Friday, November 19, 2010

ನನಗಾಗಿ ಬಂದ



ಚಿತ್ರ: ಬೆಂಕಿಯ ಬಲೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೩

ನನಗಾಗಿ ಬಂದ ಹೊ... ಆನಂದ ತಂದ.. ಹಾ...
ನನಗಾಗಿ ಬಂದ ಆನಂದ ತಂದ ಹೆಣ್ಣೇ ಮಾತಾಡು ಬಾ
ಈ ನಾಚಿಕೆ ನಿನಗೇತಕೆ ಈ ಮೌನವು ಇನ್ನೇತಕೆ
ನನಗಾಗಿ ಬಂದ ಆನಂದ ತಂದ ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..

ನಮಗಾಗೆ ಇಲ್ಲಿ ಮಂಚ ಹಾಕಿದೆ ಘಮಘಮಿಸೊ ಮಲ್ಲೆ ಹೂವ ಚೆಲ್ಲಿದೆ
ಹಾಲಿದೆ ಹಣ್ಣಿದೆ ನಿನ್ನ ಹಸಿವೆಗೆ ಹೇ.. ಕಾದಿಹೆ ಪ್ರೇಮದಿ ನಿನ್ನ ಸೇವೆಗೆ
ಮುಗಿಲಿಂದ ಚಂದ್ರ ಇಣುಕಿ ನೋಡಿದೆ ತಂಗಾಳಿ ತಂಪು ತಂದು ಚೆಲ್ಲಿದೆ
ಈ ಚಳಿ ತಾಳದೇ ತನುವು ನಡುಗಿದೆ ಪ್ರೀತಿಯ ತೋರುತ ಅಪ್ಪಿಕೊಳ್ಳದೇ
ಹ.. ಬೆಚ್ಚುವೆ ಹೀಗೇಕೆ ಹ.. ಕೆನ್ನೆಯು ಕೆಂಪೇಕೆ
ತುಟಿಯ ಬಳಿ ತುಟಿಗಳನು ನಾನು ತಂದಾಗ ಹೊ....

ನನಗಾಗಿ ಬಂದ.. ಹ.. ಹ.. ಹ.. ಹ.. ಹ.. ಹ.. ಹ..
ಆನಂದ ತಂದ.. ಹೋಯ್.. ಹೋಯ್.. ಹೋಯ್.. ಹೋಯ್..
ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..

ಕಣ್ಣಲ್ಲಿ ನೂರಾಸೆ ಸೇರಿಕೊಂಡಿದೆ ಮೈಯಲ್ಲ ಬಿಸಿಯೇರಿ ನಿನ್ನ ಕೂಗಿದೆ
ಕಾತುರ ತಾಳದೆ ಮನವು ನೊಂದಿದೆ ಹಾ.. ಆತುರ ನನ್ನೆದೆ ತುಂಬಿಕೊಂಡಿದೆ

ಅನುರಾಗದಾನಂದ ಹೃದಯ ತುಂಬಿದೆ ಮುತ್ತೊಂದು ಬೇಕೆಂದು ತುಟಿಯ ಕೇಳಿದೆ
ಜೀವವು ನಿಲ್ಲದು ಬಯಕೆ ಮುಗಿಯದೇ ಬೇಡುವೆ ಬಾರೆಯಾ ಬೇಗ ಸನಿಹಕೆ
ಅಂದದ ಹೆಣ್ಣೊಂದು ಅರೆ ಹಾ.. ಬಳಿಯಲಿ ನಿಂತಾಗ
ಕೈಯ ಕಟ್ಟಿ ಕುಳಿತಿರಲು ಕಲ್ಲು ನಾನಲ್ಲ.. ಹಾ.. ಹ.. ಹ.. ಹ..

ನನಗಾಗಿ ಬಂದ ಹೊ... ಆನಂದ ತಂದ.. ಹಾ...
ನನಗಾಗಿ ಬಂದ ಆನಂದ ತಂದ ಹೆಣ್ಣೇ ಮಾತಾಡು ಬಾ
ಈ ನಾಚಿಕೆ ನಿನಗೇತಕೆ ಈ ಮೌನವು ಇನ್ನೇತಕೆ
ನನಗಾಗಿ ಬಂದ.. ಹ.. ಹ.. ಹ.. ಹ.. ಹ.. ಹ.. ಹ..
ಆನಂದ ತಂದ.. ಹೊ.. ಹೊ.. ಹೊ.. ಹೊ.. ಹೊ.. ಹೊ.. ಹೊ..
ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..
ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..

Thursday, November 18, 2010

ಹೂವಿಂದ ಹೂವಿಗೆ ಹಾರುವ ದುಂಬಿ



ಚಿತ್ರ: ಹೊಂಬಿಸಿಲು
ಸಾಹಿತ್ಯ: ಗೀತಪ್ರಿಯ
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಜಾನಕಿ
ವರ್ಷ: ೧೯೭೮

ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿನ ಕೋಮಲ ಭಾವನೆ ಕೆಣಕಿ
ಏತಕೆ ಕಾಡುತಿಹೇ ನೀ
ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ

ಆಸೆಯ ತುಂಬಿ ಹೂವರಳಿರಲು
ಹೂವನು ಕಂಡು ನೀ ಕೆರಳಿರಲು
ಹೂವಿನ ಅಂದ ನಿನಗೇ ಚಂದ
ಮಧು ಮಕರಂದ ನಿನಗಾನಂದ
ಒಲಿಸುವ ರಾಗವ ನೀ ಉಲಿಉಲಿದು
ಒಲಿಸುವ ರಾಗವ ನೀ ಉಲಿಉಲಿದು
ಏನನು ಬಯಸುತಿಹೆ ನೀ...

ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿಂದ ಹೂವಿಗೆ ಹಾರುವ ದುಂಬಿ...

ದುಂಬಿಯೆ ನಿನಗೆ ಮಿಲನಕೆ ಸಂಭ್ರಮ
ಹೂವಿಗೆ ಬೇಕು ಪ್ರೇಮ ಸಮಾಗಮ
ಹೂವಿಗೂ ದುಂಬಿಗೂ ಇರುವಾ ಬಂಧ
ಸಮರಸವಿದ್ದರೆ ಸವಿರಾಗಬಂಧ
ಈ ಅನುರಾಗವ ಅರಿಯದೆ ಇಂದು
ಈ ಅನುರಾಗವ ಅರಿಯದೆ ಇಂದು
ಏನನು ಬೇಡುತಿಹೆ ನೀ.....

ಹೂವಿಂದ ಹೂವಿಗೆ ಹಾರುವ ದುಂಬಿ
ಏನನು ಹಾಡುತಿಹೆ ನೀ ಏನನು ಹಾಡುತಿಹೆ
ಹೂವಿನ ಕೋಮಲ ಭಾವನೆ ಕೆಣಕಿ
ಏತಕೆ ಕಾಡುತಿಹೇ ನೀ...
ಹೂವಿಂದ ಹೂವಿಗೆ ಹಾರುವ ದುಂಬಿ

Tuesday, November 16, 2010

ಕಾವೇರಿ ತೀರದಲ್ಲಿ ಒಂದು ಕಾಡು



ಚಿತ್ರ : ಜನ್ಮ ರಹಸ್ಯ
ಸಾಹಿತ್ಯ: ಎಂ. ನರೇಂದ್ರ ಬಾಬು
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಜಾನಕಿ
ವರ್ಷ: ೧೯೭೨

ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ

ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ

ಗಂಭೀರ ನಡೆ ಹಾಕಿ ಆನೆ ಬಂತು
ಸೊಂಡಿಲಲ್ಲಿ ಬಾಳೆ ಗೊನೆಯನು ತಂತು
ಡೊಂಕು ಹೆಜ್ಜೆ ಹಾಕುತ ಕರಡಿ ಬಂತು
ಡೊಂಕು ಹೆಜ್ಜೆ ಹಾಕುತ ಕರಡಿ ಬಂತು
ಹಲಸು ಜೇನು ಕಲೆಸುತ ತಾನು
ಹಲಸು ಜೇನು ಕಲೆಸುತ ತಾನು
ಕಾಣಿಕೆಯಾಗಿ ತಂತು

ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ

ಬಣ್ಣ ಬಣ್ಣದ ಗರಿಗಳ ತೆರೆದು
ನವಿಲು ಕುಣಿಯಿತು ಆಡಿ
ಬಣ್ಣ ಬಣ್ಣದ ಗರಿಗಳ ತೆರೆದು
ನವಿಲು ಕುಣಿಯಿತು ಆಡಿ
ರಾಜನ ನೋಡಿ ಹರುಷದಿ ಕೂಡಿ
ರಾಜನ ನೋಡಿ ಹರುಷದಿ ಕೂಡಿ
ಕೋಗಿಲೆ ಮೆರೆಯಿತು ಹಾಡಿ
ಹಾಡನು ಕೇಳಿ ಸ್ಫೂರ್ತಿಯ ತಾಳಿ
ಹಾಡನು ಕೇಳಿ ಸ್ಫೂರ್ತಿಯ ತಾಳಿ
ಕತ್ತೆಯು ಹಾಡಿತು ಜೊತೆಗೂಡಿ

ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ

ಆಡೋಣ ಬನ್ನಿ ಆಡೋಣ ಬನ್ನಿ ಅಪ್ಪಾಲೆ ತಿಪ್ಪಾಲೆ
ಹಾಕೋಣ ಬನ್ನಿ ಹಾಕೋಣ ಬನ್ನಿ ರಾಜಾಗೆ ಹೂಮಾಲೆ

ಕೋರುವೆವಿಂದು ದೇವರು ನಿನ್ನ ಸುಖವಾಗಿಡಲೆನುತ
ನ್ಯಾಯವ ನುಡಿದು ಕೀರುತಿ ಪಡೆದು ಬಾಳಲಿ ಎಂದೆನುತ
ನಗುನಗುತ ನಲಿನಲಿತ ಗೆಳೆಯರಿಗೆ ಸೈಎನುತ
ಸಾವಿರ ವರುಷ ಗೆಲ್ಲುತ ಹರುಷ ನೀನಿರು ಅನವರತ

Monday, November 15, 2010

ಮುಂದೆ ಬನ್ನಿ, ಇನ್ನು ಮುಂದೆ ಬನ್ನಿ



ಚಿತ್ರ: ಬೆಂಕಿಯಲ್ಲಿ ಅರಳಿದ ಹೂವು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ಎಸ್. ವಿಶ್ವನಾಥನ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೩

ಹೋಗು ರೈಟ್.. ರೈಟ್....
ಮುಂದೆ ಬನ್ನಿ, ಇನ್ನು ಮುಂದೆ ಬನ್ನಿ ಹ.. ಮುಂದೆ ಬನ್ನಿ, ಇನ್ನು ಮುಂದೆ ಬನ್ನಿ..
ಬೇರೆ ಯಾರು ಈ ಮಾತನ್ನು ಹೇಳೋದಿಲ್ಲಾ
ಅರೆ ಹಿಂದೆ ತಳ್ಳೋ ಜನರೆ ಹೆಚ್ಚು ಊರಲ್ಲೆಲ್ಲಾ
ಬೇರೆ ಯಾರು ಈ ಮಾತನ್ನು ಹೇಳೋದಿಲ್ಲಾ
ಅರೆ ಹಿಂದೆ ತಳ್ಳೋ ಜನರೆ ಹೆಚ್ಚು ಊರಲ್ಲೆಲ್ಲಾ
ಮುಂದೆ ಬನ್ನಿ.., ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿ.
ಹ.. ಮುಂದೆ ಬನ್ನಿ., ಇನ್ನು ಮುಂದೆ ಬನ್ನಿ....

ಬದುಕು ಒಂದು ಬಸ್ಸಿನಂತೆ ನಿಲ್ಲದಂತೆ ಸಾಗಿದೆ,
ವಿಧಿಯೇ ಅದರ ಡ್ರೈವರಾಗಿ ಕಾಣದಂತೆ ಕೂತಿದೆ,
ಆ ಟಿಕ್ಕೇಟ್ ಟಿಕ್ಕೇಟ್, ಕಮಾನ್ ಟಿಕ್ಕೇ..ಟ್. ಟಿಕ್ಕೇ..ಟ್
ಬೇಕು ಎನ್ನೊ ದಾರಿಯಲ್ಲಿ ಎಂದೂ ಮುಂದೆ ಸಾಗದು,
ನೀನು ಹೇಳೊ ಜಾಗದಲ್ಲಿ ಬಸ್ಸು ಎಂದೂ ನಿಲ್ಲದು
ಮುಂದಕ್ಕೆ ಬನ್ನಿ ಎಂದು ಕೂಗೋರು ಇಲ್ಲಾ..
ಹ ಅ... ನನ್ನಂಥ ಕಂಡಕ್ಟರ್ ಇದ್ದರೂ ಕಾಣಲ್ಲ..
ಹೇ ಹೇ ಹೇ.. ನನ್ನಂಥ ಕಂಡಕ್ಟರ್ ಇದ್ದರೂ ಕಾಣಲ್ಲ
ಮುಂದೆ ಬನ್ನಿ, ಕಮಾನ್ ಕಮಾನ್ ಮುಂದೆ ಬನ್ನಿ,
ಬೇರೆ ಯಾರು ಈ ಮಾತನ್ನು ಹೇಳೋದಿಲ್ಲಾ,
ಅರೆ ಹಿಂದೆ ತಳ್ಳೋ ಜನರೆ ಹೆಚ್ಚು ಊರಲ್ಲೆಲ್ಲಾ..
ಮುಂದೆ ಬನ್ನಿ.., ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿ.
ರೈಟ್.. ರೈಟ್...

ಲಕ್ಷಾ ಲಕ್ಷಾ ಇದ್ದೋರೆಲ್ಲಾ ಕಾರಿನಲ್ಲೇ ಹೋಗೋದು,
ಅಲ್ಪ ಸ್ವಲ್ಪ ಗಳಿಸೋರೆನೇ ಬಸ್ಸಿನಲ್ಲೇ ಕುಡೋದು
ಚಿಲ್ರೆಕೊಡಿ., ಸರಿಯಾದ ಚಿಲ್ರೆಕೊಡೀ ಪ್ಲೀಸ್...,
ಎಲ್ಲೋ ಜಗಳ ಎಲ್ಲೋ ಕದನ ಕಲ್ಲು ಇಲ್ಲೇ ಬಿಳೋದು,
ಯಾರ ಕೋಪ ಯಾರ ಮೇಲೋ ನ್ಯಾಯಾ ಯಾರ ಕೇಳೋದು
ನಿಮ್ಮ ದುಡ್ಡಲ್ಲೇ ನಮ್ಮ ವಾಹನ ಓಡೋದು..
ಆಆಆ, ನೀವೇನೆ ತೆರಿಗೆ ಹೆಚ್ಚಿ ಅಯ್ಯೋ ಅನ್ನೋದು...
ಹ ಹಾ, ನೀವೇನೆ ತೆರಿಗೆ ಹೆಚ್ಚಿ ಅಯ್ಯೋ ಅನ್ನೋದು
ಮುಂದೆ ಬನ್ನಿ, ಇನ್ನು ಮುಂದೆ ಬನ್ನಿ ಹಹಹಾ

ಆಯಿಯೆ ಸಾಬ್ ತಶರೀಫ್ ರಖಿಯೇ...
ನಿಮ್ಮ ಊರು ಯಾವುದೆಂದು ಇಲ್ಲಿ ಯಾರೂ ಕೇಳರು,
ಇಲ್ಲಿ ಯಾಕೆ ಬಂದೆ ಎಂದು ಯಾರೂ ನಿನ್ನ ತಳ್ಳರು
ಮುಂದೆ ಬನ್ನಿ., ನಿನ್ನ ಭಾಷೆ ಯಾವುದೆಂದು ಯಾರೂ ಚಿಂತೆ ಮಾಡರು,
ಹೊಂದಿಕೊಂಡು ಬಾಳೋದನ್ನ ಇಲ್ಲಿ ಎಲ್ಲ ಬಲ್ಲರು
ಕನ್ನಡ ನಾಡಿನಲ್ಲಿ ಕನ್ನಡ ಮಾತಾಡು...
ಅ ಅ ಅ, ನಿನ್ನ ಮನೇಲಿ ನಿನ್ನ ಭಾಷೆ ಮಾತಾಡು
ಹೆ ಹೆ ಹೆ, ನಿನ್ನ ಮನೇಲಿ ನಿನ್ನ ಭಾಷೆ ಮಾತಾಡು

ಮುಂದೆ ಬನ್ನಿ, ಇನ್ನು ಮುಂದೆ ಬನ್ನಿ..
ಬೇರೆ ಯಾರು ಈ ಮಾತನ್ನು ಹೇಳೋದಿಲ್ಲಾ,
ಅರೆ ಹಿಂದೆ ತಳ್ಳೋ ಜನರೆ ಹೆಚ್ಚು ಊರಲ್ಲೆಲ್ಲಾ
ಮುಂದೆ ಬನ್ನಿ.., ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿ.
ಹ.. ಮುಂದೆ ಬನ್ನಿ., ಇನ್ನು ಮುಂದೆ ಬನ್ನಿ....
ಟಿಕ್ಕೇ..ಟ್. ಟಿಕ್ಕೇ..ಟ್, ಕಮಾನ್ ಕಮಾನ್ ಟಿಕ್ಕೇ..ಟ್. ಟಿಕ್ಕೇ..ಟ್
ಚಿಲ್ರೆಕೊಡಿ. ಪ್ಲೀಸ್. ಸರಿಯಾದ ಚಿಲ್ರೆಕೊಡೀ
ಮುಂದೆ ಬನ್ನಿ, ಇನ್ನು ಮುಂದೆ ಬನ್ನಿ..ಇಇಇ

Friday, November 12, 2010

ಮರಿಯಾ ಮೈ ಡಾರ್ಲಿಂಗ್



ಚಿತ್ರ: ಮರಿಯಾ ಮೈ ಡಾರ್ಲಿಂಗ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಶಂಕರ್-ಗಣೇಶ್
ಗಾಯಕರು :ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೦

ಮರಿಯಾ ಮೈ ಡಾರ್ಲಿಂಗ್ ಮರಿಯಾ ಮೈ ಡಾರ್ಲಿಂಗ್
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ  ಮನಸು
ಮರಿಯಾ ಮೈ ಡಾರ್ಲಿಂಗ್ ಮರಿಯಾ ಮೈ ಡಾರ್ಲಿಂಗ್

ಸುಮವು ಮುಳ್ಳಾದ ಹಾಗೆ ನೆರಳು ಬಿಸಿಯಾದ ಹಾಗೆ
ಹಗಲು ಇರುಳಾದ ಹಾಗೆ ಸಿಹಿಯು ಕಹಿಯಾದ ಹಾಗೆ
ಸುಮವು ಮುಳ್ಳಾದ ಹಾಗೆ ನೆರಳು ಬಿಸಿಯಾದ ಹಾಗೆ
ಹಗಲು ಇರುಳಾದ ಹಾಗೆ ಸಿಹಿಯು ಕಹಿಯಾದ ಹಾಗೆ
ನೀನು ಕ್ಷಣಕೊಂದು ದಿನಕೊಂದು ರೀತಿ
ನಿನ್ನ ಕಂಡಾಗ ಅದರಿಂದ ಭೀತಿ

ಮರಿಯಾ ಮೈ ಡಾರ್ಲಿಂಗ್
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ  ಮನಸು
ಮರಿಯಾ ಮೈ ಡಾರ್ಲಿಂಗ್

ಕಾಣದ ದೇವ ಬೊಂಬೆಯ ಹಾಗೆ ಆಡಿಸಿ ನಿನ್ನ ನೋಡುವ ಹೀಗೆ
ಆತನ ಮೀರಿ ಹೋಗುವ ದಾರಿ ಎಲ್ಲೂ ಇಲ್ಲ ಮರಿಯಾ
ಕಾಣದ ದೇವ ಬೊಂಬೆಯ ಹಾಗೆ ಆಡಿಸಿ ನಿನ್ನ ನೋಡುವ ಹೀಗೆ
ಆತನ ಮೀರಿ ಹೋಗುವ ದಾರಿ ಎಲ್ಲೂ ಇಲ್ಲ ಮರಿಯಾ
ನಿನ್ನ ಓಡಾಟ ಅವನಾಸೆಯಂತೆ ನಿನ್ನ ಮನಸೆಂದೂ ಬಾನಡಿಯಂತೆ

ಮರಿಯಾ ಮೈ ಡಾರ್ಲಿಂಗ್

ಹೆದರಿ ನೀ ಓಡಬೇಡ ಜನಕೆ ನೀ ಸೋಲಬೇಡ
ನಿಲ್ಲು ನೀ ಧೈರ್ಯದಿಂದ ಗೆಲ್ಲುವ ಸ್ಥೈರ್ಯದಿಂದ
ಕೇಳು ಹೊಸದೆಂದು ತಾನಾಗಿ ಬರದು
ಕ್ರಾಂತಿಯಾದಂತೆ ಹೊಸ ಬಾಳು ನಿನದು

ಮರಿಯಾ ಮೈ ಡಾರ್ಲಿಂಗ್
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ ಮನಸು
ನಗುವ ಹೂವಂತೆ ಸೊಗಸು ಹೊಳೆವ ಹೊನ್ನಂತೆ  ಮನಸು
ಮರಿಯಾ ಮೈ ಡಾರ್ಲಿಂಗ್

ಮೋಹದ ರಾಗ ಮೂಡಿದ ವೇಳೆ ಪ್ರೇಮದ ಗೀತೆ ಹಾಡಿದ ವೇಳೆ
ಜೋಗುಳ ಹೇಳೋ ತಾಯಿಯೇ ಆದೇ ನನ್ನ ಮುದ್ದು ಮರಿಯಾ
ಇಂದು ನಿಜವಾದ ಹೆಣ್ಣಾದ ನಿನ್ನ ಕಂಡು ಕನಸೆಲ್ಲಾ ನಿಜವಾಯ್ತು ಚಿನ್ನ

ಮರಿಯಾ ಮೈ ಡಾರ್ಲಿಂಗ್...... ಮರಿಯಾ ಮೈ ಡಾರ್ಲಿಂಗ್....

ಸುಖದಾ ಸ್ವಪ್ನಗಾನ



ಚಿತ್ರ: ಮರೆಯದ ಹಾಡು
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ : ಜಿ.ಕೆ. ವೆಂಕಟೇಶ್
ಗಾಯನ : ಎಸ್. ಜಾನಕಿ
ವರ್ಷ: ೧೯೮೧

ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ
ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ

ಸ್ವರವೇಳು ಕಲೆತ ರಾಗ ಸ೦ಪೂರ್ಣ ಜೀವರಾಗ
ಉಸಿರೆರಡು ಬೆರೆತ ವೇಗ ಅನುರಾಗ ಭಾವಯೋಗ
ಜನುಮ ಜನುಮದಾ ಬ೦ಧಾ ಅನುಬ೦ಧಾ ನಮ್ಮದೂ
ತಪಸಿನಾ ಫಲವಿದೂ ದೈವದಾ ವರವಿದೂ

ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ

ಸವಿ ಮುರಳಿ ಕರೆದ ವೇಳೆ ಆ ರಾಧೆ ಓಡಿದ೦ತೆ
ಮಾಧವನ ನೆನಪಿನಲ್ಲೇ ಆ ಮೀರಾ ಹಾಡಿದ೦ತೆ
ನಿಮ್ಮೊಲವಿನಲ್ಲೆ ಮಿ೦ದೂ ನಾನಿ೦ದೂ
ಹಾಡುವೇ ನನ್ನನೇ ಮರೆಯುವೇ ನಿಮ್ಮಲೇ ಬೆರೆಯುವೆ

ಶೃತಿಲಯದ ಮಿಲನದಲ್ಲೇ ದೈವೀಕ ನಾದ ಲೀಲೆ
ಸತಿಪತಿಯ ಒಲವಿನಲ್ಲೇ ಸ೦ಸಾರ ನೌಕೆ ತೇಲೆ
ನೆನಪಿನ ತೋಟದ ಮಲ್ಲೇ ಹೂ ಮಾಲೆ
ಎ೦ದಿಗೂ ಬಾಡದಾ ಹೂವಿದು ಮುಗಿಯದಾ ಹಾಡಿದು

ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ

ನೀ ಇರಲು ಜೊತೆಯಲ್ಲಿ



ಚಿತ್ರ: ಗುಣ ನೋಡಿ ಹೆಣ್ಣು ಕೊಡು
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಎಂ. ರಂಗರಾವ್
ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ, ಎಸ್. ಜಾನಕಿ
ವರ್ಷ: ೧೯೮೨

ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ
ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ

ಮಾತಲ್ಲಿ ಏನೊ ಹೊಸತನ ಮಗುವನ್ನು ಹೋಲೊ ಹೂಮನ
ರಸಕಾವ್ಯ ನಿನ್ನ ಯೌವ್ವನ ಎದೆ ತುಂಬಿ ನಿಂತೆ ಪ್ರತಿಕ್ಷಣ
ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ
ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ ಬೆರೆತೆ ಉಸಿರಲ್ಲಿ ಒಂದಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ

ಈ ನೀಲಿ ಕಣ್ಣ ಬೆಳಕಲಿ ಮನೆಯೆಲ್ಲ ಎಂದು ಬೆಳಗಲಿ
ನೀ ತಂದ ಪ್ರೀತಿ ಲತೆಯಲಿ ನಗುವೆಂಬ ಹೂವು ಅರಳಲಿ
ಅಗಲಿ ನಿನ್ನನು ಬಾಳಲಾರೆನು
ಅಗಲಿ ನಿನ್ನನು ಬಾಳಲಾರೆನು ಜೀವ ಒಡಲಿಂದ ದೂರಾದಂತೆ

ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ
ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ಬಾಳೆಲ್ಲ ಹಸಿರಾದಂತೆ ಬಾಳೆಲ್ಲ ಹಸಿರಾದಂತೆ..

ಈ ಹೃದಯ ಹಾಡಿದೆ



ಚಿತ್ರ: ಸುಪ್ರಭಾತ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ,ಚಿತ್ರ
ವರ್ಷ: ೧೯೮೮

ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ

ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ
ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ
ಗಾಳಿಯು ಬೀಸಲು ಭ್ರಮೆಯಿಂದ ಅಲೆದಾಡಿದೆ

ಹಗಲು ಇರುಳಾಗಿ ಇರುಳು ಹಗಲಾಗಿ ದಿನ ರಾತ್ರಿ ಓಡಿದೆ
ಮರೆಯುವ ರೀತಿಯ ನನ್ನಾಣೆ ನಾ ಕಾಣದೆ
ನೆನಪು ಎದೆಯಲ್ಲಿ ತುಳುಕಾಡಿದೆ

ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಈ ಹೃದಯ ಹಾಡಿದೆ ಆಸೆಗಳ ತಾಳದೆ

ಚಿಗುರು ಎಳೆಯಾಗಿ ಮೊಗ್ಗು ಹೂವಾಗಿ ಋತುಕಾಲ ಓಡಿದೆ
ಚಿಗುರು ಎಳೆಯಾಗಿ ಮೊಗ್ಗು ಹೂವಾಗಿ ಋತುಕಾಲ ಓಡಿದೆ
ತಡೆಯುವ ಶಕುತಿಯು ನಿನ್ನಾಣೆ ನನಗಿಲ್ಲದೆ

ಕಡಲು ಮುಗಿಲಾಗಿ ಮುಗಿಲು ಮಳೆಯಾಗಿ ನದಿಯಾಗಿ ಓಡಿದೆ
ಬಯಕೆಯು ಮುಗಿಯದೆ ಸುಖ ಶಾಂತಿ ನಾ ಕಾಣದೆ
ನಯನ ಕಣ್ಣೀರ ಹನಿಯಾಗಿದೆ

ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ

Thursday, November 11, 2010

ಹೊಸ ಬಾಳಿಗೆ ನೀ ಜೊತೆಯಾದೆ



ಚಿತ್ರ: ನಾ ನಿನ್ನ ಬಿಡಲಾರೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೯

ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ರಾಗ ಹೊಸ ತಾಳ ಹೊಸ ಭಾವಗೀತೆಯೇ ನೀನಾದೆ
ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ

ಹೊಸ ರಾತ್ರಿ ಮೂಡಿ ಬಂದು ಹೊಸ ಆಸೆ ನೂರು ತಂದು
ಹೊಸ ಸ್ನೇಹದಿಂದ ಬೆಸೆದು ಹೊಸ ರಾಗ ಮೀಟಿ ಇಂದು
ಹಿತ ನೀಡಿದೆ ಸುಖ ತೋರಿದೆ ಮನದಲ್ಲಿ ಉಲ್ಲಾಸ ತಂದು

ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ

ನಸು ನಾಚಿದಾಗ ಮೊಗವು ಕೆಂಪಾದ ಹೊನ್ನ ಹೂವು
ನಡೆವಾಗ ನಿನ್ನ ನಡುವು ಲತೆಯಂತೆ ಆಡೋ ಚೆಲುವು
ಕಣ್ತುಂಬಿತು ಮನ ತುಂಬಿತು ಅನುರಾಗ ನನ್ನಲ್ಲಿ ತಂದು

ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ

ಹೂಮಂಚ ಹೀಗೆ ಇರಲಿ ಈ ಮಲ್ಲಿಗೆ ಬಾಡದಿರಲಿ
ಈ ರಾತ್ರಿ ಜಾರದಿರಲಿ ಹಗಲೆಂದು ಮೂಡದಿರಲಿ
ಬೆಳದಿಂಗಳ ಈ ಬೊಂಬೆ ಬಳಿಯಲ್ಲಿ ಎಂದೆಂದೂ ಇರಲಿ

ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ರಾಗ ಹೊಸ ತಾಳ ಹೊಸ ಭಾವಗೀತೆಯೇ ನೀನಾದೆ
ಹೊಸ ಬಾಳಿಗೆ ನೀ ಜೊತೆಯಾದೆ ಹೊಸ ಆನಂದ ನೀನಿಂದು ತಂದೆ
ಹೊಸ ಆನಂದ ನೀನಿಂದು ತಂದೆ

ಅರಳಿದೆ ಅರಳಿದೆ



ಚಿತ್ರ: ಮುದುಡಿದ ತಾವರೆ ಅರಳಿತು
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಜಾನಕಿ
ವರ್ಷ: ೧೯೮೩

ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ
ಬಯಸಿದೆ ಬಯಸಿದೆ ಪ್ರಿಯತಮನಾಸರೆ ಬಯಸಿದೆ
ಹರೆಯದ ಕರೆ ಸರಿದಿದೆ ತೆರೆ
ಕೇಳದೆ ಈ ಮೊರೆ ಬಾಳಿನಾ ದೊರೆ
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ

ಶಬರಿಯ ಮುಕುತಿಗೆ ಜಾನಕಿರಾಮನು ನೀನಾದೆ
ಕಮರಿದೆ ಬದುಕಿಗೆ ಆಸೆಯ ಚಿಲುಮೆಯು ನೀನಾದೆ
ಶಬರಿಯ ಮುಕುತಿಗೆ ಜಾನಕಿರಾಮನು ನೀನಾದೆ
ಕಮರಿದೆ ಬದುಕಿಗೆ ಆಸೆಯ ಚಿಲುಮೆಯು ನೀನಾದೆ
ಮಿಡಿದಿದೆ ಮನ ರಸಮಯ ಕ್ಷಣ
ಮಿಡಿದಿದೆ ಮನ ರಸಮಯ ಕ್ಷಣ
ಪ್ರೀತಿಗೆ ಸೇವೆಗೆ ಬಾಗಿದೆ ಚರಣಕೆ
ಪ್ರೀತಿಗೆ ಸೇವೆಗೆ ಬಾಗಿದೆ ಚರಣಕೆ
ಜೀವಾ ಭಾವ ನಿನದೇ
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ

ಚಲುವಿನ ಬೆಡಗಿನ ಒಲವನು ಚೆಲ್ಲಿದೆ ಮಧುವನ
ಚಂದ್ರನ ಯೌವನ ಬೆರೆತರೆ ಜೀವನ ಪಾವನ
ಚಲುವಿನ ಬೆಡಗಿನ ಒಲವನು ಚೆಲ್ಲಿದೆ ಮಧುವನ
ಚಂದ್ರನ ಯೌವನ ಬೆರೆತರೆ ಜೀವನ ಪಾವನ
ಪಪಮಗ ಮಪ ನಿನಿಪಮ ಪನಿ
ನೀ ಪಮ ಸಾನಿಪ ಗಾರಿನಿಸಾ
ಸೂರ್ಯನ ಉದಯಕೆ ಚಂದಿರನಾಸರೆ
ಸೂರ್ಯನ ಉದಯಕೆ ಚಂದಿರನಾಸರೆ
ಬಾರಾ ಬಾರಾ ಬಳಿಗೆ

ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ
ಬಯಸಿದೆ ಬಯಸಿದೆ ಪ್ರಿಯತಮನಾಸರೆ ಬಯಸಿದೆ
ಹರೆಯದ ಕರೆ ಸರಿದಿದೆ ತೆರೆ
ಕೇಳದೆ ಈ ಮೊರೆ ಬಾಳಿನಾ ದೊರೆ
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ

ಮುಂಜಾನೆ ಮೂಡಿದ ಹಾಗೆ



ಚಿತ್ರ: ಮುದುಡಿದ ತಾವರೆ ಅರಳಿತು
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೩

ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ
ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ

ಹಸಿರಾದ ಪ್ರೀತಿಯ ಕಂಡು ಉಸಿರಾಗ ಬಂದೆನು ನಾನು
ಹಸಿರಾದ ಪ್ರೀತಿಯ ಕಂಡು ಉಸಿರಾಗ ಬಂದೆನು ನಾನು
ಸಸಿಯಾದ ಸ್ನೇಹ ಮೋಹ ಬಲು
ಬೆಳೆದು ನಿಂತಿರಲು ಓಡಿ ಬಂದೆ ಬಳಿಗೆ

ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ

ಹೊಸದಾದ ಆಸೆಯ ತೋರಿ ಶಶಿಯಂತೆ ಬೆಳಗುವೆ ನೀನು
ಹೊಸದಾದ ಆಸೆಯ ತೋರಿ ಶಶಿಯಂತೆ ಬೆಳಗುವೆ ನೀನು
ಚೆಲುವಾದ ಬಾಳ ಕಡಲಿನಲಿ
ಒಲುಮೆ ದೋಣಿಯಲಿ ತೇಲು ನನ್ನ ಜೊತೆಗೆ

ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ

Wednesday, November 10, 2010

ಮನೆಯನು ಬೆಳಗಿದೆ ಇಂದು



ಚಿತ್ರ : ಚಂದನದ ಗೊಂಬೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ವರ್ಷ: ೧೯೭೯

ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ

ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು

ಬೇರೆ ಏನೂ ಬೇಡದ ಹಾಗೆ ಮೋಡಿಯ ನೀ ಮಾಡಿದೆ
ಈ ನಿನ್ನ ಚೆಲುವ ಈ ನನ್ನ ಒಲವ ಸವಿಯಲ್ಲಿ ಕರಗಿ ಹೋದೆ
ಬೇರೆ ಏನೂ ಕಾಣದ ಹಾಗೆ ಮಾಯವ ನೀ ಮಾಡಿದೆ
ಈ ನಿನ್ನ ರೂಪ ನನ್ನೆದೆಯ ದೀಪ ಆದಂದೆ ಸೋತು ಹೋದೆ
ನಾನಂದೇ ಸೋತು ಹೋದೆ

ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು

ನೂರು ಜನುಮ ಮಾಡಿದ ಪುಣ್ಯ ನಿನ್ನನು ನಾ ಹೊಂದಿದೆ
ನೀ ನೀಡಿ ಹರುಷ ನೂರಾರು ವರುಷ ಬದುಕುವ ಬಯಕೆ ತಂದೆ
ನೋಡಿ ನೋಡಿ ತಣಿಯದೇ ಮನವು ದಣಿಯದೇ ಹಾಡಿ ಕುಣಿದಿದೆ
ಬಾಳೆಲ್ಲ ಹೀಗೆ ಬಳಿಯಲ್ಲೆ ಇರುವ ಹೊನ್ನಾಸೆ ನೀನು ತಂದೆ
ನೀ ನನ್ನ ಜೀವವಾದೆ

ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು

ಹೊಸಬಾಳು ಸೊಗಸೆಂದುಕೊಂಡೆ

 

ಚಿತ್ರ : ಪಟ್ಟಣಕ್ಕೆ ಬಂದ ಪತ್ನಿಯರು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ.ರಂಗರಾವ್
ಗಾಯಕರು:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ವರ್ಷ: ೧೯೮೦

ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ
ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ

ಏಕೆ ವಿಷಾದ ಬಿಡು ಶೋಕ ನನ್ನೇತಕೆ ನೋಯಿಸುವೆ
ಹೀಗೆತಕೆ ಗೋಳಾಡುವೆ
ಹೆಣ್ಣೇ ನೀ ಕೇಳು ಇದೇ ನಾಕ ಸಂತೋಷದೆ ನೀನಿರಲು
ನಿನ್ನಾಸೆಗೆ ಮಿತಿ ಬೇಡವೆ
ಹೇ.. ಹೇ.. ಅತಿ ಆಸೆ ಒಳ್ಳೆದಲ್ಲ

ಯಾವುದು ಅತಿ ಆಸೆ ? ಪಟ್ಟಣಕೆ ಹೋಗಬೇಕು ಅನ್ನೋದಾ?
ನೆಮ್ಮದಿಯಿಂದ ಇರಬೇಕು ಅನ್ನೋದಾ? ನಗುನಗುತಾ ಬಾಳಬೇಕು ಅನ್ನೋದಾ?

ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ

ಸಾಕು ನಿರಾಸೆ ಬಿಡು ಚಿಂತೆ ನನ್ನಂತೆ ನೀ ಬಾಳಿದರೆ
ಈ ಹಳ್ಳಿಯೆ ಸಾಕೆನ್ನುವೆ
ನಲ್ಲೆ ನೀನೆಂದು ನನ್ನ ಮನೆಗೆ ಆನಂದವ ತುಂಬಿದರೆ
ನೀನಿಲ್ಲಿಯೇ ಸುಖ ಕಾಣುವೆ
ಹೇ... ಹೇ... ಸುಖ ಸಂತೋಷ ಅಂಗಡೀಲಿ ಮಾರೋದಿಲ್ಲ

ನಂಗೊತ್ತಿದೆ ನಿಮ್ ಸುಖ ಸಂತೋಷ
ಕೊಟ್ಟಿಗೆ ಗುಡಿಸೋದರಲ್ಲಿದೆ ಸಗಣಿ ಎತ್ತೋದರಲ್ಲಿದೆ
ಬೆರಣಿ ತಟ್ಟೋದರಲ್ಲಿದೆ

ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ
ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ..ಕನಸಾಗಿ ನೊಂದೆ

Tuesday, November 9, 2010

ಸವಿನೆನಪುಗಳು ಬೇಕು



ಚಿತ್ರ: ಅಪರಿಚಿತ
ಸಾಹಿತ್ಯ: ರಾಮದಾಸ ನಾಯ್ಡು
ಸಂಗೀತ: ಎಲ್. ವೈದ್ಯನಾಥನ್
ಗಾಯಕರು : ವಾಣಿ ಜಯರಾಂ
ವರ್ಷ: ೧೯೭೮

ಸವಿನೆನಪುಗಳು ಬೇಕು ಸವಿಯಲೀ ಬದುಕು
ಕಹಿನೆನಪು ಸಾಕೊಂದು ಮಾಸಲೀ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ

ಸವಿನೆನಪುಗಳು ಬೇಕು ಸವಿಯಲೀ ಬದುಕು

ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನ ಎದೆಗೊರಗಿ ಆಸರೆಯ ಬೇಡಿ
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ
ಇನಿಯನ ಎದೆ ಬಡಿತ ಗುಂಡಿನ ದನಿಗಿರಿದು
ಮಾಸುತಿದೆ ಕನಸು

ಸವಿನೆನಪುಗಳು ಬೇಕು ಸವಿಯಲೀ ಬದುಕು

ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನ ಭೀತಿಯಲಿ ನಾ ಬಂಧಿಯಾಗಿ
ಮನಸು ಹೃದಯ ನೊಂದು ನೋವಾಗಿದೆ
ಒಲವು ನಲಿವು ಮೂಡಿ ಮಸುಕಾಗಿದೆ
ಅರಳುವ ಹೂವೊಂದು ಕಮರುವ ಭಯದಲೀ
ಸಾಗುತಿದೆ ಬದುಕು

ಸವಿನೆನಪುಗಳು ಬೇಕು ಸವಿಯಲೀ ಬದುಕು

ಇದೇ ನಾಡು ಇದೇ ಭಾಷೆ



ಚಿತ್ರ: ತಿರುಗು ಬಾಣ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸತ್ಯಂ
ಗಾಯಕರು : ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೨

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು
ಕಲ್ಲಲ್ಲಿ ಕಲೆಯನು ಕಂಡ ಬೇಲೂರ ಶಿಲ್ಪದ ಬೀಡು
ಬಸವೇಶ್ವರ ರನ್ನ ಪಂಪರ ಕವಿವಾಣಿಯ ನಾಡು

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಚಾಮುಂಡಿ ರಕ್ಷೆಯು ನಮಗೆ ಗೊಮ್ಮಟೇಶ ಕಾವಲು ಇಲ್ಲಿ
ಶೃಂಗೇರಿ ಶಾರದೆ ಲೀಲೆ ರಸತುಂಗೆಯಾಗಿದೆ ಇಲ್ಲಿ
ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಎಳೇಳು ಜನ್ಮವೇ ಬರಲಿ ಈ ಮಣ್ಣಲಿ ನಾನು ಹುಟ್ಟುವೆ
ಏನೇನು ಕಷ್ಟವೇ ಇರಲಿ ಸಿರಿಗನ್ನಡಕಾಗೆ ದುಡಿಯುವೆ
ತನು ಕನ್ನಡ ನುಡಿ ಕನ್ನಡ ಮನ ಕನ್ನಡವಾಗಿರಲಿ

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ
ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ
ಎಲ್ಲೇ ಇರಲಿ ಹೇಗೇ ಇರಲಿ ಕನ್ನಡವೆ ನಮ್ಮ ಉಸಿರಲ್ಲಿ

ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ

ಕಂಗಳು ವಂದನೆ ಹೇಳಿದೆ

ಚಿತ್ರ: ಮುಗಿಯದ ಕಥೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೬

ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ
ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ
ಜೀವ ಜೀವ ಸೇರಲು ಮಾತು ಏತಕೆ
ಜೀವ ಜೀವ ಸೇರಲು ಮಾತು ಏತಕೆ ಒಲವಿನ ಕಾವ್ಯಕೆ ಇಂದೇ ಪೀಠಿಕೆ
ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ

ಮುಡಿಯ ಜಾರಿದ ಹೂವಿದು ಮುಗಿಯದ ಕಥೆ ನನ್ನದು
ಈ ಹೂವನು ಮಣ್ಣಿಂದಲೇ ಕಾಪಾಡಿದ ಕೈಗಳಿವು
ಗಂಗೆಗೆ ಕೊಳೆ ಸೋಂಕದು ಪಾಪದ ಫಲ ಸಲ್ಲದು
ನಿನ್ನನು ಪಡೆದಂಥಹ ಈ ಭಾಗ್ಯವು ನನ್ನದು
ಪೂರ್ವದ ಪುಣ್ಯವೋ ಜನ್ಮದ ಬಂಧವೋ
ನಾನು ನೀನು ನೀನು ನಾನು ಒಂದೇ ಎಂದೆಂದಿಗೂ

ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿವೆ

ಬಾಳಿನ ಗುಡಿ ಬೆಳಗಲಿ ಹರುಷದ ಹೊಳೆ ಹರಿಯಲಿ
ಪ್ರೇಮದ ಈ ನೌಕೆಯು ಸುಖ ತೀರವ ಸೇರಲಿ
ಹೇ ಹೇ ಅಹಾಹ ಅಹಾಹ ಅಹಾಹ ಅಹಾಹ
ಆಹಾ ಅಹಾಹ ಅಹಾಹ ಅಹಾಹ ಅಹಾಹ

ಬಯಕೆಯ ಕುಡಿ ಚಿಗುರಲಿ ಕನಸಿದು ಕೈಗೂಡಲಿ
ಎಂದಿಗೂ ಪತಿ ಸೇವೆಯ ಸೌಭಾಗ್ಯವು ಎನಗಿರಲಿ
ಸ್ವರವು ನೀ ಶೃತಿಯು ನಾ ದೊರೆಯು ನೀ ದಾಸಿ ನಾ
ನಾನು ನೀನು ನೀನು ನಾನು ಒಂದೇ ಎಂದೆಂದಿಗೂ

ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ
ಆಡದೆ ಉಳಿದಿಹ ಮಾತು ನೂರಿದೆ

ದೇವರ ಆಟ ಬಲ್ಲವರಾರು



ಚಿತ್ರ: ಅವಳ ಹೆಜ್ಜೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು : ಎಸ್. ಜಾನಕಿ
ವರ್ಷ: ೧೯೮೧

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು....

ಹೊಸ ಹೊಸ ರಾಗ ಅನುದಿನ ಮೂಡಿ ವಿಧ ವಿಧ ಭಾವ ಜೊತೆಯಲಿ ಕೂಡಿ
ಸಂತಸ ಒಮ್ಮೆ ವೇದನೆಯೊಮ್ಮೆ ನೋವಲಿ ಹೃದಯ ಹಿಂಡುವುದೊಮ್ಮೆ
ಬಾಳಿನ ಈ ಹಾಡಿನ ರೀತಿ ..
ಬಾಳಿನ ಈ ಹಾಡಿನ ರೀತಿ  ಯಾರು ಇಂದು ಬಲ್ಲವರು

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು...

ಕಾನನ ಬರಲಿ ಕೊರಕಲೆ ಇರಲಿ ಓಡುವ ನದಿಯು ಸಾಗುವ ಹಾಗೆ
ಹೂಬನವಿರಲಿ ಮರುಭೂಮಿ ಬರಲಿ ನಿಲ್ಲದೆ ಗಾಳಿ ಬೀಸುವ ಹಾಗೆ
ನಿಲ್ಲದ ಈ ಪಯಣದ ಗುರಿಯ..
ನಿಲ್ಲದ ಈ ಪಯಣದ ಗುರಿಯ ಯಾರು ಇಂದು ಕಂಡವರು

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು
ಕೇಳದೆ ಸುಖವ ತರುವ ಹೇಳದೆ ದುಃಖವ ಕೊಡುವ
ತನ್ನ ಮನದಂತೆ ಕುಣಿಸಿ ಆಡುವ

ದೇವರ ಆಟ ಬಲ್ಲವರಾರು ಆತನ ಎದಿರು ನಿಲ್ಲುವರಾರು

Monday, November 8, 2010

ಉಷೆ ಮೂಡಿದಾಗ



ಚಿತ್ರ: ಪ್ರೀತಿವಾತ್ಸಲ್ಯ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೪

ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು ನಗೆ ಮಿಂಚು ನಿನ್ನದು
ನೆನಪಾಗಿ ಬಂದಿದೆ ಸಿಹಿ ನೋವ ತಂದಿದೆ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ

ಹೂವರಳಿ ನಿಂತ ವೇಳೆ ಕಣ್ಮುಂದೆ ಬಂದಿತಲ್ಲೇ
ಪ್ರಿಯೆ ನಿನ್ನ ಕಾಡಿಗೆ ಕಣ್ಣ ಆ ನೋಟದಂದವೇ
ಕರೆ ನೀಡಿ ನೋಟದಲ್ಲಿ ನೀ ನಿಂತೆ ದೂರದಲ್ಲಿ
ಬಳಿ ಬಂದೆ ಬಯಸಿ ನಿನ್ನ ನೀ ಹೋದೆ ಕಾಣದೆ
ಆ ನೆನಪು ಕಾಡಿದೆ ನನ್ನ ಈ ಬೇಗೆ ತಾಳೆನು ಚಿನ್ನ

ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ

ಕಾವೇರಿ ನೀರಿನಲ್ಲೂ ಕನ್ನಡದ ಕಾವ್ಯದಲ್ಲೂ
ಬೇಲೂರ ಬಾಲೆಯಲ್ಲೂ ನಾ ಕಂಡೆ ನಿನ್ನನು
ಒಂದೊಂದು ಭಂಗಿಯಲ್ಲೂ ಒಂದೊಂದು ಭಾವದಲ್ಲೂ
ಒಂದೊಂದು ಮಾತಿನಲ್ಲೂ ನೀ ಸೆಳೆದೆ ನನ್ನನು
ನೀ ನಿಂತೆ ಕಣ ಕಣದಲ್ಲೂ ನನ್ನೆದೆಯ ಉಸಿರುಸಿರಲ್ಲೂ

ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು ನಗೆ ಮಿಂಚು ನಿನ್ನದು
ನೆನಪಾಗಿ ಬಂದಿದೆ ಸಿಹಿ ನೋವ ತಂದಿದೆ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ

ಸ್ನೇಹಿತರೇ ನಿಮಗೆ ಸ್ವಾಗತ



ಚಿತ್ರ: ಪ್ರೀತಿವಾತ್ಸಲ್ಯ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೪

ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಓ ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ

ರಸಪೂರ್ಣ ರಂಗಾದ ಸಂಜೆಯಲ್ಲಿ
ಸವಿ ಸ್ನೇಹ ತಂದಂಥ ವೇಳೆಯಲ್ಲಿ
ನಾ ಹಾಡುವ ಈ ಹಾಡಿನ ತಾಳಮೇಳ ಸೇರಿ ನಿಮ್ಮ ಕೂಗಲೀಗ
ಕ್ಷಣವೊಂದು ಕಣ್ಣೋಟ ಸೇರಿದಾಗ
ಸವಿ ಮಾತು ತಮ್ಮಲ್ಲೇ ಆಡಿದಾಗ
ಆ ಮೌನದ ಪಿಸುಮಾತಿಗೆ ಸಾಟಿಯಾದ ಯಾವ ಪ್ರೇಮ ಕಾವ್ಯವಿಲ್ಲ
ಹೃದಯ ಹಗುರಾಗಿ ಇರಲಿ
ಪ್ರೀತಿವಾತ್ಸಲ್ಯ ನಗಲಿ

ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಹೇ ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ

ತನ್ನಾಸೆ ಮಗನಲ್ಲಿ ತಾಯಿಯ ಪ್ರೀತಿ
ಒಲಿದಂತ ಪತಿಯಲ್ಲಿ ಪತ್ನಿಯ ಪ್ರೀತಿ
ಒಡಹುಟ್ಟಿದ ಸಂಬಂಧವು ತರುವಂಥ ಸವಿಯಾದ ಸುಮಧುರ ಪ್ರೀತಿ
ಪ್ರಿಯನಲ್ಲಿ ಪ್ರೆಯಸಿಯು ತೋರುವ ಪ್ರೀತಿ
ನಿಜ ಸ್ನೇಹ ತಂದಂಥ ನಿರ್ಮಲ ಪ್ರೀತಿ
ಈ ಪ್ರೀತಿಯೂ ವಿಶ್ವಾಸವೂ ಬಾಳಲ್ಲಿ ಇರಲೆಂದು ಶಾಶ್ವತ ರೀತಿ
ಮನಸು ಹಾಯಾಗಿ ಇರಲಿ
ಪ್ರೀತಿವಾತ್ಸಲ್ಯ ನಗಲಿ

ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಹೇ ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ

Thursday, November 4, 2010

ಜೋಗದ ಸಿರಿ ಬೆಳಕಿನಲ್ಲಿ

ರಚನೆ: ನಿಸ್ಸಾರ್ ಅಹಮದ್

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲಿ
ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ
ನಿತ್ಯೋತ್ಸವ ನಿನಗೆ ನಿತ್ಯೋತ್ಸವ

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲಿ
ಗತಸಾಹಸ ಸಾರುತಿರುವ ಶಾಸನಗಳ ಸಾಲಿನಲಿ
ಓಲೆಗರಿಯ ಸಿರಿಗಳಲ್ಲಿ ದೇಗುಲಗಳ ಭಿತ್ತಿಗಳಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ
ನಿತ್ಯೋತ್ಸವ ನಿನಗೆ ನಿತ್ಯೋತ್ಸವ

ಒಲವೆನ್ನದ ಹಿರಿಮೆಯ ಕುಲವೆನ್ನದ ಗರಿಮೆಯ
ಸದ್ವಿಕಾಸ ಶೀಲನುಡಿಯ ಲೋಕಾಮೃತ ಸೀಮೆಯ
ಈ ವರ್ಷದ ಈ ಹರ್ಷದ ಮನ ಉದಾರ ಮಹಿಮೆಯ
ನಿತ್ಯೋತ್ಸವ ತಾಯೆ ನಿತ್ಯೋತ್ಸವ
ನಿತ್ಯೋತ್ಸವ ನಿನಗೆ ನಿತ್ಯೋತ್ಸವ

ಬಣ್ಣದ ತಗಡಿನ ತುತ್ತೂರಿ

ರಚನೆ: ಜಿ.ಪಿ. ರಾಜರತ್ನಂ

ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮಪದನಿಸ ಊದಿದನು
ಸನಿದಮಮಗರಿಸ ಊದಿದನು

ತನಗೆ ತುತ್ತೂರಿ ಇದೆಯೆಂದ
ಬೇರಾರಿಗೂ ಅದು ಇಲ್ಲೆಂದ
ತುತ್ತೂರಿ ಊದಿದ ಕೊಳದ ಬಳಿ
ಕಸ್ತೂರಿ ನಡೆದನು ಬೀದಿಯಲಿ
ಜಂಬದ ಕೋಳಿಯ ರೀತಿಯಲಿ

ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ
ಸರಿಗಮ ಊದಲು ನೋಡಿದನು
ಗಗ ಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು
ಜಂಬದ ಕೋಲಿಗೆ ಗೋಳಾಯ್ತು

ನಾನು ಬಡವಿ ಆತ ಬಡವ

ರಚನೆ:  ದ.ರಾ. ಬೇಂದ್ರೆ

ನಾನು ಬಡವಿ, ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು

ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕಟ್ಟುವಂತ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದನ
ಅವನ ಮೈಯ ಮುತ್ತೆ
ಅದೇ ಗಳಿಗೆ ಮೈಯ ತುಂಬ
ನನಗೆ ನವಿರು ಬತ್ತೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂಧಿ
ಕೆನ್ನೆ ತುಂಬ ಮುತ್ತು

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವಫಲವ
ತುಟಿಗೆ ಹಾಲು ಜೇನು

Tuesday, November 2, 2010

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ



ಚಿತ್ರ: ಪ್ರೇಮಾನುಬಂಧ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೦

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ ಸೋತು ಕವಿಯಾಗಿ ಕವಿತೆ ಹಾಡಿದೆ

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ ಸೋತು ಕವಿಯಾಗಿ ಕವಿತೆ ಹಾಡಿದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ

ಹೊಸದಾಗಿ ಮೊಗ್ಗೊಂದು ಹೂವಾಗಿ
ಆ ಹೂವೇ ಈ ಹೆಣ್ಣ ಮೊಗವಾಗಿ
ಸುಳಿದಾಡೋ ಮಿಂಚಿಂದ ಕಣ್ಣಾಗಿ
ಗಿಳಿ ಮಾತು ಅವಳಾಡೋ ಮಾತಾಗಿ
ತಂಗಾಳಿಗೆ ಒಲಾಡುವ
ಹಾ ತಂಗಾಳಿಗೆ ಒಲಾಡುವ
ಲತೆಯೊಂದು ನಡುವಾಯಿತೇನೋ
ನವಿಲೊಂದು ಕುಣಿದಂತೆ ನಡೆವಾಗ ಸಂತೋಷಗೊಂಡೆ

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ ಸೋತು ಕವಿಯಾಗಿ ಕವಿತೆ ಹಾಡಿದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ

ಹಗಲಲ್ಲಿ ಕಣ್ಮುಂದೆ ನೀನಿರುವೆ
ಇರುಳಲ್ಲಿ ಕನಸಲ್ಲಿ ನೀ ಬರುವೆ
ಜೊತೆಯಾಗಿ ಇರುವಾಸೆ ತಂದಿರುವೆ
ನನಗೆಂದು ಹೊಸ ಬಾಳ ನೀ ತರುವೆ
ಬಂಗಾರಿಯೇ ಸಿಂಗಾರಿಯೇ
ಹಾ ಬಂಗಾರಿಯೇ ಸಿಂಗಾರಿಯೇ
ನನ್ನೊಮ್ಮೆ ನೀ ನೋಡು ಚೆಲುವೆ
ಒಲವಿಂದ ಬಂದೀಗ ನನ್ನನ್ನು ನೀ ಸೇರು ಹೂವೇ

ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ
ಕಂಡು ನಿಂತೆ ನಿಂತು ಸೋತೆ ಸೋತು ಕವಿಯಾಗಿ ಕವಿತೆ ಹಾಡಿದೆ
ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ