Thursday, July 7, 2011
ಒಂದು ಮಾತು... ನನಗೆ ಗೊತ್ತು
ಚಿತ್ರ : ಕೆರಳಿದ ಸಿಂಹ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಸತ್ಯಂ
ಗಾಯನ : ಡಾ|| ರಾಜ್ ಕುಮಾರ್, ಸುಲೋಚನ
ವರ್ಷ: ೧೯೮೨
ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ
ಈ ದಿನ ಬೇರೆ ವಿಷಯ ತಿಳಿಸುವೆ
ಅಲ್ಲಿಗೆ ಬಂದರೆ ಸುಮ್ಮನೆ ಕೆಣಕುವೆ
ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ
ಸಂಜೆಯ ಕೆಂಪು ಗಾಳಿಯ ತಂಪು
ಹೊಸ ಹೊಸ ಬಯಕೆ ತಂದಾಗ
ತುಂಬದ ವಿರಹ ಬಂದರೆ ಸನಿಹ
ಸಾರ್ಥಕ ನಮ್ಮ ಅನುರಾಗ
ಮೋಹದ ಮಾತನಾಡಿ
ಕಣ್ಣಲೇ ಮೋಡಿ ಮಾಡಿ
ಈಗೇಕೆ ನನ್ನಲಿ ಆಸೆಯ ತರುವೆ
ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ
ತೋಳಲಿ ಹೀಗೆ ಬಳಸಿದೆ ಏಕೆ
ಎದೆ ಜಿಲ್ ಎಂದಿದೆ ನನಗೀಗ
ಮೈಯಲಿ ಮಿಂಚು ತುಂಬುವ ಸಂಚು
ಮಾಡುವೆ ಏಕೆ ನೀನೀಗ
ಯಾರೂ ಇಲ್ಲದಾಗ ಆಸೆಯು ಮೂಡಿದಾಗ
ಈ ಬಿಂಕ ಬಿಗುಮಾನ ನಿನಗೇತಕೆ
ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ
ಈ ದಿನ ಬೇರೆ ವಿಷಯ ತಿಳಿಸುವೆ
ಅಲ್ಲಿಗೆ ಬಂದರೆ ಸುಮ್ಮನೆ ಕೆಣಕುವೆ
Labels:
೧೯೮೨,
ಕೆರಳಿದ ಸಿಂಹ,
ಚಿ. ಉದಯಶಂಕರ್,
ಡಾ|| ರಾಜ್ ಕುಮಾರ್,
ಸತ್ಯಂ,
ಸುಲೋಚನ
Subscribe to:
Post Comments (Atom)
No comments:
Post a Comment