Tuesday, December 21, 2010
ಒಲುಮೆ ಸಿರಿಯ ಕಂಡು
ಚಿತ್ರ: ಬಂಗಾರದ ಜಿಂಕೆ
ಸಾಹಿತ್ಯ : ದೊಡ್ಡರಂಗೇಗೌಡ
ಸಂಗೀತ : ವಿಜಯಭಾಸ್ಕರ್
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೦
ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ..
ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ..
ಚೆಂದಾಗಿ ಕೂಡಿದ ಸುಂದರ ಸಮಯ ಕನಸಾಗಿದೆ
ಓಡೋಡಿ ನಲಿದ ಸೊಂಪಾದ ಗಾನವ ಮರೆತಾಗಿದೆ
ಚೆಂದಾಗಿ ಕೂಡಿದ ಸುಂದರ ಸಮಯ ಕನಸಾಗಿದೆ
ಓಡೋಡಿ ನಲಿದ ಸೊಂಪಾದ ಗಾನವ ಮರೆತಾಗಿದೆ
ಮಾತಾಡದೆ..ಬಳಿಬಾರದೆ..
ಮಾತಾಡದೆ..ಬಳಿಬಾರದೆ..ನನ್ನಿಂದ ನೀ ದೂರ ಹೋದೆ
ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ
ನೂರಾರು ಜನ್ಮದ ಅನುಬಂಧ ನಮ್ಮದು ಅರಿವಾಗದೆ
ಒಂದಾಗಿ ಹಾಡಿದ ರಾಗದ ಧಾಟಿಯು ನೆನಪಾಗದೆ
ನೂರಾರು ಜನ್ಮದ ಅನುಬಂಧ ನಮ್ಮದು ಅರಿವಾಗದೆ
ಒಂದಾಗಿ ಹಾಡಿದ ರಾಗದ ಧಾಟಿಯು ನೆನಪಾಗದೆ
ಬೇರಾಗದೆ ದೂರಾಗದೆ
ಬೇರಾಗದೆ ದೂರಾಗದೆ...ನನ್ನನ್ನು ನೀ ಸೇರು ಇಂದೆ
ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ
ಬಾನಿಗೊಂದು ಎಲ್ಲೆ ಎಲ್ಲಿದೆ
ಚಿತ್ರ: ಪ್ರೇಮದ ಕಾಣಿಕೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕರು: ಡಾ|| ರಾಜ್ ಕುಮಾರ್
ವರ್ಷ: ೧೯೭೬
ಬಾನಿಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ...
ಏಕೆ ಕನಸು ಕಾಣುವೆ... ನಿಧಾನಿಸು ನಿಧಾನಿಸು...
ಬಾನಿಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ...
ಏಕೆ ಕನಸು ಕಾಣುವೆ... ನಿಧಾನಿಸು ನಿಧಾನಿಸು...
ಆಸೆ ಎಂಬ ಬಿಸಿಲುಗುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನೂ ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲೀ ವಿನೋದವಾಗಲೀ ಅದೇನೆ ಆಗಲೀ ಅವನೆ ಕಾರಣ
ಬಾನಿಗೊಂದು ಎಲ್ಲೆ ಎಲ್ಲಿದೆ...
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆಯೇತಕೆ ನಿರಾಸೆಯೇತಕೆ ಅದೇನೇ ಬಂದರೂ ಅವನ ಕಾಣಿಕೆ
ಬಾನಿಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ...
ಏಕೆ ಕನಸು ಕಾಣುವೆ... ನಿಧಾನಿಸು ನಿಧಾನಿಸು...
ನಿಧಾನಿಸು ನಿಧಾನಿಸು...
Labels:
೧೯೭೬,
ಉಪೇಂದ್ರ ಕುಮಾರ್,
ಚಿ. ಉದಯಶಂಕರ್,
ಡಾ|| ರಾಜ್ ಕುಮಾರ್,
ಪ್ರೇಮದ ಕಾಣಿಕೆ
Tuesday, December 7, 2010
ಒಲುಮೆ ಪೂಜೆಗೆಂದೇ
ಚಿತ್ರ: ಅನುಪಮ
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಅಶ್ವಥ್-ವೈದಿ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೧
ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ
ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ...
ಮಮತೆ ಮೀಟಿ ಮಿಲನ ಕಂಡೆ ನಿನ್ನ ಸ್ನೇಹ ಸೌಭಾಗ್ಯ ಮಿಂದೆ
ಹರೆಯ ತೂಗಿ ಸನಿಹ ಬಂದೆ ಎಲ್ಲ ಪ್ರೀತಿ ಸಮ್ಮೋಹ ತಂದೆ
ಹರುಷ ತಂದೆ ಹಾದಿಯೇ ಚಂದ
ಹರುಷ ತಂದೆ ಹಾದಿಯೇ ಚಂದ ಒಲವಿನಾಸರೆ ರೋಮಾಂಚ ಬಂಧ
ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ
ಜೊತೆಯ ಸೇರಿ ಬರುವೆ ನಾನು ನನ್ನ ಬಾಳ ಬಂಗಾರ ನೀನು
ಬೆಳಕು ನೀನು ಕಿರಣ ನಾನು ನಿನ್ನ ಕೂಡಿ ಹೊಂಬಿಸಿಲ ಬಾನು
ನಿನಗೆ ನಾನು ನನಗೆ ನೀನು
ನಿನಗೆ ನಾನು ನನಗೆ ನೀನು ಪ್ರೇಮ ಜೀವನ ಎಂದೆಂದೂ ಜೇನು
ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ...
ಸಂಜೀವನ... ಸಂಜೀವನ...
Labels:
೧೯೮೧,
SPB,
ಅನುಪಮ,
ಅಶ್ವಥ್-ವೈದಿ,
ಎಸ್. ಜಾನಕಿ,
ದೊಡ್ಡರಂಗೇಗೌಡ
Friday, December 3, 2010
ಹಾಡು ಹಳೆಯದಾದರೇನು
ಚಿತ್ರ : ಮಾನಸ ಸರೋವರ
ಸಾಹಿತ್ಯ : ಡಾ|| ಜಿ.ಎಸ್.ಶಿವರುದ್ರಪ್ಪ
ಸಂಗೀತ : ವಿಜಯಭಾಸ್ಕರ್
ಗಾಯಕರು : ವಾಣಿ ಜಯರಾಂ
ವರ್ಷ: ೧೯೮೩
ಹಾಡು...ಹಾಡು ...
ಹಾಡು ಹಳೆಯದಾದರೇನು ಭಾವ ನವನವೀನ
ಹಾಡು...ಹಾಡು ...
ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ
ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ
ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ
ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ
ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ
ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ
ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ
ಹಾಡು...ಹಾಡು ...
ಹಾಡು ಹಳೆಯದಾದರೇನು ಭಾವ ನವನವೀನ
Labels:
೧೯೮೩,
ಜಿ.ಎಸ್. ಶಿವರುದ್ರಪ್ಪ,
ಮಾನಸ ಸರೋವರ,
ವಾಣಿ ಜಯರಾಂ,
ವಿಜಯಭಾಸ್ಕರ್
Thursday, December 2, 2010
ಎಂಥಾ ಲೋಕವಯ್ಯಾ
ಚಿತ್ರ:: ನಾರದ ವಿಜಯ
ಸಾಹಿತ್ಯ : ಚಿ. ಉದಯ ಶಂಕರ್
ಸಂಗೀತ: ಅಶ್ವಥ್-ವೈದಿ
ಗಾಯಕರು: ಕೆ.ಜೆ.ಯೇಸುದಾಸ್
ವರ್ಷ: ೧೯೮೦
ಎಂಥಾ ಲೋಕವಯ್ಯಾ.. ಇದು ಎಂಥಾ ಲೋಕವಯ್ಯಾ
ಹೊಸತನವ ಕೊಡುವ ಹೊಸ ವಿಷಯ ಅರಿವ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ
ಇದು ಎಂಥಾ ಲೋಕವಯ್ಯ
ಕಡಲಲ್ಲಿ ಧುಮುಕಿ ಹೋರಾಡುವಾ ಮುಗಿಲೇರಿ ಮೇಲೆ ತೇಲಾಡುವಾ
ಆ ಚಂದ್ರನೆಡೆಗೆ ಹಾರಾಡುವಾ ಗ್ರಹತಾರೆಗಳಿಗೆ ಕೈ ಚಾಚುವಾ
ಜನರಿಂದ ತುಂಬಿ ಮೆರೆವಾ ಆ......
ಜನರಿಂದ ತುಂಬಿ ಮೆರೆವಾ
ಇದು ಎಂಥಾ ಲೋಕವಯ್ಯ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ
ಬಡತನದ ಜೊತೆಗೆ ಬಡಿದಾಡುವಾ ಸುಖವನ್ನು ಅರಸಿ ಅಲೆದಾಡುವಾ
ಹೊಸದನ್ನು ದಿನವು ಹುಡುಕಾಡುವಾ ಛಲವನ್ನು ಬಿಡದೆ ಸೆಣಸಾಡುವಾ
ಜನರಿಂದ ತುಂಬಿ ಮೆರೆವಾ ಆ......
ಜನರಿಂದ ತುಂಬಿ ಮೆರೆವಾ
ಇದು ಎಂಥಾ ಲೋಕವಯ್ಯ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ
ಆ..... .ಆ..... ಆ...... ಆ.......
Labels:
೧೯೮೦,
ಅಶ್ವಥ್-ವೈದಿ,
ಕೆ. ಜೆ. ಯೇಸುದಾಸ್,
ಚಿ. ಉದಯಶಂಕರ್,
ನಾರದ ವಿಜಯ
Subscribe to:
Posts (Atom)