Monday, June 6, 2011

ಅರಳಿದೆ ತನು ಮನ ನೋಡುತ ನಿನ್ನ



ಚಿತ್ರ: ಅಪೂರ್ವ ಸಂಗಮ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯಕರು: ಡಾ|| ರಾಜ್ ಕುಮಾರ್, ಎಸ್.ಜಾನಕಿ
ವರ್ಷ: ೧೯೮೪

ಅರಳಿದೆ ತನು ಮನ ನೋಡುತ ನಿನ್ನ
ಹೊಸತನ ನನ್ನಲ್ಲಿಯೇ ಕಂಡೆನು ನಾ
ಅರಳಿದೆ ತನು ಮನ ನೋಡುತ ನಿನ್ನ
ಹೊಸತನ ನನ್ನಲ್ಲಿಯೇ ಕಂಡೆನು ನಾ
ಅರಳಿದೆ ತನು ಮನ ನೋಡುತ ನಿನ್ನ

ಚಲಿಸುವ ತಂಗಾಳಿಯು ಚೆಲುವೆ ನಿನ್ನ ನೋಡಿ
ನಲಿಯುತ ಓಡಿದೆ ಮುಂಗುರುಳ ಹಿಡಿದು ಆಡಿ
ಅರಳಿದ ಗುಲಾಬಿಯು ಸೋಕಿ ಪರಿಮಳ ಹೀರಿ
ಸರಸಕೆ ಬಂದಿದೆ ಈ ನಿನ್ನ ಅಂದ ನೋಡಿ
ಸುಖ ತರುತಿದೆ ಹಿತ ಕರೆದಿದೆ ಚಲುವ
ಅರಳಿದೆ ತನು ಮನ ನೋಡುತ ನಿನ್ನ

ಎದೆಯಲಿ ಹೊಮ್ಮಿ ಹೊಮ್ಮಿ ನೂರು ಬಯಕೆ ಈಗ
ಕೆಣಕಲು ಸೋತೆನು ನನ್ನಿನಿಯ ನಿನ್ನ ನೋಡಿ
ಪ್ರಣಯದ ಸಂಗೀತದ ಇಂಪು ಕಿವಿಯ ತುಂಬಿ
ಕನಸನು ಕಂಡೆನು ಸಂಗಾತಿಯೇ ನಿನ್ನ ಸೇರಿ
ಇನ್ನು ಬಿಡುವೆನೇ ನನ್ನೇ ಕೊಡುವೆ ನಾ ಚೆಲುವೆ

ಅರಳಿದೆ ತನು ಮನ ನೋಡುತ ನಿನ್ನ
ಹೊಸತನ ನನ್ನಲ್ಲಿಯೇ ಕಂಡೆನು ನಾ

ಕನ್ನಡ ನಾಡಿನ ವೀರರಮಣಿಯ



ಚಿತ್ರ: ನಾಗರಹಾವು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯಕರು: ಪಿ. ಬಿ. ಶ್ರೀನಿವಾಸ್
ವರ್ಷ: ೧೯೭೨

ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿದ ಸಿರಿನಾಡು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ವೀರಮದಕರಿ ಆಳುತಲಿರಲು ಹೈದಾರಾಲಿಯು ಯುಧ್ಧಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು ಸತತ ಧಾಳಿಯು ವ್ಯರ್ಥವಾಗಲು
ವ್ಯೆರಿ ಚಿಂತೆಯಲಿ ಬಸವಳಿದ ದಾರಿಗಾಣದೆ ಮಂಕಾದ
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಗೂಢಚಾರರು ಅಲೆದು ಬಂದರು ಹೈದಾರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಸುತ್ತ ಮುತ್ತಲು ಕಪ್ಪು ಕತ್ತಲೆಯು ಮುತ್ತಿರಲು
ವೀರ ಕಾವಲುಗಾರ ಭೋಜನಕ್ಕೆ ನೆಡೆದಿರಲು
ಸಿಹಿನೀರ ತರಲೆಂದು ಅವನ ಸತಿ ಬಂದಿರಲು ಕಳ್ಳಗಂಡಿಯ ಹಿಂದೆ ಪಿಸುಮಾತ ಕೇಳಿದಳು
ಆಲಿಸಿದಳು ಇಣುಕಿದಳು ವೈರಿ ಪಡೆ ಕೋಟೆಯತ್ತ ಬರುವುದನ್ನು ಕಂಡಳು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿಯ ಸಿರಿನಾಡು
ಅಮರಳಾದಳು ಓಬವ್ವ ಅಮರಳಾದಳು ಓಬವ್ವ

ಚಂದಿರ ತಂದ ಹುಣ್ಣಿಮೆ ರಾತ್ರಿ



ಚಿತ್ರ: ಚಲಿಸುವ ಮೋಡಗಳು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯಕರು : ಡಾ|| ರಾಜ್ ಕುಮಾರ್, ಎಸ್. ಜಾನಕಿ
ವರ್ಷ: ೧೯೮೨

ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಆ ದಿಂಬು ಹಾಸಿಗೆ ನನ್ನ ನೂಕಿತು
ಈ ನನ್ನ ನಲ್ಲನ ತೂಗೆಂದಿತು
ಆ ದಿಂಬು ಹಾಸಿಗೆ ನನ್ನ ನೂಕಿತು ಈ ನನ್ನ ನಲ್ಲನ ತೂಗೆಂದಿತು
ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಈ‌ ನನ್ನ ಮಂಚವು ಮಾತಾಡಿತು
ನಿನ್ನನ್ನು ಆಚೆಗೆ ನೂಕೆಂದಿತು
ಈ‌ ನನ್ನ ಮಂಚವು ಮಾತಾಡಿತು ನಿನ್ನನ್ನು ಆಚೆಗೆ ನೂಕೆಂದಿತು

ಏನು ತೊಂದರೆ ಅಲ್ಲಿ ಬಂದರೆ ಸೇವೆ ಮಾಡುವೆನು
ಹೂವನು ಹಾಸಿ ನಿಮ್ಮ ಮಲಗಿಸಿ ಲಾಲಿ ಹಾಡುವೆನು
ಮೈಯ್ಯ ಮುಟ್ಟದೆ ಕೈಯ ಎಳೆಯದೆ ದೂರ ನಿಲ್ಲುವೆಯ
ನನ್ನ ನೆಮ್ಮದಿ ಹಾಳು ಮಾಡದೆ ಹೊರಗೆ ಹೋಗುವೆಯ
ಭಾರಿ ಬ್ರಹ್ಮಚಾರಿ ನೀನು ಬಲ್ಲೆ ಎಲ್ಲ ಹೆಣ್ಣೇ ನಿನ್ನ ಆರೋಗ್ಯ ಸರಿಯಾಗಿಲ್ಲ
ಪ್ರೀತಿಯೆಂದರೆ ಗೊತ್ತೆ ಇಲ್ಲ ನನಗೆ ಪ್ರೀತಿಯೆ ಬೇಕಾಗಿಲ್ಲ
ಬೇಡವೆಂದರು ನಾ ಬಿಡುವುದಿಲ್ಲ

ಅಯ್ಯೊ .. ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಈ‌ ನನ್ನ ಮಂಚವು ಮಾತಾಡಿತು
ನಿನ್ನನ್ನು ಆಚೆಗೆ ನೂಕೆಂದಿತು
ಆ ದಿಂಬು ಹಾಸಿಗೆ ನನ್ನ ನೂಕಿತು ಈ ನನ್ನ ನಲ್ಲನ ತೂಗೆಂದಿತು

ಅತ್ತೆ ಕಂಡರೆ ಮಾವ ಬಂದರೆ ಮಾನ ಹೋಗುವುದು
ಅಪ್ಪನು ರೇಗಿ ಗದರಿಸಿದಾಗ ಎನು ಹೇಳುವುದು
ಏಕೆ ಹೆದರುವೆ ಕದವ ಹಾಕುವೆ ಏನೂ ಕೇಳಿಸದು
ಸದ್ದು ಮಾಡದೆ ದೀಪ ಆರಿಸು ಏನೂ ಕಾಣಿಸದು
ಅಯ್ಯೋ ನಿನ್ನಾ ನಿನ್ನ ಹೆಣ್ಣು ಆಂದೋರಿಗೆ ಬುದ್ಧಿ ಇಲ್ಲ ಏನೇ ಹೇಳು ನಿನ್ನ ಬಿಟ್ಟು ಬಾಳೋದಿಲ್ಲ
ಕೋಪ ಬಂದರೆ ಸುಮ್ಮನಿರಲ್ಲ ಆಗಲೇ ನೀನು ಚೆನ್ನ ನಲ್ಲ
ಅಯ್ಯೋ ಎನು ಮಾಡಲಿ ಆ ದೇವರೆ ಬಲ್ಲ

ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಆ ದಿಂಬು ಹಾಸಿಗೆ ನನ್ನ ನೂಕಿತು
ಈ ನನ್ನ ನಲ್ಲನ ತೂಗೆಂದಿತು
ಈ‌ ನನ್ನ ಮಂಚವು ಎನೆಂದಿತು ನಿನ್ನನ್ನು ಆಚೆಗೆ ನೂಕೆಂದಿತು

ಸಂತೋಷ ಅಹಾ ಅಹಾ ಸಂಗೀತ ಓಹೋ ಓಹೋ

ಚಿತ್ರ: ಎಡಕಲ್ಲು ಗುಡ್ಡದ ಮೇಲೆ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಪಿ. ಸುಶೀಲ
ವರ್ಷ: ೧೯೭೩

ಸಂತೋಷ ಅಹಾ ಅಹಾ ಸಂಗೀತ ಓಹೋ ಓಹೋ
ರಸಮಯ ಸಂತೋಷ, ಸುಖಮಯ ಸಂಗೀತ
ಹೊಸ ಹೊಸ ಭಾವತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ

ಏಳು ಸ್ವರಗಳ ಭಾವಗೀತೆಯ ಸಂಗೀತ ಏಳು ಬಣ್ಣದ ಭೂಮಿ ರಮಣಿಗೆ ಸಂತೋಷ
ರಾಗ ಸಂಗೀತ ಗೆಲುವಿನ ಯೋಗ ಸಂತೋಷ
ರಾಗ ಸಂಗೀತ ಗೆಲುವಿನ ಯೋಗ ಸಂತೋಷ
ಹಾದಿಗೆಲ್ಲಾ ಹೂವು ಚೆಲ್ಲಿ
ಹಾದಿಗೆಲ್ಲಾ ಹೂವು ಚೆಲ್ಲಿ ಓಡಿ ಓಡಿ ಸಾಗುವಲ್ಲಿ ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ

ಸಂತೋಷ ಅಹಾ ಅಹಾ ಸಂಗೀತ ಹೆಹೇ ಹೆಹೇ
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ

ಜುಳು ಜುಳು ಹರಿಯುವ ನೀರಿನ ಅಲೆಗಳ ಸಂಗೀತ ಸುಯ್ ಸುಯ್ ಎನ್ನುತ ಬೀಸುವ ಗಾಳಿಗೆ ಸಂತೋಷ
ಸ್ವರ್ಗ ಸಂಗೀತ ನಿಸರ್ಗ ಸಂತೋಷ
ಸ್ವರ್ಗ ಸಂಗೀತ ನಿಸರ್ಗ ಸಂತೋಷ
ಸನ್ನೆ ಮಾಡಿ ಕೈಯಾ ಬೀಸಿ
ಸನ್ನೆ ಮಾಡಿ ಕೈಯಾಬೀಸಿ ಗುಟ್ಟು ಹೇಳಿ ಬೆಟ್ಟ ಸಾಲು ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ.

ಕದ್ದು ಹಾಡುವ ಕೋಗಿಲೆ ಕೊರಳಿನ ಸಂಗೀತ ಮುದ್ದು ಜಿಂಕೆಗೆ ಜಿಗಿದು ನೆಗೆಯುವ ಸಂತೋಷ
ನಾದ ಸಂಗೀತ ಉನ್ಮಾದ ಸಂತೋಷ
ನಾದ ಸಂಗೀತ ಉನ್ಮಾದ ಸಂತೋಷ
ಉಬ್ಬಿ ಹಬ್ಬಿ ಬಾಚಿ ತಬ್ಬಿ
ಉಬ್ಬಿ ಹಬ್ಬಿ ಬಾಚಿ ತಬ್ಬಿ ನಾಚಿ ನಿಂತ ಹೂವು ಬಳ್ಳಿ ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ

Friday, June 3, 2011

ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ

ಚಿತ್ರ: ಬೆಂಕಿಯ ಬಲೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೩

ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ

ಹರುಷ ಹರುಷ ಎಲ್ಲೆಲ್ಲೂ ಜೊತೆಗೆ ನೀನಿರೆ
ಸರಸ ಸರಸ ಬಾಳೆಲ್ಲ ಸನಿಹ ನೀನಿರೆ
ನಿನ್ನ ಮಾತಿಗೆ ನಿನ್ನ ಪ್ರೇಮಕೆ ನಾ ಸೋತು ಹೋದೆನು
ನಿನ್ನ ಸ್ನೇಹಕೆ ನಿನ್ನ ಪ್ರೀತಿಗೆ ಮಂಕಾಗಿ ಹೋದೆನು
ನನ್ನನ್ನೇ ಮರೆತೆನು

ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ

ಚೆಲುವ ನಿನ್ನ ನುಡಿ ಕೇಳಿ ಗಿಳಿಯು ನಾಚಿತು
ಚೆಲುವೆ ನಿನ್ನ ನಡೆ ನೋಡಿ ನವಿಲು ಕುಣಿಯಿತು
ನಗುನಗುತ ನೀ ಬರಲು ಹೊಸ ಆಸೆ ಚಿಮ್ಮಿತು
ನಿನ್ನ ಕಣ್ಣ ಮಿಂಚು ಮೂಡಲು ಮನವೇಕೋ ಬೆಚ್ಚಿತು
ಜಗವನ್ನೇ ಮರೆಸಿತು

ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ನಿನ್ನ ನುಡಿಯು ಹಾಡಂತೆ

ಹೇ...ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ

ಚಿತ್ರ: ಒಲವು ಗೆಲವು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಎಸ್. ಜಾನಕಿ
ವರ್ಷ: ೧೯೭೭

ಹೇ...ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ
ಹೇ...ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ

ಏಕೋ ಏನೋ ಕಾಣೆ ನಾನು ಎದುರಲಿ ನೀನಿರಲು
ಮನದಲಿ ಸ೦ತೋಷದ ಹೊನಲು ಹರಿಯಲು
ಏಕೋ ಏನೋ ಕಾಣೆ ನಾನು ಎದುರಲಿ ನೀನಿರಲು
ಮನದಲಿ ಸ೦ತೋಷದ ಹೊನಲು ಹರಿಯಲು
ಕಾಣುತ ನಿನ್ನ೦ದ ಕಾಣದ ಆನ೦ದ
ಹೊಸ ಹೊಸ ಬಯಕೆಯು ನಿನ್ನಿ೦ದ

ಹೇ...ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ

ತಾಳು ತಾಳು ನಲ್ಲ ನಿಲ್ಲು ತಾಳು ತಾಳು ನಲ್ಲ ನಾನು
ಬರುವೆನು ನಿನ್ನೊಡನೆ ಕಾಡುವೆ ನನ್ನೇಕೆ ಹೀಗೆ ಸುಮ್ಮನೆ

ತಾಳು ತಾಳು ನಲ್ಲ ನಾನು
ಬರುವೆನು ನಿನ್ನೊಡನೆ ಕಾಡುವೆ ನನ್ನೇಕೆ ಹೀಗೆ ಸುಮ್ಮನೆ

ಕಾಣದೆ ನಿನ್ನನ್ನು ಬಾಳೆನು ನಾನಿನ್ನು
ತಾಳೆನು ವಿರಹದ ನೋವನ್ನು

ಹೇ...ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ
ದನಿಯಲಿ ವಿನೂತನ ಜೀವ ಭಾವ ನೀ ತ೦ದೆ

Thursday, June 2, 2011

ಭಾವವೆಂಬ ಹೂವು ಅರಳಿ

ಚಿತ್ರ: ಉಪಾಸನೆ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ವಿಜಯಭಾಸ್ಕರ್
ಗಾಯನ : ವಾಣಿ ಜಯರಾಂ
ವರ್ಷ: ೧೯೭೪

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ
ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ
ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ಸ.ಗ.ಮ.ದ.ಗಾ.ಮಾ.ದ ಸ.ಮ.ದ.ನಿ.ಸಾ.ದ.ನಿ

ಗಾನಕೆ ನಲಿಯದ ಮನಸೇ ಇಲ್ಲ ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ನಲಿಯದ ಮನಸೇ ಇಲ್ಲ ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ಒಲಿಯದ ದೇವರೆ ಇಲ್ಲ ಗಾನವೆ ತುಂಬಿದೆ ಈ ಜಗವೆಲ್ಲಾ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ದಾಸರು ಹರಿಯ ಸ್ಮರಣೆಯ ಮಾಡಿ ದರುಶನ ಪಡೆದರು ಅನುದಿನ ಪಾಡಿ
ದಾಸರು ಹರಿಯ ಸ್ಮರಣೆಯ ಮಾಡಿ ದರುಶನ ಪಡೆದರು ಅನುದಿನ ಪಾಡಿ
ಶರಣರು ಹರನ ನೆನೆಯುತ ಬೇಡಿ ಶಿವನಾ ಕಂಡರು ವಚನವ ಹಾಡಿ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ವಿಶ್ವವೆ ಅರಳಿತು ಓಂಕಾರದಲಿ ವಾಣಿಯ ವೀಣೆಯ ಝೆಂಕಾರದಲಿ
ವಿಶ್ವವೆ ಅರಳಿತು ಓಂಕಾರದಲಿ ವಾಣಿಯ ವೀಣೆಯ ಝೆಂಕಾರದಲಿ
ಕುಣಿಯಿತು ನಾರದನ ಗಾನದಲ್ಲಿ ತಣಿಯಿತು ಕೃಷ್ಣನ ಮುರಳಿಯಲಿ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ
ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ

ಬರೆದೆ ನೀನು ನಿನ್ನ ಹೆಸರ

ಚಿತ್ರ: ಸೀತಾ
ಸಾಹಿತ್ಯ : ಅರ್. ಎನ್. ಜಯಗೋಪಾಲ್
ಸಂಗೀತ : ವಿಜಯಭಾಸ್ಕರ್
ಗಾಯಕರು : ಪಿ.ಬಿ. ಶ್ರೀನಿವಾಸ್
ವರ್ಷ: ೧೯೭೦

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೆ ಅಳಿಸಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ

ಮಿಡಿದೆ ನೀನು ಪ್ರಣಯನಾದ ಹೃದಯ ವೀಣೆ ಅದರಲಿ
ಮಿಡಿದೆ ನೀನು ಪ್ರಣಯನಾದ ಹೃದಯ ವೀಣೆ ಅದರಲಿ
ಮಿಡಿದ ಹಾಡು ಮುಗಿವ ಮುನ್ನ ಎಲ್ಲಿ ಹೋದೆ ಮರೆಯಲಿ

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ

ಅಂದು ನನ್ನ ತೇಲಿಸಿದೆ ನಿನ್ನ ಮಾತ ಹೊನಲಲಿ
ಅಂದು ನನ್ನ ತೇಲಿಸಿದೆ ನಿನ್ನ ಮಾತ ಹೊನಲಲಿ
ಇಂದು ನನ್ನ ಮುಳುಗಿಸಿದೆ ಕಣ್ಣ ನೀರ ಹೊಳೆಯಲಿ

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೆ ಅಳಿಸಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ

ಈ ಗುಲಾಬಿಯು ನಿನಗಾಗಿ

ಚಿತ್ರ: ಮುಳ್ಳಿನ ಗುಲಾಬಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸತ್ಯಂ
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೨

ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ನಿನಗಾಗಿ ಕೇಳೇ ಓ ರತೀ
ನಿನಗಾಗಿ ಕೇಳೇ ಓ ರತೀ

ನನ್ನೀ ಕಣ್ಣಲಿ ಕಾತರವೇನು ನಿನ್ನನು ಕಾಣುವ ಆತುರವೇನು
ನನ್ನೀ ಕಣ್ಣಲಿ ಕಾತರವೇನು ನಿನ್ನನು ಕಾಣುವ ಆತುರವೇನು
ಆತುರ ತರುವ ವೇದನೆ ಏನು
ಆತುರ ತರುವ ವೇದನೆ ಏನು ಜೀವದ ಜೀವವು ಪ್ರಿಯತಮೆ ನೀನು

ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ನಿನಗಾಗಿ ಕೇಳೇ ಓ ರತೀ
ನಿನಗಾಗಿ ಕೇಳೇ ಓ ರತೀ

ನೀರನು ತೊರೆದರೆ ಕಮಲಕೆ ಸಾವು ಹೂವನು ಮರೆತರೆ ದುಂಬಿಗೆ ಸಾವು
ನೀರನು ತೊರೆದರೆ ಕಮಲಕೆ ಸಾವು ಹೂವನು ಮರೆತರೆ ದುಂಬಿಗೆ ಸಾವು
ಕಾಣದೆ ಹೋದರೆ ಅರೆಕ್ಷಣ ನಿನ್ನ
ಕಾಣದೆ ಹೋದರೆ ಅರೆಕ್ಷಣ ನಿನ್ನ ಮರುಕ್ಷಣ ಪ್ರಿಯತಮೆ ನನ್ನ ಸಾವು

ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ನಿನಗಾಗಿ ಕೇಳೇ ಓ ರತೀ
ನಿನಗಾಗಿ ಕೇಳೇ ಓ ರತೀ

ಎಂಥ ಮರುಳಯ್ಯಾ ಇದು ಎಂಥಾ ಮರುಳು

ಚಿತ್ರ: ಸ್ಪಂದನ
ಸಾಹಿತ್ಯ: ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಸಂಗೀತ: ಅಶ್ವಥ್-ವೈದಿ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೮

ಎಂಥ ಮರುಳಯ್ಯಾ ಇದು ಎಂಥಾ ಮರುಳು
ಬೆಳಗಿನ ಹಿಮದಂತೆ ಹರಿವಾ ನೆರಳು
ಥಳಥಳ ಮಿನುಗಿ ಸೋಕಲು ಕರಗಿ
ಥಳಥಳ ಮಿನುಗಿ ಸೋಕಲು ಕರಗಿ
ಸರಿವುದು ಈ ಬಾಳಿನೆಲ್ಲಾ ತಿರುಳು ಸರಿವುದು ಈ ಬಾಳಿನೆಲ್ಲಾ ತಿರುಳು
ಎಂಥ ಮರುಳಯ್ಯಾ ಇದು ಎಂಥಾ ಮರುಳು

ಹರಿಯುವ ನೀರಿಗೆ ಯಾವ ಹೊಣೆ?
ಹಾರುವ ಹಕ್ಕಿಗೆ ಎಲ್ಲಿ ಮನೆ?
ಬಾಳಿನ ಕಡಲಿನ ತೆರೆಗಳ ಸೀಳಿ
ತಲುಪುವುದಾಚೆಯ ದಡದ ಕೊನೆ ತಲುಪುವುದಾಚೆಯ ದಡದ ಕೊನೆ
ಎಂಥ ಮರುಳಯ್ಯಾ ಇದು ಎಂಥಾ ಮರುಳು

ಸಂಜೆಯ ನೇಸರ ಬಣ್ಣದ ಲೀಲೆ
ನೀರಲಿ ಹಾರುತ ಬೆಳ್ಳಕ್ಕಿ ತೇಲೆ
ಕಡಲಿಗೆ ಸಾಲಾಗಿ ಮೂಡುತ ಮುಳುಗುತ
ಬೆನ್ನಟ್ಟಿ ಸಾಗುವ ತೆರೆಗಳ ಹಾಳೆ
ಸೃಷ್ಟಿಯೆ ಸುಂದರ ಸುಳ್ಳಿನ ಮಾಲೆ ಸೃಷ್ಟಿಯೆ ಸುಂದರ ಸುಳ್ಳಿನ ಮಾಲೆ

ಎಂಥ ಮರುಳಯ್ಯಾ ಇದು ಎಂಥಾ ಮರುಳು
ಬೆಳಗಿನ ಹಿಮದಂತೆ ಹರಿವಾ ನೆರಳು
ಥಳಥಳ ಮಿನುಗಿ ಸೋಕಲು ಕರಗಿ
ಥಳಥಳ ಮಿನುಗಿ ಸೋಕಲು ಕರಗಿ
ಸರಿವುದು ಈ ಬಾಳಿನೆಲ್ಲಾ ತಿರುಳು ಸರಿವುದು ಈ ಬಾಳಿನೆಲ್ಲಾ ತಿರುಳು
ಎಂಥ ಮರುಳಯ್ಯಾ ಇದು ಎಂಥಾ ಮರುಳು

ಜೊತೆಯಾಗಿ ಹಿತವಾಗಿ

ಚಿತ್ರ: ರಥಸಪ್ತಮಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೬

ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ...

ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ....

ಆ ಬಾನ ನೆರಳಲ್ಲಿ ಆ ಸೂರ್ಯನೆದುರಲ್ಲಿ
ಒಲವಿಂದ ನಾವೀಗ ಈ ಗಂಗೆ ದಡದಲ್ಲಿ
ಒಂದಾಗಿ ಸವಿಯಾದ ಮಾತೊಂದ ನುಡಿವ

ಈ ಸಂಜೆ ರಂಗಲ್ಲಿ ಈ ತಂಪು ಗಾಳೀಲಿ
ಜೊತೆಯಾಗಿ ನಾವೀಗ ಶಂಕರನ ಎದುರಲ್ಲಿ
ಇಂಪಾಗಿ ಹಿತವಾದ ಮಾತೊಂದ ನುಡಿವಾ

ನೀನೆ ನನ್ನ ಪ್ರಾಣ ನಮ್ಮ ಪ್ರಣಯ ಮಧುರ ಗಾನ
ನೀನೆ ನನ್ನ ಪ್ರಾಣ ನಮ್ಮ ಪ್ರಣಯ ಮಧುರ ಗಾನ

ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ

ಕನಸಲ್ಲಿ ಕಂಡಾಸೆ ಮನಸಲ್ಲಿ ಇರುವಾಸೆ
ಎಲ್ಲವೂ ಒಂದೇನೇ ನಿನ್ನನ್ನು ಪಡೆವಾಸೆ
ಇನ್ನೇನು ಬೇಕಿಲ್ಲ ನನ್ನಾಣೆ ನಲ್ಲ

ಹಗಲಲ್ಲಿ ಕಂಡಾಸೆ ಇರುಳಲ್ಲಿ ಬಂದಾಸೆ
ಎಲ್ಲಾವೂ ಒಂದೇನೆ ನಿನ್ನೊಡನೆ ಇರುವಾಸೆ
ಬೇರೇನು ನಾ ಕೇಳೆ ನನ್ನಾಣೆ ನಲ್ಲೆ

ಎಂದೂ ಹೀಗೆ ಇರುವ ನಾವು ಎಂದೂ ಹೀಗೆ ನಲಿವ
ಎಂದೂ ಹೀಗೆ ಇರುವ ನಾವು ಎಂದೂ ಹೀಗೆ ನಲಿವ
ನಿನ್ನ ಬಿಡಲಾರೆ ನಾನೆಂದಿಗೂ

ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ

ಈ ಮೌನವಾ ತಾಳೆನು

ಚಿತ್ರ: ಮಯೂರ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ|| ರಾಜ್‍ಕುಮಾರ್, ಎಸ್. ಜಾನಕಿ
ವರ್ಷ: ೧೯೭೫

ಈ ಮೌನವಾ ತಾಳೆನು
ಈ ಮೌನವಾ ತಾಳೆನು ಮಾತಾಡೆ ದಾರಿಯ ಕಾಣೆನು
ಓ ರಾಜಾ..ಈ ಮೌನವಾ ತಾಳೆನು
ನೀ ಹೇಳದೇ ಬಲ್ಲೆನು ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿ...ನೀ ಹೇಳದೇ ಬಲ್ಲೆನು

ನಾನಂದು ನಿನ್ನ ಕಂಡಾಗ ಚಿನ್ನ ಏನೇನೋ ಹೊಸ ಭಾವನೆ
ಹೂವಾಗಿ ಮನಸು ಏನೇನೋ ಕನಸು ನಾ ಕಾಣದ ಕಲ್ಪನೆ
ಇನ್ನು ನಿನ್ನ ಬಿಡೆನು ಈ ದೂರ ಸಹಿಸೆನು
ನೀ ಹೇಳದೇ ಬಲ್ಲೆನು ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿ...ನೀ ಹೇಳದೇ ಬಲ್ಲೆನು

ಈ ಅಂದ ಕಂಡು ನಾ ಮೋಹಗೊಂಡು ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು ಕಂಡಾಗ ನವಿಲು ಕುಣಿವಂತೆ ನನಗಾಯಿತು
ಈ ಅಂದ ಕಂಡು ನಾ ಮೋಹಗೊಂಡು ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು ಕಂಡಾಗ ನವಿಲು ಕುಣಿವಂತೆ ನನಗಾಯಿತು
ಅಂದೇ ನಿನಗೆ ಸೋತೆ ನಾ ಜಗವನೆ ಮರೆತೆ

ಈ ಮೌನವಾ ತಾಳೆನು ಮಾತಾಡೆ ದಾರಿಯ ಕಾಣೆನು
ಓ ರಾಜಾ..ಓ ರಾಣಿ...ಓ ರಾಜಾ..ಓ ರಾಣಿ.

Wednesday, June 1, 2011

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ

ಚಿತ್ರ: ಭಾಗ್ಯವಂತ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯಕರು: ಪೂರ್ಣಚಂದ್ರ
ವರ್ಷ: ೧೯೮೧


ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ

ನೀನಾಡೋ ಮಾತೆಲ್ಲಾ ಜೇನಿನಂತೆ ನಗುವಾಗ ಮೊಗವೊಂದು ಹೂವಿನಂತೆ
ನೀನಾಡೋ ಮಾತೆಲ್ಲಾ ಜೇನಿನಂತೆ ನಗುವಾಗ ಮೊಗವೊಂದು ಹೂವಿನಂತೆ
ನೀನೊಂದು ಸಕ್ಕರೆಯ ಬೊಂಬೆಯಂತೆ ಮಗುವೆ ನೀ ನನ್ನ ಪ್ರಾಣದಂತೆ
ನನ್ನ ಪ್ರಾಣದಂತೆ

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ

ಆ ದೇವ ನಮಗಾಗಿ ತಂದ ಸಿರಿಯೇ, ಈ ಮನೆಯ ಸೌಭಾಗ್ಯ ನಿನ್ನ ನಗೆಯೇ
ಆ ದೇವ ನಮಗಾಗಿ ತಂದ ಸಿರಿಯೇ, ಈ ಮನೆಯ ಸೌಭಾಗ್ಯ ನಿನ್ನ ನಗೆಯೇ
ಅಳಲೇನು ಚಂದ ನನ್ನ ಪುಟ್ಟ ದೊರೆಯೇ ಹಾಯಾಗಿ ಮಲಗು ಜಾಣ ಮರಿಯೇ
ನನ್ನ ಜಾಣ ಮರಿಯೇ

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ

ಸಂಪಿಗೆ ಮರದ ಹಸಿರೆಲೆ ನಡುವೆ

ಚಿತ್ರ: ಉಪಾಸನೆ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯಕರು : ಬಿ.ಕೆ. ಸುಮಿತ್ರಾ
ವರ್ಷ: ೧೯೭೪

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ… ಚಿಕ್ಕವ್ವ… ಎನ್ನುತ ತನ್ನಯ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್…
ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ…
ಮಂಜುಳ ನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ, ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ಮಾತು ಒಂದು ಮಾತು

ಚಿತ್ರ: ಮುನಿಯನ ಮಾದರಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಸುಲೋಚನ
ವರ್ಷ: ೧೯೮೧

ಮಾತು ಒಂದು ಮಾತು ಮಾತು ಒಂದು ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು

ಮಾತು ಕಿವಿ ಮಾತು ಮಾತು ಸವಿ ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು

ಮಾತು ಕಿವಿ ಮಾತು ಮಾತು ಸವಿ ಮಾತು

ಹೊನ್ನ ನುಡಿಗಳ ಈ ಮಾತು ನಿನ್ನ ಕೆಣಕುವ ಬಿಸಿ ಮಾತು
ಹೊನ್ನ ನುಡಿಗಳ ಈ ಮಾತು ನಿನ್ನ ಕೆಣಕುವ ಬಿಸಿ ಮಾತು
ಹಗಲಿನಲ್ಲೂ ನೂರು ಕನಸು ಕಾಣುವ ಸುಖದ ಮಾತು

ನಿನ್ನ ತಣಿಸುವ ಇನಿ ಮಾತು ಕಣ್ಣ ಕುಣಿಸುವ ಗಿಳಿ ಮಾತು
ಮದನನನ್ನು ಕಂಡ ರತಿಯು ಮೋಹಿಸಿ ಅಂದ ಮಾತು
ಆಡುವ ಆಸೆ ಬಂತು

ಆಹಾ ಮಾತು ಕಿವಿ ಮಾತು ಮಾತು ಸವಿ ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು
ಮಾತು ಕಿವಿ ಮಾತು ಮಾತು ಸವಿ ಮಾತು

ಪ್ರೇಮಿ ಆಡುವ ಮೃದು ಮಾತು ಜೇನು ತುಂಬಿದ ಸಿಹಿ ಮಾತು
ಪ್ರೇಮಿ ಆಡುವ ಮೃದು ಮಾತು ಜೇನು ತುಂಬಿದ ಸಿಹಿ ಮಾತು
ಒಲವಿನಿಂದ ಸೇರಿದಾಗ ಆಡುವ ಕಣ್ಣ ಮಾತು

ಎಂದು ಕೇಳದ ಹೊಸ ಮಾತು ಎಲ್ಲ ರಸಿಕರ ಮನೆ ಮಾತು
ಪ್ರಣಯ ಕಾವ್ಯ ಹರುಷದಿಂದ ಹಾಡಿದ ಕವಿಯ ಮಾತು
ಆಡುವ ಆಸೆ ಬಂತು

ಮಾತು ಕಿವಿ ಮಾತು ಮಾತು ಸವಿ ಮಾತು
ಸ್ನೇಹದಿಂದ ಬಂದ ಮಾತು ನಿನ್ನ ಪ್ರೀತಿ ತಂದ ಮಾತು
ಹೃದಯದಿಂದ ಮೂಡಿ ಬಂತು ಮುತ್ತಿನಂಥ ಮಾತು
ಮಾತು ಕಿವಿ ಮಾತು ಮಾತು ಸವಿ ಮಾತು

ಪ್ರೇಮದಲ್ಲಿ ಸ್ನೇಹದಲ್ಲಿ

ಚಿತ್ರ : ರಂಗನಾಯಕಿ
ಸಾಹಿತ್ಯ: ಎಂ. ಎನ್. ವ್ಯಾಸರಾವ್
ಸಂಗೀತ: ಎಂ. ರಂಗರಾವ್
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ಹಾಯ್ ಬೇಬೀಸ್...
ಪ್ರೇಮದಲ್ಲಿ ಸ್ನೇಹದಲ್ಲಿ ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ
ಸೋ ನಾವೆಲ್ಲ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್ ಮೈ ಡಿಯರ್ಸ್
ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ

ನನ್ನ ಭಾಷೆ ಚೌ ಚೌ ಭಾಷೆ ನನ್ನ ಆಸೆ ಮಸಾಲ ದೋಸೆ
ನನ್ನ ಭಾಷೆ ಚೌ ಚೌ ಭಾಷೆ ನನ್ನ ಆಸೆ ಮಸಾಲ ದೋಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ಶಾಸ್ತ್ರೀಜಿ ರೀಟಾಜಿ ತಂಗಮ್ಮ ನಿಂಗಮ್ಮ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್ ಓಹ್ ಡಿಯರ್ಸ್ ಕ್ಯೂಂ ಭಾಯ್

ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ

ನನ್ನ ಮಾತು ಕೇಸರಿ ಭಾತು ನನ್ನ ಕೋಪ ಖಾರ ಭಾತು
ನನ್ನ ಮಾತು ಕೇಸರಿ ಭಾತು ನನ್ನ ಕೋಪ ಖಾರ ಭಾತು
ದಿಲ್ ಖೋಲ್ಕೆ ನೀವು ಆಡಿ ಕನ್ನಡ ಮಾತು
ದಿಲ್ ಖೋಲ್ಕೆ ನೀವು ಆಡಿ ಕನ್ನಡ ಮಾತು ಕನ್ನಡ ಮಾತು
ಅಬ್ದುಲ್ಲ ಸೈದುಲ್ಲ ಆಂಟೋನಿ ಅವಧಾನಿ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್ ಮೈ ಡಿಯರ್ಸ್
ವಾಟ್ ಡಾರ್ಲಿಂಗ್ ವಾಟ್ ಡು ಯು ಸೇ

ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ

ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ

ಚಿತ್ರ: ಮರೆಯಲಾಗದ ಕಥೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ರಮಣಿ
ವರ್ಷ: ೧೯೮೨

ಬರೆಯುವೆ ನಿನಗಾಗಿ
ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ
ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ

ಹುಣ್ಣಿಮೆಯ ದೀಪದಲ್ಲಿ ತಣ್ಣನೆಯ ರಾತ್ರಿಯಲ್ಲಿ
ಸಂಪಿಗೆಯ ತಂಪಿನಲ್ಲಿ ಇಂಪಾದ ರಾಗದಲಿ
ನಾ ಬರೆಯುವೆ
ಅರಗಿಣಿಯ ಭಾಷೆಯಲ್ಲಿ ಕೋಗಿಲೆಯ ರಾಗದಲ್ಲಿ
ಹಂಸನಡೆ ತಾಳದಲ್ಲಿ ಮುತ್ತಂಥ ಮಾತಿನಲಿ
ಹೊಸ ಕವಿತೆಯ.. ಓ ಗೆಳತಿ...

ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ

ಹೂ ಬನದಿ ಆಯ್ದು ತಂದ ಮೊಗ್ಗಾದ ಮಲ್ಲಿಗೆಯಿಂದ
ಸವಿಜೇನ ಹನಿಹನಿಯಿಂದ ಪ್ರಣಯದ ಆನಂದದಿಂದ
ನಾ ಬರೆಯುವೆ
ನನ್ನಂತರಾಳದಿಂದ ಪುಟಿದೇಳೋ ಭಾವದಿಂದ
ಬಯಕೆಗಳ ಭಾರದಿಂದ ಕಣ್ಣುಗಳ ಮಿಂಚಿನಿಂದ
ಹೊಸ ಕವಿತೆಯ.. ಓ ಗೆಳತಿ...

ಬರೆಯುವೆ ನಿನಗಾಗಿ ಹೃದಯದಿ ಹಿತವಾಗಿ
ಪ್ರಣಯದ ಸಂಕೇತವಾಗಿ ಒಲವಿಂದ ಪ್ರೇಮಗೀತೆ

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು

ಚಿತ್ರ: ಸಾಹಸ ಸಿಂಹ
ಸಾಹಿತ್ಯ: ಅರ್.ಎನ್.ಜಯಗೋಪಾಲ್
ಸಂಗೀತ: ಸತ್ಯಂ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೨

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೆ ಹೇ...ನಿನಗಾಗಿ ಅರಸಿ ಬಂದೆ
ನೀ ಎಲ್ಲೋ ಅಲ್ಲೇ ನಾನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು

ಕನಸಲ್ಲೂ ನಿನ್ನ ರೂಪ ಈ ಮನದಲ್ಲಿ ತರಲು ತಾಪ
ಕಣ್ಣಲ್ಲಿ ಮುಚ್ಚಿ ನಿನ್ನಾ ನಾ ಕರೆದೊಯ್ವ ಆಸೆ ಚಿನ್ನಾ
ನಗುವೆಂಬ ಬಲೆಯ ಬೀಸಿ ನಾ ನುಡಿಯಲ್ಲಿ ಜೇನಾ ಸೂಸಿ
ಸೆರೆಹಿಡಿವೆ ಬಿಡದೆ ನಿನ್ನಾ....

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು

ಮಿಂಚಂತೆ ಸುಳಿದು ನೀನು ಮರೆಯಾಗಿ ಹೋದರೇನು
ಸುಳಿವನ್ನು ತಿಳಿಯಬಲ್ಲ ಹೊಸ ಮೋಡಿ ಬಲ್ಲೆ ನಾನು
ಬಾಳಲ್ಲಿ ಬಿಡಿಸದಂಥ ಎಂದೆಂದೂ ಮುರಿಯದಂಥ
ಬಂಧನದೇ ಹಿಡಿವೆ ನಿನ್ನ...

ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೆ ಹೇ...ನಿನಗಾಗಿ ಅರಸಿ ಬಂದೆ
ನೀ ಎಲ್ಲೋ ಅಲ್ಲೇ ನಾನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು

ಎಂಥಾ ಸೌಂದರ್ಯ ನೋಡು

ಚಿತ್ರ: ಮಾತು ತಪ್ಪದ ಮಗ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಇಳಯರಾಜ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೮

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು ಕನ್ನಡ ನಾಡಿದು ಚಿನ್ನದಾ ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಹರಿಯುವ ನೀರು ಹಸುರಿನ ಪೈರು ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು ಮರಗಳ ಸಂಪು ಎಲ್ಲೂ ಆ ತಾಯಿ ನಗೆಯೇ
ಹರಿಯುವ ನೀರು ಹಸುರಿನ ಪೈರು ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು ಮರಗಳ ಸಂಪು ಎಲ್ಲೂ ಆ ತಾಯಿ ನಗೆಯೇ
ಭಾರತ ಮಾತೆಯಾ ಈ ತನುಜಾತೆಯ ಚೆಲುವನು ನೋಡುತ ನಲಿಯುವೆ ಮೆರೆಯುವೆ ನಾ..

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಎಲ್ಲೇ ಇರಲಿ ಹೇಗೇ ಇರಲಿ ನಮ್ಮೂರ ಸವಿನೋಟ ಚಂದ
ಸಾವಿರ ಭಾಷೆಯ ಕಲಿತರೂ ಮನಕೆ ಕನ್ನಡ ನುಡಿಮುತ್ತೆ ಅಂದ
ಪೂರ್ವದ ಪುಣ್ಯವೊ ಪಡೆದಿಹ ಭಾಗ್ಯವೊ ಹುಟ್ಟಿದೆ ಪಾವನ ಕನ್ನಡ ಮಣ್ಣಲಿ ನಾ...

ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು ಕನ್ನಡ ನಾಡಿದು ಚಿನ್ನದಾ ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು

ಹೂವಾ ನೋಡು ಎಂಥ ಅಂದವಾಗಿದೆ

ಚಿತ್ರ : ಬಾಡದ ಹೂ
ಸಂಗೀತ : ಅಶ್ವತ್ಥ್-ವೈದಿ
ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ ಮತ್ತು ಕೋರಸ್
ವರ್ಷ: ೧೯೮೨

ಹೂವ ನೋಡು
ಹೂವಾ ನೋಡು ಎಂಥ ಅಂದವಾಗಿದೆ ಹೂವಾ ನೋಡು ಎಂಥ ಅಂದವಾಗಿದೆ
ಆ ಬಣ್ಣ ಬಣ್ಣ ಹೇಗೆ ನಮ್ಮ ಕಣ್ಣ ತುಂಬಿದೆ
ಆಮೇಲೆ
ತಂಗಾಳಿಯಲ್ಲಿ ಕಂಪನ್ನು ಚೆಲ್ಲಾಡಿದೆ ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ
ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ

ಬಳ್ಳೀ ನೋಡು ಬಳ್ಳಿ ನೋಡು ಎಂಥ ಅಂದವಾಗಿದೆ
ಹೌದು ಹೌದು
ಬಳ್ಳಿ ನೋಡು ಎಂಥ ಅಂದವಾಗಿದೆ ಆ ಮರವ ಹೇಗೆ ಸುತ್ತಿ ಸುತ್ತಿ ಮೇಲೆ ಬಂದಿದೆ
ಗುರು ಫೈನ್
ಈ ಪ್ರೀತಿ ಕಂಡು ಮನಸಿಂದು ಬೆರಗಾಗಿದೆ ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಎಂಥ ಸ್ನೇಹವು ಆಹಾ ಎಂಥ ಪ್ರೇಮವು

ಆಗಸವೆಲ್ಲೋ ಭೂಮಿಯು ಎಲ್ಲೋ ಯಾರು ಬಿಡಿಸದ ಅನುಬಂಧ
ಯಾರು ಬಿಡಿಸದ ಅನುಬಂಧ

ಕಡಲಿನ ನೀರನು ಹೀರಿ ಮೇಲೆ ಕೊಡುವುದು ಮಳೆಯ ಮುಗಿಲಿಂದ
ಕೊಡುವುದು ಮಳೆಯ ಮುಗಿಲಿಂದ

ಹನಿಹನಿ ನೀರು ಸೇರಿ ಸೇರಿ ಹನಿಹನಿ ನೀರು ಸೇರಿ ಸೇರಿ
ನದಿಯಾಗಿ...
ನದಿಯಾಗಿ ಹರಿದಾಗ ತಾನೇನೆ ಅಂದವೆಲ್ಲ

ಹೂವಾ ನೋಡು ಎಂಥ ಅಂದವಾಗಿದೆ ಆ ಬಣ್ಣ ಬಣ್ಣ ಹೇಗೆ ನಮ್ಮ ಕಣ್ಣ ತುಂಬಿದೆ
ತಂಗಾಳಿಯಲ್ಲಿ ಕಂಪನ್ನು ಚೆಲ್ಲಾಡಿದೆ ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ
ದುಂಬಿ ಬಂದಿದೆ ನೋಡು ಘುಂ ಘುಂ ಎಂದಿದೆ

ಮಾನವ ಜೀವಿ ಒಂಟಿಯಲ್ಲ ಸ್ನೇಹವ ಮರೆತರೆ ಹಿತವಿಲ್ಲ
ಸ್ನೇಹವ ಮರೆತರೆ ಹಿತವಿಲ್ಲ

ಸಾವಿರ ವರುಷ ಬಾಳುವುದಿಲ್ಲ ಪ್ರೀತಿಯ ಅರಿಯದೆ ಸುಖವಿಲ್ಲ
ಪ್ರೀತಿಯ ಅರಿಯದೆ ಸುಖವಿಲ್ಲ

ಸರಸದಿ ಸೇರಿ ಬಾಳಿದಾಗ ಸರಸದಿ ಸೇರಿ ಬಾಳಿದಾಗ
ಆನಂದಾ...
ಆನಂದ ನಮಗಾಗ ಈ ಮಾತು ಸುಳ್ಳಲ್ಲ

ಬಳ್ಳಿ ನೋಡು ಎಂಥ ಅಂದವಾಗಿದೆ ಆ ಮರವ ಹೇಗೆ ಸುತ್ತಿ ಸುತ್ತಿ ಮೇಲೆ ಬಂದಿದೆ
ಈ ಪ್ರೀತಿ ಕಂಡು ಮನಸಿಂದು ಬೆರಗಾಗಿದೆ ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಎಂಥ ಸ್ನೇಹವು ಆಹಾ ಎಂಥ ಪ್ರೇಮವು
ಎಂಥ ಸ್ನೇಹವು ಆಹಾ ಎಂಥ ಪ್ರೇಮವು ಎಂಥ ಸ್ನೇಹವು ಆಹಾ ಎಂಥ ಪ್ರೇಮವು

ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ

ಚಿತ್ರ: ತಾಯಿಯ ಹೊಣೆ
ಸಂಗೀತ: ಸತ್ಯಂ
ಸಾಹಿತ್ಯ: ಚಿ.ಉದಯಶಂಕರ್
ಗಾಯಕರು: ರಾಜ್ ಕುಮಾರ್ ಭಾರತಿ, ಪಿ. ಸುಶೀಲಾ
ವರ್ಷ: ೧೯೮೫

ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ
ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ
ನಿನ್ನಾ ಸ್ನೇಹ ನಿನ್ನಾ ಪ್ರೇಮ ಕನಸಿನಾ ಸಿರಿಯೋ ಓ ಕನಸಿನಾ ಸಿರಿಯೋ
ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ

ಅರಳಿದ ತಾವರೆ ಹೂವಿನ ಹಾಗೆ ಚೆಲುವೆಯಾ ಮೊಗವು
ಚಂದ್ರನ ಕಂಡಾ ನೈದಿಲೆಯಂತೆ ನಿನ್ನ ಈ ನಗುವು
ಕಾಮಿನಿ ಅರಗಿಣಿ
ನಿನ್ನ ನುಡಿಗಳು ವೀಣೆ ಸ್ವರಗಳು ಅರಿಯದೆ ಹೋದೆ ಗೆಳತಿ ಬೆರಗಾದೆ

ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ

ತಣ್ಣನೆ ಗಾಳಿ ಸೋಕಿದ ಹಾಗೆ ಸುಖವನು ಕಂಡೆ
ಬಿಸಿಲಲಿ ಕರಗೋ ಮಂಜಿನ ಹಾಗೆ ಕಾಣದೇ ಹೋದೆ
ಪ್ರೇಮವೇ ತಾಳೆನೇ
ಮರೆಯಲಾರದೆ ದಾರಿ ಕಾಣದೆ ನಾನು ನೊಂದಿರುವೆ
ನಲ್ಲ ಎಲ್ಲಿರುವೇ

ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ
ನಿನ್ನಾ ಸ್ನೇಹ ನಿನ್ನಾ ಪ್ರೇಮ ಕನಸಿನಾ ಸಿರಿಯೋ ಓ ಕನಸಿನಾ ಸಿರಿಯೋ
ಮುಗಿಲ ಮಲ್ಲಿಗೆಯೋ ಗಗನದಾ ತಾರೆಯೋ

ಕನ್ನಡ ನಾಡಿನ ರಸಿಕರ ಮನವ

ಚಿತ್ರ : ರಂಗನಾಯಕಿ
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ: ಎಂ.ರಂಗರಾವ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ

ಕಲೆಯ ರಸ ಗಂಗೆಯಲ್ಲಿ ನಿಂದ ಸೌಂದರ್ಯವಲ್ಲಿ
ಕಲೆಯ ರಸ ಗಂಗೆಯಲ್ಲಿ ನಿಂದ ಸೌಂದರ್ಯವಲ್ಲಿ
ಮಾತಂಗಿ ತಂಗಿ ಲಲಿತ ಲತಾಂಗಿ
ತಂಗಿ ಲಲಿತ ಲತಾಂಗಿ

ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ

ಬಣ್ಣದ ಬದುಕಿಂದ
ಬಣ್ಣದ ಬದುಕಿಂದ ಚಿನ್ನದ ಬಾಳಿಗೆ ಮನ್ನಣೆ ಪಡೆದ
ಭಾಗ್ಯವತಿ ಸೌಭಾಗ್ಯವತಿ

ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ

ನಿನ್ನ ಹೃದಯ ಹಸಿರಾಗಿರಲಿ
ನಿನ್ನ ಹೃದಯ ಹಸಿರಾಗಿರಲಿ ನಿನ್ನ ನೆನಪು ಸವಿಯಾಗಿರಲಿ
ಹೋಗಿ ಬಾ ಹೋಗಿ ಬಾ ಹೋಗಿ ಬಾ
ದೀರ್ಘಸುಮಂಗಲಿ ದೀರ್ಘಸುಮಂಗಲಿ
ದೀರ್ಘಸುಮಂಗಲಿ ದೀರ್ಘಸುಮಂಗಲಿ