Friday, October 29, 2010

ಯಾವ ಹೂವು ಯಾರ ಮುಡಿಗೋ



ಚಿತ್ರ: ಬೆಸುಗೆ
ಸಾಹಿತ್ಯ: ಶ್ಯಾಮಸುಂದರ್ ಕುಲಕರ್ಣಿ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೬

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಒಂದು ಮನದ ಯೋಚನೆ ಒಂದು ಮನಕೆ ಸೂಚನೆ
ಯಾರೂ ಅರಿಯಲಾರರು ಯಾರ ಪಾಲು ಯಾರಿಗೋ ಯಾರಿಗೋ...

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಮೋಹ ಪಾಶ ಎಸೆಯಿತು ಒಂದು ಪಾಠ ಕಲಿಸಿತು
ಇಂಥ ಪಾಠ ಕಲಿಸಲು ಗುರುವು ಯಾರು ಯಾರಿಗೋ ಯಾರಿಗೋ...

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಮನದ ಕದವ ತೆರೆಯಲು ಬೇರೆ ಗುರಿಯ ಮುಟ್ಟಿತು
ಯಾರು ಹೇಳಬಲ್ಲರು ಯಾರ ಪಯಣ ಎಲ್ಲಿಗೋ ಎಲ್ಲಿಗೋ...

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

Thursday, October 28, 2010

ದುಂಡು ಮಲ್ಲಿಗೆ ಮಾತಾಡೆಯಾ

ಚಿತ್ರ: ನನ್ನ ದೇವರು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೨

ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ

ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ

ನೀನಾಡೋ ಮಾತೆಲ್ಲಾ ಜೇನಂತೆ ನೀ ಹಾಡೋ ಸಂಗೀತ ಇಂಪಂತೆ
ನೀನಾಡೋ ಮಾತೆಲ್ಲಾ ಜೇನಂತೆ ನೀ ಹಾಡೋ ಸಂಗೀತ ಇಂಪಂತೆ
ಆಸೆ ಬಂದಂತೆ ಸೋತು ನಾ ನಿಂತೆ ಓ ಹೆಣ್ಣೇ ಬಲ್ಲೆಯಾ

ನಗುವಾಗ ಈ ಮೊಗವು ಶಶಿಯಂತೆ ನಲಿದಾಗ ಕುಣಿದಾಡೋ ನವಿಲಂತೆ
ನಗುವಾಗ ಈ ಮೊಗವು ಶಶಿಯಂತೆ ನಲಿದಾಗ ಕುಣಿದಾಡೋ ನವಿಲಂತೆ
ನಿನ್ನ ಕಂಡಂದೆ ಒಲಿದು ನಾ ಬಂದೆ ನಿನ್ನನ್ನು ಬಯಸಿದೆ
ಬಂದೀಗ ಸೇರಿದೆ

ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ

ನಿನ್ನಂಥ ಹೆಣ್ಣನ್ನು ಕಂಡಿಲ್ಲ ಯಾರಲ್ಲೂ ನಾ ಹೀಗೆ ಸೇರಿಲ್ಲ
ನಿನ್ನಂಥ ಹೆಣ್ಣನ್ನು ಕಂಡಿಲ್ಲ ಯಾರಲ್ಲೂ ನಾ ಹೀಗೆ ಸೇರಿಲ್ಲ
ಏಕೋ ನಾ ಕಾಣೆ ನಂಬು ನನ್ನಾಣೆ ಒಲವಿಂದ ಸೇರೆಯಾ

ನನ್ನಾಸೆ ನಿನ್ನಲ್ಲಿ ಏಕಿಲ್ಲ ಈ ಮೌನ ನಿನಗಿನ್ನೂ  ಸರಿಯಲ್ಲ
ನನ್ನಾಸೆ ನಿನ್ನಲ್ಲಿ ಏಕಿಲ್ಲ ಈ ಮೌನ ನಿನಗಿನ್ನೂ  ಸರಿಯಲ್ಲ
ನೋಡು ನೀನಿಲ್ಲಿ ಬೇರೆ ಯಾರಿಲ್ಲ ಕಣ್ಣಲ್ಲೇ ಕೊಲುವೆಯಾ
ಇಲ್ಲ ಮುತ್ತೊಂದ ಕೊಡುವೆಯಾ

ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ

Tuesday, October 26, 2010

ಕುಂಕುಮವಿರುವುದೇ ಹಣೆಗಾಗಿ



ಚಿತ್ರ: ನಾನಿರುವುದೆ ನಿನಗಾಗಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೯

ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ

ಕೈಜಾರಿದ ಮುತ್ತೊಂದು ಕೈ ಸೇರಿತು ತಾ ಬಂದು
ಹೊಸ ಹರುಷ ಪ್ರತಿ ನಿಮಿಷ ಶಾಂತಿ ನೀಡಿತು ನನಗಿಂದು

ನಿನಗಾಸರೆ ನಾನಾಗಿ ನನ್ನ ಕೈಸೆರೆ ನೀನಾಗಿ
ಕನಸುಗಳು ನನಸಾಗಿ ಬಾಳು ಹೊನ್ನಿನ ಕಡಲಾಗಿ
ಹೊಸತನ ಕಾಣುವ ಹಾಯಾಗಿ

ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ

ನನ್ನಾಸೆಯ ಹೂವಾಗಿ ನನ್ನೊಲವಿನ ಜೇನಾಗಿ
ಜೊತೆಯಲ್ಲೆ ಒಂದಾಗಿ ಎಂದು ನೀನಿರು ಸುಖವಾಗಿ

ನಾ ನೋಡುವ ಕಣ್ಣಾಗಿ ನಾ ಹಾಡುವ ಹಾಡಾಗಿ
ಬಾಳಿನಲಿ ಬೆಳಕಾಗಿ ಸೇರು ನನ್ನಲಿ ಹಿತವಾಗಿ
ಹೊಸತನ ಕಾಣುವ ಹಾಯಾಗಿ

ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ

ಹೂವಂತೆ ಹೆಣ್ಣು ನಗುತಿರಬೇಕು



ಚಿತ್ರ: ಕಿಲಾಡಿ ಕಿಟ್ಟು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಮೋಹನ್ ಕುಮಾರ್
ಗಾಯಕರು: ಕೆ. ಜೆ. ಯೇಸುದಾಸ್
ವರ್ಷ: ೧೯೭೬

ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು

ಬಂಗಾರವಲ್ಲ ಸಿಂಗಾರಕಲ್ಲ
ಕೊರಳಿನಲಿ ಮೆರೆದಿರಲು ಮಾಂಗಲ್ಯವಿಲ್ಲ
ಸುಮವ ಕೊಡುವ ಲತೆಗೆ ಹಸಿರೇ ಉಸಿರಾಗಿದೆ
ಗೃಹಿಣಿ ಇರುವ ಗುಡಿಗೆ ತಾಳಿ ಬೆಳಕಾಗಿದೆ
ಸಂತೋಷವೇನು ನೋವಾದರೇನು
ವಿರಸ ಮರೆತು ಸರಸದಿಂದ ಬಾಳಲು ಸೊಗಸು

ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು

ಆಕಾಶ ರವಿಯ ಈ ಭೂಮಿ ಗಿರಿಯ
ಮರೆಯುವುದೆ ತೊರೆಯುವುದೆ ಸಂಬಂಧ ನೂಕಿ
ಒಲಿದ ಹೃದಯ ಬೆರೆತ ಜೀವ
ಬಿಡದೆಂದಿಗೂ ಮದುವೆ ತಂದ ಬೆಸುಗೆ ಕೆಡದು ಎಂದೆಂದಿಗೂ
ಈ ರೋಷ ತಂದ ಆವೇಶದಿಂದ
ಸಹನೆ ಮರೆವೆ ಕಡೆಗೆ ಕೆಡುವೆ ಯಾತನೆ ಪಡುವೆ

ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು

Monday, October 25, 2010

ನಾನೇನು ನೀನೇನು ಅವನೇನು



ಚಿತ್ರ: ಗಾಳಿಮಾತು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ

ಕಪ್ಪನೆಯ ಮೋಡಗಳು ಕರಗುತ ನೀರಾಗಿ
ಮಳೆಯನು ನೆಲದಲಿ ಹರಿಸುತಿದೆ
ನೆಲವೆಲ್ಲ ನಗುನಗುತ ಹಚ್ಚನೆ ಹಸಿರಾಗಿ
ಬೆಳೆಯನು ಜನರಿಗೆ ಕೊಡುತಲಿರೆ
ಸಂತೋಷದಿ ನೀ ಬಾಳದೇ
ಹೇ ಸಂತೋಷದಿ ನೀ ಬಾಳದೇ
ಏಕೆ ಹೊಡೆದಾಡಿ ಕಾದಾಡುವೇ

ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ

ಗಾಳಿಯನು ನೀರನ್ನು ತಂದವ ನೀನಲ್ಲ
ಈ ನಿಜ ಏತಕೆ ಅರಿತಿಲ್ಲ
ಹಣ್ಣಿನಲಿ ಸಿಹಿಯನ್ನು ತಂದವ ನೀನಲ್ಲ
ಅರಿಯುವ ಜಾಣ್ಮೆಯೂ ಏಕಿಲ್ಲ
ನಿನದಲ್ಲದ ಸಂಪತ್ತಿಗೆ
ಹೇ ನಿನದಲ್ಲದ ಈ ಸಂಪತ್ತಿಗೆ ಏಕೆ ಬಡಿದಾಡಿ ಹೋರಾಡುವೆ

ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ

Thursday, October 21, 2010

ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ



ಚಿತ್ರ: ಮುನಿಯನ ಮಾದರಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ಹಾರುತಿದೆ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು
ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ
ಹಳ್ಳಿ ದಾರಿಯಲ್ಲಿ ತಂಪು ಬ್ರೀಜಿನಲ್ಲಿ ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನು ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನು ಮಿಸ್ಟರ್ ಮಾರನು
ಹಾರುತಿದೆ ಲವ್ ಬರ್ಡ್ಸುಗಳು ಓಡುತಿವೆ ಕೌಸುಗಳು
ಊರಿಂದ ಬಂದನು ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನು ಮಿಸ್ಟರ್ ಮಾರನು

ಹೈ ಸ್ಕೂಲು ದಾಟಿರುವ ಕಾಲೇಜು ಮುಟ್ಟಿರುವ ಭೂಪ ಹಳ್ಳೀಗೆ ಬಂದಾಗ
ಸೂಟನ್ನು ಧರಿಸಿರುವ ಹ್ಯಾಟನ್ನು ಹಾಕಿರುವ ನನ್ನೀ ಸ್ಟೈಲನ್ನು ಕಂಡಾಗ
ಗಾರ್ಲೆಂಡ್ ಮಾಡದೆಲೆ ವೆಲ್ಕಂ ಹೇಳದೆಲೆ ಏಕೆ ನಿಂತಿರುವೆ
ಹೇಳೆ ನನ್ನ ಅತ್ತೆ ಮಗಳೇ

ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ
ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ, ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿದೆ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು

ಹುರಿ ಮೀಸೆ ಬಂದಾಯ್ತು, ನನಗೀಗ ವಯಸಾಯ್ತು, ನೋಡು ಪರ್ಸನಾಲಿಟಿ ಹೇಗಾಯ್ತು
ನಿನ್ನಲ್ಲಿ ಮನಸಾಯ್ತು, ನಿನ್ನಾಸೆ ಹೆಚ್ಚಾಯ್ತು, ರಾತ್ರಿ ನಿಂದೇನೆ ಡ್ರೀಂ ಆಯ್ತು
ರೋಮಿಯೊ ನಾನಾಗಿ, ಜೂಲಿಯಟ್ ನೀನಾಗಿ, ಲವ್ವು ಮಾಡುವೆನು
ಕೇಳೆ ನನ್ನ್ ಮಾವನ್ ಮಗಳೆ

ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ
ಹಳ್ಳಿ ದಾರಿಯಲ್ಲಿ, ತಂಪು ಬ್ರೀಜಿನಲ್ಲಿ, ಈವಿನಿಂಗ್ ಹೊತ್ತಿನಲ್ಲಿ ನಡೆದು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು
ಹಾರುತಿದೆ ಲವ್ ಬರ್ಡ್ಸುಗಳು, ಓಡುತಿವೆ ಕೌಸುಗಳು
ಊರಿಂದ ಬಂದನೊ ಮಿಸ್ಟರ್ ಮಾರನು
ಬೆಂಗ್ಳೂರಿಂದ ಬಂದನೊ ಮಿಸ್ಟರ್ ಮಾರನು

Saturday, October 9, 2010

If you come today



ಚಿತ್ರ: ಆಪರೇಶನ್ ಡೈಮಂಡ್ ರಾಕೆಟ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ|| ರಾಜ್ ಕುಮಾರ್
ವರ್ಷ: ೧೯೭೮ 
 
If you come today  it is too early
If you come tomorrow it is too late
If you come today  it is too early
If you come tomorrow it is too late
you pick your time,
tick tick tick tick tick tick  a  tick tick tick tick tick tick
tick tick tick tick tick tick  a  tick tick tick tick tick tick
Daaaarling!

If you come today  it is too early
If you come tomorrow  it is too late

Did you say morning?  No No it's not good
Did you say evening? No No it's too bad
Did you say noon? No No it's not the time
What did you say? Hey What did you say?
Nothing?  Oh it's alright.
You pick the time...
tick tick tick tick tick tick  a  tick tick tick tick tick tick
tick tick tick tick tick tick  a  tick tick tick tick tick tick
Daaaarling!

If you come today  it is too early
If you come tomorrow  it is too late

Million drums beat in my heart  Million dreams haunt my heart
Million desires swing in my heart  Million memories sieze my heart
Million drums beat in my heart Million dreams haunt my heart
Million desires swing in my heart  Million memories seize my heart
You pick the time...
tick tick tick tick tick tick  a  tick tick tick tick tick tick

If you come today, it is too early
If you come tomorrow, it is too late

You pick the time...
tick tick tick tick tick tick  a  tick tick tick tick tick tick
tick tick tick tick tick tick  a  tick tick tick tick tick tick
Daaaarling!

ನಮ್ಮೂರ ಮಂದಾರ ಹೂವೇ



ಚಿತ್ರ : ಆಲೆಮನೆ
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಅಶ್ವಥ್-ವೈದಿ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೇ

ಕಣ್ಣಲ್ಲೇ ಕರೆದು ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ

ಕಣ್ಣಲ್ಲೇ ಕರೆದು ಹೊಂಗನಸ ತೆರೆದು
ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು
ಸಮ್ಮೋಹ ಸಂಬಂಧ ಮಿಡಿದೆ

ಮೂಡಿದ ಪ್ರೇಮದ ಸೊಗಸಾದ ಕಾರಂಜಿ ಬಿರಿದೆ
ಸೊಗಸಾದ ಕಾರಂಜಿ ಬಿರಿದೆ

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೇ

ಒಡಲಾಳ ಮೊರೆದು ಒಡನಾಟ ಮೆರೆದು
ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸ ಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ

ಒಡಲಾಳ ಮೊರೆದು ಒಡನಾಟ ಮೆರೆದು
ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸ ಗಾನ ತೋರಿ
ಹಿತವಾದ ಮಾಧುರ್ಯ ಮಿಂದೆ

ತೀರದ ಮೋಹದ ಇನಿದಾದ ಆನಂದ ತಂದೆ
ಇನಿದಾದ ಆನಂದ ತಂದೆ

ನಮ್ಮೂರ ಮಂದಾರ ಹೂವೇ
ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು
ನನ್ನ ಬರಿದಾದ ಮನದಲ್ಲಿ ಮಿನುಗು
ಬರಿದಾದ ಮನದಲ್ಲಿ ಮಿನುಗು

ನಮ್ಮೂರ ಸಂತೇಲಿ



ಚಿತ್ರ : ಗಾಳಿ ಮಾತು
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್ - ನಾಗೇಂದ್ರ
ಗಾಯಕರು : ರಮಣ(ರೇಣುಕ) ಮತ್ತು ನಾಗೇಂದ್ರ
ವರ್ಷ: ೧೯೮೧ 

ಹೇ...ಹೇ....
ಲಲ...ಲಲ...ಲಲ...

ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ
ಹಿಂದ್ ಹಿಂದೆ ಬಂದೋಳು ನೀನ್ ತಾನೇ
ನಿನ್ನ ನೋಡಿ ನಕ್ಕೋನು ನಾನ್ ತಾನೇ
ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ
ಹಿಂದ್ ಹಿಂದೆ ಬಂದೋಳು ನೀನ್ ತಾನೇ
ನಿನ್ನ ನೋಡಿ ನಕ್ಕೋನು ನಾನ್ ತಾನೇ

ನಮ್ಮೂರ ಜಾತ್ರೆಲಿ ಪೇಟೇಯ ಬೀದಿಲೀ
ಜಡೆಯನ್ನು ಎಳೆದವ ನೀನ್ ತಾನೇ
ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೇ
ನಮ್ಮೂರ ಜಾತ್ರೆಲಿ ಪೇಟೇಯ ಬೀದಿಲೀ
ಜಡೆಯನ್ನು ಎಳೆದವ ನೀನ್ ತಾನೇ
ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೇ

ಹೊಡೆದರೆ ನಿನ್ನಾ ಸುಮ್ಮನೆ ಬಿಡುವೆನೆ ಸುಳ್ಳೇಕೆ ಆಡ್ತಿ
ಹೊಡೆದರೆ ನಿನ್ನಾ ಸುಮ್ಮನೆ ಬಿಡುವೆನೆ ಸುಳ್ಳೇಕೆ ಆಡ್ತಿ

ಬಿದ್ದರೂ ಮೀಸೆ ಮಣ್ಣಾಗ್ಲಿಲ್ಲ ಎಂದೇಕೆ ಹೇಳ್ತಿ
ಬಿದ್ದರೂ ಮೀಸೆ ಮಣ್ಣಾಗ್ಲಿಲ್ಲ ಎಂದೇಕೆ ಹೇಳ್ತಿ

ನಮ್ಮಲಿ ಏಕೆ ಜಗಳವು ಇನ್ನೂ ನೀನೇ ನನ್ ಹೆಂಡ್ತಿ
ನಮ್ಮಲಿ ಏಕೆ ಜಗಳವು ಇನ್ನೂ ನೀನೇ ನನ್ ಹೆಂಡ್ತಿ

ನನ್ನಲಿ ಹೇಳು ಹಾಗಾದರೆ ನೀ ಸಂಬಳ ಏನ್ ತರ್ತಿ
ನನ್ನಲಿ ಹೇಳು ಹಾಗಾದರೆ ನೀ ಸಂಬಳ ಏನ್ ತರ್ತಿ

No Job...No vacancy

You....Get Out....
I don't see...I don't see...

I will see....I will see....

ಬಯಸದೆ ಬಳಿ ಬಂದೆ



ಚಿತ್ರ: ಗಾಳಿಮಾತು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೧

ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ

ಉರಿ ಬಿಸಿಲು ತಂಪಾಯ್ತು ನಿನ್ನ ನಾ ನೊಡಲು
ಮೈ ಏಕೊ ಬಿಸಿ ಆಯ್ತು ನೀನು ಬಳಿ ನಿಂತು ನಗಲು
ನೀ ನಡೆವ ಹಾದಿಯಲಿ ಕಲ್ಲು ಮೃದುವಾಯಿತು
ಮುಳ್ಳೆಲ್ಲ ಹೂವಾಗಿ ಭೂಮಿಯೇ ಸ್ವರ್ಗವಾಯ್ತು
ನಿಂತಲ್ಲೆ ನೀರಾಗಿ ನಾ ಕರಗಿಹೋದೆ

ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ
ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ

ಸೊಗಸೆಂಬ ನುಡಿಗಿಂತ ಸೊಗಸು ಈ ರೂಪವು
ಹಿತವೆಂಬ ನುಡಿಗಿಂತ ಹಿತವು ಈ ನಿನ್ನ ಒಲವು

ನಿನ್ನಿಂದ ಆನಂದ ಇಂದು ನಾ ಕಂಡೆನು
ಈ ನಿನ್ನ ಸ್ನೇಹವನು ಇನ್ನು ಎಂದೆಂದು ಬಿಡೆನು
ಸವಿಯಾದ ಮಾತಿಂದ ಹೊಸ ಬಾಳು ತಂದೆ

ಬಯಸದೆ ಬಳಿ ಬಂದೆ ಬಯಕೆಯ ಸಿರಿ ತಂದೆ ನಿನ್ನ ಅಂದಕ್ಕೆ ಬೆರೆಗಾದೆ
ಕರೆಯದೆ ಬಳಿ ಬಂದೆ ಸಡಗರ ತರಲೆಂದೆ ಮನ ಒಂದಾಗಿ ಜೊತೆಯಾದೆ

ನಿನ್ನ ನೀನು ಮರೆತರೇನು ಸುಖವಿದೆ



ಚಿತ್ರ: ದೇವರ ಕಣ್ಣು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೫

ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ

ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ

ಹಾಡುವುದನು ಕೋಗಿಲೆಯು...
ಹಾಡುವುದನು ಕೋಗಿಲೆಯು ಮರೆಯುವುದೇ, ಹಾರುವುದನು ಬಾನಾಡಿ ತೊರೆಯೆವುದೆ
ಮೀನು ಈಜದಿರುವುದೆ, ದು೦ಬಿ ಹೂವ ಮರೆವುದೆ
ಮೀನು ಈಜದಿರುವುದೆ, ದು೦ಬಿ ಹೂವ ಮರೆವುದೆ
ಮುಗಿಲ ಕ೦ಡ ನವಿಲು ನಲಿಯದೆ

ನಿನ್ನ ನೀನು ಮರೆತರೇನು ಸುಖವಿದೆ

ಗಾಳಿ ತನ್ನ ಚಲನೆಯನ್ನು ಮರೆಯುವುದೆ, ಬೆಳ್ಳಿ ಮೋಡ ತೇಲದೆ ನಿಲ್ಲುವುದೆ
ತಾರೆ ಮಿನುಗದಿರುವುದೆ, ಮಿ೦ಚು ಹೊಡೆಯದಿರುವುದೆ
ತಾರೆ ಮಿನುಗದಿರುವುದೆ, ಮಿ೦ಚು ಹೊಡೆಯದಿರುವುದೆ
ನದಿಯು ಕಡಲ ಸ್ನೇಹ ಮರೆವುದೆ,

ಸಗಮಪ, ಗಮಪನಿ, ಪನಿಸ, ಪನಿರಿ, ಗಾ ನಿ ಸಾ ನಿ ಪಾ ಮಾ ಗಾ ಮ ರಿ ,
ಗಾ ನಿ ಸಾ ನಿ ಪಾ ಮ ಗಾ ಮ ಪಾ, ಗಾ ನಿ ಸಾ ನಿ ಪಾ ಮಾ ಗಾ ಮ

ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ

ಕೆಂಪಾದವೋ ಎಲ್ಲ ಕೆಂಪಾದವೋ



ಚಿತ್ರ: ಎಲ್ಲಿಂದಲೋ ಬಂದವರು
ಸಾಹಿತ್ಯ: ಪಿ.ಲಂಕೇಶ್
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೦

ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಕುಡೀದ್ಹಾಂಗೆ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೊ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಕುಡೀದ್ಹಾಂಗೆ ಕೆಂಪಾದವೋ


ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೋ
ಊರು ಕಂದಮ್ಮಗಳು ಕೆಂಪಾದವೋ
ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೋ
ಊರು ಕಂದಮ್ಮಗಳು ಕೆಂಪಾದವೋ

ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿಗು ಹೋದಾಗ ಪಚ್ಚೆಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವೋ
ನನಗಾಗ ಕೆಂಪಾದವೋ
ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿಗು ಹೋದಾಗ ಪಚ್ಚೆಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವೋ
ನನಗಾಗ ಕೆಂಪಾದವೋ

ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ

ಓ ಗುಣವಂತ



ಚಿತ್ರ: ಮಸಣದ ಹೂವು
ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ವಿಜಯಭಾಸ್ಕರ್
ಗಾಯಕರು : ಎಸ್.ಜಾನಕಿ
ವರ್ಷ: ೧೯೮೪

ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ

ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ

ದಾರಿದೀಪ ತೋರುತಾ ತೋರುತಾ
ಕರುಣೆ ಕಿರಣ ಬೀರುತಾ ಬೀರುತಾ
ಬಂದೆ ನೀನು ಓ ಸ್ನೇಹಿತ ಸ್ನೇಹಿತ
ನನ್ನ ಬಾಳು ಬೆಳಗಿದೆ ಬೆಳಗಿದೆ
ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ

ಹೃದಯ ನಿನಗೆ ಸೋತಿದೆ ಸೋತಿದೆ
ನುಡಿಯೇ ನಾಲಿಗೆ ನಾಚಿದೆ ನಾಚಿದೆ
ಬಗೆಬಗೆ ಭಾವ ಮೂಡಿದೆ ಮೂಡಿದೆ
ಮನವು ನಿನ್ನೇ ಹೊಗಳಿದೆ ಹೊಗಳಿದೆ
ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ

ಪ್ರೇಮದಾಸೆ ತೋರಲಾರೆ ತೋರಲಾರೆ
ಪ್ರಣಯ ಲೀಲೆ ಆಡಲಾರೆ ಆಡಲಾರೆ
ಭಾಷೆಯ ಮೀರಿದೆ ಭಾವನೆ ಕಾಮನೆ
ಆಸೆಯ ಮೀರಿದೆ ಮೋಹದ ಪ್ರೇರಣೆ
ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ

ಬಾನು ಭೂಮಿಯ ಮಿಲನವ ಬಯಸುತ



ಚಿತ್ರ: ಮಾತು ತಪ್ಪದ ಮಗ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಇಳಯರಾಜ
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ವರ್ಷ: ೧೯೭೮  

ಬಾನು ಭೂಮಿಯ ಮಿಲನವ ಬಯಸುತ ಬಾಗಿದೆ
ಮುಗಿಲಲ್ಲಿ ಮಿಂಚಾಡಿದೆ ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೆ
ಬಾನು ಭೂಮಿಯ ನಡುವಲಿ ಅಂತರ ತುಂಬಿದೆ
ಮುಗಿಲಿಂದ ಮಿಂಚೋಡಿದೆ ಹೂ ಚಿಂತೆ ರವಿಗೆಲ್ಲಿದೆ
ಭ್ರಮೆ ತುಂಬಿದೆ ಸಂಗಮದೆ

ಬಾಳೆಂಬ ಬನದೆ ಒಲವೆಂಬ ಹೂವ ಸೌಗಂಧ ನೀ ತಂದೆ
ಬಾಗಿದ ಲತೆಗೆ ಆಸರೆ ತಂದು ಮನದಲ್ಲಿ ನೀ ನಿಂದೆ
ಮೌನದ ಮಾತಲಿ ತುಂಬಿದೆ ಅರ್ಥ ತಂದೆ ನಾನಾಗ ಮೂಡಿತು ಅನುರಾಗ
ಬಾನು ಭುಮಿಯ ನಡುವಲಿ ಅಂತರ ತುಂಬಿದೆ
ಮುಗಿಲಿಂದ ಮಿಂಚೋಡಿದೆ ಹೂ ಚಿಂತೆ ರವಿಗೆಲ್ಲಿದೆ

ಅಂಜಿಕೆ ಶಂಕೆ ತುಂಬಿದೆ ಮನದೆ ಮುಂದೇನು ಎನ್ನುತಲಿ
ಎಂದಿಗು ನಿನ್ನ ಕೈಬಿಡೆ ಚಿನ್ನ ನೋವೆನೆ ಬಂದಿರಲಿ
ಭರವಸೆ ತಂದ ಹರುಶದೊಳಿಂದ ಏನೊ ಆವೇಗ ಸೋತೆ ನಾನೀಗ

ಬಾನು ಭೂಮಿಯ ಮಿಲನವ ಬಯಸುತ ಬಾಗಿದೆ
ಮುಗಿಲಲ್ಲಿ ಮಿಂಚಾಡಿದೆ ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೆ

Thursday, October 7, 2010

ತೆರೆದಿದೆ ಮನೆ ಓ ಬಾ ಅತಿಥಿ



ಚಿತ್ರ: ಹೊಸಬೆಳಕು 
ಸಾಹಿತ್ಯ: ಕುವೆಂಪು
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಜಾನಕಿ , ವಾಣಿ ಜಯರಾಂ
ವರ್ಷ: ೧೯೮೨ 

ಆ......   ತಾ... ನ.. ನಾ...
ತೆರೆದಿದೆ ಮನೆ ಓ ಬಾ ಅತಿಥಿ
ಆ......
ತೆರೆದಿದೆ ಮನೆ ಓ ಬಾ ಅತಿಥಿ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ನೇಸರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ ಬಾ
ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ ಬಾ
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಕಡಲಾಗಿ ಬಾ ಬಾನಾಗಿ ಬಾ
ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ
ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ಹೊಸಬಾಳನು ತಾ ಅತಿಥಿ
ಹೊಸಬಾಳನು ತಾ ಅತಿಥಿ