Wednesday, July 20, 2011

ವಸಂತ ಬರೆದನು ಒಲವಿನ ಓಲೆ



ಚಿತ್ರ: ಬೆಸುಗೆ
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
ವರ್ಷ: ೧೯೭೬

ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ
ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ

ಹೂಗಳು ದುಂಬಿಯ ಚುಂಬನದಿಂದ ಪುಳಕಿತವಾಗಿಹ ಕಾಲ
ಮಧುಮಯ ಯೌವನ ಮೈ ಮನ ತುಂಬಿ ಮೆರೆದಿಹ ವಸಂತ ಕಾಲ
ತೀರದ ಆಸೆಯ ಆರದ ಉರಿಯ ವಿರಹಿಗೆ ತಂದಿಹ ಕಾಲ
ವಿರಹಿಗೆ ತಂದಿಹ ಕಾಲ
ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ

ಬಯಕೆಯು ಅನಂತ ಮುಖದಲಿ ಹೊಮ್ಮಿ ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು ಎಲ್ಲೆಡೆ ಕಾಣುವ ಕಾಲ
ಬಯಕೆಯು ಅನಂತ ಮುಖದಲಿ ಹೊಮ್ಮಿ ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು ಎಲ್ಲೆಡೆ ಕಾಣುವ ಕಾಲ
ಬಳ್ಳಿಯು ಹೆಮ್ಮರ ಆಸರೆ ಕೋರಿ ತೋಳನು ಬಳಸುವ ಕಾಲ
ತೋಳನು ಬಳಸುವ ಕಾಲ

ಪ್ರೇಮ ಪ್ರೀತಿ ನನ್ನುಸಿರು



ಚಿತ್ರ: ಸಿಂಗಾಪುರದಲ್ಲಿ ರಾಜಾ ಕುಳ್ಳ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಜೆ. ಯೇಸುದಾಸ್
ವರ್ಷ: ೧೯೭೮

ವಾಟ್ ಈಸ್ ಲೈಫ್ ಲೈಫ್ ಈಸ್ ಎ ಸಾಂಗ್
ದೆನ್ ಸಿಂಗ್ ಇಟ್ ಐ ಸೇ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು
ಅನ್ಯಾಯ ಕಂಡಾಗ ಸಿಡಿಗುಂಡು ಸಿಡಿದಂತೆ
ಅಪರಾಧಿ ಎಲ್ಲೆಂದು ಹುಡುಕಾಡಿ ಹುಲಿಯಂತೆ
ಹೋರಾಡುವಾ ಬಾ ಓ ಗೆಳೆಯ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು

ಹೂವಂತೆ ಮೃದುವಾಗಬಲ್ಲೆ ಮುಳ್ಳಂತೆ ಮೊನಚಾಗಬಲ್ಲೆ
ಹಣ್ಣಂತೆ ಸಿಹಿಯಾಗಬಲ್ಲೆ ವಿಷದಂತೆ ಕಹಿಯಾಗಬಲ್ಲೆ
ಬಾಳೋದು ಹೇಗೆಂದು ನಾ ಬಲ್ಲೆ ಆಳೋದು ಹೇಗೆಂದು ಬಲ್ಲೆ
ಪ್ರೀತಿ ಪ್ರೀತಿಗೆ ರೋಷ ರೋಷಕೆ ನಮ್ಮ ರೀತಿಯೆನ್ನುವಾ

ವಾಟ್ ಈಸ್ ಲೈಫ್ ಲೈಫ್ ಈಸ್ ಎ ಡ್ಯೂಟಿ
ದೆನ್ ಪರ್ಫಾರ್ಮ್ ಇಟ್ ಐ ಸೇ
ಬಾಳು ಎಂದೂ ಹೂವಲ್ಲಾ ಬಾಳು ಎಂದೂ ಮುಳ್ಳಲ್ಲಾ
ಕಾಣೋದು ನಿಜವಲ್ಲ ಮಾತೆಲ್ಲಾ ಮುತ್ತಲ್ಲ
ಕಾಲಕ್ಕೆ ತಕ್ಕಂತೆ ಜಗದಲ್ಲಿ ಜನರೆಲ್ಲ
ಬಾಳೆಂಬುವಾ ಈ ಹಾದಿಯಲಿ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು

ಸವಿಯಾದ ಮಾತಾಡಬಲ್ಲೆ ಕವಿಯಾಗಿ ನಾ ಹಾಡಬಲ್ಲೆ
ಸಂತೋಷ ನಾ ಹಂಚಬಲ್ಲೆ ನೋವೆಲ್ಲಾ ನಾ ನುಂಗಬಲ್ಲೆ
ತಂಗಾಳಿ ನಾನಾಗಿ ಬರಬಲ್ಲೆ ಬಿರುಗಾಳಿ ನಾನಾಗಬಲ್ಲೆ
ಎಲ್ಲೆ ನೀನಿರು ಹೇಗೆ ನೀನಿರು ಎಂದೂ ಸ್ನೇಹದಿಂದಿರು

ಸೋ ವಾಟ್ ಈಸ್ ಲೈಫ್ ಲೈಫ್ ಈಸ್ ಎ ಗೇಮ್
ಆಹಾ ದೆನ್ ಪ್ಲೇ ಇಟ್ ಐ ಸೇ
ಹಗಲು ಇರುಳು ಇರುವಂತೆ ಸೋಲು ಗೆಲುವು ಜೊತೆಯಂತೆ
ಉಲ್ಲಾಸ ಸಂತೋಷ ಎಂದೆಂದೂ ಇರದೆಂದು
ನೋವೊಂದೇ ಸುಖವೊಂದೇ ಬಾಳಲ್ಲಿ ಬರದೆಂದು
ಈ ಸತ್ಯವಾ ನಾ ಅರಿತಿರುವೆ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು
ಎವೆರಿಬಡೀ…

Thursday, July 7, 2011

ಒಂದಿರುಳು ಕನಸಿನಲಿ

ಸಾಹಿತ್ಯ: ಕೆ.ಎಸ್.ನರಸಿಂಹಸ್ವಾಮಿ
ಕವನ ಸಂಕಲನ: ಮೈಸೂರು ಮಲ್ಲಿಗೆ
ಸಂಗೀತ: ಸಿ. ಅಶ್ವಥ್
ಗಾಯಕರು: ರತ್ನಮಾಲಾ ಪ್ರಕಾಶ್, ಸಿ ಅಶ್ವಥ್

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಚೆಂದ ನಿನಗಾವುದೆಂದು
ನಮ್ಮೂರು ಹೊನ್ನೂರೋ, ನಿಮ್ಮೂರು ನವಿಲೂರೋ
ಚೆಂದ ನಿನಗಾವುದೆಂದು.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ?
ನಮ್ಮೂರ ಮಂಚದಲಿ ನಿಮ್ಮೂರ ಕನಸಿದನು
ವಿಸ್ತರಿಸಿ ಹೇಳಬೇಕೆ?
ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? ಎನ್ನರಸ
ಸುಮ್ಮನಿರಿ ಎಂದಳಾಕೆ.
ತೌರೂರ ದಾರಿಯಲಿ ತೆಂಗುಗಳು ತಲೆದೂಗಿ
ಬಾಳೆಗಳು ತೋಳ ಬೀಸಿ;
ಮಲ್ಲಿಗೆಯ ಮೊಗ್ಗುಗಳು ಮುಳ್ಳು ಬೇಲಿಯ ವರಿಸಿ
ಬಳುಕುತಿರೆ ಕಂಪ ಸೂಸಿ;
ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು
ನಿಮ್ಮೂರ ಸಂತೆಗಾಗಿ,
ನವಿಲೂರಿಗಿಂತಲೂ ಹೊನ್ನೂರೆ ಸುಖವೆಂದು
ನಿಲ್ಲಿಸಿತು ಪ್ರೇಮ ಕೂಗಿ.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? ಎನ್ನರಸ
ಸುಮ್ಮನಿರಿ ಎಂದಳಾಕೆ.

ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ
ಓಡಿದುದು ದಾರಿ ಬೇಗ;
ಪುಟ್ಟ ಕಂದನ ಕೇಕೆ ತೊಟ್ಟಿಲನು ತುಂಬಿತ್ತು
ನಿಮ್ಮೂರ ಸೇರಿದಾಗ,
ಊರ ಬೇಲಿಗೆ ಬಂದು ನೀವು ನಮ್ಮನು ಕಂಡು
ಕುಶಲವನು ಕೇಳಿದಾಗ
ತುಟಿಯಲೇನೋ ನಿಂದು ಕಣ್ಣಲೇನೋ ಬಂದು
ಕೆನ್ನೆ ಕೆಂಪಾದುದಾಗ.

ನಮ್ಮೂರು ಚೆಂದವೋ, ನಿಮ್ಮೂರು ಚೆಂದವೋ
ಎಂದೆನ್ನ ಕೇಳಲೇಕೆ? ಎನ್ನರಸ
ಸುಮ್ಮನಿರಿ ಎಂದಳಾಕೆ.

ಅಕ್ಕಿ ಆರಿಸುವಾಗ

ಸಾಹಿತ್ಯ: ಕೆ.ಎಸ್.ನರಸಿಂಹಸ್ವಾಮಿ
ಕವನ ಸಂಕಲನ: ಮೈಸೂರು ಮಲ್ಲಿಗೆ

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ
ಬಂಗಾರವಿಲ್ಲದ ಬೆರಳು |ಪ|
ತಗ್ಗಿರುವ ಕೊರಳಿನ ಸುತ್ತ ಕರಿಮಣೆ ಒಂದೆ
ಸಿಂಗಾರ ಕಾಣದ ಹೆರಳು


ಬೆರಳಿನ ಭಾರಕ್ಕೆ ತುಂಬಿರುವ ಕೆನ್ನೆಯಲ್ಲಿ
ಹದಿನಾರು ವರುಶದ ನೆರಳು
ದೀಪದಂತರಳಿದ ಸಿರಿಗಣ್ಣ ಸನ್ನೆಯಲಿ
ಹುಚ್ಚು ಹೊಳೆ ಮುಂಗಾರಿನುರುಳು
ಬಂಗಾರವಿಲ್ಲದ ಬೆರಳು |೧|


ಕಲ್ಲ ಹರಳನ್ನು ಹುಡುಕಿ
ಎಲ್ಲಿಗೊ ಎಸೆವಾಗ ಝಲ್ಲೆನುವ ಬಳೆಯ ಸದ್ದು
ಅತ್ತ ಯಾರೊ ಹೋದ ಇತ್ತ ಯಾರೊ ಬಂದ
ಕಡೆಗೆಲ್ಲ ಕಣ್ಣು ಬಿದ್ದು
ಬಂಗಾರವಿಲ್ಲದ ಬೆರಳು |೨|


ಮನೆಗೆಲಸ ಬೆಟ್ಟದಷ್ಟಿರಲು
ಸುಮ್ಮನೆ ಇವಳು
ಚಿತ್ರದಲಿ ತಂದಂತೆ ಇಹಳು
ಬೆಸರಿಯ ಕಿರಿ ಮುತ್ತು ನುಚ್ಚಿನಲಿ ಮುಚ್ಚಿಡಲು
ಹುಡುಕುತಿವೆ ಆ ಹತ್ತು ಬೆರಳು |೩|

ಒಂದು ಮಾತು... ನನಗೆ ಗೊತ್ತು



ಚಿತ್ರ : ಕೆರಳಿದ ಸಿಂಹ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಸತ್ಯಂ
ಗಾಯನ : ಡಾ|| ರಾಜ್ ಕುಮಾರ್, ಸುಲೋಚನ
ವರ್ಷ: ೧೯೮೨

ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ
ಈ ದಿನ ಬೇರೆ ವಿಷಯ ತಿಳಿಸುವೆ
ಅಲ್ಲಿಗೆ ಬಂದರೆ ಸುಮ್ಮನೆ ಕೆಣಕುವೆ
ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ

ಸಂಜೆಯ ಕೆಂಪು ಗಾಳಿಯ ತಂಪು
ಹೊಸ ಹೊಸ ಬಯಕೆ ತಂದಾಗ
ತುಂಬದ ವಿರಹ ಬಂದರೆ ಸನಿಹ
ಸಾರ್ಥಕ ನಮ್ಮ ಅನುರಾಗ
ಮೋಹದ ಮಾತನಾಡಿ
ಕಣ್ಣಲೇ ಮೋಡಿ ಮಾಡಿ
ಈಗೇಕೆ ನನ್ನಲಿ ಆಸೆಯ ತರುವೆ

ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ

ತೋಳಲಿ ಹೀಗೆ ಬಳಸಿದೆ ಏಕೆ
ಎದೆ ಜಿಲ್ ಎಂದಿದೆ ನನಗೀಗ
ಮೈಯಲಿ ಮಿಂಚು ತುಂಬುವ ಸಂಚು
ಮಾಡುವೆ ಏಕೆ ನೀನೀಗ
ಯಾರೂ ಇಲ್ಲದಾಗ ಆಸೆಯು ಮೂಡಿದಾಗ
ಈ ಬಿಂಕ ಬಿಗುಮಾನ ನಿನಗೇತಕೆ

ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ
ಈ ದಿನ ಬೇರೆ ವಿಷಯ ತಿಳಿಸುವೆ
ಅಲ್ಲಿಗೆ ಬಂದರೆ ಸುಮ್ಮನೆ ಕೆಣಕುವೆ

ಹಾಯಾಗಿ ಕುಳಿತಿರು ನೀನು



ಚಿತ್ರ: ಹಾಲು ಜೇನು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ|| ರಾಜ್ ಕುಮಾರ್, ಸರಿತಾ
ವರ್ಷ: ೧೯೮೨

ಲೇ ಲೇ..
ಏನ್ರೀ..
ಒಂದ್ ಮಾತು
ಹೇಳಿ
ಹೇಳಿದ್ರೆ ಕೇಳ್ತೀಯಾ?
ನಿಮ್ ಮಾತ್ ಯಾವತ್ ಕೇಳಿಲ್ಲ?
ಹಾಗಾದ್ರೆ, ಆ ಪಾತ್ರೆ ಅಲ್ಲಿಡು
ಹೂಂ.. ಇಟ್ಟೆ
ಬಾ ಇಲ್ಲಿ
ಹೂಂ?
ಬಾರೆ ಅಂದ್ರೆ
ಹೂಂ..
ಕೂತ್ಕೋ ಇಲ್ಲಿ ಮಂಚದ್ ಮೇಲೆ
ಏನ್ರೀ ಇದು ಇಷ್ಟೊತ್‍ನಲ್ಲಿ
ಅಯ್ಯಯ್ಯೋ! ಅದಕ್ಕಲ್ವೇ..

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ
ಮಹಾರಾಣಿಯ ಹಾಗೆ
ಮನೆ ಕೆಲ್ಸ ಯಾರ್ರೀ ಮಾಡೋದು ನಿಮ್ಮಾವನ?
ಆಯಾಸ ಪಡದಿರು ಇನ್ನು ಕೂಗುತ ಹೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ
ನೀನೇ ಆಗ ಮೆಚ್ಚಿಕೊಳ್ಳುವೆ
ಪಬಬಂ ಪಬಬಂ ಪಬಬಂ
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ
ಮಹಾರಾಣಿಯ ಹಾಗೆ

ಅಯ್ಯಯ್ಯೋ ಏನ್ರೀ ಇದು ಅವತಾರ?
ಗಂಡ್ಸಾಗ್ ಹುಟ್ಟಿ ನೀವ್ ಅಡುಗೆ ಮಾಡ್ತೀರ?

ಭೀಮಸೇನ ನಳಮಹರಾಜರು ಗಂಡಸರಲ್ಲವೇ
ಭೀಮಸೇನ ನಳಮಹರಾಜರು ಗಂಡಸರಲ್ಲವೇ
ನನ್ನ ಹಾಗೆ ಮೀಸೆ ಹೊತ್ತ ಮಹನೀಯರಲ್ಲವೇ ಮಹನೀಯರಲ್ಲವೇ
ನೆನ್ನೆಯ ತನಕ ನೀನೆ ದುಡಿದೆ ಈ ಸಂಸಾರಕೆ ಜೀವ ತೇದೆ
ಈ ದಿನವಾದರೂ ನಿನ್ನ ಸೇವೆಯ ಮಾಡುವೆ ಚಿನ್ನ
ಪಬಬಂ ಪಬಬಂ ಪಬಬಂ

ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ
ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತ ಹೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ
ನೀನೇ ಆಗ ಮೆಚ್ಚಿಕೊಳ್ಳುವೆ
ತರರಂ ತರರಂ ತರರಂ

ಯಾ..ಯಾಕ್ರೀ ಕಣ್ಣೀರು
ಇದು ಕಣ್ಣೀರಲ್ವೇ ಪನ್ನೀರು ಪನ್ನೀರು
ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ?
ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ?
ಮನಸನು ಅರಿತು ನಡೆಯುತಲಿರಲು ಚಿಂತೆಯ ಮಾತೇಕೆ
ನೀ ನಗುತಲಿರಲು ನಮ್ಮೀ ಮನೆಗೆ ಆ ಸ್ವರ್ಗವೇ ಜಾರಿದಂತೆ
ಹೆಂಡತಿ ಸೇವಕಿ ಅಲ್ಲ ಗಂಡನು ದೇವರು ಅಲ್ಲ
ಪಬಬಂ ಪಬಬಂ ಪಬಬಂ
ಹಾಯಾಗಿ ಕುಳಿತಿರು ನೀನು
ರಾಣಿಯ ಹಾಗೆ ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತ ಹೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ
ನೀನೇ ಆಗ ಮೆಚ್ಚಿಕೊಳ್ಳುವೆ
ಪಬಬಂ ಪಬಬಂ ಪಬಬಂ

ಜಯಸಿಂಹ ಬಂದ ಜಯಸಿಂಹ



ಚಿತ್ರ: ಜಯಸಿಂಹ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ವಿಜಯಾನಂದ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೭

ತಣ್ಣನೆ ಗಾಳಿ ಕಾಡೆಲ್ಲ ಅಲೆದು
ಅರಗಿಳಿಗಳ ನೋಡಿ ಸವಿನುಡಿಯಲಿ ಹಾಡಿದೆ
ಸವಿನುಡಿಯಲಿ ಹಾಡಿದೆ
ಜಯಸಿಂಹ ಬಂದ ಜಯಸಿಂಹ
ಜಯಸಿಂಹ ಬಂದ ಜಯಸಿಂಹ

ಇನ್ನೇಕೆ ಭೀತಿ ಭಯವಿಲ್ಲ ನಿಮಗೆ
ವನಮೃಗಗಳು ಕ್ಷೇಮ ಗಿಡಮರಗಳು ಕ್ಷೇಮ
ಗಿಡಮರಗಳು ಕ್ಷೇಮ
ಜಯಸಿಂಹ ಬಂದ ಜಯಸಿಂಹ
ಜಯಸಿಂಹ ಬಂದ ಜಯಸಿಂಹ

ಗಿಳಿಗಳ ಗುಂಪು ಕಾಡೆಲ್ಲ ಅಲೆದು
ವನಮೃಗಗಳ ನೋಡಿ ಸವಿನುಡಿಯಲಿ ಹಾಡಿವೆ
ಸವಿನುಡಿಯಲಿ ಹಾಡಿವೆ
ಜಯಸಿಂಹ ಬಂದ ಜಯಸಿಂಹ
ಜಯಸಿಂಹ ಬಂದ ಜಯಸಿಂಹ

Monday, June 6, 2011

ಅರಳಿದೆ ತನು ಮನ ನೋಡುತ ನಿನ್ನ



ಚಿತ್ರ: ಅಪೂರ್ವ ಸಂಗಮ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯಕರು: ಡಾ|| ರಾಜ್ ಕುಮಾರ್, ಎಸ್.ಜಾನಕಿ
ವರ್ಷ: ೧೯೮೪

ಅರಳಿದೆ ತನು ಮನ ನೋಡುತ ನಿನ್ನ
ಹೊಸತನ ನನ್ನಲ್ಲಿಯೇ ಕಂಡೆನು ನಾ
ಅರಳಿದೆ ತನು ಮನ ನೋಡುತ ನಿನ್ನ
ಹೊಸತನ ನನ್ನಲ್ಲಿಯೇ ಕಂಡೆನು ನಾ
ಅರಳಿದೆ ತನು ಮನ ನೋಡುತ ನಿನ್ನ

ಚಲಿಸುವ ತಂಗಾಳಿಯು ಚೆಲುವೆ ನಿನ್ನ ನೋಡಿ
ನಲಿಯುತ ಓಡಿದೆ ಮುಂಗುರುಳ ಹಿಡಿದು ಆಡಿ
ಅರಳಿದ ಗುಲಾಬಿಯು ಸೋಕಿ ಪರಿಮಳ ಹೀರಿ
ಸರಸಕೆ ಬಂದಿದೆ ಈ ನಿನ್ನ ಅಂದ ನೋಡಿ
ಸುಖ ತರುತಿದೆ ಹಿತ ಕರೆದಿದೆ ಚಲುವ
ಅರಳಿದೆ ತನು ಮನ ನೋಡುತ ನಿನ್ನ

ಎದೆಯಲಿ ಹೊಮ್ಮಿ ಹೊಮ್ಮಿ ನೂರು ಬಯಕೆ ಈಗ
ಕೆಣಕಲು ಸೋತೆನು ನನ್ನಿನಿಯ ನಿನ್ನ ನೋಡಿ
ಪ್ರಣಯದ ಸಂಗೀತದ ಇಂಪು ಕಿವಿಯ ತುಂಬಿ
ಕನಸನು ಕಂಡೆನು ಸಂಗಾತಿಯೇ ನಿನ್ನ ಸೇರಿ
ಇನ್ನು ಬಿಡುವೆನೇ ನನ್ನೇ ಕೊಡುವೆ ನಾ ಚೆಲುವೆ

ಅರಳಿದೆ ತನು ಮನ ನೋಡುತ ನಿನ್ನ
ಹೊಸತನ ನನ್ನಲ್ಲಿಯೇ ಕಂಡೆನು ನಾ

ಕನ್ನಡ ನಾಡಿನ ವೀರರಮಣಿಯ



ಚಿತ್ರ: ನಾಗರಹಾವು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯಕರು: ಪಿ. ಬಿ. ಶ್ರೀನಿವಾಸ್
ವರ್ಷ: ೧೯೭೨

ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿದ ಸಿರಿನಾಡು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ವೀರಮದಕರಿ ಆಳುತಲಿರಲು ಹೈದಾರಾಲಿಯು ಯುಧ್ಧಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು ಸತತ ಧಾಳಿಯು ವ್ಯರ್ಥವಾಗಲು
ವ್ಯೆರಿ ಚಿಂತೆಯಲಿ ಬಸವಳಿದ ದಾರಿಗಾಣದೆ ಮಂಕಾದ
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಗೂಢಚಾರರು ಅಲೆದು ಬಂದರು ಹೈದಾರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಸುತ್ತ ಮುತ್ತಲು ಕಪ್ಪು ಕತ್ತಲೆಯು ಮುತ್ತಿರಲು
ವೀರ ಕಾವಲುಗಾರ ಭೋಜನಕ್ಕೆ ನೆಡೆದಿರಲು
ಸಿಹಿನೀರ ತರಲೆಂದು ಅವನ ಸತಿ ಬಂದಿರಲು ಕಳ್ಳಗಂಡಿಯ ಹಿಂದೆ ಪಿಸುಮಾತ ಕೇಳಿದಳು
ಆಲಿಸಿದಳು ಇಣುಕಿದಳು ವೈರಿ ಪಡೆ ಕೋಟೆಯತ್ತ ಬರುವುದನ್ನು ಕಂಡಳು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿಯ ಸಿರಿನಾಡು
ಅಮರಳಾದಳು ಓಬವ್ವ ಅಮರಳಾದಳು ಓಬವ್ವ

ಚಂದಿರ ತಂದ ಹುಣ್ಣಿಮೆ ರಾತ್ರಿ



ಚಿತ್ರ: ಚಲಿಸುವ ಮೋಡಗಳು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯಕರು : ಡಾ|| ರಾಜ್ ಕುಮಾರ್, ಎಸ್. ಜಾನಕಿ
ವರ್ಷ: ೧೯೮೨

ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಆ ದಿಂಬು ಹಾಸಿಗೆ ನನ್ನ ನೂಕಿತು
ಈ ನನ್ನ ನಲ್ಲನ ತೂಗೆಂದಿತು
ಆ ದಿಂಬು ಹಾಸಿಗೆ ನನ್ನ ನೂಕಿತು ಈ ನನ್ನ ನಲ್ಲನ ತೂಗೆಂದಿತು
ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಈ‌ ನನ್ನ ಮಂಚವು ಮಾತಾಡಿತು
ನಿನ್ನನ್ನು ಆಚೆಗೆ ನೂಕೆಂದಿತು
ಈ‌ ನನ್ನ ಮಂಚವು ಮಾತಾಡಿತು ನಿನ್ನನ್ನು ಆಚೆಗೆ ನೂಕೆಂದಿತು

ಏನು ತೊಂದರೆ ಅಲ್ಲಿ ಬಂದರೆ ಸೇವೆ ಮಾಡುವೆನು
ಹೂವನು ಹಾಸಿ ನಿಮ್ಮ ಮಲಗಿಸಿ ಲಾಲಿ ಹಾಡುವೆನು
ಮೈಯ್ಯ ಮುಟ್ಟದೆ ಕೈಯ ಎಳೆಯದೆ ದೂರ ನಿಲ್ಲುವೆಯ
ನನ್ನ ನೆಮ್ಮದಿ ಹಾಳು ಮಾಡದೆ ಹೊರಗೆ ಹೋಗುವೆಯ
ಭಾರಿ ಬ್ರಹ್ಮಚಾರಿ ನೀನು ಬಲ್ಲೆ ಎಲ್ಲ ಹೆಣ್ಣೇ ನಿನ್ನ ಆರೋಗ್ಯ ಸರಿಯಾಗಿಲ್ಲ
ಪ್ರೀತಿಯೆಂದರೆ ಗೊತ್ತೆ ಇಲ್ಲ ನನಗೆ ಪ್ರೀತಿಯೆ ಬೇಕಾಗಿಲ್ಲ
ಬೇಡವೆಂದರು ನಾ ಬಿಡುವುದಿಲ್ಲ

ಅಯ್ಯೊ .. ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಈ‌ ನನ್ನ ಮಂಚವು ಮಾತಾಡಿತು
ನಿನ್ನನ್ನು ಆಚೆಗೆ ನೂಕೆಂದಿತು
ಆ ದಿಂಬು ಹಾಸಿಗೆ ನನ್ನ ನೂಕಿತು ಈ ನನ್ನ ನಲ್ಲನ ತೂಗೆಂದಿತು

ಅತ್ತೆ ಕಂಡರೆ ಮಾವ ಬಂದರೆ ಮಾನ ಹೋಗುವುದು
ಅಪ್ಪನು ರೇಗಿ ಗದರಿಸಿದಾಗ ಎನು ಹೇಳುವುದು
ಏಕೆ ಹೆದರುವೆ ಕದವ ಹಾಕುವೆ ಏನೂ ಕೇಳಿಸದು
ಸದ್ದು ಮಾಡದೆ ದೀಪ ಆರಿಸು ಏನೂ ಕಾಣಿಸದು
ಅಯ್ಯೋ ನಿನ್ನಾ ನಿನ್ನ ಹೆಣ್ಣು ಆಂದೋರಿಗೆ ಬುದ್ಧಿ ಇಲ್ಲ ಏನೇ ಹೇಳು ನಿನ್ನ ಬಿಟ್ಟು ಬಾಳೋದಿಲ್ಲ
ಕೋಪ ಬಂದರೆ ಸುಮ್ಮನಿರಲ್ಲ ಆಗಲೇ ನೀನು ಚೆನ್ನ ನಲ್ಲ
ಅಯ್ಯೋ ಎನು ಮಾಡಲಿ ಆ ದೇವರೆ ಬಲ್ಲ

ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಆ ದಿಂಬು ಹಾಸಿಗೆ ನನ್ನ ನೂಕಿತು
ಈ ನನ್ನ ನಲ್ಲನ ತೂಗೆಂದಿತು
ಈ‌ ನನ್ನ ಮಂಚವು ಎನೆಂದಿತು ನಿನ್ನನ್ನು ಆಚೆಗೆ ನೂಕೆಂದಿತು

ಸಂತೋಷ ಅಹಾ ಅಹಾ ಸಂಗೀತ ಓಹೋ ಓಹೋ

ಚಿತ್ರ: ಎಡಕಲ್ಲು ಗುಡ್ಡದ ಮೇಲೆ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಪಿ. ಸುಶೀಲ
ವರ್ಷ: ೧೯೭೩

ಸಂತೋಷ ಅಹಾ ಅಹಾ ಸಂಗೀತ ಓಹೋ ಓಹೋ
ರಸಮಯ ಸಂತೋಷ, ಸುಖಮಯ ಸಂಗೀತ
ಹೊಸ ಹೊಸ ಭಾವತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ

ಏಳು ಸ್ವರಗಳ ಭಾವಗೀತೆಯ ಸಂಗೀತ ಏಳು ಬಣ್ಣದ ಭೂಮಿ ರಮಣಿಗೆ ಸಂತೋಷ
ರಾಗ ಸಂಗೀತ ಗೆಲುವಿನ ಯೋಗ ಸಂತೋಷ
ರಾಗ ಸಂಗೀತ ಗೆಲುವಿನ ಯೋಗ ಸಂತೋಷ
ಹಾದಿಗೆಲ್ಲಾ ಹೂವು ಚೆಲ್ಲಿ
ಹಾದಿಗೆಲ್ಲಾ ಹೂವು ಚೆಲ್ಲಿ ಓಡಿ ಓಡಿ ಸಾಗುವಲ್ಲಿ ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ

ಸಂತೋಷ ಅಹಾ ಅಹಾ ಸಂಗೀತ ಹೆಹೇ ಹೆಹೇ
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ

ಜುಳು ಜುಳು ಹರಿಯುವ ನೀರಿನ ಅಲೆಗಳ ಸಂಗೀತ ಸುಯ್ ಸುಯ್ ಎನ್ನುತ ಬೀಸುವ ಗಾಳಿಗೆ ಸಂತೋಷ
ಸ್ವರ್ಗ ಸಂಗೀತ ನಿಸರ್ಗ ಸಂತೋಷ
ಸ್ವರ್ಗ ಸಂಗೀತ ನಿಸರ್ಗ ಸಂತೋಷ
ಸನ್ನೆ ಮಾಡಿ ಕೈಯಾ ಬೀಸಿ
ಸನ್ನೆ ಮಾಡಿ ಕೈಯಾಬೀಸಿ ಗುಟ್ಟು ಹೇಳಿ ಬೆಟ್ಟ ಸಾಲು ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ.

ಕದ್ದು ಹಾಡುವ ಕೋಗಿಲೆ ಕೊರಳಿನ ಸಂಗೀತ ಮುದ್ದು ಜಿಂಕೆಗೆ ಜಿಗಿದು ನೆಗೆಯುವ ಸಂತೋಷ
ನಾದ ಸಂಗೀತ ಉನ್ಮಾದ ಸಂತೋಷ
ನಾದ ಸಂಗೀತ ಉನ್ಮಾದ ಸಂತೋಷ
ಉಬ್ಬಿ ಹಬ್ಬಿ ಬಾಚಿ ತಬ್ಬಿ
ಉಬ್ಬಿ ಹಬ್ಬಿ ಬಾಚಿ ತಬ್ಬಿ ನಾಚಿ ನಿಂತ ಹೂವು ಬಳ್ಳಿ ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ

Friday, June 3, 2011

ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ

ಚಿತ್ರ: ಬೆಂಕಿಯ ಬಲೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೩

ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ

ಹರುಷ ಹರುಷ ಎಲ್ಲೆಲ್ಲೂ ಜೊತೆಗೆ ನೀನಿರೆ
ಸರಸ ಸರಸ ಬಾಳೆಲ್ಲ ಸನಿಹ ನೀನಿರೆ
ನಿನ್ನ ಮಾತಿಗೆ ನಿನ್ನ ಪ್ರೇಮಕೆ ನಾ ಸೋತು ಹೋದೆನು
ನಿನ್ನ ಸ್ನೇಹಕೆ ನಿನ್ನ ಪ್ರೀತಿಗೆ ಮಂಕಾಗಿ ಹೋದೆನು
ನನ್ನನ್ನೇ ಮರೆತೆನು

ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ

ಚೆಲುವ ನಿನ್ನ ನುಡಿ ಕೇಳಿ ಗಿಳಿಯು ನಾಚಿತು
ಚೆಲುವೆ ನಿನ್ನ ನಡೆ ನೋಡಿ ನವಿಲು ಕುಣಿಯಿತು
ನಗುನಗುತ ನೀ ಬರಲು ಹೊಸ ಆಸೆ ಚಿಮ್ಮಿತು
ನಿನ್ನ ಕಣ್ಣ ಮಿಂಚು ಮೂಡಲು ಮನವೇಕೋ ಬೆಚ್ಚಿತು
ಜಗವನ್ನೇ ಮರೆಸಿತು

ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ನಿನ್ನ ನುಡಿಯು ಹಾಡಂತೆ

ಹೇ...ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ

ಚಿತ್ರ: ಒಲವು ಗೆಲವು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಎಸ್. ಜಾನಕಿ
ವರ್ಷ: ೧೯೭೭

ಹೇ...ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ
ಹೇ...ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ

ಏಕೋ ಏನೋ ಕಾಣೆ ನಾನು ಎದುರಲಿ ನೀನಿರಲು
ಮನದಲಿ ಸ೦ತೋಷದ ಹೊನಲು ಹರಿಯಲು
ಏಕೋ ಏನೋ ಕಾಣೆ ನಾನು ಎದುರಲಿ ನೀನಿರಲು
ಮನದಲಿ ಸ೦ತೋಷದ ಹೊನಲು ಹರಿಯಲು
ಕಾಣುತ ನಿನ್ನ೦ದ ಕಾಣದ ಆನ೦ದ
ಹೊಸ ಹೊಸ ಬಯಕೆಯು ನಿನ್ನಿ೦ದ

ಹೇ...ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ

ತಾಳು ತಾಳು ನಲ್ಲ ನಿಲ್ಲು ತಾಳು ತಾಳು ನಲ್ಲ ನಾನು
ಬರುವೆನು ನಿನ್ನೊಡನೆ ಕಾಡುವೆ ನನ್ನೇಕೆ ಹೀಗೆ ಸುಮ್ಮನೆ

ತಾಳು ತಾಳು ನಲ್ಲ ನಾನು
ಬರುವೆನು ನಿನ್ನೊಡನೆ ಕಾಡುವೆ ನನ್ನೇಕೆ ಹೀಗೆ ಸುಮ್ಮನೆ

ಕಾಣದೆ ನಿನ್ನನ್ನು ಬಾಳೆನು ನಾನಿನ್ನು
ತಾಳೆನು ವಿರಹದ ನೋವನ್ನು

ಹೇ...ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ

Thursday, June 2, 2011

ಭಾವವೆಂಬ ಹೂವು ಅರಳಿ

ಚಿತ್ರ: ಉಪಾಸನೆ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ವಿಜಯಭಾಸ್ಕರ್
ಗಾಯನ : ವಾಣಿ ಜಯರಾಂ
ವರ್ಷ: ೧೯೭೪

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ
ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ
ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ಸ.ಗ.ಮ.ದ.ಗಾ.ಮಾ.ದ ಸ.ಮ.ದ.ನಿ.ಸಾ.ದ.ನಿ

ಗಾನಕೆ ನಲಿಯದ ಮನಸೇ ಇಲ್ಲ ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ನಲಿಯದ ಮನಸೇ ಇಲ್ಲ ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ಒಲಿಯದ ದೇವರೆ ಇಲ್ಲ ಗಾನವೆ ತುಂಬಿದೆ ಈ ಜಗವೆಲ್ಲಾ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ದಾಸರು ಹರಿಯ ಸ್ಮರಣೆಯ ಮಾಡಿ ದರುಶನ ಪಡೆದರು ಅನುದಿನ ಪಾಡಿ
ದಾಸರು ಹರಿಯ ಸ್ಮರಣೆಯ ಮಾಡಿ ದರುಶನ ಪಡೆದರು ಅನುದಿನ ಪಾಡಿ
ಶರಣರು ಹರನ ನೆನೆಯುತ ಬೇಡಿ ಶಿವನಾ ಕಂಡರು ವಚನವ ಹಾಡಿ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ವಿಶ್ವವೆ ಅರಳಿತು ಓಂಕಾರದಲಿ ವಾಣಿಯ ವೀಣೆಯ ಝೆಂಕಾರದಲಿ
ವಿಶ್ವವೆ ಅರಳಿತು ಓಂಕಾರದಲಿ ವಾಣಿಯ ವೀಣೆಯ ಝೆಂಕಾರದಲಿ
ಕುಣಿಯಿತು ನಾರದನ ಗಾನದಲ್ಲಿ ತಣಿಯಿತು ಕೃಷ್ಣನ ಮುರಳಿಯಲಿ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ
ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ

ಬರೆದೆ ನೀನು ನಿನ್ನ ಹೆಸರ

ಚಿತ್ರ: ಸೀತಾ
ಸಾಹಿತ್ಯ : ಅರ್. ಎನ್. ಜಯಗೋಪಾಲ್
ಸಂಗೀತ : ವಿಜಯಭಾಸ್ಕರ್
ಗಾಯಕರು : ಪಿ.ಬಿ. ಶ್ರೀನಿವಾಸ್
ವರ್ಷ: ೧೯೭೦

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೆ ಅಳಿಸಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ

ಮಿಡಿದೆ ನೀನು ಪ್ರಣಯನಾದ ಹೃದಯ ವೀಣೆ ಅದರಲಿ
ಮಿಡಿದೆ ನೀನು ಪ್ರಣಯನಾದ ಹೃದಯ ವೀಣೆ ಅದರಲಿ
ಮಿಡಿದ ಹಾಡು ಮುಗಿವ ಮುನ್ನ ಎಲ್ಲಿ ಹೋದೆ ಮರೆಯಲಿ

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ

ಅಂದು ನನ್ನ ತೇಲಿಸಿದೆ ನಿನ್ನ ಮಾತ ಹೊನಲಲಿ
ಅಂದು ನನ್ನ ತೇಲಿಸಿದೆ ನಿನ್ನ ಮಾತ ಹೊನಲಲಿ
ಇಂದು ನನ್ನ ಮುಳುಗಿಸಿದೆ ಕಣ್ಣ ನೀರ ಹೊಳೆಯಲಿ

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೆ ಅಳಿಸಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ

ಈ ಗುಲಾಬಿಯು ನಿನಗಾಗಿ

ಚಿತ್ರ: ಮುಳ್ಳಿನ ಗುಲಾಬಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸತ್ಯಂ
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೨

ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ನಿನಗಾಗಿ ಕೇಳೇ ಓ ರತೀ
ನಿನಗಾಗಿ ಕೇಳೇ ಓ ರತೀ

ನನ್ನೀ ಕಣ್ಣಲಿ ಕಾತರವೇನು ನಿನ್ನನು ಕಾಣುವ ಆತುರವೇನು
ನನ್ನೀ ಕಣ್ಣಲಿ ಕಾತರವೇನು ನಿನ್ನನು ಕಾಣುವ ಆತುರವೇನು
ಆತುರ ತರುವ ವೇದನೆ ಏನು
ಆತುರ ತರುವ ವೇದನೆ ಏನು ಜೀವದ ಜೀವವು ಪ್ರಿಯತಮೆ ನೀನು

ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ನಿನಗಾಗಿ ಕೇಳೇ ಓ ರತೀ
ನಿನಗಾಗಿ ಕೇಳೇ ಓ ರತೀ

ನೀರನು ತೊರೆದರೆ ಕಮಲಕೆ ಸಾವು ಹೂವನು ಮರೆತರೆ ದುಂಬಿಗೆ ಸಾವು
ನೀರನು ತೊರೆದರೆ ಕಮಲಕೆ ಸಾವು ಹೂವನು ಮರೆತರೆ ದುಂಬಿಗೆ ಸಾವು
ಕಾಣದೆ ಹೋದರೆ ಅರೆಕ್ಷಣ ನಿನ್ನ
ಕಾಣದೆ ಹೋದರೆ ಅರೆಕ್ಷಣ ನಿನ್ನ ಮರುಕ್ಷಣ ಪ್ರಿಯತಮೆ ನನ್ನ ಸಾವು

ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ನಿನಗಾಗಿ ಕೇಳೇ ಓ ರತೀ
ನಿನಗಾಗಿ ಕೇಳೇ ಓ ರತೀ

ಎಂಥ ಮರುಳಯ್ಯಾ ಇದು ಎಂಥಾ ಮರುಳು

ಚಿತ್ರ: ಸ್ಪಂದನ
ಸಾಹಿತ್ಯ: ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ: ಅಶ್ವಥ್-ವೈದಿ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೮

ಎಂಥ ಮರುಳಯ್ಯಾ ಇದು ಎಂಥಾ ಮರುಳು
ಬೆಳಗಿನ ಹಿಮದಂತೆ ಹರಿವಾ ನೆರಳು
ಥಳಥಳ ಮಿನುಗಿ ಸೋಕಲು ಕರಗಿ
ಥಳಥಳ ಮಿನುಗಿ ಸೋಕಲು ಕರಗಿ
ಸರಿವುದು ಈ ಬಾಳಿನೆಲ್ಲಾ ತಿರುಳು ಸರಿವುದು ಈ ಬಾಳಿನೆಲ್ಲಾ ತಿರುಳು
ಎಂಥ ಮರುಳಯ್ಯಾ ಇದು ಎಂಥಾ ಮರುಳು

ಹರಿಯುವ ನೀರಿಗೆ ಯಾವ ಹೊಣೆ?
ಹಾರುವ ಹಕ್ಕಿಗೆ ಎಲ್ಲಿ ಮನೆ?
ಬಾಳಿನ ಕಡಲಿನ ತೆರೆಗಳ ಸೀಳಿ
ತಲುಪುವುದಾಚೆಯ ದಡದ ಕೊನೆ ತಲುಪುವುದಾಚೆಯ ದಡದ ಕೊನೆ
ಎಂಥ ಮರುಳಯ್ಯಾ ಇದು ಎಂಥಾ ಮರುಳು

ಸಂಜೆಯ ನೇಸರ ಬಣ್ಣದ ಲೀಲೆ
ನೀರಲಿ ಹಾರುತ ಬೆಳ್ಳಕ್ಕಿ ತೇಲೆ
ಕಡಲಿಗೆ ಸಾಲಾಗಿ ಮೂಡುತ ಮುಳುಗುತ
ಬೆನ್ನಟ್ಟಿ ಸಾಗುವ ತೆರೆಗಳ ಹಾಳೆ
ಸೃಷ್ಟಿಯೆ ಸುಂದರ ಸುಳ್ಳಿನ ಮಾಲೆ ಸೃಷ್ಟಿಯೆ ಸುಂದರ ಸುಳ್ಳಿನ ಮಾಲೆ

ಎಂಥ ಮರುಳಯ್ಯಾ ಇದು ಎಂಥಾ ಮರುಳು
ಬೆಳಗಿನ ಹಿಮದಂತೆ ಹರಿವಾ ನೆರಳು
ಥಳಥಳ ಮಿನುಗಿ ಸೋಕಲು ಕರಗಿ
ಥಳಥಳ ಮಿನುಗಿ ಸೋಕಲು ಕರಗಿ
ಸರಿವುದು ಈ ಬಾಳಿನೆಲ್ಲಾ ತಿರುಳು ಸರಿವುದು ಈ ಬಾಳಿನೆಲ್ಲಾ ತಿರುಳು
ಎಂಥ ಮರುಳಯ್ಯಾ ಇದು ಎಂಥಾ ಮರುಳು

ಜೊತೆಯಾಗಿ ಹಿತವಾಗಿ

ಚಿತ್ರ: ರಥಸಪ್ತಮಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೬

ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ...

ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ....

ಆ ಬಾನ ನೆರಳಲ್ಲಿ ಆ ಸೂರ್ಯನೆದುರಲ್ಲಿ
ಒಲವಿಂದ ನಾವೀಗ ಈ ಗಂಗೆ ದಡದಲ್ಲಿ
ಒಂದಾಗಿ ಸವಿಯಾದ ಮಾತೊಂದ ನುಡಿವ

ಈ ಸಂಜೆ ರಂಗಲ್ಲಿ ಈ ತಂಪು ಗಾಳೀಲಿ
ಜೊತೆಯಾಗಿ ನಾವೀಗ ಶಂಕರನ ಎದುರಲ್ಲಿ
ಇಂಪಾಗಿ ಹಿತವಾದ ಮಾತೊಂದ ನುಡಿವಾ

ನೀನೆ ನನ್ನ ಪ್ರಾಣ ನಮ್ಮ ಪ್ರಣಯ ಮಧುರ ಗಾನ
ನೀನೆ ನನ್ನ ಪ್ರಾಣ ನಮ್ಮ ಪ್ರಣಯ ಮಧುರ ಗಾನ

ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ

ಕನಸಲ್ಲಿ ಕಂಡಾಸೆ ಮನಸಲ್ಲಿ ಇರುವಾಸೆ
ಎಲ್ಲವೂ ಒಂದೇನೇ ನಿನ್ನನ್ನು ಪಡೆವಾಸೆ
ಇನ್ನೇನು ಬೇಕಿಲ್ಲ ನನ್ನಾಣೆ ನಲ್ಲ

ಹಗಲಲ್ಲಿ ಕಂಡಾಸೆ ಇರುಳಲ್ಲಿ ಬಂದಾಸೆ
ಎಲ್ಲಾವೂ ಒಂದೇನೆ ನಿನ್ನೊಡನೆ ಇರುವಾಸೆ
ಬೇರೇನು ನಾ ಕೇಳೆ ನನ್ನಾಣೆ ನಲ್ಲೆ

ಎಂದೂ ಹೀಗೆ ಇರುವ ನಾವು ಎಂದೂ ಹೀಗೆ ನಲಿವ
ಎಂದೂ ಹೀಗೆ ಇರುವ ನಾವು ಎಂದೂ ಹೀಗೆ ನಲಿವ
ನಿನ್ನ ಬಿಡಲಾರೆ ನಾನೆಂದಿಗೂ

ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ

ಈ ಮೌನವಾ ತಾಳೆನು

ಚಿತ್ರ: ಮಯೂರ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ|| ರಾಜ್‍ಕುಮಾರ್, ಎಸ್. ಜಾನಕಿ
ವರ್ಷ: ೧೯೭೫

ಈ ಮೌನವಾ ತಾಳೆನು
ಈ ಮೌನವಾ ತಾಳೆನು ಮಾತಾಡೆ ದಾರಿಯ ಕಾಣೆನು
ಓ ರಾಜಾ..ಈ ಮೌನವಾ ತಾಳೆನು
ನೀ ಹೇಳದೇ ಬಲ್ಲೆನು ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿ...ನೀ ಹೇಳದೇ ಬಲ್ಲೆನು

ನಾನಂದು ನಿನ್ನ ಕಂಡಾಗ ಚಿನ್ನ ಏನೇನೋ ಹೊಸ ಭಾವನೆ
ಹೂವಾಗಿ ಮನಸು ಏನೇನೋ ಕನಸು ನಾ ಕಾಣದ ಕಲ್ಪನೆ
ಇನ್ನು ನಿನ್ನ ಬಿಡೆನು ಈ ದೂರ ಸಹಿಸೆನು
ನೀ ಹೇಳದೇ ಬಲ್ಲೆನು ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿ...ನೀ ಹೇಳದೇ ಬಲ್ಲೆನು

ಈ ಅಂದ ಕಂಡು ನಾ ಮೋಹಗೊಂಡು ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು ಕಂಡಾಗ ನವಿಲು ಕುಣಿವಂತೆ ನನಗಾಯಿತು
ಈ ಅಂದ ಕಂಡು ನಾ ಮೋಹಗೊಂಡು ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು ಕಂಡಾಗ ನವಿಲು ಕುಣಿವಂತೆ ನನಗಾಯಿತು
ಅಂದೇ ನಿನಗೆ ಸೋತೆ ನಾ ಜಗವನೆ ಮರೆತೆ

ಈ ಮೌನವಾ ತಾಳೆನು ಮಾತಾಡೆ ದಾರಿಯ ಕಾಣೆನು
ಓ ರಾಜಾ..ಓ ರಾಣಿ...ಓ ರಾಜಾ..ಓ ರಾಣಿ.

Wednesday, June 1, 2011

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ

ಚಿತ್ರ: ಭಾಗ್ಯವಂತ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯಕರು: ಪೂರ್ಣಚಂದ್ರ
ವರ್ಷ: ೧೯೮೧


ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ

ನೀನಾಡೋ ಮಾತೆಲ್ಲಾ ಜೇನಿನಂತೆ ನಗುವಾಗ ಮೊಗವೊಂದು ಹೂವಿನಂತೆ
ನೀನಾಡೋ ಮಾತೆಲ್ಲಾ ಜೇನಿನಂತೆ ನಗುವಾಗ ಮೊಗವೊಂದು ಹೂವಿನಂತೆ
ನೀನೊಂದು ಸಕ್ಕರೆಯ ಬೊಂಬೆಯಂತೆ ಮಗುವೆ ನೀ ನನ್ನ ಪ್ರಾಣದಂತೆ
ನನ್ನ ಪ್ರಾಣದಂತೆ

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ

ಆ ದೇವ ನಮಗಾಗಿ ತಂದ ಸಿರಿಯೇ, ಈ ಮನೆಯ ಸೌಭಾಗ್ಯ ನಿನ್ನ ನಗೆಯೇ
ಆ ದೇವ ನಮಗಾಗಿ ತಂದ ಸಿರಿಯೇ, ಈ ಮನೆಯ ಸೌಭಾಗ್ಯ ನಿನ್ನ ನಗೆಯೇ
ಅಳಲೇನು ಚಂದ ನನ್ನ ಪುಟ್ಟ ದೊರೆಯೇ ಹಾಯಾಗಿ ಮಲಗು ಜಾಣ ಮರಿಯೇ
ನನ್ನ ಜಾಣ ಮರಿಯೇ

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ

ಸಂಪಿಗೆ ಮರದ ಹಸಿರೆಲೆ ನಡುವೆ

ಚಿತ್ರ: ಉಪಾಸನೆ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯಕರು : ಬಿ.ಕೆ. ಸುಮಿತ್ರಾ
ವರ್ಷ: ೧೯೭೪

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ… ಚಿಕ್ಕವ್ವ… ಎನ್ನುತ ತನ್ನಯ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್…
ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ…
ಮಂಜುಳ ನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ, ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ಮಾತು ಒಂದು ಮಾತು

ಚಿತ್ರ: ಮುನಿಯನ ಮಾದರಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಸುಲೋಚನ
ವರ್ಷ: ೧೯೮೧

ಮಾತು ಒಂದು ಮಾತು ಮಾತು ಒಂದು ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು

ಮಾತು ಕಿವಿ ಮಾತು ಮಾತು ಸವಿ ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು

ಮಾತು ಕಿವಿ ಮಾತು ಮಾತು ಸವಿ ಮಾತು

ಹೊನ್ನ ನುಡಿಗಳ ಈ ಮಾತು ನಿನ್ನ ಕೆಣಕುವ ಬಿಸಿ ಮಾತು
ಹೊನ್ನ ನುಡಿಗಳ ಈ ಮಾತು ನಿನ್ನ ಕೆಣಕುವ ಬಿಸಿ ಮಾತು
ಹಗಲಿನಲ್ಲೂ ನೂರು ಕನಸು ಕಾಣುವ ಸುಖದ ಮಾತು

ನಿನ್ನ ತಣಿಸುವ ಇನಿ ಮಾತು ಕಣ್ಣ ಕುಣಿಸುವ ಗಿಳಿ ಮಾತು
ಮದನನನ್ನು ಕಂಡ ರತಿಯು ಮೋಹಿಸಿ ಅಂದ ಮಾತು
ಆಡುವ ಆಸೆ ಬಂತು

ಆಹಾ ಮಾತು ಕಿವಿ ಮಾತು ಮಾತು ಸವಿ ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು
ಮಾತು ಕಿವಿ ಮಾತು ಮಾತು ಸವಿ ಮಾತು

ಪ್ರೇಮಿ ಆಡುವ ಮೃದು ಮಾತು ಜೇನು ತುಂಬಿದ ಸಿಹಿ ಮಾತು
ಪ್ರೇಮಿ ಆಡುವ ಮೃದು ಮಾತು ಜೇನು ತುಂಬಿದ ಸಿಹಿ ಮಾತು
ಒಲವಿನಿಂದ ಸೇರಿದಾಗ ಆಡುವ ಕಣ್ಣ ಮಾತು

ಎಂದು ಕೇಳದ ಹೊಸ ಮಾತು ಎಲ್ಲ ರಸಿಕರ ಮನೆ ಮಾತು
ಪ್ರಣಯ ಕಾವ್ಯ ಹರುಷದಿಂದ ಹಾಡಿದ ಕವಿಯ ಮಾತು
ಆಡುವ ಆಸೆ ಬಂತು

ಮಾತು ಕಿವಿ ಮಾತು ಮಾತು ಸವಿ ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು
ಮಾತು ಕಿವಿ ಮಾತು ಮಾತು ಸವಿ ಮಾತು

ಪ್ರೇಮದಲ್ಲಿ ಸ್ನೇಹದಲ್ಲಿ

ಚಿತ್ರ : ರಂಗನಾಯಕಿ
ಸಾಹಿತ್ಯ: ಎಂ. ಎನ್. ವ್ಯಾಸರಾವ್
ಸಂಗೀತ: ಎಂ. ರಂಗರಾವ್
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ಹಾಯ್ ಬೇಬೀಸ್...
ಪ್ರೇಮದಲ್ಲಿ ಸ್ನೇಹದಲ್ಲಿ ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ
ಸೋ ನಾವೆಲ್ಲ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್ ಮೈ ಡಿಯರ್ಸ್
ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ

ನನ್ನ ಭಾಷೆ ಚೌ ಚೌ ಭಾಷೆ ನನ್ನ ಆಸೆ ಮಸಾಲ ದೋಸೆ
ನನ್ನ ಭಾಷೆ ಚೌ ಚೌ ಭಾಷೆ ನನ್ನ ಆಸೆ ಮಸಾಲ ದೋಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ಶಾಸ್ತ್ರೀಜಿ ರೀಟಾಜಿ ತಂಗಮ್ಮ ನಿಂಗಮ್ಮ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್ ಓಹ್ ಡಿಯರ್ಸ್ ಕ್ಯೂಂ ಭಾಯ್

ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ

ನನ್ನ ಮಾತು ಕೇಸರಿ ಭಾತು ನನ್ನ ಕೋಪ ಖಾರ ಭಾತು
ನನ್ನ ಮಾತು ಕೇಸರಿ ಭಾತು ನನ್ನ ಕೋಪ ಖಾರ ಭಾತು
ದಿಲ್ ಖೋಲ್ಕೆ ನೀವು ಆಡಿ ಕನ್ನಡ ಮಾತು
ದಿಲ್ ಖೋಲ್ಕೆ ನೀವು ಆಡಿ ಕನ್ನಡ ಮಾತು ಕನ್ನಡ ಮಾತು
ಅಬ್ದುಲ್ಲ ಸೈದುಲ್ಲ ಆಂಟೋನಿ ಅವಧಾನಿ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್ ಮೈ ಡಿಯರ್ಸ್
ವಾಟ್ ಡಾರ್ಲಿಂಗ್ ವಾಟ್ ಡು ಯು ಸೇ

ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ

ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ

ಚಿತ್ರ: ಮರೆಯಲಾಗದ ಕಥೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ರಮಣಿ
ವರ್ಷ: ೧೯೮೨

ಬರೆಯುವೆ ನಿನಗಾಗಿ
ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ
ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ

ಹುಣ್ಣಿಮೆಯ ದೀಪದಲ್ಲಿ ತಣ್ಣನೆಯ ರಾತ್ರಿಯಲ್ಲಿ
ಸಂಪಿಗೆಯ ತಂಪಿನಲ್ಲಿ ಇಂಪಾದ ರಾಗದಲಿ
ನಾ ಬರೆಯುವೆ
ಅರಗಿಣಿಯ ಭಾಷೆಯಲ್ಲಿ ಕೋಗಿಲೆಯ ರಾಗದಲ್ಲಿ
ಹಂಸನಡೆ ತಾಳದಲ್ಲಿ ಮುತ್ತಂಥ ಮಾತಿನಲಿ
ಹೊಸ ಕವಿತೆಯ.. ಓ ಗೆಳತಿ...

ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ

ಹೂ ಬನದಿ ಆಯ್ದು ತಂದ ಮೊಗ್ಗಾದ ಮಲ್ಲಿಗೆಯಿಂದ
ಸವಿಜೇನ ಹನಿಹನಿಯಿಂದ ಪ್ರಣಯದ ಆನಂದದಿಂದ
ನಾ ಬರೆಯುವೆ
ನನ್ನಂತರಾಳದಿಂದ ಪುಟಿದೇಳೋ ಭಾವದಿಂದ
ಬಯಕೆಗಳ ಭಾರದಿಂದ ಕಣ್ಣುಗಳ ಮಿಂಚಿನಿಂದ
ಹೊಸ ಕವಿತೆಯ.. ಓ ಗೆಳತಿ...

ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು

ಚಿತ್ರ: ಸಾಹಸ ಸಿಂಹ
ಸಾಹಿತ್ಯ: ಅರ್.ಎನ್.ಜಯಗೋಪಾಲ್
ಸಂಗೀತ: ಸತ್ಯಂ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೨

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೆ ಹೇ...ನಿನಗಾಗಿ ಅರಸಿ ಬಂದೆ
ನೀ ಎಲ್ಲೋ ಅಲ್ಲೇ ನಾನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು

ಕನಸಲ್ಲೂ ನಿನ್ನ ರೂಪ ಈ ಮನದಲ್ಲಿ ತರಲು ತಾಪ
ಕಣ್ಣಲ್ಲಿ ಮುಚ್ಚಿ ನಿನ್ನಾ ನಾ ಕರೆದೊಯ್ವ ಆಸೆ ಚಿನ್ನಾ
ನಗುವೆಂಬ ಬಲೆಯ ಬೀಸಿ ನಾ ನುಡಿಯಲ್ಲಿ ಜೇನಾ ಸೂಸಿ
ಸೆರೆಹಿಡಿವೆ ಬಿಡದೆ ನಿನ್ನಾ....

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು

ಮಿಂಚಂತೆ ಸುಳಿದು ನೀನು ಮರೆಯಾಗಿ ಹೋದರೇನು
ಸುಳಿವನ್ನು ತಿಳಿಯಬಲ್ಲ ಹೊಸ ಮೋಡಿ ಬಲ್ಲೆ ನಾನು
ಬಾಳಲ್ಲಿ ಬಿಡಿಸದಂಥ ಎಂದೆಂದೂ ಮುರಿಯದಂಥ
ಬಂಧನದೇ ಹಿಡಿವೆ ನಿನ್ನ...

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೆ ಹೇ...ನಿನಗಾಗಿ ಅರಸಿ ಬಂದೆ
ನೀ ಎಲ್ಲೋ ಅಲ್ಲೇ ನಾನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು

ಎಂಥಾ ಸೌಂದರ್ಯ ನೋಡು

ಚಿತ್ರ: ಮಾತು ತಪ್ಪದ ಮಗ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಇಳಯರಾಜ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೮

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು ಕನ್ನಡ ನಾಡಿದು ಚಿನ್ನದಾ ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಹರಿಯುವ ನೀರು ಹಸುರಿನ ಪೈರು ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು ಮರಗಳ ಸಂಪು ಎಲ್ಲೂ ಆ ತಾಯಿ ನಗೆಯೇ
ಹರಿಯುವ ನೀರು ಹಸುರಿನ ಪೈರು ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು ಮರಗಳ ಸಂಪು ಎಲ್ಲೂ ಆ ತಾಯಿ ನಗೆಯೇ
ಭಾರತ ಮಾತೆಯಾ ಈ ತನುಜಾತೆಯ ಚೆಲುವನು ನೋಡುತ ನಲಿಯುವೆ ಮೆರೆಯುವೆ ನಾ..

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಎಲ್ಲೇ ಇರಲಿ ಹೇಗೇ ಇರಲಿ ನಮ್ಮೂರ ಸವಿನೋಟ ಚಂದ
ಸಾವಿರ ಭಾಷೆಯ ಕಲಿತರೂ ಮನಕೆ ಕನ್ನಡ ನುಡಿಮುತ್ತೆ ಅಂದ
ಪೂರ್ವದ ಪುಣ್ಯವೊ ಪಡೆದಿಹ ಭಾಗ್ಯವೊ ಹುಟ್ಟಿದೆ ಪಾವನ ಕನ್ನಡ ಮಣ್ಣಲಿ ನಾ...

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು ಕನ್ನಡ ನಾಡಿದು ಚಿನ್ನದಾ ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಹೂವಾ ನೋಡು ಎಂಥ ಅಂದವಾಗಿದೆ

ಚಿತ್ರ : ಬಾಡದ ಹೂ
ಸಂಗೀತ : ಅಶ್ವತ್ಥ್-ವೈದಿ
ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ಮತ್ತು ಕೋರಸ್
ವರ್ಷ: ೧೯೮೨

ಹೂವ ನೋಡು
ಹೂವಾ ನೋಡು ಎಂಥ ಅಂದವಾಗಿದೆ ಹೂವಾ ನೋಡು ಎಂಥ ಅಂದವಾಗಿದೆ
ಆ ಬಣ್ಣ ಬಣ್ಣ ಹೇಗೆ ನಮ್ಮ ಕಣ್ಣ ತುಂಬಿದೆ
ಆಮೇಲೆ
ತಂಗಾಳಿಯಲ್ಲಿ ಕಂಪನ್ನು ಚೆಲ್ಲಾಡಿದೆ ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ
ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ

ಬಳ್ಳೀ ನೋಡು ಬಳ್ಳಿ ನೋಡು ಎಂಥ ಅಂದವಾಗಿದೆ
ಹೌದು ಹೌದು
ಬಳ್ಳಿ ನೋಡು ಎಂಥ ಅಂದವಾಗಿದೆ ಆ ಮರವ ಹೇಗೆ ಸುತ್ತಿ ಸುತ್ತಿ ಮೇಲೆ ಬಂದಿದೆ
ಗುರು ಫೈನ್
ಈ ಪ್ರೀತಿ ಕಂಡು ಮನಸಿಂದು ಬೆರಗಾಗಿದೆ ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಎಂಥ ಸ್ನೇಹವು ಆಹಾ ಎಂಥ ಪ್ರೇಮವು

ಆಗಸವೆಲ್ಲೋ ಭೂಮಿಯು ಎಲ್ಲೋ ಯಾರು ಬಿಡಿಸದ ಅನುಬಂಧ
ಯಾರು ಬಿಡಿಸದ ಅನುಬಂಧ

ಕಡಲಿನ ನೀರನು ಹೀರಿ ಮೇಲೆ ಕೊಡುವುದು ಮಳೆಯ ಮುಗಿಲಿಂದ
ಕೊಡುವುದು ಮಳೆಯ ಮುಗಿಲಿಂದ

ಹನಿಹನಿ ನೀರು ಸೇರಿ ಸೇರಿ ಹನಿಹನಿ ನೀರು ಸೇರಿ ಸೇರಿ
ನದಿಯಾಗಿ...
ನದಿಯಾಗಿ ಹರಿದಾಗ ತಾನೇನೆ ಅಂದವೆಲ್ಲ

ಹೂವಾ ನೋಡು ಎಂಥ ಅಂದವಾಗಿದೆ ಆ ಬಣ್ಣ ಬಣ್ಣ ಹೇಗೆ ನಮ್ಮ ಕಣ್ಣ ತುಂಬಿದೆ
ತಂಗಾಳಿಯಲ್ಲಿ ಕಂಪನ್ನು ಚೆಲ್ಲಾಡಿದೆ ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ
ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ

ಮಾನವ ಜೀವಿ ಒಂಟಿಯಲ್ಲ ಸ್ನೇಹವ ಮರೆತರೆ ಹಿತವಿಲ್ಲ
ಸ್ನೇಹವ ಮರೆತರೆ ಹಿತವಿಲ್ಲ

ಸಾವಿರ ವರುಷ ಬಾಳುವುದಿಲ್ಲ ಪ್ರೀತಿಯ ಅರಿಯದೆ ಸುಖವಿಲ್ಲ
ಪ್ರೀತಿಯ ಅರಿಯದೆ ಸುಖವಿಲ್ಲ

ಸರಸದಿ ಸೇರಿ ಬಾಳಿದಾಗ ಸರಸದಿ ಸೇರಿ ಬಾಳಿದಾಗ
ಆನಂದಾ...
ಆನಂದ ನಮಗಾಗ ಈ ಮಾತು ಸುಳ್ಳಲ್ಲ

ಬಳ್ಳಿ ನೋಡು ಎಂಥ ಅಂದವಾಗಿದೆ ಆ ಮರವ ಹೇಗೆ ಸುತ್ತಿ ಸುತ್ತಿ ಮೇಲೆ ಬಂದಿದೆ
ಈ ಪ್ರೀತಿ ಕಂಡು ಮನಸಿಂದು ಬೆರಗಾಗಿದೆ ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಎಂಥ ಸ್ನೇಹವು ಆಹಾ ಎಂಥ ಪ್ರೇಮವು ಎಂಥ ಸ್ನೇಹವು ಆಹಾ ಎಂಥ ಪ್ರೇಮವು

ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ

ಚಿತ್ರ: ತಾಯಿಯ ಹೊಣೆ
ಸಂಗೀತ: ಸತ್ಯಂ
ಸಾಹಿತ್ಯ: ಚಿ.ಉದಯಶಂಕರ್
ಗಾಯಕರು: ರಾಜ್ ಕುಮಾರ್ ಭಾರತಿ, ಪಿ. ಸುಶೀಲಾ
ವರ್ಷ: ೧೯೮೫

ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ
ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ
ನಿನ್ನಾ ಸ್ನೇಹ ನಿನ್ನಾ ಪ್ರೇಮ ಕನಸಿನಾ ಸಿರಿಯೋ ಓ ಕನಸಿನಾ ಸಿರಿಯೋ
ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ

ಅರಳಿದ ತಾವರೆ ಹೂವಿನ ಹಾಗೆ ಚೆಲುವೆಯಾ ಮೊಗವು
ಚಂದ್ರನ ಕಂಡಾ ನೈದಿಲೆಯಂತೆ ನಿನ್ನ ಈ ನಗುವು
ಕಾಮಿನಿ ಅರಗಿಣಿ
ನಿನ್ನ ನುಡಿಗಳು ವೀಣೆ ಸ್ವರಗಳು ಅರಿಯದೆ ಹೋದೆ ಗೆಳತಿ ಬೆರಗಾದೆ

ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ

ತಣ್ಣನೆ ಗಾಳಿ ಸೋಕಿದ ಹಾಗೆ ಸುಖವನು ಕಂಡೆ
ಬಿಸಿಲಲಿ ಕರಗೋ ಮಂಜಿನ ಹಾಗೆ ಕಾಣದೇ ಹೋದೆ
ಪ್ರೇಮವೇ ತಾಳೆನೇ
ಮರೆಯಲಾರದೆ ದಾರಿ ಕಾಣದೆ ನಾನು ನೊಂದಿರುವೆ
ನಲ್ಲ ಎಲ್ಲಿರುವೇ

ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ
ನಿನ್ನಾ ಸ್ನೇಹ ನಿನ್ನಾ ಪ್ರೇಮ ಕನಸಿನಾ ಸಿರಿಯೋ ಓ ಕನಸಿನಾ ಸಿರಿಯೋ
ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ

ಕನ್ನಡ ನಾಡಿನ ರಸಿಕರ ಮನವ

ಚಿತ್ರ : ರಂಗನಾಯಕಿ
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ: ಎಂ.ರಂಗರಾವ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ

ಕಲೆಯ ರಸ ಗಂಗೆಯಲ್ಲಿ ನಿಂದ ಸೌಂದರ್ಯವಲ್ಲಿ
ಕಲೆಯ ರಸ ಗಂಗೆಯಲ್ಲಿ ನಿಂದ ಸೌಂದರ್ಯವಲ್ಲಿ
ಮಾತಂಗಿ ತಂಗಿ ಲಲಿತ ಲತಾಂಗಿ
ತಂಗಿ ಲಲಿತ ಲತಾಂಗಿ

ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ

ಬಣ್ಣದ ಬದುಕಿಂದ
ಬಣ್ಣದ ಬದುಕಿಂದ ಚಿನ್ನದ ಬಾಳಿಗೆ ಮನ್ನಣೆ ಪಡೆದ
ಭಾಗ್ಯವತಿ ಸೌಭಾಗ್ಯವತಿ

ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ

ನಿನ್ನ ಹೃದಯ ಹಸಿರಾಗಿರಲಿ
ನಿನ್ನ ಹೃದಯ ಹಸಿರಾಗಿರಲಿ ನಿನ್ನ ನೆನಪು ಸವಿಯಾಗಿರಲಿ
ಹೋಗಿ ಬಾ ಹೋಗಿ ಬಾ ಹೋಗಿ ಬಾ
ದೀರ್ಘಸುಮಂಗಲಿ ದೀರ್ಘಸುಮಂಗಲಿ
ದೀರ್ಘಸುಮಂಗಲಿ ದೀರ್ಘಸುಮಂಗಲಿ

Wednesday, May 25, 2011

ರವಿವರ್ಮನ ಕುಂಚದ



ಚಿತ್ರ: ಸೊಸೆ ತಂದ ಸೌಭಾಗ್ಯ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ಜಿ.ಕೆ.ವೆಂಕಟೇಶ್
ಗಾಯಕರು : ಪಿ.ಬಿ. ಶ್ರೀನಿವಾಸ್
ವರ್ಷ: ೧೯೭೭

ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ಕವಿಕಲ್ಪನೆ ಕಾಣುವಾ ಚೆಲುವಿನಾ ಜಾಲವೋ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ

ಉಯ್ಯಾಲೆಯಾ ಆಡಿ ನಲಿವಾ ರೂಪಸೀ
ಉಯ್ಯಾಲೆಯಾ ಆಡಿ ನಲಿವಾ ರೂಪಸೀ
ಸುರಲೋಕದಿಂದ ಇಳಿದು ಬಂದ ನಿಜ ಊರ್ವಶೀ
ನನ್ನೊಲವಿನ ಪ್ರೇಯಸಿ

ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ

ಹೂರಾಶಿಯ ನಡುವೆ ನಗುವ ಕೋಮಲೇ
ಹೂರಾಶಿಯ ನಡುವೆ ನಗುವ ಕೋಮಲೇ
ಕವಿ ಕಾಳಿದಾಸ ಕಾವ್ಯರಾಣಿ ಶಾಕುಂತಲೇ..
ಚಿರಯೌವ್ವನ ನಿನ್ನಲೇ

ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ಕವಿಕಲ್ಪನೆ ಕಾಣುವಾ ಚೆಲುವಿನಾ ಜಾಲವೋ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ

Wednesday, March 9, 2011

ಭಾಗ್ಯಾದ ಲಕ್ಷ್ಮೀ ಬಾರಮ್ಮ



ಚಿತ್ರ: ಭಾಗ್ಯದ ಲಕ್ಷ್ಮೀ ಬಾರಮ್ಮ
ರಚನೆ: ಚಿ. ಉದಯಶಂಕರ್
ಸಂಗೀತ: ಸಿಂಗೀತಂ ಶ್ರೀನಿವಾಸರಾವ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೬

ಭಾಗ್ಯಾದ ಲಕ್ಷ್ಮೀ ಬಾರಮ್ಮ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ

ಉಸಿರನ್ನಾಡಲು ಪ್ರಾಣವು ಬೇಕು ಪ್ರಾಣವು ನಿಲ್ಲಲು ಊಟವು ಬೇಕು
ಊಟವ ಮಾಡಲು ಹಣವಿರಬೇಕು ಎಲ್ಲಕು ಲಕ್ಷ್ಮಿಯ ದಯೆ ಇರಬೇಕು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಜೇಬಿನ ತುಂಬ ಇದ್ದರೆ ನೋಟು ಸುಲಭದಿ ಸಿಗುವುದು ಕಾಲೇಜು ಸೀಟು
ದೊರಕದ ವೋಟಿನ ಬೇಟೆಗೆ ಕೂಡ ಇರಲೇಬೇಕು ಬಗೆ ಬಗೆ ನೋಟು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಕಾಸು ಬಿಚ್ಚಿದರೆ ಶೀಘ್ರ ದರುಶನ ಕಾಸಿಲ್ಲದಿರೆ ಧರ್ಮ ದರುಶನ
ಈ ಕಲಿಯುಗದಲಿ ಎಲ್ಲೇ ಹೋಗಲಿ ದೇವರು ಕೂಡ ನೋಡನು ಬಡವನ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ದೊರಕದ ಲೈಸೆನ್ಸ್ ದೊರಕುವುದುಂಟು ದೊರಕದ ವಸ್ತುವು ದೊರಕುವುದುಂಟು
ಟೇಬಲ್ ಕೆಳಗಡೆ ನೋಟು ತಳ್ಳಿದರೆ ಎಲ್ಲ ಕೆಲಸಕು ಸ್ಯಾಂಕ್ಷನ್ ಉಂಟು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ವೈದ್ಯರ ಆಸೆ ಬಡವನಿಗೇಕೆ ರೋಗವು ಬಂದರೆ ಅಳುವುದು ಏಕೆ
ಧರ್ಮಾಸ್ಪತ್ರೆಗೆ ಹೋದರು ರೋಗಿಯು ಲಂಚ ಲಂಚ ಎಂದರೆ ಮಂಚ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಕೆಲಸ ದೊರಕಲು ಹಣ ಕೊಡಬೇಕು ತಾಳಿಯ ಕಟ್ಟಲು ಕೂಲಿಯು ಬೇಕು
ಸಾಧು ಸನ್ಯಾಸಿಗಳಾದರೆ ಏನು ಪಾದ ಪೂಜೆಗೂ ನೋಟಿರಬೇಕು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಗೌರವ ಧನವಿದು ಎಂದರೂ ಒಂದೇ ಮೆಚ್ಚಿಗೆಗಾಗಿ ಎಂದರೂ ಒಂದೇ
ವಿಶ್ವಾಸಕೆ ಕಿರುಗಾಣಿಕೆ ಎಂದರೂ ಎಲ್ಲಾ ಒಂದೇ ಲಂಚದ ಕಂತೆ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಝಣ ಝಣ ಎಂದು ಸದ್ದನು ಮಾಡು ಹೆಣವೂ ಬಾಯ್ ಬಾಯ್ ಬಿಡುವುದು ನೋಡು
ಹಣವಿದ್ದರೆ ನೀ ದಿನಕರನಂತೆ ಇಲ್ಲದಿದ್ದರೆ ಶ್ವಾನದಂತೆ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಇಲ್ಲದ ಬುಧ್ದಿಯ ಇದೆ ಎನ್ನುವರು ಇಲ್ಲದ ಅಂದವ ಇದೆ ಎನ್ನುವರು
ಒಲ್ಲದೆ ಹೋದರೂ ಓಲೈಸುವರು ಬಲ್ಲಿದನಾದರೆ ಪಾದ ಹಿಡಿವರು
ಭಾಗ್ಯಾದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ
ಸೌಭಾಗ್ಯಾದ ಲಕ್ಷ್ಮೀ ಬಾರಮ್ಮ

ನನ್ನೆದೆ ವೀಣೆಯು ಮಿಡಿಯುವುದು



ಚಿತ್ರ: ಕಥಾನಾಯಕ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಎಂ. ರಂಗರಾವ್
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ,. ವಾಣಿ ಜಯರಾಂ
ವರ್ಷ: ೧೯೮೬

ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು.....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

ಎಂದೂ ಕಾಣೆ ನಂಬು ಜಾಣೆ ನಿನ್ನಾ ಸೇರಲು
ನೂರೂ ಮಾತು ನೂರೂ ಕವಿತೆ ಕಣ್ಣೇ ಆಡಲು
ನಿನ್ನಾ ನೋಟ ನಿನ್ನಾ ಆಟ ನನ್ನಾ ಸೆಳೆಯಲು
ಒಂಟಿ ಬಾಳು ಸಾಕು ಎಂದು ಮನಸೂ ಹೇಳಲು
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಮಿಂಚಿನ ಬಳ್ಳಿಯು ಒಡಲಲಿ ಓಡುತ ನಾಚಿ ನೋಡಿದಾಗ

ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

ಮೇಲೆ ಸೂರ್ಯ ಜಾರಿ ಜಾರಿ ಬಿಸಿಲು ಕರಗಲು
ಸಂಜೆ ಬಂದು ರಂಗು ತಂದು ಮೇಲೆ ಎರಚಲು
ತಂಪು ಗಾಳಿ ಬೀಸಿ ಬಳ್ಳಿ ಬಳುಕಿ ಆಡಲು
ಹಾಗೇ ಹೀಗೆ ಆಡಿ ಹೂವು ಕಂಪು ಚೆಲ್ಲಲೂ
ದುಂಬಿ ನೋಡಿದಾಗ ಸಂಗೀತ ಹಾಡಿದಾಗ
ದುಂಬಿ ನೋಡಿದಾಗ ಸಂಗೀತ ಹಾಡಿದಾಗ
ಮನಸಿನ ಹಕ್ಕಿಯು ಕನಸನು ಕಾಣುತ ದೂರ ಹಾರಿದಾಗ

ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

ಮಲೆನಾಡ ಹೆಣ್ಣ ಮೈ ಬಣ್ಣ



ಚಿತ್ರ: ಭೂತಯ್ಯನ ಮಗ ಅಯ್ಯು
ಸಾಹಿತ್ಯ : ಆರ್. ಎನ್. ಜಯಗೋಪಾಲ್
ಸಂಗೀತ : ಜಿ. ಕೆ. ವೆಂಕಟೇಶ್
ಗಾಯಕರು : ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ
ವರ್ಷ: ೧೯೭೪

ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ನಾ ಮನಸೋತೆನೆ ಚಿನ್ನ
ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ

ಬಯಲು ಸೀಮೆಯ ಗಂಡು ಬಲುಗುಂಡು
ಜಗಮೊಂಡು ದುಂಡು ಹೂ ಚೆಂಡು
ನನ್ನ ಸರದಾಗೆ ರಸಗುಂಡು ನನ್ನ ಸರದಾಗೆ ರಸಗುಂಡು

ಮಾತು ನಿಂದು ಹುರಿದಾ ಅರಳು ಸಿಡಿದಂಗೆ
ಕಣ್ಣುಗಳು ಮಿಂಚಂಗೆ ನಿನ್ನ ನಗೆಯಲ್ಲೆ ಸೆಳೆದ್ಯಲ್ಲೆ
ಮನದಾಗೆ ನಿಂತ್ಯಲ್ಲೆ ನನ್ನ ಮನದಾಗೆ ನಿಂತ್ಯಲ್ಲೆ

ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ

ಕಾಡಬೇಡಿ ನೋಡಿಯಾರು ನನ್ನೋರು
ನನ್ನ ಹಿರಿಯೋರು ಬಿಡಿ ನನ್ನ ಕೈಯ್ಯ ದಮ್ಮಯ್ಯ
ತುಂಟಾಟ ಸಾಕಯ್ಯ ಈ ತುಂಟಾಟ ಸಾಕಯ್ಯ

ದೂರದಿಂದ ಬಂದೆ ನಿನ್ನ ಹಂಬಲಿಸಿ
ಗೆಳೆತನ ನಾ ಬಯಸಿ

ಆದ ನಾ ಬಲ್ಲೇ ನಾ ಬಲ್ಲೆ ನಾಚಿ ಮೊಗ್ಗಾದೆ ನಾನಿಲ್ಲೆ
ನಾಚಿ ಮೊಗ್ಗಾದೆ ನಾನಿಲ್ಲೆ

ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ

Friday, February 25, 2011

ಹೊಸ ಬೆಳಕು ಮೂಡುತಿದೆ



ಚಿತ್ರ: ಹೊಸ ಬೆಳಕು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕರು: ಡಾ|| ರಾಜ್ ಕುಮಾರ್
ವರ್ಷ: ೧೯೮೨

ಹೊಸ ಬೆಳಕು ಮೂಡುತಿದೆ ಬಂಗಾರದ ರಥವೇರುತ
ಆಕಾಶದಿ ಓಡಾಡುತ ಅತ್ತಾ-ಇತ್ತಾ ಸುತ್ತಾ-ಮುತ್ತಾ ಚೆಲ್ಲಿದಾ
ಕಾಂತಿಯಾ.. ರವಿ ಕಾಂತಿಯಾ....

ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ-ಇಲ್ಲಿ ಹೂವ ಕಂಪ ಹರಡುತಲಿದೆ
ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ-ಇಲ್ಲಿ ಹೂವ ಕಂಪ ಹರಡುತಲಿದೆ
ಹಕ್ಕಿ ಮುಗಿಲನ್ನು ನೋಡಿ ಬೆಳಕು ಬಂತೆಂದು ಹಾಡಿ
ಹಕ್ಕಿ ಮುಗಿಲನ್ನು ನೋಡಿ ಬೆಳಕು ಬಂತೆಂದು ಹಾಡಿ
ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ ಬಾನಿಗೆ.. ಹಾರಿದೆ...

ಹೊಸ ಬೆಳಕು ಮೂಡುತಿದೆ

ಬೆಟ್ಟದಿಂದ ನೀರು ಜಾರಿ ಧುಮುಕುತಿದೆ ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಳ್ಳಿ ಬೆಳಕನ್ನು ನೋಡಿ ಮಂಜು ಮರೆಯಾಗಿ ಓಡಿ
ಬೆಳ್ಳಿ ಬೆಳಕನ್ನು ನೋಡಿ ಮಂಜು ಮರೆಯಾಗಿ ಓಡಿ
ಎಲೆಯ ಮರೆಯ ಸೇರಿ ನಲಿವ ಕೋಗಿಲೆ.. ಹಾಡಿದೆ..

ಹೊಸ ಬೆಳಕು ಮೂಡುತಿದೆ ಬಂಗಾರದ ರಥವೇರುತ
ಆಕಾಶದಿ ಓಡಾಡುತ ಅತ್ತಾ-ಇತ್ತಾ ಸುತ್ತಾ-ಮುತ್ತಾ ಚೆಲ್ಲಿದಾ..
ಕಾಂತಿಯಾ.. ರವಿ ಕಾಂತಿಯಾ...

Wednesday, February 16, 2011

ಕಂಗಳು ತುಂಬಿರಲು ಕಂಬನಿ ಧಾರೆಯಲಿ



ಚಿತ್ರ: ಚಂದನದ ಗೊಂಬೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಜಾನಕಿ
ವರ್ಷ: ೧೯೭೯

ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ
ಮೇಣದ ದೀಪದಂತೆ ನೊಂದು ನೊಂದು ನೀರಾದೇ..
ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ..

ನಿಮ್ಮ ರೂಪ ಕಣ್ಣಿನಲಿ ನಿಮ್ಮ ಮಾತೇ ಕಿವಿಗಳಲಿ
ನಿಮ್ಮ ರೂಪ ಕಣ್ಣಿನಲಿ ನಿಮ್ಮ ಮಾತೇ ಕಿವಿಗಳಲಿ
ನಿಮ್ಮ ನೋಟ ಇನ್ನೂ ನನ್ನ ಹೃದಯವೀಣೆ ಮೀಟಿರಲು
ನಿಮ್ಮ ಸ್ನೇಹ ಮನಸಿನಲಿ ನಿಮ್ಮ ಪ್ರೇಮ ನೆನಪಿನಲಿ
ನಿಮ್ಮ ಮುದ್ದು ಕಂದಾ ನನ್ನಾ ಅಮ್ಮಾ ಎಂದು ಕೂಗಿರಲು
ನೊಂದ ನನ್ನ ಜೀವ ಇಂದು ಎನೋ ಸುಖಾ ಕಾಣುತಿದೆ

ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ

ನೀವು ತಂದ ಈ ಮನೆಗೆ ನೀವು ತಂದ ಈ ಸಿರಿಗೆ
ನೀವು ತಂದ ಈ ಮನೆಗೆ ನೀವು ತಂದ ಈ ಸಿರಿಗೆ
ದೂರವಾಗಿ ಎಂದೆಂದಿಗೂ ಹೋಗಲಾರೆ ನಿಮ್ಮಾಣೆಗೂ
ನಿಮ್ಮ ಮನೆ ಬಾಗಿಲಿಗೆ ತೋರಣದ ಹಾಗಿರುವೆ
ನಿಮ್ಮ ಮನೆ ದೀಪವಾಗಿ ಬೆಳಗುವೆ ನನ್ನಾಣೆಗೂ
ನಿಮ್ಮ ನೆನಪಲ್ಲೇ ನನ್ನಾ ಬಾಳಾ ನಾನೂ ಸಾಗಿಸುವೆ

ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ
ಮೇಣದ ದೀಪದಂತೆ ನೊಂದು ನೊಂದು ನೀರಾದೇ..
ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ..

ವೇದಾಂತಿ ಹೇಳಿದನು



ಚಿತ್ರ: ಮಾನಸ ಸರೋವರ
ಸಾಹಿತ್ಯ : ಜಿ.ಎಸ್. ಶಿವರುದ್ರಪ್ಪ
ಸಂಗೀತ : ವಿಜಯಭಾಸ್ಕರ್
ಗಾಯಕರು : ಪಿ. ಬಿ. ಶ್ರೀನಿವಾಸ್
ವರ್ಷ: ೧೯೮೩

ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು
ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು... ಈ ಹೆಣ್ಣು ಮಾಯೆ, ಮಾಯೇ...
ಕವಿಯೊಬ್ಬ ಕನವರಿಸಿದನು.. ಓ.. ಇವಳೇ ಚೆಲುವೆ...
ಇವಳ ಜೊತೆಯಲ್ಲಿ ನಾನು ಸ್ವರ್ಗವನೆ ಗೆಲ್ಲುವೆ... ಸ್ವರ್ಗವನೇ ಗೆಲ್ಲುವೆ...

ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು.. ಈ ಬದುಕು ಶೂನ್ಯ ಶೂನ್ಯ
ಕವಿ ನಿಂತು ಸಾರಿದನು.. ಓ.. ಇದು ಅಲ್ಲ ಶೂನ್ಯ.
ಜನ್ಮ ಜನ್ಮದಿ ಸವಿಯೇ.. ನಾನೆಷ್ಟು ಧನ್ಯ ನಾನೆಷ್ಟು ಧನ್ಯ

ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು
ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು
ಮಣ್ಣೆಲ್ಲ ಹೊನ್ನು ಹೊನ್ನು ಮಣ್ಣೆಲ್ಲ ಹೊನ್ನು ಹೊನ್ನು

Tuesday, February 8, 2011

ಏನು ಮಾಯವೋ ಏನು ಮರ್ಮವೋ



ಚಿತ್ರ: ಭಾಗ್ಯದ ಲಕ್ಷ್ಮೀ ಬಾರಮ್ಮ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸಿಂಗೀತಂ ಶ್ರೀನಿವಾಸರಾವ್
ಗಾಯಕರು: , ವಾಣಿ ಜಯರಾಂ
ವರ್ಷ: ೧೯೮೬

ಏನು ಮಾಯವೋ ಏನು ಮರ್ಮವೋ
ಏನು ಮಾಯವೋ ಏನು ಮರ್ಮವೋ ಗೆಲ್ಲುವ ಕುದುರೆಯೇ ಎಂದೂ ಗೆಲುವುದು
ಹಳ್ಳದ ಕಡೆಗೇ ನೀರು ಹರಿವುದು ಹಣವಂತರಿಗೇ ಹಣ ಸೇರುವುದು....
ಏನು ಮಾಯವೋ ಏನು ಮರ್ಮವೋ

ಸಿಮೆಂಟು ಸಿಗದು ಎನ್ನುತಲಿದ್ದರೂ ಮನೆಗಳು ಏಳುತಲಿವೆಯಲ್ಲ
ಪೆಟ್ರೋಲ್ ಬೆಲೆಯು ಏರಿದರೇನು ಹೊಸ ಕಾರುಗಳಿಗೆ ಬರವಿಲ್ಲ
ಜನರಲಿ ಹಣವೇ ಇಲ್ಲ ಎಂದರೂ ಪೇಟೆಯು ಜಾತ್ರೆಯು ದಿನವೆಲ್ಲ
ಯುದ್ಧವೇ ಬರಲಿ ಕ್ಷಾಮವೇ ಬರಲಿ ಸಿನಿಮಾ ಡ್ರಾಮ ನಿಲ್ಲಲ್ಲ
ಇವರಿಗೆ ದೊರೆತ ಈ ಶ್ರೀಮಂತಿಕೆ ನಮಗೆ ಏಕೆ ಸಿಕ್ಕಿಲ್ಲ
ಅಯ್ಯೋ ಮಂಕೆ ತಿಳಿದುಕೋ ನಿಜವ
ನಮಗೆ ಅಂಥ ಲಕ್ಕಿಲ್ಲ ನಮಗೆ ಅಂಥ ಲಕ್ಕಿಲ್ಲ

ಏನು ಮಾಯವೋ ಏನು ಮರ್ಮವೋ

ಲಾಸು ಲಾಸು ಎನ್ನುತಲಿದ್ದರೂ ಬಿಸಿನೆಸ್ ಯಾವುದೂ ಡಲ್ಲಿಲ್ಲ
ಟ್ಯಾಕ್ಸು ರೈಡು ಎಂದರೆ ಏನೂ ಧನಿಕರ ಸಂಖ್ಯೆ ಕರಗಿಲ್ಲ
ತ್ರೀ ಸ್ಟಾರ್ ಫೈವ್ ಸ್ಟಾರ್ ಹೋಟೆಲ್ ಗಳಲೂ ಖಾಲಿ ರೂಮು ಒಂದಿಲ್ಲ
ಬಸ್ಸು ಟ್ರೈನು ಪ್ಲೈನೇ ಆಗಲಿ ಸತ್ತರೂ ಟಿಕೇಟು ಸಿಕ್ಕಲ್ಲ
ಹಣವನು ಮಾಡುವ ಸುಲಭೋಪಾಯ ನಿನಗೆ ಯಾಕೆ ತಿಳಿದಿಲ್ಲ
ನಿನ್ನನು ಬಿಟ್ಟು ಕಂಬಿಯ ಎಣಿಸೋ
ಆಸೆಯು ಇನ್ನೂ ಬಂದಿಲ್ಲ  ಆಸೆಯು ಇನ್ನೂ ಬಂದಿಲ್ಲ

ಏನು ಮಾಯವೋ ಏನು ಮರ್ಮವೋ
ಏನು ಮಾಯವೋ ಏನು ಮರ್ಮವೋ ಗೆಲ್ಲುವ ಕುದುರೆಯೇ ಎಂದೂ ಗೆಲುವುದು
ಹಳ್ಳದ ಕಡೆಗೇ ನೀರು ಹರಿವುದು ಹಣವಂತರಿಗೇ ಹಣ ಸೇರುವುದು....
ಏನು ಮಾಯವೋ ಏನು ಮರ್ಮವೋ ಏನು ಮಾಯವೋ ಏನು ಮರ್ಮವೋ

ಬೆಸುಗೆ ಬೆಸುಗೆ



ಚಿತ್ರ: ಬೆಸುಗೆ
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
ವರ್ಷ: ೧೯೭೬

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ
ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ರಾಗದ ಜೊತೆಗೆ ತಾಳದ ಬೆಸುಗೆ
ರಾಗತಾಳಕೆ ಭಾವದ ಬೆಸುಗೆ
ರಾಗದ ಜೊತೆಗೆ ತಾಳದ ಬೆಸುಗೆ
ರಾಗತಾಳಕೆ ಭಾವದ ಬೆಸುಗೆ
ಭಾವದ ಜೊತೆಗೆ ಗೀತೆಯ ಬೆಸುಗೆ
ಗೀತೆಯ ಜೊತೆ ಸಂಗೀತದ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
ಯೌವನದಲ್ಲಿ ಮೋಹದ ಬೆಸುಗೆ
ಮೈ ಮನದಲ್ಲಿ ಬಯಕೆಯ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ಎರಡು ಮನಸಿಗೆ ಒಲವಿನ ಬೆಸುಗೆ
ಎರಡು ಬಾಳಿನ ಬಂಧನ ಬೆಸುಗೆ
ಎರಡು ಮನಸಿಗೆ ಒಲವಿನ ಬೆಸುಗೆ
ಎರಡು ಬಾಳಿನ ಬಂಧನ ಬೆಸುಗೆ
ಮಧುರ ಮಿಲನಕೆ ಪ್ರೀತಿಯ ಬೆಸುಗೆ
ಜನುಮ ಜನುಮಕೂ ಆತ್ಮದ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ
ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜನುಮ ಜನುಮಕೂ ಆತ್ಮದ ಬೆಸುಗೆ

Friday, February 4, 2011

ಹೇ.... ಕವಿತೆ ನೀನು ರಾಗ ನಾನು



ಚಿತ್ರ: ಪ್ರಿಯ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಇಳಯರಾಜ
ಗಾಯಕರು : ಕೆ. ಜೆ. ಯೇಸುದಾಸ್, ಎಸ್.ಜಾನಕಿ
ವರ್ಷ: ೧೯೭೯

ಹೇ.... ಕವಿತೆ ನೀನು ರಾಗ ನಾನು
ನಾನು ನೀನು ಒಂದಾಗೆ ಈ ಬಾಳೇ ಪ್ರೇಮಗೀತೆಯಂತೆ
ಹೇ...ಕವಿತೆ ನೀನು ರಾಗ ನಾನು..

ನಿನ್ನ ರೂಪ ಕಂಡು ತಂಗಾಳಿ ಬಂದಿದೆ
ನಿನ್ನ ರೂಪ ಕಂಡು ತಂಗಾಳಿ ಬಂದಿದೆ
ಹೊನ್ನ ಮೈಯ್ಯ ಸೋಕಿ ಆನಂದ ಹೊಂದಿದೆ
ಹೋಯ್..ಹೋಯ್.. ಹೊನ್ನ ಮೈಯ್ಯ ಸೋಕಿ ಆನಂದ ಹೊಂದಿದೆ
ತನ್ನಾಸೆ ಇನ್ನೂ ತೀರದಾಗಿ ಬೀಸಿ ಬೀಸಿ ಬಂದು ಹೋಗಿ

ಹೇ.... ಕವಿತೆ ನೀನು ರಾಗ ನಾನು

ನಿನ್ನ ಮಾತು ಕೇಳಿ ಆ ಗಿಳಿಯೇ ನಾಚಿದೆ
ನಿನ್ನ ಮಾತು ಕೇಳಿ ಆ ಗಿಳಿಯೇ ನಾಚಿದೆ
ಮುದ್ದು ಮಾತ ಮರೆತು ಕಲ್ಲಾಗಿ ಹೋಗಿದೆ
ಹೋಯ್ ಹೋಯ್.. ಮುದ್ದು ಮಾತ ಮರೆತು ಕಲ್ಲಾಗಿಹೋಗಿದೆ
ನಿನ್ನಿಂದ ಪ್ರೀತಿ ಮಾತು ಇನ್ನು ಕೇಳಿ ಕೇಳಿ ಕಲಿವಾ ಆಸೆ

ಹೇ.... ಕವಿತೆ ನೀನು ರಾಗ ನಾನು

ನಿನ್ನ ಕಂಡ ಮನಸು ಕವಿಯಂತೆ ಹಾಡಿದೆ
ನಿನ್ನ ಕಂಡ ಮನಸು ಕವಿಯಂತೆ ಹಾಡಿದೆ
ನೆನ್ನೆ ಕಂಡ ಕನಸು ನನಸಾಗಿ ಹೋಗಿದೆ
ಹೋಯ್ ಹೋಯ್ .. ನೆನ್ನೆ ಕಂಡ ಕನಸು ನನಸಾಗಿ ಹೋಗಿದೆ
ನಿನ್ನಿಂದ ನನ್ನ ಯಾರೂ ಇನ್ನು ಎಂದೂ ದೂರ ಮಾಡಲಾರದೆಂದೂ

ಹೇ....ಕವಿತೆ ನೀನು ರಾಗ ನಾನು
ನಾನು ನೀನು ಒಂದಾಗೆ ಈ ಬಾಳೇ ಪ್ರೇಮಗೀತೆಯಂತೆ
ಹೇ....ಕವಿತೆ ನೀನು ರಾಗ ನಾನು

Thursday, February 3, 2011

ಮೊದಲನೆ ದಿನವೇ ಒಲಿದೆ



ಚಿತ್ರ: ಪಾವನ ಗಂಗ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೭

ಮೊದಲನೆ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾಡಿದೆ ಕವಿತೆ ಕಂಗಳಲೇ ಮೌನದಲೇ
ಮೊದಲನೆ ದಿನವೇ ಸೋತೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ

ಬಾಳಿನ ಲತೆಯಲಿ ಹೂವಾದೆ ಬಾಳಿನ ಕುಸುಮಕೆ ಜೇನಾದೆ
ಬಾಳಿನ ಲತೆಯಲಿ ಹೂವಾದೆ ಬಾಳಿನ ಕುಸುಮಕೆ ಜೇನಾದೆ
ಬಾಳ ಬಯಕೆಯೇ ನೀನಾದೆ ಬಾಳಿಗಾನಂದ ನೀ ತಂದೆ

ಪ್ರೇಮದ ಕಡಲಲಿ ಮುತ್ತಾದೆ ಪ್ರೇಮದ ಬದುಕಿಗೆ ಕಣ್ಣಾದೆ
ಪ್ರೇಮ ಪಲ್ಲವಿ ನೀನಾದೆ ಪ್ರೇಮದಾನಂದ ನೀ ತಂದೆ
ಪ್ರೇಮದಾನಂದ ನೀ ತಂದೆ

ಮೊದಲನೆ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ

ಈ ದಿನ ಹೊಸತನ ನೀ ತಂದೆ ನಾಳಿನ ಬದುಕಿಗೆ ಬೆಳಕಾದೆ
ಈ ದಿನ ಹೊಸತನ ನೀ ತಂದೆ ನಾಳಿನ ಬದುಕಿಗೆ ಬೆಳಕಾದೆ
ಪ್ರಾಣ ಪದಕವೇ ನೀನಾದೆ ನಾನು ನಿನ್ನಲ್ಲಿ ಒಂದಾದೆ

ಆಡುವ ಮಾತಿಗೆ ದನಿಯಾದೆ ಹಾಡುವ ಗೀತೆಗೆ ಶ್ರುತಿಯಾದೆ
ಜೀವ ಜೀವವೇ ನೀನಾದೆ ನಿನ್ನ ಮನದಲ್ಲಿ ನಾನಾದೆ
ನಿನ್ನ ಮನದಲ್ಲಿ ನಾನಾದೆ

ಮೊದಲನೆ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾಡಿದೆ ಕವಿತೆ ಕಂಗಳಲೇ ಮೌನದಲೇ
ಮೊದಲನೆ ದಿನವೇ ಸೋತೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ

ಆಕಾಶ ದೀಪವು ನೀನು



ಚಿತ್ರ: ಪಾವನ ಗಂಗ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೭

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು

ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಹೃದಯದ ವೀಣೆಯನು ಹಿತವಾಗಿ ನುಡಿಸುತಲಿ
ಆನಂದ ತುಂಬಲು ನೀನು ನಾ ನಲಿವೆನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು

ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಹೃದಯವು ಧರಿಸಿದೆ ಈ ಜೀವ ಸೋಲುತಿದೆ
ಸಂಗಾತಿ ಆದರೆ ನೀನು ನಾ ಉಳಿವೆನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು

ಹೂವಾದ ಆಸೆಯೆಲ್ಲ ಮುಳ್ಳಾಗಿ ಹೋಯಿತಲ್ಲ
ಜೀವ ನೋವ ತಾಳದಲ್ಲ ಸುಖ ಶಾಂತಿ ಇನ್ನಿಲ್ಲ
ನೆಮ್ಮದಿಯ ಕಾಣೆನು ನಾ ಸೋತೆನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು

Tuesday, February 1, 2011

ಸ್ನೇಹದ ಕಡಲಲ್ಲಿ



ಚಿತ್ರ: ಶುಭಮಂಗಳ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೫

ಸ್ನೇಹದ ಕಡಲಲ್ಲಿ.... ನೆನಪಿನ ದೋಣೀಯಲೀ...
ಸ್ನೇಹದ ಕಡಲಲ್ಲಿ.... ನೆನಪಿನ ದೋಣೀಯಲೀ...
ಪಯಣಿಗ ನಾನಮ್ಮ ಪಯಣಿಗ ನಾನಮ್ಮ
ಪ್ರೀತಿಯ ತೀರವ ಸೇರುವುದೊಂದೇ
ಪ್ರೀತಿಯ ತೀರವ ಸೇರುವುದೊಂದೇ
ಬಾಳಿನ ಗುರಿಯಮ್ಮ ಬಾಳಿನ ಗುರಿಯಮ್ಮ...

ಸ್ನೇಹದ ಕಡಲಲ್ಲಿ... ನೆನಪಿನ ದೋಣೀಯಲೀ...
ಪಯಣಿಗ ನಾನಮ್ಮ ಪಯಣಿಗ ನಾನಮ್ಮ

ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮಾಸಿಲ್ಲ
ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮಾಸಿಲ್ಲ
ಆಟದೆ ಸೋತು ರೋಷದೆ ಕಚ್ಚಿದ ಆಟದೆ ಸೋತು ರೋಷದೆ ಕಚ್ಚಿದ
ಗಾಯವ ಮರೆತಿಲ್ಲ.. ಗಾಯವ ಮರೆತಿಲ್ಲ

ಸ್ನೇಹದ ಕಡಲಲ್ಲಿ... ನೆನಪಿನ ದೋಣೀಯಲೀ...
ಪಯಣಿಗ ನಾನಮ್ಮ ಪಯಣಿಗ ನಾನಮ್ಮ

ಶಾಲೆಗೆ ಚಕ್ಕರ್ ಊಟಕೆ ಹಾಜರ್ ಲೆಕ್ಕದೆ ಬರಿ ಸೊನ್ನೆ
ಶಾಲೆಗೆ ಚಕ್ಕರ್ ಊಟಕೆ ಹಾಜರ್ ಲೆಕ್ಕದೆ ಬರಿ ಸೊನ್ನೆ
ಎನ್ನುತ ನಾನು ಕೆಣಕಲು ನಿನ್ನ
ಎನ್ನುತ ನಾನು ಕೆಣಕಲು ನಿನ್ನ ಉದಿಸಿದೆ ಕೆನ್ನೆ... ನಾನದ ಮರೆಯುವೆನೆ?

ಸ್ನೇಹದ ಕಡಲಲ್ಲಿ... ನೆನಪಿನ ದೋಣೀಯಲೀ...
ಪಯಣಿಗ ನಾನಮ್ಮ ಪಯಣಿಗ ನಾನಮ್ಮ
ಪ್ರೀತಿಯ ತೀರವ ಸೇರುವುದೊಂದೇ
ಪ್ರೀತಿಯ ತೀರವ ಸೇರುವುದೊಂದೇ
ಬಾಳಿನ ಗುರಿಯಮ್ಮ ಬಾಳಿನ ಗುರಿಯಮ್ಮ

ಏನೋ ಸಂತೋಷ ಏನೋ ಉಲ್ಲಾಸ



ಚಿತ್ರ: ಪುಟಾಣಿ ಏಜೆಂಟ್ ೧೨೩
ಸಾಹಿತ್ಯ: ಗೀತಪ್ರಿಯ
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೯

ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ
ಎಂದು ಮುಗಿಯದ ಪ್ರೇಮ ಬಂಧನ
ಜನ್ಮ ಜನ್ಮದ ಈ ಆತ್ಮ ಬಂಧನ
ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ
ಎಂದು ಮುಗಿಯದ ಪ್ರೇಮ ಬಂಧನ
ಜನ್ಮ ಜನ್ಮದ ಈ ಆತ್ಮ ಬಂಧನ

ನನ್ನಾಸೆ ನಿನ್ನಾಸೆ, ಒಂದಾಗಿ ಸೇರಿ ಏನೇನೊ ಕೋರಿ, ಉಯ್ಯಾಲೆ ತಾನಾಡಿದೆ
ನಿನ್ನಲ್ಲಿ ನನ್ನಲ್ಲಿ, ಒಲವೆಲ್ಲ ಕೂಡಿ ಗೆಲುವಿಂದ ಹಾಡಿ, ಎಲ್ಲೆಲ್ಲೊ ಓಲಾಡಿದೆ
ದಾಹವೊ ಮೋಹವೊ, ಹೂಬಳ್ಳಿಯೊಂದು, ಮರಸುತ್ತಿ ಬಂದು, ತಾ ನೀಡೆ ಆಲಿಂಗನ
ಸಂಚಿನ ಮಿಂಚಿನ, ಕಣ್ಣೆರೆಡು ಕೂಡಿ, ಮಾಡಿರಲು ಮೋಡಿ, ಮೈಯಲ್ಲಿ ಮೃದು ಕಂಪನ
ಇಂದೇಕೊ ನಮ್ಮಲ್ಲಿ ಇಂತಹ ತಲ್ಲಣ

ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ
ಎಂದು ಮುಗಿಯದ ಪ್ರೇಮ ಬಂಧನ
ಜನ್ಮ ಜನ್ಮದ ಈ ಆತ್ಮ ಬಂಧನ

ನೀನಲ್ಲಿ ನಾನಿಲ್ಲಿ, ಈ ನೋಟದಲ್ಲಿ, ಆ ನೋಟ ನಕ್ಕು, ಚೆಲ್ಲಾಟ ನೀನಾಡಿದೆ
ಹಾಡುತ ಆಡುತ, ಮನವೆಂಬ ಹಕ್ಕಿ, ಒಲವೆಲ್ಲೊ ಉಕ್ಕಿ, ಬಾನಲ್ಲಿ ಹಾರಾಡಿದೆ
ನಿನ್ನಿಂದ ನನ್ನೊಂದ, ಹೂವಲ್ಲಿ ಜೇನು, ನನ್ನಲ್ಲಿ ನೀನು, ಬಾಳೆಲ್ಲ ಹಾಯಾಗಿದೆ
ನಾವೆಂದು ಒಂದೆಂದು, ನಮ್ಮಂತರಂಗ ಆನಂದರಂಗ, ಅನುರಾಗ ತಾ ತಂದಿದೆ
ತಂಗಾಳಿ ತಂಪಾದ ಸಂದೇಶ ಸಾರಿದೆ

ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ
ಎಂದು ಮುಗಿಯದ ಪ್ರೇಮ ಬಂಧನ
ಆತ್ಮ ಬಂಧನ, ಆತ್ಮ ಬಂಧನ

Friday, January 28, 2011

ಪ್ರೀತಿಸಿ ನೋಡು ಪ್ರೇಮಿಸಿ ನೋಡು



ಚಿತ್ರ: ಪ್ರೀತಿಸಿ ನೋಡು
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು
ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

ಪ್ರೀತಿಸಿ ನೋಡು ಪ್ರೀತಿಸಿ ನೋಡು
ಪ್ರೀತಿಸಿ ನೋಡು ಪ್ರೀತಿಸಿ ನೋಡು

ಪ್ರೀತಿಯೇ ದೇವನು ನೀಡಿದ ಕೊಡುಗೆ ಪ್ರೀತಿಯೇ ಆಗಲಿ ಮನಸಿನ ಉಡುಗೆ
ಪ್ರೀತಿಯೇ ಒಂದು ಪಾವನ ಜ್ಯೋತಿ
ಪ್ರೀತಿಯೇ ಒಂದು ಪಾವನ ಜ್ಯೋತಿ ಪ್ರೀತಿಯ ಬಾಳಿಗೆ ಪ್ರೀತಿಯೇ ನೀತಿ

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

ತಾಯಿಯ ಮಡಿಲಲಿ ಪ್ರೀತಿಯ ಬೆಸುಗೆ ಹರೆಯದ ವಯಸಲಿ ಪ್ರೀತಿಯ ಒಸಗೆ
ಪ್ರೀತಿಯ ಭಾವದ ಆಳ ಅಪಾರ
ಪ್ರೀತಿಯ ಭಾವದ ಆಳ ಅಪಾರ ಪ್ರೀತಿಯೇ ಬಾಳಿಗೆ ಅಮೃತಧಾರ

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

ಪ್ರೀತಿಸಿ ನೋಡು ಪ್ರೀತಿಸಿ ನೋಡು
ಪ್ರೀತಿಸಿ ನೋಡು ಪ್ರೀತಿಸಿ ನೋಡು

ಪ್ರೀತಿಯೇ ಲೋಕಕೆ ಆಸೆಯ ಹೊನಲು ಪ್ರೀತಿಯು ಇದ್ದರೆ ದಿನ ಹೊಸ ಹಗಲು
ಮನಸಿನ ಭಾವಕೆ ಪ್ರೀತಿಯೇ ಚಿಲುಮೆ
ಮನಸಿನ ಭಾವಕೆ ಪ್ರೀತಿಯೇ ಚಿಲುಮೆ ಸನಿಹಕೆ ತರುವುದೆ ಪ್ರೀತಿಯ ಹಿರಿಮೆ

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

Tuesday, January 25, 2011

ಅನುರಾಗ ಮೂಡಿದಾಗ



ಚಿತ್ರ : ಕುಂಕುಮ ತಂದ ಸೌಭಾಗ್ಯ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಎಂ. ರಂಗರಾವ್
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ
ವರ್ಷ: ೧೯೮೫

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ ಸಂಗಾತಿ ಕೇಳು

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ ಸಂಗಾತಿ ಕೇಳು

ನಗುತಿರು ನಗುತಿರು ಎಂದೂ ಹೀಗೆ ಚೆಲುವೆ
ನಗುತಿರು ನಗುತಿರು ಎಂದೂ ಹೀಗೆ ಚೆಲುವೆ
ಪ್ರಣಯ ಗೀತೆ ತಂದ ನಿನಗೆ ನಾನು ತಂದ ಪ್ರೀತಿಗೆ
ಕಂಡೆ ನೀನು ತಂದ ಕಾಣಿಕೆ
ಬದುಕೆಲ್ಲ ಹೀಗೆ ಸಂತೋಷದಿಂದ ಬಾಳೋ ಆಸೆ ತಂದೆ ನನಗೆ

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ

ಮಗುವಿನ ನಗುಮೊಗ ಹೀಗೇ ನೋಡುತಿರಲು
ಮಗುವಿನ ನಗುಮೊಗ ಹೀಗೇ ನೋಡುತಿರಲು
ನನ್ನನ್ನು ನಾನು ಮರೆವೆ ಈ ಲೋಕವನ್ನೇ ಮರೆವೆ ಆ ಕ್ಷಣ
ಪಾವನವಾಯ್ತು ನನ್ನ ಜೀವನ
ಪ್ರತಿ ವರುಷ ಹೀಗೆ ಹೊಸದೊಂದು ಮಗುವ ಕೊಡೋ ಆಸೆ ಬಂತು ನನಗೆ

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ ಸಂಗಾತಿ ಕೇಳು

Monday, January 24, 2011

ಚೆಲುವೆಯ ಅಂದದ ಮೊಗಕೆ



ಚಿತ್ರ: ದೇವರಗುಡಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೫

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ
ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ
ಸುಖಸಂಸಾರಕೆ ಎಂದೂ ಸತಿಯೇ ಕಾರಣ

ಬಾನಿಗೆ ಎಂದೆಂದಿಗೂ ಆ ರವಿಯೇ ಭೂಷಣ
ಬಳುಕುವಾ ಲತೆಗೆ ಹೆಣ್ಣಿನಾ ಮುಡಿಗೆ ಹೂವೇ ಭೂಷಣ
ರಜನಿಗೆ ಎಂದೆಂದಿಗೂ ಆ ಶಶಿಯೇ ಭೂಷಣ
ಅರಳಿದಾ ಮನಕೆ ಹವಳದಾ ತುಟಿಗೆ ನಗುವೇ ಭೂಷಣ
ನೋವಿಗೆ...ನಲಿವಿಗೆ...
ನೋವಿಗೆ...ನಲಿವಿಗೆ....ಹೆಣ್ಣೇ ಕಾರಣ....

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ
ಸುಖಸಂಸಾರಕೆ ಎಂದೂ ಸತಿಯೇ ಕಾರಣ

ಮದುವೆಯ ಅನುಬಂಧವು ಎಂದೂ ಅಳಿಯದು
ಕೋಪದಾ ಕಿಡಿಗೆ ರೋಷದಾ ಉರಿಗೆ ಒಲವು ಬಾಡದು
ದೇಹವು ದೂರಾದರೂ ಮನಸೂ ಮರೆಯದು
ಬೆರೆತಿಹಾ ಜೀವ ವಿರಹದಾ ನೋವ ಎಂದೂ ಸಹಿಸದು
ಒಲವಿನ... ಜೀವನ...
ಒಲವಿನ... ಜೀವನ...ಸುಖಕೆ ಸಾಧನ

ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ
ನಲಿಯುತ ಬಾಳುವ ಮನೆಗೆ ಹೆಣ್ಣೇ ಭೂಷಣ
ಸುಖಸಂಸಾರಕೆ ಎಂದೂ ಸತಿಯೇ ಕಾರಣ

Wednesday, January 19, 2011

ಒಲವಿನ ಗೆಳೆಯನೆ ನಿನಗೆ



ಚಿತ್ರ: ನಾನಿರುವುದೆ ನಿನಗಾಗಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಜಾನಕಿ
ವರ್ಷ: ೧೯೭೯

ನಲ್ಲ ಎನ್ನಲೆ ನಿನ್ನ… ಇನಿಯ ಎಂದು ಕೂಗಲೆ ನಿನ್ನ…
ನನ್ನೆದೆಯಾಳದಲಿ… ನೆಲೆಸಿರುವ ದೇವನೆ ನಿನ್ನ…
ಏನೆಂದು ಕರೆಯಲಿ… ಏನೆಂದು ಬರೆಯಲಿ…
ಗೆಳೆಯ ಪ್ರಿಯ ಗೆಳೆಯ
ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ
ನನಗಾಗಿ ನೀನಿರುವೆ ನಿನಗಾಗಿ ನಾ ಬಾಳುವೆ
ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ

ನಿನ್ನ ಮನಸು ಬಲ್ಲೆನು ನಾನು
ನಿನ್ನಾಸೆ ಬಲ್ಲೆನು ನಾನು
ಹೂವಂಥ  ಹೃದಯವು ನಿನ್ನದು ಅಂಥ
ಜೇನಂಥ ನುಡಿಗಳು ನಿನ್ನದು
ನಿನ್ನ ನೆರಳಿನಾಸರೆಯಲ್ಲಿ ಸಂತೋಷದರಮನೆಯಲ್ಲಿ
ಹಾಯಾಗಿ ಬಾಳುವ ಕನಸು ನೂರಾರು ಕಂಡಿತು ಮನಸು
ಏನೇನೊ ಕೇಳಿದೆನು ಏನೇನೊ ಬೇಡಿದೆನು
ಕೊನೆಗೇನೂ ಕಾಣೆನು
ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ

ನೀ ನಡೆವ ಹಾದಿಯೆ ಬೇರೆ
ನನ್ನ ಬಾಳ ದಾರಿಯೆ ಬೇರೆ
ಒಂದಾಗಿ ಸೇರೆವು ನಾವು
ಗತಿ ಒಂದೇ ಸಂಕಟ ನೋವು
ನನ್ನ ಮನದ ಮಾತುಗಳನ್ನು ಕಣ್ಣೀರ ಹನಿಗಳು ಬರೆದು
ನಿನಗಾಗಿ ಕಳಿಸಿದೆ ಇಂದು ನನ್ನೆದೆಗೆ ವೇದನೆ ತಂದು
ನೀ ನನ್ನ ದೂರದಿರು ಏನನ್ನು ಹೇಳದಿರು ನಾ ದೂರವಾದರೂ
ಒಲವಿನ ಗೆಳೆಯನೆ ನೀನೇ ನನ್ನ ಜೀವ ನನ್ನ ದೈವ
ನಿನ್ನ ಸುಖವೇ ನನ್ನ ಸುಖವು ನಿನಗೆಂದೂ ಶುಭ ಕೋರುವೆ
ಒಲವಿನ ಗೆಳೆಯನೆ ನೀನೇ ನನ್ನ ಜೀವ ನನ್ನ ದೈವ
ನನ್ನ ಜೀವ ನನ್ನ ದೈವ

Thursday, January 6, 2011

ನೀರ ಬಿಟ್ಟು ನೆಲದ ಮೇಲೆ



ಚಿತ್ರ: ಹೊಂಬಿಸಿಲು
ಸಾಹಿತ್ಯ: ಗೀತಪ್ರಿಯ
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೮

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ
ಜೀವನ ಸಾಗದು ಜೀವನ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದು
ಸೂರ್ಯ ಬರದೆ ಕಮಲವೆಂದು ಅರಳದು
ಚಂದ್ರನಿರದೆ ತಾರೆ ಎಂದು ನಲಿಯದು
ಒಲವು ಮೂಡದಿರಲು ಮನವು ಅರಳದು
ಮನವು ಅರಳದಿರಲು ಗೆಲುವು ಕಾಣದು
ಮನವು ಅರಳದಿರಲು ಗೆಲುವು ಕಾಣದು

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ
ಜೀವನ ಸಾಗದು ಜೀವನ ಸಾಗದು
ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು

ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಲೋಕದಲ್ಲಿ ಗಂಡು ಹೆಣ್ಣಿಗಾಸರೆ
ಆದರಿಲ್ಲಿ ನಾನು ನಿನ್ನ ಕೈಸೆರೆ
ಕೂಡಿ ನಲಿವ ಆಸೆ ಮನದಿ ಆಗಿರೆ
ಹಿತವು ಎಲ್ಲಿ ನಾವು ಬೇರೆ ಆದರೆ
ಹಿತವು ಎಲ್ಲಿ ನಾವು ಬೇರೆ ಆದರೆ

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು
ನೆಲವ ಬಿಟ್ಟು ನೀರ ಮೇಲೆ ಬಂಡಿ ಹೋಗದು
ನಿನ್ನ ಬಿಟ್ಟು ನನ್ನ ನನ್ನ ಬಿಟ್ಟು ನಿನ್ನ
ಜೀವನ ಸಾಗದು

Wednesday, January 5, 2011

ಬಂಗಾರದ ಬೊಂಬೆಯೇ

ಚಿತ್ರ: ಮೂಗನ ಸೇಡು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸತ್ಯಂ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೦

ಬಂಗಾರದ ಬೊಂಬೆಯೇ ಮಾತನಾಡೇ
ಬಂಗಾರದ ಬೊಂಬೆಯೇ ಮಾತನಾಡೇ
ಸಿಂಗಾರಿಯ ಬಾಳು ಬೆಳದಿಂಗಳಾಯಿತು

ಬಂಗಾರದ ಕೋಗಿಲೆ ನನ್ನ ಕಂಡು
ಬಂಗಾರದ ಕೋಗಿಲೆ ನನ್ನ ಕಂಡು
ಸಂಗಾತಿಯೆಂದಾಗ ಭೂವಿ ಸ್ವರ್ಗವಾಯಿತು
ಬಂಗಾರದ ಕೋಗಿಲೆ...

ಕವಿಯಂತೆ ನೀನಂದ  ಸವಿಯಾದ ಮಾತಿಂದ
ಹೊಸದಾದ ಆನಂದ ನಾ ಕಂಡೆನು
ಕಣ್ಣಲಿ ನಿನ್ನಂದ ತುಂಬಿ ನನ್ನಿಂದ
ಕಣ್ಣಲಿ ನಿನ್ನಂದ ತುಂಬಿ ನನ್ನಿಂದ
ನುಡಿಸಲು ನಾನಿಂದು ಕವಿಯಾದೆನು
ಬಂಗಾರದ ಬೊಂಬೆಯೇ

ಜೊತೆಯಾಗಿ ನಡೆದಾಗ ಹಿತವಾಗಿ ಸೆಳೆದಾಗ
ಅನುರಾಗ ಹೊಸ ರಾಗ ಕೇಳೆಂದಿತು
ಕಲ್ಲಿನ ವೀಣೆಯ ನುಡಿಸೋ ಜಾಣ್ಮೆಯ
ಕಲ್ಲಿನ ವೀಣೆಯ ನುಡಿಸೋ ಜಾಣ್ಮೆಯ
ಕಾಣಲು ನಿನ್ನಲ್ಲಿ ಮನ ಸೋತಿತು

ಬಂಗಾರದ ಕೋಗಿಲೆ ನನ್ನ ಕಂಡು
ಸಂಗಾತಿಯೆಂದಾಗ ಭೂವಿ ಸ್ವರ್ಗವಾಯಿತು

Tuesday, January 4, 2011

ಹೂವೊಂದು ಬೇಕು ಬಳ್ಳಿಗೆ



ಚಿತ್ರ: ಪಾವನ ಗಂಗ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಜಾನಕಿ
ವರ್ಷ:  ೧೯೭೭

ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ
ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ
ಕಂದನಾ ಸಂತೋಷವೇ ತಾಯಿಯ ಸೌಭಾಗ್ಯಾವು
ಬಾಳಿನ ಆನಂದವು
ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ

ಬಿಸಿಲಿಗೆ ನೆರಳಿನಂತೆ ಇರುಳಿಗೆ ಬೆಳಕಿನಂತೆ
ಬಾಳಿಗೆ ಕಂಗಳಂತೆ ಮಗುವಿನ ಪ್ರೀತಿಯಂತೆ
ಕಂದನ ತೊದಲು ನುಡಿ ಜೇನಿನ ಹನಿಗಳಂತೆ
ಕೋಪದಿ ಅಳುವಾಗ ಜೋಗುಳ ಹಾಡಿದಂತೆ
ಸರಸವೆ ದಿನಾ ಅನುದಿನ ಹೊಸತನ ಹೊಸತನ

ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ

ಒಣಗಿದ ರಂಬೆಯಲಿ ಹಸುರೆಲೆ ಮೂಡುವುದೇ
ಸೊರಗಿದ ಹರೈದಯದಲಿ ಸಂತಸ ಕಾಣುವುದೇ
ಮೂಡಿದ ಬಯಕೆಗಳು ಮುಗಿಯಲು ಕನಸಿನೊಳು
ಆಸೆಯು ಚಿಗುರುವುದೇ ಹರುಷವು ಉಳಿಯುವುದೇ
ಬಳಲಿದೆ ಮನ ಅನುದಿನ ಅನುಕ್ಷಣಾ ಅನುಕ್ಷಣಾ

ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ
ಕಂದನಾ ಸಂತೋಷವೇ ತಾಯಿಯ ಸೌಭಾಗ್ಯಾವು
ಬಾಳಿನ ಆನಂದವು

ಮಾಮರವೆಲ್ಲೋ ಕೋಗಿಲೆ ಎಲ್ಲೋ



ಚಿತ್ರ: ದೇವರಗುಡಿ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೫

ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ

ಮಾಮರವೆಲ್ಲೋ ಕೋಗಿಲೆ ಎಲ್ಲೋ
ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ

ಸೂರ್ಯನು ಎಲ್ಲೋ ತಾವರೆ ಎಲ್ಲೋ
ಕಾಣಲು ಕಾತರ ಕಾರಣವೇನೋ
ಚಂದಿರನೆಲ್ಲೋ ನೈದಿಲೆ ಎಲ್ಲೋ
ನೋಡಲು ಅರಳುವ ಸಡಗರವೇನೋ
ಎಲ್ಲೇ ಇರಲೀ ಹೇಗೇ ಇರಲೀ
ಕಾಣುವ ಆಸೆ ಏತಕೋ ಏನೋ

ಮಾಮರವೆಲ್ಲೋ ಕೋಗಿಲೆ ಎಲ್ಲೋ
ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ

ಹುಣ್ಣಿಮೆಯಲ್ಲಿ ತಣ್ಣನೆ ಗಾಳಿ
ಬೀಸಲು ನಿನ್ನ ನೆನಪಾಗುವುದು
ದಿನ ರಾತ್ರಿಯಲಿ ಏಕಾಂತದಲೀ
ಏಕೋ ಏನೋ ನೋವಾಗುವುದು
ಬಯಕೆಯು ತುಂಬಿ ಆಸೆಯ ದುಂಬಿ
ಎದೆಯನು ಕೊರೆದೂ ಕಾಡುವುದೇನೋ

ಮಾಮರವೆಲ್ಲೋ ಕೋಗಿಲೆ ಎಲ್ಲೋ
ಮಾಮರವೆಲ್ಲೋ ಕೋಗಿಲೆ ಎಲ್ಲೋ
ಏನೀ ಸ್ನೇಹ ಸಂಬಂಧ
ಏನೀ ಸ್ನೇಹ ಸಂಬಂಧ
ಎಲ್ಲಿಯದೋ ಈ ಅನುಬಂಧ