್ಲಿದೆ
ಹಾಲಿದೆ ಹಣ್ಣಿದೆ ನಿನ್ನ ಹಸಿವೆಗೆ ಹೇ.. ಕಾದಿಹೆ ಪ್ರೇಮದಿ ನಿನ್ನ ಸೇವೆಗೆ
ಮುಗಿಲಿಂದ ಚಂದ್ರ ಇಣುಕಿ ನೋಡಿದೆ ತಂಗಾಳಿ ತಂಪು ತಂದು ಚೆಲ್ಲಿದೆ
ಈ ಚಳಿ ತಾಳದೇ ತನುವು ನಡುಗಿದೆ ಪ್ರೀತಿಯ ತೋರುತ ಅಪ್ಪಿಕೊಳ್ಳದೇ
ಹ.. ಬೆಚ್ಚುವೆ ಹೀಗೇಕೆ ಹ.. ಕೆನ್ನೆಯು ಕೆಂಪೇಕೆ
ತುಟಿಯ ಬಳಿ ತುಟಿಗಳನು ನಾನು ತಂದಾಗ ಹೊ....
ನನಗಾಗಿ ಬಂದ.. ಹ.. ಹ.. ಹ.. ಹ.. ಹ.. ಹ.. ಹ..
ಆನಂದ ತಂದ.. ಹೋಯ್.. ಹೋಯ್.. ಹೋಯ್.. ಹೋಯ್..
ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..
ಕಣ್ಣಲ್ಲಿ ನೂರಾಸೆ ಸೇರಿಕೊಂಡಿದೆ ಮೈಯಲ್ಲ ಬಿಸಿಯೇರಿ ನಿನ್ನ ಕೂಗಿದೆ
ಕಾತುರ ತಾಳದೆ ಮನವು ನೊಂದಿದೆ ಹಾ.. ಆತುರ ನನ್ನೆದೆ ತುಂಬಿಕೊಂಡಿದೆ
ಅನುರಾಗದಾನಂದ ಹೃದಯ ತುಂಬಿದೆ ಮುತ್ತೊಂದು ಬೇಕೆಂದು ತುಟಿಯ ಕೇಳಿದೆ
ಜೀವವು ನಿಲ್ಲದು ಬಯಕೆ ಮುಗಿಯದೇ ಬೇಡುವೆ ಬಾರೆಯಾ ಬೇಗ ಸನಿಹಕೆ
ಅಂದದ ಹೆಣ್ಣೊಂದು ಅರೆ ಹಾ.. ಬಳಿಯಲಿ ನಿಂತಾಗ
ಕೈಯ ಕಟ್ಟಿ ಕುಳಿತಿರಲು ಕಲ್ಲು ನಾನಲ್ಲ.. ಹಾ.. ಹ.. ಹ.. ಹ..
ನನಗಾಗಿ ಬಂದ ಹೊ... ಆನಂದ ತಂದ.. ಹಾ...
ನನಗಾಗಿ ಬಂದ ಆನಂದ ತಂದ ಹೆಣ್ಣೇ ಮಾತಾಡು ಬಾ
ಈ ನಾಚಿಕೆ ನಿನಗೇತಕೆ ಈ ಮೌನವು ಇನ್ನೇತಕೆ
ನನಗಾಗಿ ಬಂದ.. ಹ.. ಹ.. ಹ.. ಹ.. ಹ.. ಹ.. ಹ..
ಆನಂದ ತಂದ.. ಹೊ.. ಹೊ.. ಹೊ.. ಹೊ.. ಹೊ.. ಹೊ.. ಹೊ..
ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..
ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..
Labels:
೧೯೮೩,
SPB,
ಚಿ. ಉದಯಶಂಕರ್,
ಬೆಂಕಿಯ ಬಲೆ,
ರಾಜನ್-ನಾಗೇಂದ್ರ
Thursday, November 18, 2010
ಹೂವಿಂದ ಹೂವಿಗೆ ಹಾರುವ ದುಂಬಿ
ಚಿತ್ರ: ಹೊಂಬಿಸಿಲು
ಸಾಹಿತ್ಯ: ಗೀತಪ್ರಿಯ
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಜಾನಕಿ
ವರ್ಷ: ೧೯೭೮
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿನ ಕೋಮಲ ಭಾವನೆ ಕೆಣಕಿ
ಏತಕೆ ಕಾಡುತಿಹೇ ನೀ
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಆಸೆಯ ತುಂಬಿ ಹೂವರಳಿರಲು
ಹೂವನು ಕಂಡು ನೀ ಕೆರಳಿರಲು
ಹೂವಿನ ಅಂದ ನಿನಗೇ ಚಂದ
ಮಧು ಮಕರಂದ ನಿನಗಾನಂದ
ಒಲಿಸುವ ರಾಗವ ನೀ ಉಲಿಉಲಿದು
ಒಲಿಸುವ ರಾಗವ ನೀ ಉಲಿಉಲಿದು
ಏನನು ಬಯಸುತಿಹೆ ನೀ...
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿಂದ ಹೂವಿಗೆ ಹಾರುವ ದುಂಬಿ...
ದುಂಬಿಯೆ ನಿನಗೆ ಮಿಲನಕೆ ಸಂಭ್ರಮ
ಹೂವಿಗೆ ಬೇಕು ಪ್ರೇಮ ಸಮಾಗಮ
ಹೂವಿಗೂ ದುಂಬಿಗೂ ಇರುವಾ ಬಂಧ
ಸಮರಸವಿದ್ದರೆ ಸವಿರಾಗಬಂಧ
ಈ ಅನುರಾಗವ ಅರಿಯದೆ ಇಂದು
ಈ ಅನುರಾಗವ ಅರಿಯದೆ ಇಂದು
ಏನನು ಬೇಡುತಿಹೆ ನೀ.....
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿನ ಕೋಮಲ ಭಾವನೆ ಕೆಣಕಿ
ಏತಕೆ ಕಾಡುತಿಹೇ ನೀ...
ಹೂವಿಂದ ಹೂವಿಗೆ ಹಾರುವ ದುಂಬಿ
Labels:
೧೯೭೮,
ಎಸ್. ಜಾನಕಿ,
ಗೀತಪ್ರಿಯ,
ರಾಜನ್-ನಾಗೇಂದ್ರ,
ಹೊಂಬಿಸಿಲು
Tuesday, November 16, 2010
ಕಾವೇರಿ ತೀರದಲ್ಲಿ ಒಂದು ಕಾಡು
ಚಿತ್ರ : ಜನ್ಮ ರಹಸ್ಯ
ಸಾಹಿತ್ಯ: ಎಂ. ನರೇಂದ್ರ ಬಾಬು
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಜಾನಕಿ
ವರ್ಷ: ೧೯೭೨
ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ
ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ
ಗಂಭೀರ ನಡೆ ಹಾಕಿ ಆನೆ ಬಂತು
ಸೊಂಡಿಲಲ್ಲಿ ಬಾಳೆ ಗೊನೆಯನು ತಂತು
ಡೊಂಕು ಹೆಜ್ಜೆ ಹಾಕುತ ಕರಡಿ ಬಂತು
ಡೊಂಕು ಹೆಜ್ಜೆ ಹಾಕುತ ಕರಡಿ ಬಂತು
ಹಲಸು ಜೇನು ಕಲೆಸುತ ತಾನು
ಹಲಸು ಜೇನು ಕಲೆಸುತ ತಾನು
ಕಾಣಿಕೆಯಾಗಿ ತಂತು
ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ
ಬಣ್ಣ ಬಣ್ಣದ ಗರಿಗಳ ತೆರೆದು
ನವಿಲು ಕುಣಿಯಿತು ಆಡಿ
ಬಣ್ಣ ಬಣ್ಣದ ಗರಿಗಳ ತೆರೆದು
ನವಿಲು ಕುಣಿಯಿತು ಆಡಿ
ರಾಜನ ನೋಡಿ ಹರುಷದಿ ಕೂಡಿ
ರಾಜನ ನೋಡಿ ಹರುಷದಿ ಕೂಡಿ
ಕೋಗಿಲೆ ಮೆರೆಯಿತು ಹಾಡಿ
ಹಾಡನು ಕೇಳಿ ಸ್ಫೂರ್ತಿಯ ತಾಳಿ
ಹಾಡನು ಕೇಳಿ ಸ್ಫೂರ್ತಿಯ ತಾಳಿ
ಕತ್ತೆಯು ಹಾಡಿತು ಜೊತೆಗೂಡಿ
ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ
ಆಡೋಣ ಬನ್ನಿ ಆಡೋಣ ಬನ್ನಿ ಅಪ್ಪಾಲೆ ತಿಪ್ಪಾಲೆ
ಹಾಕೋಣ ಬನ್ನಿ ಹಾಕೋಣ ಬನ್ನಿ ರಾಜಾಗೆ ಹೂಮಾಲೆ
ಕೋರುವೆವಿಂದು ದೇವರು ನಿನ್ನ ಸುಖವಾಗಿಡಲೆನುತ
ನ್ಯಾಯವ ನುಡಿದು ಕೀರುತಿ ಪಡೆದು ಬಾಳಲಿ ಎಂದೆನುತ
ನಗುನಗುತ ನಲಿನಲಿತ ಗೆಳೆಯರಿಗೆ ಸೈಎನುತ
ಸಾವಿರ ವರುಷ ಗೆಲ್ಲುತ ಹರುಷ ನೀನಿರು ಅನವರತ
Labels:
೧೯೭೨,
ಎಂ. ನರೇಂದ್ರ ಬಾಬು,
ಎಂ. ರಂಗರಾವ್,
ಎಸ್. ಜಾನಕಿ,
ಜನ್ಮ ರಹಸ್ಯ
Monday, November 15, 2010
ಮುಂದೆ ಬನ್ನಿ, ಇನ್ನು ಮುಂದೆ ಬನ್ನಿ
ಚಿತ್ರ: ಬೆಂಕಿಯಲ್ಲಿ ಅರಳಿದ ಹೂವು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ಎಸ್. ವಿಶ್ವನಾಥನ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೩
ಹೋಗು ರೈಟ್.. ರೈಟ್....
ಮುಂದೆ ಬನ್ನಿ, ಇನ್ನು ಮುಂದೆ ಬನ್ನಿ ಹ.. ಮುಂದೆ ಬನ್ನಿ, ಇನ್ನು ಮುಂದೆ ಬನ್ನಿ..
ಬೇರೆ ಯಾರು ಈ ಮಾತನ್ನು ಹೇಳೋದಿಲ್ಲಾ
ಅರೆ ಹಿಂದೆ ತಳ್ಳೋ ಜನರೆ ಹೆಚ್ಚು ಊರಲ್ಲೆಲ್ಲಾ
ಬೇರೆ ಯಾರು ಈ ಮಾತನ್ನು ಹೇಳೋದಿಲ್ಲಾ
ಅರೆ ಹಿಂದೆ ತಳ್ಳೋ ಜನರೆ ಹೆಚ್ಚು ಊರಲ್ಲೆಲ್ಲಾ
ಮುಂದೆ ಬನ್ನಿ.., ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿ.
ಹ.. ಮುಂದೆ ಬನ್ನಿ., ಇನ್ನು ಮುಂದೆ ಬನ್ನಿ....
ಬದುಕು ಒಂದು ಬಸ್ಸಿನಂತೆ ನಿಲ್ಲದಂತೆ ಸಾಗಿದೆ,
ವಿಧಿಯೇ ಅದರ ಡ್ರೈವರಾಗಿ ಕಾಣದಂತೆ ಕೂತಿದೆ,
ಆ ಟಿಕ್ಕೇಟ್ ಟಿಕ್ಕೇಟ್, ಕಮಾನ್ ಟಿಕ್ಕೇ..ಟ್. ಟಿಕ್ಕೇ..ಟ್
ಬೇಕು ಎನ್ನೊ ದಾರಿಯಲ್ಲಿ ಎಂದೂ ಮುಂದೆ ಸಾಗದು,
ನೀನು ಹೇಳೊ ಜಾಗದಲ್ಲಿ ಬಸ್ಸು ಎಂದೂ ನಿಲ್ಲದು
ಮುಂದಕ್ಕೆ ಬನ್ನಿ ಎಂದು ಕೂಗೋರು ಇಲ್ಲಾ..
ಹ ಅ... ನನ್ನಂಥ ಕಂಡಕ್ಟರ್ ಇದ್ದರೂ ಕಾಣಲ್ಲ..
ಹೇ ಹೇ ಹೇ.. ನನ್ನಂಥ ಕಂಡಕ್ಟರ್ ಇದ್ದರೂ ಕಾಣಲ್ಲ
ಮುಂದೆ ಬನ್ನಿ, ಕಮಾನ್ ಕಮಾನ್ ಮುಂದೆ ಬನ್ನಿ,
ಬೇರೆ ಯಾರು ಈ ಮಾತನ್ನು ಹೇಳೋದಿಲ್ಲಾ,
ಅರೆ ಹಿಂದೆ ತಳ್ಳೋ ಜನರೆ ಹೆಚ್ಚು ಊರಲ್ಲೆಲ್ಲಾ..
ಮುಂದೆ ಬನ್ನಿ.., ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿ.
ರೈಟ್.. ರೈಟ್...
ಲಕ್ಷಾ ಲಕ್ಷಾ ಇದ್ದೋರೆಲ್ಲಾ ಕಾರಿನಲ್ಲೇ ಹೋಗೋದು,
ಅಲ್ಪ ಸ್ವಲ್ಪ ಗಳಿಸೋರೆನೇ ಬಸ್ಸಿನಲ್ಲೇ ಕುಡೋದು
ಚಿಲ್ರೆಕೊಡಿ., ಸರಿಯಾದ ಚಿಲ್ರೆಕೊಡೀ ಪ್ಲೀಸ್...,
ಎಲ್ಲೋ ಜಗಳ ಎಲ್ಲೋ ಕದನ ಕಲ್ಲು ಇಲ್ಲೇ ಬಿಳೋದು,
ಯಾರ ಕೋಪ ಯಾರ ಮೇಲೋ ನ್ಯಾಯಾ ಯಾರ ಕೇಳೋದು
ನಿಮ್ಮ ದುಡ್ಡಲ್ಲೇ ನಮ್ಮ ವಾಹನ ಓಡೋದು..
ಆಆಆ, ನೀವೇನೆ ತೆರಿಗೆ ಹೆಚ್ಚಿ ಅಯ್ಯೋ ಅನ್ನೋದು...
ಹ ಹಾ, ನೀವೇನೆ ತೆರಿಗೆ ಹೆಚ್ಚಿ ಅಯ್ಯೋ ಅನ್ನೋದು
ಮುಂದೆ ಬನ್ನಿ, ಇನ್ನು ಮುಂದೆ ಬನ್ನಿ ಹಹಹಾ
ಆಯಿಯೆ ಸಾಬ್ ತಶರೀಫ್ ರಖಿಯೇ...
ನಿಮ್ಮ ಊರು ಯಾವುದೆಂದು ಇಲ್ಲಿ ಯಾರೂ ಕೇಳರು,
ಇಲ್ಲಿ ಯಾಕೆ ಬಂದೆ ಎಂದು ಯಾರೂ ನಿನ್ನ ತಳ್ಳರು
ಮುಂದೆ ಬನ್ನಿ., ನಿನ್ನ ಭಾಷೆ ಯಾವುದೆಂದು ಯಾರೂ ಚಿಂತೆ ಮಾಡರು,
ಹೊಂದಿಕೊಂಡು ಬಾಳೋದನ್ನ ಇಲ್ಲಿ ಎಲ್ಲ ಬಲ್ಲರು
ಕನ್ನಡ ನಾಡಿನಲ್ಲಿ ಕನ್ನಡ ಮಾತಾಡು...
ಅ ಅ ಅ, ನಿನ್ನ ಮನೇಲಿ ನಿನ್ನ ಭಾಷೆ ಮಾತಾಡು
ಹೆ ಹೆ ಹೆ, ನಿನ್ನ ಮನೇಲಿ ನಿನ್ನ ಭಾಷೆ ಮಾತಾಡು
ಮುಂದೆ ಬನ್ನಿ, ಇನ್ನು ಮುಂದೆ ಬನ್ನಿ..
ಬೇರೆ ಯಾರು ಈ ಮಾತನ್ನು ಹೇಳೋದಿಲ್ಲಾ,
ಅರೆ ಹಿಂದೆ ತಳ್ಳೋ ಜನರೆ ಹೆಚ್ಚು ಊರಲ್ಲೆಲ್ಲಾ
ಮುಂದೆ ಬನ್ನಿ.., ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿ.
ಹ.. ಮುಂದೆ ಬನ್ನಿ., ಇನ್ನು ಮುಂದೆ ಬನ್ನಿ....
ಟಿಕ್ಕೇ..ಟ್. ಟಿಕ್ಕೇ..ಟ್, ಕಮಾನ್ ಕಮಾನ್ ಟಿಕ್ಕೇ..ಟ್. ಟಿಕ್ಕೇ..ಟ್
ಚಿಲ್ರೆಕೊಡಿ. ಪ್ಲೀಸ್. ಸರಿಯಾದ ಚಿಲ್ರೆಕೊಡೀ
ಮುಂದೆ ಬನ್ನಿ, ಇನ್ನು ಮುಂದೆ ಬನ್ನಿ..ಇಇಇ
Labels:
೧೯೮೩,
SPB,
ಎಂ. ಎಸ್. ವಿಶ್ವನಾಥನ್,
ಚಿ. ಉದಯಶಂಕರ್,
ಬೆಂಕಿಯಲ್ಲಿ ಅರಳಿದ ಹೂವು
Friday, November 12, 2010
ಮರಿಯಾ ಮೈ ಡಾರ್ಲಿಂಗ್
ಚಿತ್ರ: ಮರಿಯಾ ಮೈ ಡಾರ್ಲಿಂಗ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಶಂಕರ್-ಗಣೇಶ್
ಗಾಯಕರು :ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೦
ಮರಿಯಾ ಮೈ ಡಾರ್ಲಿಂಗ್ ಮರಿಯಾ ಮೈ ಡಾರ್ಲಿಂಗ್
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ಮರಿಯಾ ಮೈ ಡಾರ್ಲಿಂಗ್ ಮರಿಯಾ ಮೈ ಡಾರ್ಲಿಂಗ್
ಸುಮವು ಮುಳ್ಳಾದ ಹಾಗೆ ನೆರಳು ಬಿಸಿಯಾದ ಹಾಗೆ
ಹಗಲು ಇರುಳಾದ ಹಾಗೆ ಸಿಹಿಯು ಕಹಿಯಾದ ಹಾಗೆ
ಸುಮವು ಮುಳ್ಳಾದ ಹಾಗೆ ನೆರಳು ಬಿಸಿಯಾದ ಹಾಗೆ
ಹಗಲು ಇರುಳಾದ ಹಾಗೆ ಸಿಹಿಯು ಕಹಿಯಾದ ಹಾಗೆ
ನೀನು ಕ್ಷಣಕೊಂದು ದಿನಕೊಂದು ರೀತಿ
ನಿನ್ನ ಕಂಡಾಗ ಅದರಿಂದ ಭೀತಿ
ಮರಿಯಾ ಮೈ ಡಾರ್ಲಿಂಗ್
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ಮರಿಯಾ ಮೈ ಡಾರ್ಲಿಂಗ್
ಕಾಣದ ದೇವ ಬೊಂಬೆಯ ಹಾಗೆ ಆಡಿಸಿ ನಿನ್ನ ನೋಡುವ ಹೀಗೆ
ಆತನ ಮೀರಿ ಹೋಗುವ ದಾರಿ ಎಲ್ಲೂ ಇಲ್ಲ ಮರಿಯಾ
ಕಾಣದ ದೇವ ಬೊಂಬೆಯ ಹಾಗೆ ಆಡಿಸಿ ನಿನ್ನ ನೋಡುವ ಹೀಗೆ
ಆತನ ಮೀರಿ ಹೋಗುವ ದಾರಿ ಎಲ್ಲೂ ಇಲ್ಲ ಮರಿಯಾ
ನಿನ್ನ ಓಡಾಟ ಅವನಾಸೆಯಂತೆ ನಿನ್ನ ಮನಸೆಂದೂ ಬಾನಡಿಯಂತೆ
ಮರಿಯಾ ಮೈ ಡಾರ್ಲಿಂಗ್
ಹೆದರಿ ನೀ ಓಡಬೇಡ ಜನಕೆ ನೀ ಸೋಲಬೇಡ
ನಿಲ್ಲು ನೀ ಧೈರ್ಯದಿಂದ ಗೆಲ್ಲುವ ಸ್ಥೈರ್ಯದಿಂದ
ಕೇಳು ಹೊಸದೆಂದು ತಾನಾಗಿ ಬರದು
ಕ್ರಾಂತಿಯಾದಂತೆ ಹೊಸ ಬಾಳು ನಿನದು
ಮರಿಯಾ ಮೈ ಡಾರ್ಲಿಂಗ್
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ಮರಿಯಾ ಮೈ ಡಾರ್ಲಿಂಗ್
ಮೋಹದ ರಾಗ ಮೂಡಿದ ವೇಳೆ ಪ್ರೇಮದ ಗೀತೆ ಹಾಡಿದ ವೇಳೆ
ಜೋಗುಳ ಹೇಳೋ ತಾಯಿಯೇ ಆದೇ ನನ್ನ ಮುದ್ದು ಮರಿಯಾ
ಇಂದು ನಿಜವಾದ ಹೆಣ್ಣಾದ ನಿನ್ನ ಕಂಡು ಕನಸೆಲ್ಲಾ ನಿಜವಾಯ್ತು ಚಿನ್ನ
ಮರಿಯಾ ಮೈ ಡಾರ್ಲಿಂಗ್...... ಮರಿಯಾ ಮೈ ಡಾರ್ಲಿಂಗ್....
Labels:
೧೯೮೦,
SPB,
ಚಿ. ಉದಯಶಂಕರ್,
ಮರಿಯಾ ಮೈ ಡಾರ್ಲಿಂಗ್,
ಶಂಕರ್-ಗಣೇಶ್
ಸುಖದಾ ಸ್ವಪ್ನಗಾನ
ಚಿತ್ರ: ಮರೆಯದ ಹಾಡು
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ : ಜಿ.ಕೆ. ವೆಂಕಟೇಶ್
ಗಾಯನ : ಎಸ್. ಜಾನಕಿ
ವರ್ಷ: ೧೯೮೧
ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ
ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ
ಸ್ವರವೇಳು ಕಲೆತ ರಾಗ ಸ೦ಪೂರ್ಣ ಜೀವರಾಗ
ಉಸಿರೆರಡು ಬೆರೆತ ವೇಗ ಅನುರಾಗ ಭಾವಯೋಗ
ಜನುಮ ಜನುಮದಾ ಬ೦ಧಾ ಅನುಬ೦ಧಾ ನಮ್ಮದೂ
ತಪಸಿನಾ ಫಲವಿದೂ ದೈವದಾ ವರವಿದೂ
ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ
ಸವಿ ಮುರಳಿ ಕರೆದ ವೇಳೆ ಆ ರಾಧೆ ಓಡಿದ೦ತೆ
ಮಾಧವನ ನೆನಪಿನಲ್ಲೇ ಆ ಮೀರಾ ಹಾಡಿದ೦ತೆ
ನಿಮ್ಮೊಲವಿನಲ್ಲೆ ಮಿ೦ದೂ ನಾನಿ೦ದೂ
ಹಾಡುವೇ ನನ್ನನೇ ಮರೆಯುವೇ ನಿಮ್ಮಲೇ ಬೆರೆಯುವೆ
ಶೃತಿಲಯದ ಮಿಲನದಲ್ಲೇ ದೈವೀಕ ನಾದ ಲೀಲೆ
ಸತಿಪತಿಯ ಒಲವಿನಲ್ಲೇ ಸ೦ಸಾರ ನೌಕೆ ತೇಲೆ
ನೆನಪಿನ ತೋಟದ ಮಲ್ಲೇ ಹೂ ಮಾಲೆ
ಎ೦ದಿಗೂ ಬಾಡದಾ ಹೂವಿದು ಮುಗಿಯದಾ ಹಾಡಿದು
ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ
Labels:
೧೯೮೧,
ಆರ್.ಎನ್. ಜಯಗೋಪಾಲ್,
ಎಸ್. ಜಾನಕಿ,
ಜಿ. ಕೆ. ವೆಂಕಟೇಶ್,
ಮರೆಯದ ಹಾಡು
ನೀ ಇರಲು ಜೊತೆಯಲ್ಲಿ
ಚಿತ್ರ: ಗುಣ ನೋಡಿ ಹೆಣ್ಣು ಕೊಡು
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಎಂ. ರಂಗರಾವ್
ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ, ಎಸ್. ಜಾನಕಿ
ವರ್ಷ: ೧೯೮೨
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ
ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ಮಾತಲ್ಲಿ ಏನೊ ಹೊಸತನ ಮಗುವನ್ನು ಹೋಲೊ ಹೂಮನ
ರಸಕಾವ್ಯ ನಿನ್ನ ಯೌವ್ವನ ಎದೆ ತುಂಬಿ ನಿಂತೆ ಪ್ರತಿಕ್ಷಣ
ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ
ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ ಬೆರೆತೆ ಉಸಿರಲ್ಲಿ ಒಂದಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ಈ ನೀಲಿ ಕಣ್ಣ ಬೆಳಕಲಿ ಮನೆಯೆಲ್ಲ ಎಂದು ಬೆಳಗಲಿ
ನೀ ತಂದ ಪ್ರೀತಿ ಲತೆಯಲಿ ನಗುವೆಂಬ ಹೂವು ಅರಳಲಿ
ಅಗಲಿ ನಿನ್ನನು ಬಾಳಲಾರೆನು
ಅಗಲಿ ನಿನ್ನನು ಬಾಳಲಾರೆನು ಜೀವ ಒಡಲಿಂದ ದೂರಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ
ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ಬಾಳೆಲ್ಲ ಹಸಿರಾದಂತೆ ಬಾಳೆಲ್ಲ ಹಸಿರಾದಂತೆ..
Labels:
೧೯೮೨,
SPB,
ಆರ್.ಎನ್. ಜಯಗೋಪಾಲ್,
ಎಂ. ರಂಗರಾವ್,
ಎಸ್. ಜಾನಕಿ,
ಗುಣ ನೋಡಿ ಹೆಣ್ಣು ಕೊಡು
ಈ ಹೃದಯ ಹಾಡಿದೆ
ಚಿತ್ರ: ಸುಪ್ರಭಾತ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ,ಚಿತ್ರ
ವರ್ಷ: ೧೯೮೮
ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ
ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ
ಗಾಳಿಯು ಬೀಸಲು ಭ್ರಮೆಯಿಂದ ಅಲೆದಾಡಿದೆ
ಹಗಲು ಇರುಳಾಗಿ ಇರುಳು ಹಗಲಾಗಿ ದಿನ ರಾತ್ರಿ ಓಡಿದೆ
ಮರೆಯುವ ರೀತಿಯ ನನ್ನಾಣೆ ನಾ ಕಾಣದೆ
ನೆನಪು ಎದೆಯಲ್ಲಿ ತುಳುಕಾಡಿದೆ
ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಈ ಹೃದಯ ಹಾಡಿದೆ ಆಸೆಗಳ ತಾಳದೆ
ಚಿಗುರು ಎಳೆಯಾಗಿ ಮೊಗ್ಗು ಹೂವಾಗಿ ಋತುಕಾಲ ಓಡಿದೆ
ಚಿಗುರು ಎಳೆಯಾಗಿ ಮೊಗ್ಗು ಹೂವಾಗಿ ಋತುಕಾಲ ಓಡಿದೆ
ತಡೆಯುವ ಶಕುತಿಯು ನಿನ್ನಾಣೆ ನನಗಿಲ್ಲದೆ
ಕಡಲು ಮುಗಿಲಾಗಿ ಮುಗಿಲು ಮಳೆಯಾಗಿ ನದಿಯಾಗಿ ಓಡಿದೆ
ಬಯಕೆಯು ಮುಗಿಯದೆ ಸುಖ ಶಾಂತಿ ನಾ ಕಾಣದೆ
ನಯನ ಕಣ್ಣೀರ ಹನಿಯಾಗಿದೆ
ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
Labels:
೧೯೮೮,
SPB,
ಚಿ. ಉದಯಶಂಕರ್,
ಚಿತ್ರ,
ರಾಜನ್-ನಾಗೇಂದ್ರ,
ಸುಪ್ರಭಾತ
Thursday, November 11, 2010
ಹೊಸ ಬಾಳಿಗೆ ನೀ ಜೊತೆಯಾದೆ
ಚಿತ್ರ: ನಾ ನಿನ್ನ ಬಿಡಲಾರೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೯
ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ರಾಗ ಹೊಸ ತಾಳ ಹೊಸ ಭಾವಗೀತೆಯೇ ನೀನಾದೆ
ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ
ಹೊಸ ರಾತ್ರಿ ಮೂಡಿ ಬಂದು ಹೊಸ ಆಸೆ ನೂರು ತಂದು
ಹೊಸ ಸ್ನೇಹದಿಂದ ಬೆಸೆದು ಹೊಸ ರಾಗ ಮೀಟಿ ಇಂದು
ಹಿತ ನೀಡಿದೆ ಸುಖ ತೋರಿದೆ ಮನದಲ್ಲಿ ಉಲ್ಲಾಸ ತಂದು
ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ
ನಸು ನಾಚಿದಾಗ ಮೊಗವು ಕೆಂಪಾದ ಹೊನ್ನ ಹೂವು
ನಡೆವಾಗ ನಿನ್ನ ನಡುವು ಲತೆಯಂತೆ ಆಡೋ ಚೆಲುವು
ಕಣ್ತುಂಬಿತು ಮನ ತುಂಬಿತು ಅನುರಾಗ ನನ್ನಲ್ಲಿ ತಂದು
ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ
ಹೂಮಂಚ ಹೀಗೆ ಇರಲಿ ಈ ಮಲ್ಲಿಗೆ ಬಾಡದಿರಲಿ
ಈ ರಾತ್ರಿ ಜಾರದಿರಲಿ ಹಗಲೆಂದು ಮೂಡದಿರಲಿ
ಬೆಳದಿಂಗಳ ಈ ಬೊಂಬೆ ಬಳಿಯಲ್ಲಿ ಎಂದೆಂದೂ ಇರಲಿ
ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ರಾಗ ಹೊಸ ತಾಳ ಹೊಸ ಭಾವಗೀತೆಯೇ ನೀನಾದೆ
ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ
Labels:
೧೯೭೯,
SPB,
ಎಸ್. ಜಾನಕಿ,
ಚಿ. ಉದಯಶಂಕರ್,
ನಾ ನಿನ್ನ ಬಿಡಲಾರೆ,
ರಾಜನ್-ನಾಗೇಂದ್ರ
ಅರಳಿದೆ ಅರಳಿದೆ
ಚಿತ್ರ: ಮುದುಡಿದ ತಾವರೆ ಅರಳಿತು
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಜಾನಕಿ
ವರ್ಷ: ೧೯೮೩
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ
ಬಯಸಿದೆ ಬಯಸಿದೆ ಪ್ರಿಯತಮನಾಸರೆ ಬಯಸಿದೆ
ಹರೆಯದ ಕರೆ ಸರಿದಿದೆ ತೆರೆ
ಕೇಳದೆ ಈ ಮೊರೆ ಬಾಳಿನಾ ದೊರೆ
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ
ಶಬರಿಯ ಮುಕುತಿಗೆ ಜಾನಕಿರಾಮನು ನೀನಾದೆ
ಕಮರಿದೆ ಬದುಕಿಗೆ ಆಸೆಯ ಚಿಲುಮೆಯು ನೀನಾದೆ
ಶಬರಿಯ ಮುಕುತಿಗೆ ಜಾನಕಿರಾಮನು ನೀನಾದೆ
ಕಮರಿದೆ ಬದುಕಿಗೆ ಆಸೆಯ ಚಿಲುಮೆಯು ನೀನಾದೆ
ಮಿಡಿದಿದೆ ಮನ ರಸಮಯ ಕ್ಷಣ
ಮಿಡಿದಿದೆ ಮನ ರಸಮಯ ಕ್ಷಣ
ಪ್ರೀತಿಗೆ ಸೇವೆಗೆ ಬಾಗಿದೆ ಚರಣಕೆ
ಪ್ರೀತಿಗೆ ಸೇವೆಗೆ ಬಾಗಿದೆ ಚರಣಕೆ
ಜೀವಾ ಭಾವ ನಿನದೇ
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ
ಚಲುವಿನ ಬೆಡಗಿನ ಒಲವನು ಚೆಲ್ಲಿದೆ ಮಧುವನ
ಚಂದ್ರನ ಯೌವನ ಬೆರೆತರೆ ಜೀವನ ಪಾವನ
ಚಲುವಿನ ಬೆಡಗಿನ ಒಲವನು ಚೆಲ್ಲಿದೆ ಮಧುವನ
ಚಂದ್ರನ ಯೌವನ ಬೆರೆತರೆ ಜೀವನ ಪಾವನ
ಪಪಮಗ ಮಪ ನಿನಿಪಮ ಪನಿ
ನೀ ಪಮ ಸಾನಿಪ ಗಾರಿನಿಸಾ
ಸೂರ್ಯನ ಉದಯಕೆ ಚಂದಿರನಾಸರೆ
ಸೂರ್ಯನ ಉದಯಕೆ ಚಂದಿರನಾಸರೆ
ಬಾರಾ ಬಾರಾ ಬಳಿಗೆ
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ
ಬಯಸಿದೆ ಬಯಸಿದೆ ಪ್ರಿಯತಮನಾಸರೆ ಬಯಸಿದೆ
ಹರೆಯದ ಕರೆ ಸರಿದಿದೆ ತೆರೆ
ಕೇಳದೆ ಈ ಮೊರೆ ಬಾಳಿನಾ ದೊರೆ
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ
Labels:
೧೯೮೩,
ಎಂ. ರಂಗರಾವ್,
ಎಸ್. ಜಾನಕಿ,
ದೊಡ್ಡರಂಗೇಗೌಡ,
ಮುದುಡಿದ ತಾವರೆ ಅರಳಿತು
ಮುಂಜಾನೆ ಮೂಡಿದ ಹಾಗೆ
ಚಿತ್ರ: ಮುದುಡಿದ ತಾವರೆ ಅರಳಿತು
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೩
ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ
ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ
ಹಸಿರಾದ ಪ್ರೀತಿಯ ಕಂಡು ಉಸಿರಾಗ ಬಂದೆನು ನಾನು
ಹಸಿರಾದ ಪ್ರೀತಿಯ ಕಂಡು ಉಸಿರಾಗ ಬಂದೆನು ನಾನು
ಸಸಿಯಾದ ಸ್ನೇಹ ಮೋಹ ಬಲು
ಬೆಳೆದು ನಿಂತಿರಲು ಓಡಿ ಬಂದೆ ಬಳಿಗೆ
ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ
ಹೊಸದಾದ ಆಸೆಯ ತೋರಿ ಶಶಿಯಂತೆ ಬೆಳಗುವೆ ನೀನು
ಹೊಸದಾದ ಆಸೆಯ ತೋರಿ ಶಶಿಯಂತೆ ಬೆಳಗುವೆ ನೀನು
ಚೆಲುವಾದ ಬಾಳ ಕಡಲಿನಲಿ
ಒಲುಮೆ ದೋಣಿಯಲಿ ತೇಲು ನನ್ನ ಜೊತೆಗೆ
ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ
Labels:
೧೯೮೩,
SPB,
ಎಂ. ರಂಗರಾವ್,
ದೊಡ್ಡರಂಗೇಗೌಡ,
ಮುದುಡಿದ ತಾವರೆ ಅರಳಿತು
Wednesday, November 10, 2010
ಮನೆಯನು ಬೆಳಗಿದೆ ಇಂದು
ಚಿತ್ರ : ಚಂದನದ ಗೊಂಬೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ವರ್ಷ: ೧೯೭೯
ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಬೇರೆ ಏನೂ ಬೇಡದ ಹಾಗೆ ಮೋಡಿಯ ನೀ ಮಾಡಿದೆ
ಈ ನಿನ್ನ ಚೆಲುವ ಈ ನನ್ನ ಒಲವ ಸವಿಯಲ್ಲಿ ಕರಗಿ ಹೋದೆ
ಬೇರೆ ಏನೂ ಕಾಣದ ಹಾಗೆ ಮಾಯವ ನೀ ಮಾಡಿದೆ
ಈ ನಿನ್ನ ರೂಪ ನನ್ನೆದೆಯ ದೀಪ ಆದಂದೆ ಸೋತು ಹೋದೆ
ನಾನಂದೇ ಸೋತು ಹೋದೆ
ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು
ನೂರು ಜನುಮ ಮಾಡಿದ ಪುಣ್ಯ ನಿನ್ನನು ನಾ ಹೊಂದಿದೆ
ನೀ ನೀಡಿ ಹರುಷ ನೂರಾರು ವರುಷ ಬದುಕುವ ಬಯಕೆ ತಂದೆ
ನೋಡಿ ನೋಡಿ ತಣಿಯದೇ ಮನವು ದಣಿಯದೇ ಹಾಡಿ ಕುಣಿದಿದೆ
ಬಾಳೆಲ್ಲ ಹೀಗೆ ಬಳಿಯಲ್ಲೆ ಇರುವ ಹೊನ್ನಾಸೆ ನೀನು ತಂದೆ
ನೀ ನನ್ನ ಜೀವವಾದೆ
ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು
Labels:
೧೯೭೯,
SPB,
ಎಸ್. ಜಾನಕಿ,
ಚಂದನದ ಗೊಂಬೆ,
ಚಿ. ಉದಯಶಂಕರ್,
ರಾಜನ್-ನಾಗೇಂದ್ರ
ಹೊಸಬಾಳು ಸೊಗಸೆಂದುಕೊಂಡೆ
ಚಿತ್ರ : ಪಟ್ಟಣಕ್ಕೆ ಬಂದ ಪತ್ನಿಯರು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ.ರಂಗರಾವ್
ಗಾಯಕರು:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ವರ್ಷ: ೧೯೮೦
ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ
ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ
ಏಕೆ ವಿಷಾದ ಬಿಡು ಶೋಕ ನನ್ನೇತಕೆ ನೋಯಿಸುವೆ
ಹೀಗೆತಕೆ ಗೋಳಾಡುವೆ
ಹೆಣ್ಣೇ ನೀ ಕೇಳು ಇದೇ ನಾಕ ಸಂತೋಷದೆ ನೀನಿರಲು
ನಿನ್ನಾಸೆಗೆ ಮಿತಿ ಬೇಡವೆ
ಹೇ.. ಹೇ.. ಅತಿ ಆಸೆ ಒಳ್ಳೆದಲ್ಲ
ಯಾವುದು ಅತಿ ಆಸೆ ? ಪಟ್ಟಣಕೆ ಹೋಗಬೇಕು ಅನ್ನೋದಾ?
ನೆಮ್ಮದಿಯಿಂದ ಇರಬೇಕು ಅನ್ನೋದಾ? ನಗುನಗುತಾ ಬಾಳಬೇಕು ಅನ್ನೋದಾ?
ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ
ಸಾಕು ನಿರಾಸೆ ಬಿಡು ಚಿಂತೆ ನನ್ನಂತೆ ನೀ ಬಾಳಿದರೆ
ಈ ಹಳ್ಳಿಯೆ ಸಾಕೆನ್ನುವೆ
ನಲ್ಲೆ ನೀನೆಂದು ನನ್ನ ಮನೆಗೆ ಆನಂದವ ತುಂಬಿದರೆ
ನೀನಿಲ್ಲಿಯೇ ಸುಖ ಕಾಣುವೆ
ಹೇ... ಹೇ... ಸುಖ ಸಂತೋಷ ಅಂಗಡೀಲಿ ಮಾರೋದಿಲ್ಲ
ನಂಗೊತ್ತಿದೆ ನಿಮ್ ಸುಖ ಸಂತೋಷ
ಕೊಟ್ಟಿಗೆ ಗುಡಿಸೋದರಲ್ಲಿದೆ ಸಗಣಿ ಎತ್ತೋದರಲ್ಲಿದೆ
ಬೆರಣಿ ತಟ್ಟೋದರಲ್ಲಿದೆ
ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ
ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ..ಕನಸಾಗಿ ನೊಂದೆ
Labels:
೧೯೮೦,
SPB,
ಎಂ. ರಂಗರಾವ್,
ಎಸ್. ಜಾನಕಿ,
ಚಿ. ಉದಯಶಂಕರ್,
ಪಟ್ಟಣಕ್ಕೆ ಬಂದ ಪತ್ನಿಯರು
Tuesday, November 9, 2010
ಸವಿನೆನಪುಗಳು ಬೇಕು
ಚಿತ್ರ: ಅಪರಿಚಿತ
ಸಾಹಿತ್ಯ: ರಾಮದಾಸ ನಾಯ್ಡು
ಸಂಗೀತ: ಎಲ್. ವೈದ್ಯನಾಥನ್
ಗಾಯಕರು : ವಾಣಿ ಜಯರಾಂ
ವರ್ಷ: ೧೯೭೮
ಸವಿನೆನಪುಗಳು ಬೇಕು ಸವಿಯಲೀ ಬದುಕು
ಕಹಿನೆನಪು ಸಾಕೊಂದು ಮಾಸಲೀ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ
ಸವಿನೆನಪುಗಳು ಬೇಕು ಸವಿಯಲೀ ಬದುಕು
ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನ ಎದೆಗೊರಗಿ ಆಸರೆಯ ಬೇಡಿ
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ
ಇನಿಯನ ಎದೆ ಬಡಿತ ಗುಂಡಿನ ದನಿಗಿರಿದು
ಮಾಸುತಿದೆ ಕನಸು
ಸವಿನೆನಪುಗಳು ಬೇಕು ಸವಿಯಲೀ ಬದುಕು
ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನ ಭೀತಿಯಲಿ ನಾ ಬಂಧಿಯಾಗಿ
ಮನಸು ಹೃದಯ ನೊಂದು ನೋವಾಗಿದೆ
ಒಲವು ನಲಿವು ಮೂಡಿ ಮಸುಕಾಗಿದೆ
ಅರಳುವ ಹೂವೊಂದು ಕಮರುವ ಭಯದಲೀ
ಸಾಗುತಿದೆ ಬದುಕು
ಸವಿನೆನಪುಗಳು ಬೇಕು ಸವಿಯಲೀ ಬದುಕು
Labels:
೧೯೭೮,
ಅಪರಿಚಿತ,
ಎಲ್. ವೈದ್ಯನಾಥನ್,
ರಾಮದಾಸ ನಾಯ್ಡು,
ವಾಣಿ ಜಯರಾಂ
ಇದೇ ನಾಡು ಇದೇ ಭಾಷೆ
ಚಿತ್ರ: ತಿರುಗು ಬಾಣ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸತ್ಯಂ
ಗಾಯಕರು : ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೨
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ ಕವಿವಾಣಿಯ ನಾಡು
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಚಾಮುಂಡಿ ರಕ್ಷೆಯು ನಮಗೆ ಗೊಮ್ಮಟೇಶ ಕಾವಲು ಇಲ್ಲಿ
ಶೃಂಗೇರಿ ಶಾರದೆ ಲೀಲೆ ರಸತುಂಗೆಯಾಗಿದೆ ಇಲ್ಲಿ
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೇ ಇರಲಿ ಸಿರಿಗನ್ನಡಕಾಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಕಂಗಳು ವಂದನೆ ಹೇಳಿದೆ
ಚಿತ್ರ: ಮುಗಿಯದ ಕಥೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೬
ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ
ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ
ಜೀವ ಜೀವ ಸೇರಲು ಮಾತು ಏತಕೆ
ಜೀವ ಜೀವ ಸೇರಲು ಮಾತು ಏತಕೆ ಒಲವಿನ ಕಾವ್ಯಕೆ ಇಂದೇ ಪೀಠಿಕೆ
ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ
ಮುಡಿಯ ಜಾರಿದ ಹೂವಿದು ಮುಗಿಯದ ಕಥೆ ನನ್ನದು
ಈ ಹೂವನು ಮಣ್ಣಿಂದಲೇ ಕಾಪಾಡಿದ ಕೈಗಳಿವು
ಗಂಗೆಗೆ ಕೊಳೆ ಸೋಂಕದು ಪಾಪದ ಫಲ ಸಲ್ಲದು
ನಿನ್ನನು ಪಡೆದಂಥಹ ಈ ಭಾಗ್ಯವು ನನ್ನದು
ಪೂರ್ವದ ಪುಣ್ಯವೋ ಜನ್ಮದ ಬಂಧವೋ
ನಾನು ನೀನು ನೀನು ನಾನು ಒಂದೇ ಎಂದೆಂದಿಗೂ
ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ
ಬಾಳಿನ ಗುಡಿ ಬೆಳಗಲಿ ಹರುಷದ ಹೊಳೆ ಹರಿಯಲಿ
ಪ್ರೇಮದ ಈ ನೌಕೆಯು ಸುಖ ತೀರವ ಸೇರಲಿ
ಹೇ ಹೇ ಅಹಾಹ ಅಹಾಹ ಅಹಾಹ ಅಹಾಹ
ಆಹಾ ಅಹಾಹ ಅಹಾಹ ಅಹಾಹ ಅಹಾಹ
ಬಯಕೆಯ ಕುಡಿ ಚಿಗುರಲಿ ಕನಸಿದು ಕೈಗೂಡಲಿ
ಎಂದಿಗೂ ಪತಿ ಸೇವೆಯ ಸೌಭಾಗ್ಯವು ಎನಗಿರಲಿ
ಸ್ವರವು ನೀ ಶೃತಿಯು ನಾ ದೊರೆಯು ನೀ ದಾಸಿ ನಾ
ನಾನು ನೀನು ನೀನು ನಾನು ಒಂದೇ ಎಂದೆಂದಿಗೂ
ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೬
ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ
ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ
ಜೀವ ಜೀವ ಸೇರಲು ಮಾತು ಏತಕೆ
ಜೀವ ಜೀವ ಸೇರಲು ಮಾತು ಏತಕೆ ಒಲವಿನ ಕಾವ್ಯಕೆ ಇಂದೇ ಪೀಠಿಕೆ
ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ
ಮುಡಿಯ ಜಾರಿದ ಹೂವಿದು ಮುಗಿಯದ ಕಥೆ ನನ್ನದು
ಈ ಹೂವನು ಮಣ್ಣಿಂದಲೇ ಕಾಪಾಡಿದ ಕೈಗಳಿವು
ಗಂಗೆಗೆ ಕೊಳೆ ಸೋಂಕದು ಪಾಪದ ಫಲ ಸಲ್ಲದು
ನಿನ್ನನು ಪಡೆದಂಥಹ ಈ ಭಾಗ್ಯವು ನನ್ನದು
ಪೂರ್ವದ ಪುಣ್ಯವೋ ಜನ್ಮದ ಬಂಧವೋ
ನಾನು ನೀನು ನೀನು ನಾನು ಒಂದೇ ಎಂದೆಂದಿಗೂ
ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ
ಬಾಳಿನ ಗುಡಿ ಬೆಳಗಲಿ ಹರುಷದ ಹೊಳೆ ಹರಿಯಲಿ
ಪ್ರೇಮದ ಈ ನೌಕೆಯು ಸುಖ ತೀರವ ಸೇರಲಿ
ಹೇ ಹೇ ಅಹಾಹ ಅಹಾಹ ಅಹಾಹ ಅಹಾಹ
ಆಹಾ ಅಹಾಹ ಅಹಾಹ ಅಹಾಹ ಅಹಾಹ
ಬಯಕೆಯ ಕುಡಿ ಚಿಗುರಲಿ ಕನಸಿದು ಕೈಗೂಡಲಿ
ಎಂದಿಗೂ ಪತಿ ಸೇವೆಯ ಸೌಭಾಗ್ಯವು ಎನಗಿರಲಿ
ಸ್ವರವು ನೀ ಶೃತಿಯು ನಾ ದೊರೆಯು ನೀ ದಾಸಿ ನಾ
ನಾನು ನೀನು ನೀನು ನಾನು ಒಂದೇ ಎಂದೆಂದಿಗೂ
ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ
Labels:
೧೯೭೬,
SPB,
ಎಸ್. ಜಾನಕಿ,
ಚಿ. ಉದಯಶಂಕರ್,
ಮುಗಿಯದ ಕಥೆ,
ರಾಜನ್-ನಾಗೇಂದ್ರ
ದೇವರ ಆಟ ಬಲ್ಲವರಾರು
ಚಿತ್ರ: ಅವಳ ಹೆಜ್ಜೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು : ಎಸ್. ಜಾನಕಿ
ವರ್ಷ: ೧೯೮೧
ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ
ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ
ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು....
ಹೊಸ ಹೊಸ ರಾಗ ಅನುದಿನ ಮೂಡಿ ವಿಧ ವಿಧ ಭಾವ ಜೊತೆಯಲಿ ಕೂಡಿ
ಸಂತಸ ಒಮ್ಮೆ ವೇದನೆಯೊಮ್ಮೆ ನೋವಲಿ ಹೃದಯ ಹಿಂಡುವುದೊಮ್ಮೆ
ಬಾಳಿನ ಈ ಹಾಡಿನ ರೀತಿ ..
ಬಾಳಿನ ಈ ಹಾಡಿನ ರೀತಿ ಯಾರು ಇಂದು ಬಲ್ಲವರು
ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು...
ಕಾನನ ಬರಲಿ ಕೊರಕಲೆ ಇರಲಿ ಓಡುವ ನದಿಯು ಸಾಗುವ ಹಾಗೆ
ಹೂಬನವಿರಲಿ ಮರುಭೂಮಿ ಬರಲಿ ನಿಲ್ಲದೆ ಗಾಳಿ ಬೀಸುವ ಹಾಗೆ
ನಿಲ್ಲದ ಈ ಪಯಣದ ಗುರಿಯ..
ನಿಲ್ಲದ ಈ ಪಯಣದ ಗುರಿಯ ಯಾರು ಇಂದು ಕಂಡವರು
ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ
ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು
Labels:
೧೯೮೧,
ಅವಳ ಹೆಜ್ಜೆ,
ಎಸ್. ಜಾನಕಿ,
ಚಿ. ಉದಯಶಂಕರ್,
ರಾಜನ್-ನಾಗೇಂದ್ರ
Monday, November 8, 2010
ಉಷೆ ಮೂಡಿದಾಗ
ಚಿತ್ರ: ಪ್ರೀತಿವಾತ್ಸಲ್ಯ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೪
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು ನಗೆ ಮಿಂಚು ನಿನ್ನದು
ನೆನಪಾಗಿ ಬಂದಿದೆ ಸಿಹಿ ನೋವ ತಂದಿದೆ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಹೂವರಳಿ ನಿಂತ ವೇಳೆ ಕಣ್ಮುಂದೆ ಬಂದಿತಲ್ಲೇ
ಪ್ರಿಯೆ ನಿನ್ನ ಕಾಡಿಗೆ ಕಣ್ಣ ಆ ನೋಟದಂದವೇ
ಕರೆ ನೀಡಿ ನೋಟದಲ್ಲಿ ನೀ ನಿಂತೆ ದೂರದಲ್ಲಿ
ಬಳಿ ಬಂದೆ ಬಯಸಿ ನಿನ್ನ ನೀ ಹೋದೆ ಕಾಣದೆ
ಆ ನೆನಪು ಕಾಡಿದೆ ನನ್ನ ಈ ಬೇಗೆ ತಾಳೆನು ಚಿನ್ನ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಕಾವೇರಿ ನೀರಿನಲ್ಲೂ ಕನ್ನಡದ ಕಾವ್ಯದಲ್ಲೂ
ಬೇಲೂರ ಬಾಲೆಯಲ್ಲೂ ನಾ ಕಂಡೆ ನಿನ್ನನು
ಒಂದೊಂದು ಭಂಗಿಯಲ್ಲೂ ಒಂದೊಂದು ಭಾವದಲ್ಲೂ
ಒಂದೊಂದು ಮಾತಿನಲ್ಲೂ ನೀ ಸೆಳೆದೆ ನನ್ನನು
ನೀ ನಿಂತೆ ಕಣ ಕಣದಲ್ಲೂ ನನ್ನೆದೆಯ ಉಸಿರುಸಿರಲ್ಲೂ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು ನಗೆ ಮಿಂಚು ನಿನ್ನದು
ನೆನಪಾಗಿ ಬಂದಿದೆ ಸಿಹಿ ನೋವ ತಂದಿದೆ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
Labels:
೧೯೮೪,
SPB,
ಆರ್.ಎನ್. ಜಯಗೋಪಾಲ್,
ಪ್ರೀತಿವಾತ್ಸಲ್ಯ,
ರಾಜನ್-ನಾಗೇಂದ್ರ
ಸ್ನೇಹಿತರೇ ನಿಮಗೆ ಸ್ವಾಗತ
ಚಿತ್ರ: ಪ್ರೀತಿವಾತ್ಸಲ್ಯ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೪
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಓ ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ರಸಪೂರ್ಣ ರಂಗಾದ ಸಂಜೆಯಲ್ಲಿ
ಸವಿ ಸ್ನೇಹ ತಂದಂಥ ವೇಳೆಯಲ್ಲಿ
ನಾ ಹಾಡುವ ಈ ಹಾಡಿನ ತಾಳಮೇಳ ಸೇರಿ ನಿಮ್ಮ ಕೂಗಲೀಗ
ಕ್ಷಣವೊಂದು ಕಣ್ಣೋಟ ಸೇರಿದಾಗ
ಸವಿ ಮಾತು ತಮ್ಮಲ್ಲೇ ಆಡಿದಾಗ
ಆ ಮೌನದ ಪಿಸುಮಾತಿಗೆ ಸಾಟಿಯಾದ ಯಾವ ಪ್ರೇಮ ಕಾವ್ಯವಿಲ್ಲ
ಹೃದಯ ಹಗುರಾಗಿ ಇರಲಿ
ಪ್ರೀತಿವಾತ್ಸಲ್ಯ ನಗಲಿ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಹೇ ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ತನ್ನಾಸೆ ಮಗನಲ್ಲಿ ತಾಯಿಯ ಪ್ರೀತಿ
ಒಲಿದಂತ ಪತಿಯಲ್ಲಿ ಪತ್ನಿಯ ಪ್ರೀತಿ
ಒಡಹುಟ್ಟಿದ ಸಂಬಂಧವು ತರುವಂಥ ಸವಿಯಾದ ಸುಮಧುರ ಪ್ರೀತಿ
ಪ್ರಿಯನಲ್ಲಿ ಪ್ರೆಯಸಿಯು ತೋರುವ ಪ್ರೀತಿ
ನಿಜ ಸ್ನೇಹ ತಂದಂಥ ನಿರ್ಮಲ ಪ್ರೀತಿ
ಈ ಪ್ರೀತಿಯೂ ವಿಶ್ವಾಸವೂ ಬಾಳಲ್ಲಿ ಇರಲೆಂದು ಶಾಶ್ವತ ರೀತಿ
ಮನಸು ಹಾಯಾಗಿ ಇರಲಿ
ಪ್ರೀತಿವಾತ್ಸಲ್ಯ ನಗಲಿ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಹೇ ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
Labels:
೧೯೮೪,
SPB,
ಆರ್.ಎನ್. ಜಯಗೋಪಾಲ್,
ಪ್ರೀತಿವಾತ್ಸಲ್ಯ,
ರಾಜನ್-ನಾಗೇಂದ್ರ
Thursday, November 4, 2010
ಜೋಗದ ಸಿರಿ ಬೆಳಕಿನಲ್ಲಿ
ರಚನೆ: ನಿಸ್ಸಾರ್ ಅಹಮದ್
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲಿ
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ
ನಿತ್ಯೋತ್ಸವ ನಿನಗೆ ನಿತ್ಯೋತ್ಸವ
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲಿ
ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲಿ
ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ
ನಿತ್ಯೋತ್ಸವ ನಿನಗೆ ನಿತ್ಯೋತ್ಸವ
ಒಲವೆನ್ನದ ಹಿರಿಮೆಯ ಕುಲವೆನ್ನದ ಗರಿಮೆಯ
ಸದ್ವಿಕಾಸ ಶೀಲನುಡಿಯ ಲೋಕಾಮೃತ ಸೀಮೆಯ
ಈ ವರ್ಷದ ಈ ಹರ್ಷದ ಮನ ಉದಾರ ಮಹಿಮೆಯ
ನಿತ್ಯೋತ್ಸವ ತಾಯೆ ನಿತ್ಯೋತ್ಸವ
ನಿತ್ಯೋತ್ಸವ ನಿನಗೆ ನಿತ್ಯೋತ್ಸವ
ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲಿ
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ
ನಿತ್ಯೋತ್ಸವ ನಿನಗೆ ನಿತ್ಯೋತ್ಸವ
ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲಿ
ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲಿ
ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ
ನಿತ್ಯೋತ್ಸವ ನಿನಗೆ ನಿತ್ಯೋತ್ಸವ
ಒಲವೆನ್ನದ ಹಿರಿಮೆಯ ಕುಲವೆನ್ನದ ಗರಿಮೆಯ
ಸದ್ವಿಕಾಸ ಶೀಲನುಡಿಯ ಲೋಕಾಮೃತ ಸೀಮೆಯ
ಈ ವರ್ಷದ ಈ ಹರ್ಷದ ಮನ ಉದಾರ ಮಹಿಮೆಯ
ನಿತ್ಯೋತ್ಸವ ತಾಯೆ ನಿತ್ಯೋತ್ಸವ
ನಿತ್ಯೋತ್ಸವ ನಿನಗೆ ನಿತ್ಯೋತ್ಸವ
ಬಣ್ಣದ ತಗಡಿನ ತುತ್ತೂರಿ
ರಚನೆ: ಜಿ.ಪಿ. ರಾಜರತ್ನಂ
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮಪದನಿಸ ಊದಿದನು
ಸನಿದಮಮಗರಿಸ ಊದಿದನು
ತನಗೆ ತುತ್ತೂರಿ ಇದೆಯೆಂದ
ಬೇರಾರಿಗೂ ಅದು ಇಲ್ಲೆಂದ
ತುತ್ತೂರಿ ಊದಿದ ಕೊಳದ ಬಳಿ
ಕಸ್ತೂರಿ ನಡೆದನು ಬೀದಿಯಲಿ
ಜಂಬದ ಕೋಳಿಯ ರೀತಿಯಲಿ
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು
ಗಗ ಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು
ಜಂಬದ ಕೋಲಿಗೆ ಗೋಳಾಯ್ತು
ನಾನು ಬಡವಿ ಆತ ಬಡವ
ರಚನೆ: ದ.ರಾ. ಬೇಂದ್ರೆ
ನಾನು ಬಡವಿ, ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು
ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕಟ್ಟುವಂತ ಮೂರ್ತಿ
ಕಿವಿಗೆ ಮೆಚ್ಚಿನೋಲೆ
ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುತ್ತೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬತ್ತೆ
ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂಧಿ
ಕೆನ್ನೆ ತುಂಬ ಮುತ್ತು
ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವಫಲವ
ತುಟಿಗೆ ಹಾಲು ಜೇನು
ನಾನು ಬಡವಿ, ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು
ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕಟ್ಟುವಂತ ಮೂರ್ತಿ
ಕಿವಿಗೆ ಮೆಚ್ಚಿನೋಲೆ
ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುತ್ತೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬತ್ತೆ
ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂಧಿ
ಕೆನ್ನೆ ತುಂಬ ಮುತ್ತು
ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವಫಲವ
ತುಟಿಗೆ ಹಾಲು ಜೇನು
Tuesday, November 2, 2010
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ
ಚಿತ್ರ: ಪ್ರೇಮಾನುಬಂಧ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೦
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ ಸೋತು ಕವಿಯಾಗಿ ಕವಿತೆ ಹಾಡಿದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ ಸೋತು ಕವಿಯಾಗಿ ಕವಿತೆ ಹಾಡಿದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಹೊಸದಾಗಿ ಮೊಗ್ಗೊಂದು ಹೂವಾಗಿ
ಆ ಹೂವೇ ಈ ಹೆಣ್ಣ ಮೊಗವಾಗಿ
ಸುಳಿದಾಡೋ ಮಿಂಚಿಂದ ಕಣ್ಣಾಗಿ
ಗಿಳಿ ಮಾತು ಅವಳಾಡೋ ಮಾತಾಗಿ
ತಂಗಾಳಿಗೆ ಒಲಾಡುವ
ಹಾ ತಂಗಾಳಿಗೆ ಒಲಾಡುವ
ಲತೆಯೊಂದು ನಡುವಾಯಿತೇನೋ
ನವಿಲೊಂದು ಕುಣಿದಂತೆ ನಡೆವಾಗ ಸಂತೋಷಗೊಂಡೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ ಸೋತು ಕವಿಯಾಗಿ ಕವಿತೆ ಹಾಡಿದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಹಗಲಲ್ಲಿ ಕಣ್ಮುಂದೆ ನೀನಿರುವೆ
ಇರುಳಲ್ಲಿ ಕನಸಲ್ಲಿ ನೀ ಬರುವೆ
ಜೊತೆಯಾಗಿ ಇರುವಾಸೆ ತಂದಿರುವೆ
ನನಗೆಂದು ಹೊಸ ಬಾಳ ನೀ ತರುವೆ
ಬಂಗಾರಿಯೇ ಸಿಂಗಾರಿಯೇ
ಹಾ ಬಂಗಾರಿಯೇ ಸಿಂಗಾರಿಯೇ
ನನ್ನೊಮ್ಮೆ ನೀ ನೋಡು ಚೆಲುವೆ
ಒಲವಿಂದ ಬಂದೀಗ ನನ್ನನ್ನು ನೀ ಸೇರು ಹೂವೇ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ ಸೋತು ಕವಿಯಾಗಿ ಕವಿತೆ ಹಾಡಿದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
Labels:
೧೯೮೦,
SPB,
ಚಿ. ಉದಯಶಂಕರ್,
ಪ್ರೇಮಾನುಬಂಧ,
ರಾಜನ್-ನಾಗೇಂದ್ರ
Friday, October 29, 2010
ಯಾವ ಹೂವು ಯಾರ ಮುಡಿಗೋ
ಚಿತ್ರ: ಬೆಸುಗೆ
ಸಾಹಿತ್ಯ: ಶ್ಯಾಮಸುಂದರ್ ಕುಲಕರ್ಣಿ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೬
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಒಂದು ಮನದ ಯೋಚನೆ ಒಂದು ಮನಕೆ ಸೂಚನೆ
ಯಾರೂ ಅರಿಯಲಾರರು ಯಾರ ಪಾಲು ಯಾರಿಗೋ ಯಾರಿಗೋ...
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಮೋಹ ಪಾಶ ಎಸೆಯಿತು ಒಂದು ಪಾಠ ಕಲಿಸಿತು
ಇಂಥ ಪಾಠ ಕಲಿಸಲು ಗುರುವು ಯಾರು ಯಾರಿಗೋ ಯಾರಿಗೋ...
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಮನದ ಕದವ ತೆರೆಯಲು ಬೇರೆ ಗುರಿಯ ಮುಟ್ಟಿತು
ಯಾರು ಹೇಳಬಲ್ಲರು ಯಾರ ಪಯಣ ಎಲ್ಲಿಗೋ ಎಲ್ಲಿಗೋ...
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
Labels:
೧೯೭೬,
SPB,
ಬೆಸುಗೆ,
ವಿಜಯಭಾಸ್ಕರ್,
ಶ್ಯಾಮಸುಂದರ್ ಕುಲಕರ್ಣಿ
Thursday, October 28, 2010
ದುಂಡು ಮಲ್ಲಿಗೆ ಮಾತಾಡೆಯಾ
ಚಿತ್ರ: ನನ್ನ ದೇವರು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೨
ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ
ನೀನಾಡೋ ಮಾತೆಲ್ಲಾ ಜೇನಂತೆ ನೀ ಹಾಡೋ ಸಂಗೀತ ಇಂಪಂತೆ
ನೀನಾಡೋ ಮಾತೆಲ್ಲಾ ಜೇನಂತೆ ನೀ ಹಾಡೋ ಸಂಗೀತ ಇಂಪಂತೆ
ಆಸೆ ಬಂದಂತೆ ಸೋತು ನಾ ನಿಂತೆ ಓ ಹೆಣ್ಣೇ ಬಲ್ಲೆಯಾ
ನಗುವಾಗ ಈ ಮೊಗವು ಶಶಿಯಂತೆ ನಲಿದಾಗ ಕುಣಿದಾಡೋ ನವಿಲಂತೆ
ನಗುವಾಗ ಈ ಮೊಗವು ಶಶಿಯಂತೆ ನಲಿದಾಗ ಕುಣಿದಾಡೋ ನವಿಲಂತೆ
ನಿನ್ನ ಕಂಡಂದೆ ಒಲಿದು ನಾ ಬಂದೆ ನಿನ್ನನ್ನು ಬಯಸಿದೆ
ಬಂದೀಗ ಸೇರಿದೆ
ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ
ನಿನ್ನಂಥ ಹೆಣ್ಣನ್ನು ಕಂಡಿಲ್ಲ ಯಾರಲ್ಲೂ ನಾ ಹೀಗೆ ಸೇರಿಲ್ಲ
ನಿನ್ನಂಥ ಹೆಣ್ಣನ್ನು ಕಂಡಿಲ್ಲ ಯಾರಲ್ಲೂ ನಾ ಹೀಗೆ ಸೇರಿಲ್ಲ
ಏಕೋ ನಾ ಕಾಣೆ ನಂಬು ನನ್ನಾಣೆ ಒಲವಿಂದ ಸೇರೆಯಾ
ನನ್ನಾಸೆ ನಿನ್ನಲ್ಲಿ ಏಕಿಲ್ಲ ಈ ಮೌನ ನಿನಗಿನ್ನೂ ಸರಿಯಲ್ಲ
ನನ್ನಾಸೆ ನಿನ್ನಲ್ಲಿ ಏಕಿಲ್ಲ ಈ ಮೌನ ನಿನಗಿನ್ನೂ ಸರಿಯಲ್ಲ
ನೋಡು ನೀನಿಲ್ಲಿ ಬೇರೆ ಯಾರಿಲ್ಲ ಕಣ್ಣಲ್ಲೇ ಕೊಲುವೆಯಾ
ಇಲ್ಲ ಮುತ್ತೊಂದ ಕೊಡುವೆಯಾ
ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೨
ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ
ನೀನಾಡೋ ಮಾತೆಲ್ಲಾ ಜೇನಂತೆ ನೀ ಹಾಡೋ ಸಂಗೀತ ಇಂಪಂತೆ
ನೀನಾಡೋ ಮಾತೆಲ್ಲಾ ಜೇನಂತೆ ನೀ ಹಾಡೋ ಸಂಗೀತ ಇಂಪಂತೆ
ಆಸೆ ಬಂದಂತೆ ಸೋತು ನಾ ನಿಂತೆ ಓ ಹೆಣ್ಣೇ ಬಲ್ಲೆಯಾ
ನಗುವಾಗ ಈ ಮೊಗವು ಶಶಿಯಂತೆ ನಲಿದಾಗ ಕುಣಿದಾಡೋ ನವಿಲಂತೆ
ನಗುವಾಗ ಈ ಮೊಗವು ಶಶಿಯಂತೆ ನಲಿದಾಗ ಕುಣಿದಾಡೋ ನವಿಲಂತೆ
ನಿನ್ನ ಕಂಡಂದೆ ಒಲಿದು ನಾ ಬಂದೆ ನಿನ್ನನ್ನು ಬಯಸಿದೆ
ಬಂದೀಗ ಸೇರಿದೆ
ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ
ನಿನ್ನಂಥ ಹೆಣ್ಣನ್ನು ಕಂಡಿಲ್ಲ ಯಾರಲ್ಲೂ ನಾ ಹೀಗೆ ಸೇರಿಲ್ಲ
ನಿನ್ನಂಥ ಹೆಣ್ಣನ್ನು ಕಂಡಿಲ್ಲ ಯಾರಲ್ಲೂ ನಾ ಹೀಗೆ ಸೇರಿಲ್ಲ
ಏಕೋ ನಾ ಕಾಣೆ ನಂಬು ನನ್ನಾಣೆ ಒಲವಿಂದ ಸೇರೆಯಾ
ನನ್ನಾಸೆ ನಿನ್ನಲ್ಲಿ ಏಕಿಲ್ಲ ಈ ಮೌನ ನಿನಗಿನ್ನೂ ಸರಿಯಲ್ಲ
ನನ್ನಾಸೆ ನಿನ್ನಲ್ಲಿ ಏಕಿಲ್ಲ ಈ ಮೌನ ನಿನಗಿನ್ನೂ ಸರಿಯಲ್ಲ
ನೋಡು ನೀನಿಲ್ಲಿ ಬೇರೆ ಯಾರಿಲ್ಲ ಕಣ್ಣಲ್ಲೇ ಕೊಲುವೆಯಾ
ಇಲ್ಲ ಮುತ್ತೊಂದ ಕೊಡುವೆಯಾ
ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ
Tuesday, October 26, 2010
ಕುಂಕುಮವಿರುವುದೇ ಹಣೆಗಾಗಿ
ಚಿತ್ರ: ನಾನಿರುವುದೆ ನಿನಗಾಗಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೯
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ಕೈಜಾರಿದ ಮುತ್ತೊಂದು ಕೈ ಸೇರಿತು ತಾ ಬಂದು
ಹೊಸ ಹರುಷ ಪ್ರತಿ ನಿಮಿಷ ಶಾಂತಿ ನೀಡಿತು ನನಗಿಂದು
ನಿನಗಾಸರೆ ನಾನಾಗಿ ನನ್ನ ಕೈಸೆರೆ ನೀನಾಗಿ
ಕನಸುಗಳು ನನಸಾಗಿ ಬಾಳು ಹೊನ್ನಿನ ಕಡಲಾಗಿ
ಹೊಸತನ ಕಾಣುವ ಹಾಯಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನನ್ನಾಸೆಯ ಹೂವಾಗಿ ನನ್ನೊಲವಿನ ಜೇನಾಗಿ
ಜೊತೆಯಲ್ಲೆ ಒಂದಾಗಿ ಎಂದು ನೀನಿರು ಸುಖವಾಗಿ
ನಾ ನೋಡುವ ಕಣ್ಣಾಗಿ ನಾ ಹಾಡುವ ಹಾಡಾಗಿ
ಬಾಳಿನಲಿ ಬೆಳಕಾಗಿ ಸೇರು ನನ್ನಲಿ ಹಿತವಾಗಿ
ಹೊಸತನ ಕಾಣುವ ಹಾಯಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
Labels:
೧೯೭೯,
SPB,
ಚಿ. ಉದಯಶಂಕರ್,
ನಾನಿರುವುದೆ ನಿನಗಾಗಿ,
ರಾಜನ್-ನಾಗೇಂದ್ರ
ಹೂವಂತೆ ಹೆಣ್ಣು ನಗುತಿರಬೇಕು
ಚಿತ್ರ: ಕಿಲಾಡಿ ಕಿಟ್ಟು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಮೋಹನ್ ಕುಮಾರ್
ಗಾಯಕರು: ಕೆ. ಜೆ. ಯೇಸುದಾಸ್
ವರ್ಷ: ೧೯೭೬
ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು
ಬಂಗಾರವಲ್ಲ ಸಿಂಗಾರಕಲ್ಲ
ಕೊರಳಿನಲಿ ಮೆರೆದಿರಲು ಮಾಂಗಲ್ಯವಿಲ್ಲ
ಸುಮವ ಕೊಡುವ ಲತೆಗೆ ಹಸಿರೇ ಉಸಿರಾಗಿದೆ
ಗೃಹಿಣಿ ಇರುವ ಗುಡಿಗೆ ತಾಳಿ ಬೆಳಕಾಗಿದೆ
ಸಂತೋಷವೇನು ನೋವಾದರೇನು
ವಿರಸ ಮರೆತು ಸರಸದಿಂದ ಬಾಳಲು ಸೊಗಸು
ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು
ಆಕಾಶ ರವಿಯ ಈ ಭೂಮಿ ಗಿರಿಯ
ಮರೆಯುವುದೆ ತೊರೆಯುವುದೆ ಸಂಬಂಧ ನೂಕಿ
ಒಲಿದ ಹೃದಯ ಬೆರೆತ ಜೀವ
ಬಿಡದೆಂದಿಗೂ ಮದುವೆ ತಂದ ಬೆಸುಗೆ ಕೆಡದು ಎಂದೆಂದಿಗೂ
ಈ ರೋಷ ತಂದ ಆವೇಶದಿಂದ
ಸಹನೆ ಮರೆವೆ ಕಡೆಗೆ ಕೆಡುವೆ ಯಾತನೆ ಪಡುವೆ
ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು
Labels:
೧೯೭೬,
ಕಿಲಾಡಿ ಕಿಟ್ಟು,
ಕೆ. ಜೆ. ಯೇಸುದಾಸ್,
ಚಿ. ಉದಯಶಂಕರ್,
ಮೋಹನ್ ಕುಮಾರ್
Monday, October 25, 2010
ನಾನೇನು ನೀನೇನು ಅವನೇನು
ಚಿತ್ರ: ಗಾಳಿಮಾತು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಕಪ್ಪನೆಯ ಮೋಡಗಳು ಕರಗುತ ನೀರಾಗಿ
ಮಳೆಯನು ನೆಲದಲಿ ಹರಿಸುತಿದೆ
ನೆಲವೆಲ್ಲ ನಗುನಗುತ ಹಚ್ಚನೆ ಹಸಿರಾಗಿ
ಬೆಳೆಯನು ಜನರಿಗೆ ಕೊಡುತಲಿರೆ
ಸಂತೋಷದಿ ನೀ ಬಾಳದೇ
ಹೇ ಸಂತೋಷದಿ ನೀ ಬಾಳದೇ
ಏಕೆ ಹೊಡೆದಾಡಿ ಕಾದಾಡುವೇ
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಗಾಳಿಯನು ನೀರನ್ನು ತಂದವ ನೀನಲ್ಲ
ಈ ನಿಜ ಏತಕೆ ಅರಿತಿಲ್ಲ
ಹಣ್ಣಿನಲಿ ಸಿಹಿಯನ್ನು ತಂದವ ನೀನಲ್ಲ
ಅರಿಯುವ ಜಾಣ್ಮೆಯೂ ಏಕಿಲ್ಲ
ನಿನದಲ್ಲದ ಸಂಪತ್ತಿಗೆ
ಹೇ ನಿನದಲ್ಲದ ಈ ಸಂಪತ್ತಿಗೆ ಏಕೆ ಬಡಿದಾಡಿ ಹೋರಾಡುವೆ
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
Thursday, October 21, 2010
ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ
ಚಿತ್ರ: ಮುನಿಯನ ಮಾದರಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧
ಹಾರುತಿದೆ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು
ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ
ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನು ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನು ಮಿಸ್ಟರ್ ಮಾರನು
ಹಾರುತಿದೆ ಲವ್ ಬರ್ಡ್ಸುಗಳು ಓಡುತಿವೆ ಕೌಸುಗಳು
ಊರಿಂದ ಬಂದನು ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನು ಮಿಸ್ಟರ್ ಮಾರನು
ಹೈ ಸ್ಕೂಲು ದಾಟಿರುವ ಕಾಲೇಜು ಮುಟ್ಟಿರುವ ಭೂಪ ಹಳ್ಳೀಗೆ ಬಂದಾಗ
ಸೂಟನ್ನು ಧರಿಸಿರುವ ಹ್ಯಾಟನ್ನು ಹಾಕಿರುವ ನನ್ನೀ ಸ್ಟೈಲನ್ನು ಕಂಡಾಗ
ಗಾರ್ಲೆಂಡ್ ಮಾಡದೆಲೆ ವೆಲ್ಕಂ ಹೇಳದೆಲೆ ಏಕೆ ನಿಂತಿರುವೆ
ಹೇಳೆ ನನ್ನ ಅತ್ತೆ ಮಗಳೇ
ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ
ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ, ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿದೆ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು
ಹುರಿ ಮೀಸೆ ಬಂದಾಯ್ತು, ನನಗೀಗ ವಯಸಾಯ್ತು, ನೋಡು ಪರ್ಸನಾಲಿಟಿ ಹೇಗಾಯ್ತು
ನಿನ್ನಲ್ಲಿ ಮನಸಾಯ್ತು, ನಿನ್ನಾಸೆ ಹೆಚ್ಚಾಯ್ತು, ರಾತ್ರಿ ನಿಂದೇನೆ ಡ್ರೀಂ ಆಯ್ತು
ರೋಮಿಯೊ ನಾನಾಗಿ, ಜೂಲಿಯಟ್ ನೀನಾಗಿ, ಲವ್ವು ಮಾಡುವೆನು
ಕೇಳೆ ನನ್ನ್ ಮಾವನ್ ಮಗಳೆ
ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ
ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ, ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿದೆ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
Labels:
೧೯೮೧,
SPB,
ಚಿ. ಉದಯಶಂಕರ್,
ಮುನಿಯನ ಮಾದರಿ,
ರಾಜನ್-ನಾಗೇಂದ್ರ
Saturday, October 9, 2010
If you come today
ಚಿತ್ರ: ಆಪರೇಶನ್ ಡೈಮಂಡ್ ರಾಕೆಟ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ|| ರಾಜ್ ಕುಮಾರ್
ವರ್ಷ: ೧೯೭೮
If you come today it is too early
If you come tomorrow it is too late
If you come today it is too early
If you come tomorrow it is too late
you pick your time,
tick tick tick tick tick tick a tick tick tick tick tick tick
tick tick tick tick tick tick a tick tick tick tick tick tick
Daaaarling!
If you come today it is too early
If you come tomorrow it is too late
Did you say morning? No No it's not good
Did you say evening? No No it's too bad
Did you say noon? No No it's not the time
What did you say? Hey What did you say?
Nothing? Oh it's alright.
You pick the time...
tick tick tick tick tick tick a tick tick tick tick tick tick
tick tick tick tick tick tick a tick tick tick tick tick tick
Daaaarling!
If you come today it is too early
If you come tomorrow it is too late
Million drums beat in my heart Million dreams haunt my heart
Million desires swing in my heart Million memories sieze my heart
Million drums beat in my heart Million dreams haunt my heart
Million desires swing in my heart Million memories seize my heart
You pick the time...
tick tick tick tick tick tick a tick tick tick tick tick tick
If you come today, it is too early
If you come tomorrow, it is too late
You pick the time...
tick tick tick tick tick tick a tick tick tick tick tick tick
tick tick tick tick tick tick a tick tick tick tick tick tick
Daaaarling!
ನಮ್ಮೂರ ಮಂದಾರ ಹೂವೇ
ಚಿತ್ರ : ಆಲೆಮನೆ
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಅಶ್ವಥ್-ವೈದಿ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧
ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೇ
ಕಣ್ಣಲ್ಲೇ ಕರೆದು ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ
ಕಣ್ಣಲ್ಲೇ ಕರೆದು ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ
ಸೊಗಸಾದ ಕಾರಂಜಿ ಬಿರಿದೆ
ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೇ
ಒಡಲಾಳ ಮೊರೆದು ಒಡನಾಟ ಮೆರೆದು
ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸ ಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ
ಒಡಲಾಳ ಮೊರೆದು ಒಡನಾಟ ಮೆರೆದು
ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸ ಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ
ತೀರದ ಮೋಹದ ಇನಿದಾದ ಆನಂದ ತಂದೆ
ಇನಿದಾದ ಆನಂದ ತಂದೆ
ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಸಂತೇಲಿ
ಚಿತ್ರ : ಗಾಳಿ ಮಾತು
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್ - ನಾಗೇಂದ್ರ
ಗಾಯಕರು : ರಮಣ(ರೇಣುಕ) ಮತ್ತು ನಾಗೇಂದ್ರ
ವರ್ಷ: ೧೯೮೧
ಹೇ...ಹೇ....
ಲಲ...ಲಲ...ಲಲ...
ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ
ಹಿಂದ್ ಹಿಂದೆ ಬಂದೋಳು ನೀನ್ ತಾನೇ
ನಿನ್ನ ನೋಡಿ ನಕ್ಕೋನು ನಾನ್ ತಾನೇ
ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ
ಹಿಂದ್ ಹಿಂದೆ ಬಂದೋಳು ನೀನ್ ತಾನೇ
ನಿನ್ನ ನೋಡಿ ನಕ್ಕೋನು ನಾನ್ ತಾನೇ
ನಮ್ಮೂರ ಜಾತ್ರೆಲಿ ಪೇಟೇಯ ಬೀದಿಲೀ
ಜಡೆಯನ್ನು ಎಳೆದವ ನೀನ್ ತಾನೇ
ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೇ
ನಮ್ಮೂರ ಜಾತ್ರೆಲಿ ಪೇಟೇಯ ಬೀದಿಲೀ
ಜಡೆಯನ್ನು ಎಳೆದವ ನೀನ್ ತಾನೇ
ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೇ
ಹೊಡೆದರೆ ನಿನ್ನಾ ಸುಮ್ಮನೆ ಬಿಡುವೆನೆ ಸುಳ್ಳೇಕೆ ಆಡ್ತಿ
ಹೊಡೆದರೆ ನಿನ್ನಾ ಸುಮ್ಮನೆ ಬಿಡುವೆನೆ ಸುಳ್ಳೇಕೆ ಆಡ್ತಿ
ಬಿದ್ದರೂ ಮೀಸೆ ಮಣ್ಣಾಗ್ಲಿಲ್ಲ ಎಂದೇಕೆ ಹೇಳ್ತಿ
ಬಿದ್ದರೂ ಮೀಸೆ ಮಣ್ಣಾಗ್ಲಿಲ್ಲ ಎಂದೇಕೆ ಹೇಳ್ತಿ
ನಮ್ಮಲಿ ಏಕೆ ಜಗಳವು ಇನ್ನೂ ನೀನೇ ನನ್ ಹೆಂಡ್ತಿ
ನಮ್ಮಲಿ ಏಕೆ ಜಗಳವು ಇನ್ನೂ ನೀನೇ ನನ್ ಹೆಂಡ್ತಿ
ನನ್ನಲಿ ಹೇಳು ಹಾಗಾದರೆ ನೀ ಸಂಬಳ ಏನ್ ತರ್ತಿ
ನನ್ನಲಿ ಹೇಳು ಹಾಗಾದರೆ ನೀ ಸಂಬಳ ಏನ್ ತರ್ತಿ
No Job...No vacancy
You....Get Out....
I don't see...I don't see...
I will see....I will see....
Labels:
೧೯೮೧,
ಗಾಳಿ ಮಾತು,
ಚಿ. ಉದಯಶಂಕರ್,
ನಾಗೇಂದ್ರ,
ರಮಣ(ರೇಣುಕ),
ರಾಜನ್-ನಾಗೇಂದ್ರ
ಬಯಸದೆ ಬಳಿ ಬಂದೆ
ಚಿತ್ರ: ಗಾಳಿಮಾತು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೧
ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ
ಉರಿ ಬಿಸಿಲು ತಂಪಾಯ್ತು ನಿನ್ನ ನಾ ನೊಡಲು
ಮೈ ಏಕೊ ಬಿಸಿ ಆಯ್ತು ನೀನು ಬಳಿ ನಿಂತು ನಗಲು
ನೀ ನಡೆವ ಹಾದಿಯಲಿ ಕಲ್ಲು ಮೃದುವಾಯಿತು
ಮುಳ್ಳೆಲ್ಲ ಹೂವಾಗಿ ಭೂಮಿಯೇ ಸ್ವರ್ಗವಾಯ್ತು
ನಿಂತಲ್ಲೆ ನೀರಾಗಿ ನಾ ಕರಗಿಹೋದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ
ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ
ಸೊಗಸೆಂಬ ನುಡಿಗಿಂತ ಸೊಗಸು ಈ ರೂಪವು
ಹಿತವೆಂಬ ನುಡಿಗಿಂತ ಹಿತವು ಈ ನಿನ್ನ ಒಲವು
ನಿನ್ನಿಂದ ಆನಂದ ಇಂದು ನಾ ಕಂಡೆನು
ಈ ನಿನ್ನ ಸ್ನೇಹವನು ಇನ್ನು ಎಂದೆಂದು ಬಿಡೆನು
ಸವಿಯಾದ ಮಾತಿಂದ ಹೊಸ ಬಾಳು ತಂದೆ
ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ
Labels:
೧೯೮೧,
SPB,
ಎಸ್. ಜಾನಕಿ,
ಗಾಳಿ ಮಾತು,
ಚಿ. ಉದಯಶಂಕರ್,
ರಾಜನ್-ನಾಗೇಂದ್ರ
ನಿನ್ನ ನೀನು ಮರೆತರೇನು ಸುಖವಿದೆ
ಚಿತ್ರ: ದೇವರ ಕಣ್ಣು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೫
ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ
ಹಾಡುವುದನು ಕೋಗಿಲೆಯು...
ಹಾಡುವುದನು ಕೋಗಿಲೆಯು ಮರೆಯುವುದೇ, ಹಾರುವುದನು ಬಾನಾಡಿ ತೊರೆಯೆವುದೆ
ಮೀನು ಈಜದಿರುವುದೆ, ದು೦ಬಿ ಹೂವ ಮರೆವುದೆ
ಮೀನು ಈಜದಿರುವುದೆ, ದು೦ಬಿ ಹೂವ ಮರೆವುದೆ
ಮುಗಿಲ ಕ೦ಡ ನವಿಲು ನಲಿಯದೆ
ನಿನ್ನ ನೀನು ಮರೆತರೇನು ಸುಖವಿದೆ
ಗಾಳಿ ತನ್ನ ಚಲನೆಯನ್ನು ಮರೆಯುವುದೆ, ಬೆಳ್ಳಿ ಮೋಡ ತೇಲದೆ ನಿಲ್ಲುವುದೆ
ತಾರೆ ಮಿನುಗದಿರುವುದೆ, ಮಿ೦ಚು ಹೊಡೆಯದಿರುವುದೆ
ತಾರೆ ಮಿನುಗದಿರುವುದೆ, ಮಿ೦ಚು ಹೊಡೆಯದಿರುವುದೆ
ನದಿಯು ಕಡಲ ಸ್ನೇಹ ಮರೆವುದೆ,
ಸಗಮಪ, ಗಮಪನಿ, ಪನಿಸ, ಪನಿರಿ, ಗಾ ನಿ ಸಾ ನಿ ಪಾ ಮಾ ಗಾ ಮ ರಿ ,
ಗಾ ನಿ ಸಾ ನಿ ಪಾ ಮ ಗಾ ಮ ಪಾ, ಗಾ ನಿ ಸಾ ನಿ ಪಾ ಮಾ ಗಾ ಮ
ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ
Labels:
೧೯೭೫,
SPB,
ಚಿ. ಉದಯಶಂಕರ್,
ಟಿ. ಜಿ. ಲಿಂಗಪ್ಪ,
ದೇವರ ಕಣ್ಣು
ಕೆಂಪಾದವೋ ಎಲ್ಲ ಕೆಂಪಾದವೋ
ಚಿತ್ರ: ಎಲ್ಲಿಂದಲೋ ಬಂದವರು
ಸಾಹಿತ್ಯ: ಪಿ.ಲಂಕೇಶ್
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೦
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಕುಡೀದ್ಹಾಂಗೆ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೊ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಕುಡೀದ್ಹಾಂಗೆ ಕೆಂಪಾದವೋ
ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೋ
ಊರು ಕಂದಮ್ಮಗಳು ಕೆಂಪಾದವೋ
ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೋ
ಊರು ಕಂದಮ್ಮಗಳು ಕೆಂಪಾದವೋ
ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿಗು ಹೋದಾಗ ಪಚ್ಚೆಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವೋ
ನನಗಾಗ ಕೆಂಪಾದವೋ
ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿಗು ಹೋದಾಗ ಪಚ್ಚೆಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವೋ
ನನಗಾಗ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
Labels:
೧೯೮೦,
SPB,
ಎಲ್ಲಿಂದಲೋ ಬಂದವರು,
ಪಿ.ಲಂಕೇಶ್,
ವಿಜಯಭಾಸ್ಕರ್
ಓ ಗುಣವಂತ
ಚಿತ್ರ: ಮಸಣದ ಹೂವು
ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ವಿಜಯಭಾಸ್ಕರ್
ಗಾಯಕರು : ಎಸ್.ಜಾನಕಿ
ವರ್ಷ: ೧೯೮೪
ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ
ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ
ದಾರಿದೀಪ ತೋರುತಾ ತೋರುತಾ
ಕರುಣೆ ಕಿರಣ ಬೀರುತಾ ಬೀರುತಾ
ಬಂದೆ ನೀನು ಓ ಸ್ನೇಹಿತ ಸ್ನೇಹಿತ
ನನ್ನ ಬಾಳು ಬೆಳಗಿದೆ ಬೆಳಗಿದೆ
ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ
ಹೃದಯ ನಿನಗೆ ಸೋತಿದೆ ಸೋತಿದೆ
ನುಡಿಯೇ ನಾಲಿಗೆ ನಾಚಿದೆ ನಾಚಿದೆ
ಬಗೆಬಗೆ ಭಾವ ಮೂಡಿದೆ ಮೂಡಿದೆ
ಮನವು ನಿನ್ನೇ ಹೊಗಳಿದೆ ಹೊಗಳಿದೆ
ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ
ಪ್ರೇಮದಾಸೆ ತೋರಲಾರೆ ತೋರಲಾರೆ
ಪ್ರಣಯ ಲೀಲೆ ಆಡಲಾರೆ ಆಡಲಾರೆ
ಭಾಷೆಯ ಮೀರಿದೆ ಭಾವನೆ ಕಾಮನೆ
ಆಸೆಯ ಮೀರಿದೆ ಮೋಹದ ಪ್ರೇರಣೆ
ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ
Labels:
೧೯೮೪,
ಎಸ್. ಜಾನಕಿ,
ಮಸಣದ ಹೂವು,
ವಿಜಯನಾರಸಿಂಹ,
ವಿಜಯಭಾಸ್ಕರ್
ಬಾನು ಭೂಮಿಯ ಮಿಲನವ ಬಯಸುತ
ಚಿತ್ರ: ಮಾತು ತಪ್ಪದ ಮಗ
ಸಾಹಿತ್ಯ: :ಆರ್. ಎನ್. ಜಯಗೋಪಾಲ್
ಸಂಗೀತ: ಇಳಯರಾಜ
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ವರ್ಷ: ೧೯೭೮
ಬಾನು ಭೂಮಿಯ ಮಿಲನವ ಬಯಸುತ ಬಾಗಿದೆ
ಮುಗಿಲಲ್ಲಿ ಮಿಂಚಾಡಿದೆ ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೆ
ಬಾನು ಭೂಮಿಯ ನಡುವಲಿ ಅಂತರ ತುಂಬಿದೆ
ಮುಗಿಲಿಂದ ಮಿಂಚೋಡಿದೆ ಹೂ ಚಿಂತೆ ರವಿಗೆಲ್ಲಿದೆ
ಭ್ರಮೆ ತುಂಬಿದೆ ಸಂಗಮದೆ
ಬಾಳೆಂಬ ಬನದೆ ಒಲವೆಂಬ ಹೂವ ಸೌಗಂಧ ನೀ ತಂದೆ
ಬಾಗಿದ ಲತೆಗೆ ಆಸರೆ ತಂದು ಮನದಲ್ಲಿ ನೀ ನಿಂದೆ
ಮೌನದ ಮಾತಲಿ ತುಂಬಿದೆ ಅರ್ಥ ತಂದೆ ನಾನಾಗ ಮೂಡಿತು ಅನುರಾಗ
ಬಾನು ಭುಮಿಯ ನಡುವಲಿ ಅಂತರ ತುಂಬಿದೆ
ಮುಗಿಲಿಂದ ಮಿಂಚೋಡಿದೆ ಹೂ ಚಿಂತೆ ರವಿಗೆಲ್ಲಿದೆ
ಅಂಜಿಕೆ ಶಂಕೆ ತುಂಬಿದೆ ಮನದೆ ಮುಂದೇನು ಎನ್ನುತಲಿ
ಎಂದಿಗು ನಿನ್ನ ಕೈಬಿಡೆ ಚಿನ್ನ ನೋವೆನೆ ಬಂದಿರಲಿ
ಭರವಸೆ ತಂದ ಹರುಶದೊಳಿಂದ ಏನೊ ಆವೇಗ ಸೋತೆ ನಾನೀಗ
ಬಾನು ಭೂಮಿಯ ಮಿಲನವ ಬಯಸುತ ಬಾಗಿದೆ
ಮುಗಿಲಲ್ಲಿ ಮಿಂಚಾಡಿದೆ ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೆ
Labels:
೧೯೭೮,
SPB,
ಆರ್.ಎನ್. ಜಯಗೋಪಾಲ್,
ಇಳಯರಾಜ,
ಎಸ್. ಜಾನಕಿ,
ಮಾತು ತಪ್ಪದ ಮಗ
Thursday, October 7, 2010
ತೆರೆದಿದೆ ಮನೆ ಓ ಬಾ ಅತಿಥಿ
ಚಿತ್ರ: ಹೊಸಬೆಳಕು
ಸಾಹಿತ್ಯ: ಕುವೆಂಪು
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಜಾನಕಿ , ವಾಣಿ ಜಯರಾಂ
ಗಾಯಕರು: ಎಸ್. ಜಾನಕಿ , ವಾಣಿ ಜಯರಾಂ
ವರ್ಷ: ೧೯೮೨
ಆ...... ತಾ... ನ.. ನಾ...
ತೆರೆದಿದೆ ಮನೆ ಓ ಬಾ ಅತಿಥಿ
ಆ......
ತೆರೆದಿದೆ ಮನೆ ಓ ಬಾ ಅತಿಥಿ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ನೇಸರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ ಬಾ
ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ ಬಾ
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ಕಡಲಾಗಿ ಬಾ ಬಾನಾಗಿ ಬಾ
ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ
ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ಹೊಸಬಾಳನು ತಾ ಅತಿಥಿ
ಹೊಸಬಾಳನು ತಾ ಅತಿಥಿ
Labels:
೧೯೮೨,
ಎಂ. ರಂಗರಾವ್,
ಎಸ್. ಜಾನಕಿ,
ಕುವೆಂಪು,
ವಾಣಿ ಜಯರಾಂ,
ಹೊಸಬೆಳಕು
Wednesday, September 29, 2010
ನೀರಿನಲ್ಲಿ ಅಲೆಯ ಉಂಗುರ
ಚಿತ್ರ: ಬೇಡಿ ಬಂದವಳು
ಸಾಹಿತ್ಯ: ಆರ್.ಎನ್. ಜಯಗೋಪಲ್
ಸಂಗೀತ: ಆರ್. ಸುದರ್ಶನಂ
ಗಾಯಕರು: ಪಿ.ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ
ವರ್ಷ: ೧೯೬೮
ವರ್ಷ: ೧೯೬೮
ನೀರಿನಲ್ಲಿ ಅಲೆಯ ಉಂಗುರ ಭೂಮಿ ಮೇಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ
ನೀರಿನಲ್ಲಿ ಅಲೆಯ ಉಂಗುರ ಭೂಮಿ ಮೇಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ
ನೀರಿನಲ್ಲಿ ಅಲೆಯ ಉಂಗುರ ಭೂಮಿ ಮೇಲೆ ಹೂವಿನುಂಗುರ
ಅಂದಿಗೆಯೂ ಕಾಲಿನುಂಗುರ ಅದರ ದನಿ ಎಷ್ಟು ಸುಂದರ
ತರುವು ಲತೆಯೂ ಸೇರಿದ ಕಥೆಯೂ
ತರುವು ಲತೆಯೂ ಸೇರಿದ ಕಥೆಯೂ
ತನುವ ಬಳಸಿ ತೋಳಿನುಂಗುರ
ನೀರಿನಲ್ಲಿ ಅಲೆಯ ಉಂಗುರ ನೀರಿನಲ್ಲಿ ಅಲೆಯ ಉಂಗುರ
ಮಣ್ಣಿನಲ್ಲಿ ಕಂಡ ಉಂಗುರ ಹೆಣ್ಣು ನಾಚಿ ಗೀರಿದುಂಗುರ
ಬೆರಳಿನಿಂದ ತೀಡಿದುಂಗುರ
ಬೆರಳಿನಿಂದ ತೀಡಿದುಂಗುರ
ಕಣ್ಣ ಸೆಳೆವ ಕುರುಳುಗುಂಗುರ
ನೀರಿನಲ್ಲಿ ಅಲೆಯ ಉಂಗುರ ನೀರಿನಲ್ಲಿ ಅಲೆಯ ಉಂಗುರ
ಆಗಿ ನಿನ್ನ ಕೈಯ ಸಂಚರ ಎನ್ನ ಹೃದಯವೊಂದು ಢಂಗುರ
ನಾನೂ ನುಡಿಯೆ ಕಿವಿಯಲಿಂಚರ
ನಾನೂ ನುಡಿಯೆ ಕಿವಿಯಲಿಂಚರ
ಹಣೆಯ ಮೇಲೆ ಬೆವರಿನುಂಗುರ...
ನೀರಿನಲ್ಲಿ ಅಲೆಯ ಉಂಗುರ ನೀರಿನಲ್ಲಿ ಅಲೆಯ ಉಂಗುರ
Labels:
೧೯೬೮,
PBS,
ಆರ್. ಸುದರ್ಶನಂ,
ಆರ್.ಎನ್. ಜಯಗೋಪಾಲ್,
ಪಿ. ಸುಶೀಲ,
ಬೇಡಿ ಬಂದವಳು
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ
ಚಿತ್ರ: ಗಾಳಿ ಮಾತು
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಜಾನಕಿ
ವರ್ಷ: ೧೯೮೧
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
ಭುವಿಯಲ್ಲೋ ಬಾನಲ್ಲೋ ಇನ್ನೆಲ್ಲೋ ನಾ ಕಾಣೇ..
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
ಅರಳಿರುವ ಹೂವಿನಲ್ಲೀ ನಿನ್ನ ನೋಟವಾ
ಹರಿಯುತಿಹ ನೀರಿನಲ್ಲೀ ನಿನ್ನ ಓಟವಾ
ಇಂಪಾದ ಗಾನದಲ್ಲೀ ನಿನ್ನ ಮೊಗದ ಭಾವವಾ
ಮಳೆ ಬಿಲ್ಲ ಬಣ್ಣದಲ್ಲಿ ನಿನ್ನ ಅಂದವಾ
ನವಿಲಾಡೊ ನಾಟ್ಯದಲ್ಲೀ ನಿನ್ನ ಚಂದವಾ
ತಂಪಾದ ಗಾಳಿಯಲ್ಲೀ ನೀನಾಡೋ ಆಟವಾ
ದಿನವೆಲ್ಲಾ ನಾ ಕಂಡೇ ನಾ ಕಂಡು ಬೆರೆಗಾದೆ...
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ...
ಮಿನುಗುತಿಹ ತಾರೆಯೆಲ್ಲಾ ನಿನ್ನ ಕಂಗಳೋ
ನಗುತಿರಲು ಭೂಮಿಗೆಲ್ಲಾ ಬೆಳದಿಂಗಳೋ
ಆ ಬೆಳ್ಳೀ ಮೋಡವೆಲ್ಲಾ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದಾ ನಿನ್ನ ಪಯಣವೋ
ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ
ನಿನ್ನಂತೇ ಯಾರಿಲ್ಲಾ ನಿನ್ನಲ್ಲೇ ಮನಸೆಲ್ಲಾ...
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ...
ಭುವಿಯಲ್ಲೋ ಬಾನಲ್ಲೋ ಇನ್ನೆಲ್ಲೋ ನಾ ಕಾಣೇ..
ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೇ
Labels:
೧೯೮೧,
ಎಸ್. ಜಾನಕಿ,
ಗಾಳಿ ಮಾತು,
ಚಿ. ಉದಯಶಂಕರ್,
ರಾಜನ್-ನಾಗೇಂದ್ರ
Monday, September 27, 2010
ನನ್ನ ಹಾಡು ನನ್ನದು ನನ್ನ ರಾಗ ನನ್ನದು
ಚಿತ್ರ : ಸುಪ್ರಭಾತ
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ : ೧೯೮೮
ಹ ಹ ಹ ಹ ಹ ಹ ಹಾ... ಹ ಹ ಹ ಹ ಹ ಹ ಹಾ..
ಲ ಲ ಲ ಲ ಲ ಲ ಲಾ... ಲ ಲ ಲ ಲ ಲ ಲ ಲಾ...
ನನ್ನ ಹಾಡು ನನ್ನದು, ನನ್ನ ರಾಗ ನನ್ನದು,
ನನ್ನ ತಾಳ ನನ್ನದು, ನನ್ನ ಆಸೆ ನನ್ನದು
ಎಲ್ಲೆಲ್ಲಿಯೂ ಎಂದೆಂದಿಗೂ, ಎಲ್ಲೆಲ್ಲಿಯೂ ಎಂದೆಂದಿಗೂ,
ನನ್ನಂತೆ ನಾನು ಇರುವೆನು, ನುಡಿವೆನು, ನಡೆವೆನು, ದುಡಿವೆನು.. ಈ ಬಾಳಲಿ...
ನನ್ನ ಹಾಡು ನನ್ನದು, ನನ್ನ ರಾಗ ನನ್ನದು,
ನನ್ನ ತಾಳ ನನ್ನದು, ನನ್ನ ಆಸೆ ನನ್ನದು
ನೋಡು ನೀಲಿ ಬಾನಿಗೆ, ಮೋಡ ಅಂದ ತಂದಿದೆ
ಹಕ್ಕಿ ಹಾಡಿ ಹಾರಡಿದೆ. ಹಾಯಾಗಿ ಆನಂದದೇ...
ತಂಪು ಗಾಳಿ ಬೀಸಿದೆ, ನದಿಯ ನೀರು ಓಡಿದೆ
ಹಸಿರು ಮೆತ್ತೆಯ ಹಾಸಿದೆ. ಲತೆಯಲ್ಲಿ ಹೂ ನಗುತಿದೆ.
ಜಗದ ಸೊಬಗು ನನಗೆ ತಾನೇ...
ನನ್ನ ಹಾಡು ನನ್ನದು, ನನ್ನ ರಾಗ ನನ್ನದು,
ನನ್ನ ತಾಳ ನನ್ನದು, ನನ್ನ ಆಸೆ ನನ್ನದು
ನೂರು ಜನರು ಬಂದರು, ನೂರು ಜನರು ಹೋದರು
ನನಗೆ ನಾನೇ ಸಂಗಾತಿಯು, ನಾನೆಂದೂ ಸುಖಜೀವಿಯು
ನೂರು ಜನರು ಬಂದರು, ನೂರು ಜನರು ಹೋದರು
ನನಗೆ ನಾನೇ ಸಂಗಾತಿಯು, ನಾನೆಂದೂ ಸುಖಜೀವಿಯು
ಉರಿವ ಬಿಸಿಲೆ ಬಂದರೂ, ಗುಡುಗು ಮಳೆಯೇ ಸುರಿದರೂ
ನನಗೆ ಎಲ್ಲ ಸಂತೋಷವೇ, ದಿನಕೊಂದು ಹೊಸ ನೋಟವೇ
ಹಗಲು ಇರುಳು ಸೊಗಸೂ ತಾನೇ...
ಎಲ್ಲೆಲ್ಲಿಯೂ ಎಂದೆಂದಿಗೂ, ಎಲ್ಲೆಲ್ಲಿಯೂ ಎಂದೆಂದಿಗೂ,
ನನ್ನಂತೆ ನಾನು ಇರುವೆನು, ನುಡಿವೆನು, ನಡೆವೆನು, ದುಡಿವೆನು.. ಈ ಬಾಳಲಿ...
ನನ್ನ ಹಾಡು ನನ್ನದು, ನನ್ನ ರಾಗ ನನ್ನದು,
ನನ್ನ ತಾಳ ನನ್ನದು, ನನ್ನ ಆಸೆ ನನ್ನದು
Friday, September 24, 2010
ಸೂರ್ಯಂಗೂ ಚಂದ್ರಂಗೂ ಬಂದಾರೆ
ಚಿತ್ರ: ಶುಭಮಂಗಳ
ಸಾಹಿತ್ಯ: ಎಂ.ಎನ್. ವ್ಯಾಸರಾವ್
ಸಂಗೀತ: ವಿಜಯಭಾಸ್ಕರ್
ಗಾಯಕರು: ರವೀ (ಕೆ.ಎಸ್.ಎಲ್.ಸ್ವಾಮಿ)
ವರ್ಷ: ೧೯೭೫
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು,
ಅರಮನ್ಯಾಗೆ ಏನೈತೆ ಸೊಗಸು
ಮನೆತುಂಬ ಹರಿದೈತೆ ಕೆನೆಹಾಲು ಮೊಸರು
ಎದೆಯಾಗೆ ಬೆರೆತೈತೆ ಬ್ಯಾಸರದಾ ಉಸಿರು, ಬ್ಯಾಸರದಾ ಉಸಿರು
ಗುಡಿಯಾಗೆ ಬೆಳ್ಗೈತೆ ತುಪ್ಪಾದ ದೀಪ
ನುಡಿಯಾಗೆ ನಡೆಯಾಗೆ ಸಿಡಿದೈತೆ ಕ್ವಾಪ, ಸಿಡಿದೈತೆ ಕ್ವಾಪ
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು
ಬೆಳದಿಂಗಳು ಚೆಲ್ಲೈತೆ ಅಂಗಳದಾ ಹೊರಗೇ
ಕರಿಮೋಡ ಮುಸುಕೈತೆ ಮನಸಿನಾ ಒಳಗೇ
ಬಯಲಾಗೆ ತುಳುಕೈತೆ ಹರುಸದಾ ಒನಲು
ಪ್ರೀತಿಯಾ ತೇರಿಗೇ ಬಡಿದೈತೆ ಸಿಡಿಲು,ಬಡಿದೈತೆ ಸಿಡಿಲು
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು
ಮುಂಬಾಗಿಲ ರಂಗೋಲಿ ಮನಗೈತೆ ಹಾಯಾಗೀ
ಕಿರುನಗೆಯ ಮುಖವೆಲ್ಲ ಮುದುಡೈತೆ ಸೊರಗೀ
ಆನಂದ ಸಂತೋಸ ಈ ಮನೆಗೆ ಬರಲೀ
ಬೇಡುವೆನು ಕೈಮುಗಿದು ಆ ನನ್ನ ಸಿವನಾ,ಆ ನನ್ನ ಸಿವನಾ
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು
Labels:
೧೯೭೫,
ಎಂ.ಎನ್. ವ್ಯಾಸರಾವ್,
ರವೀ (ಕೆ.ಎಸ್.ಎಲ್.ಸ್ವಾಮಿ),
ವಿಜಯಭಾಸ್ಕರ್,
ಶುಭಮಂಗಳ
ಹಾಲಲ್ಲಾದರೂ ಹಾಕು ನೀರಲ್ಲಾದರೂ
ಚಿತ್ರ : ದೇವತಾ ಮನುಷ್ಯ
ಸಾಹಿತ್ಯ : ಚಿ.ಉದಯ್ ಶಂಕರ್
ಸಂಗೀತ : ಉಪೇಂದ್ರ ಕುಮಾರ್
ಗಾಯಕರು : ಡಾ|| ರಾಜ್ ಕುಮಾರ್ ಹಾಗೂ ಬಿ. ಆರ್. ಛಾಯಾ
ವರ್ಷ : ೧೯೮೮
ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ.
ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ.
ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ.
ಮುಳ್ಳಲ್ಲಾದರೂ ನೂಕು, ಕಲ್ಲಲ್ಲಾದರೂ ನೂಕು, ರಾಘವೇಂದ್ರ.
ಮುಳ್ಳಲ್ಲಾದರೂ ನೂಕು, ಕಲ್ಲಲ್ಲಾದರೂ ನೂಕು, ರಾಘವೇಂದ್ರ.
ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ, ಒಂದಾಗಿರುವೆ ರಾಘವೇಂದ್ರ.
ಬಿಸಿಲಲ್ಲೇ ಒಣಗಿಸು, ನೆರಳಲ್ಲೇ ಮಲಗಿಸು, ರಾಘವೇಂದ್ರ.
ಬಿಸಿಲಲ್ಲಿ ಕೆಂಪಾಗಿ, ನೆರಳಲ್ಲಿ ತಂಪಾಗಿ, ನಗುನಗುತಾಲಿರುವೆ ರಾಘವೇಂದ್ರ.
ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.
ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ
ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು, ನೀನೇ ಹೇಳು, ರಾಘವೇಂದ್ರ.
ಎಲ್ಲಿದ್ದಾರೇನು ನಾ, ಹೇಗಿದ್ದರೇನು ನಾ, ರಾಘವೇಂದ್ರ.
ನಿನ್ನಲ್ಲಿ ಶರಣಾಗಿ, ನೀ ನನ್ನ ಉಸಿರಾಗಿ, ಬಾಳಿದರೆ ಸಾಕು ರಾಘವೇಂದ್ರ.
Labels:
೧೯೮೮,
ಉಪೇಂದ್ರ ಕುಮಾರ್,
ಚಿ. ಉದಯಶಂಕರ್,
ಡಾ|| ರಾಜ್ ಕುಮಾರ್,
ದೇವತಾ ಮನುಷ್ಯ,
ಬಿ. ಆರ್. ಛಾಯಾ
Subscribe to:
Posts (Atom)