Friday, October 29, 2010

ಯಾವ ಹೂವು ಯಾರ ಮುಡಿಗೋ



ಚಿತ್ರ: ಬೆಸುಗೆ
ಸಾಹಿತ್ಯ: ಶ್ಯಾಮಸುಂದರ್ ಕುಲಕರ್ಣಿ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೬

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಒಂದು ಮನದ ಯೋಚನೆ ಒಂದು ಮನಕೆ ಸೂಚನೆ
ಯಾರೂ ಅರಿಯಲಾರರು ಯಾರ ಪಾಲು ಯಾರಿಗೋ ಯಾರಿಗೋ...

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಮೋಹ ಪಾಶ ಎಸೆಯಿತು ಒಂದು ಪಾಠ ಕಲಿಸಿತು
ಇಂಥ ಪಾಠ ಕಲಿಸಲು ಗುರುವು ಯಾರು ಯಾರಿಗೋ ಯಾರಿಗೋ...

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಮನದ ಕದವ ತೆರೆಯಲು ಬೇರೆ ಗುರಿಯ ಮುಟ್ಟಿತು
ಯಾರು ಹೇಳಬಲ್ಲರು ಯಾರ ಪಯಣ ಎಲ್ಲಿಗೋ ಎಲ್ಲಿಗೋ...

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

Thursday, October 28, 2010

ದುಂಡು ಮಲ್ಲಿಗೆ ಮಾತಾಡೆಯಾ

ಚಿತ್ರ: ನನ್ನ ದೇವರು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೨

ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ

ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ

ನೀನಾಡೋ ಮಾತೆಲ್ಲಾ ಜೇನಂತೆ ನೀ ಹಾಡೋ ಸಂಗೀತ ಇಂಪಂತೆ
ನೀನಾಡೋ ಮಾತೆಲ್ಲಾ ಜೇನಂತೆ ನೀ ಹಾಡೋ ಸಂಗೀತ ಇಂಪಂತೆ
ಆಸೆ ಬಂದಂತೆ ಸೋತು ನಾ ನಿಂತೆ ಓ ಹೆಣ್ಣೇ ಬಲ್ಲೆಯಾ

ನಗುವಾಗ ಈ ಮೊಗವು ಶಶಿಯಂತೆ ನಲಿದಾಗ ಕುಣಿದಾಡೋ ನವಿಲಂತೆ
ನಗುವಾಗ ಈ ಮೊಗವು ಶಶಿಯಂತೆ ನಲಿದಾಗ ಕುಣಿದಾಡೋ ನವಿಲಂತೆ
ನಿನ್ನ ಕಂಡಂದೆ ಒಲಿದು ನಾ ಬಂದೆ ನಿನ್ನನ್ನು ಬಯಸಿದೆ
ಬಂದೀಗ ಸೇರಿದೆ

ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ

ನಿನ್ನಂಥ ಹೆಣ್ಣನ್ನು ಕಂಡಿಲ್ಲ ಯಾರಲ್ಲೂ ನಾ ಹೀಗೆ ಸೇರಿಲ್ಲ
ನಿನ್ನಂಥ ಹೆಣ್ಣನ್ನು ಕಂಡಿಲ್ಲ ಯಾರಲ್ಲೂ ನಾ ಹೀಗೆ ಸೇರಿಲ್ಲ
ಏಕೋ ನಾ ಕಾಣೆ ನಂಬು ನನ್ನಾಣೆ ಒಲವಿಂದ ಸೇರೆಯಾ

ನನ್ನಾಸೆ ನಿನ್ನಲ್ಲಿ ಏಕಿಲ್ಲ ಈ ಮೌನ ನಿನಗಿನ್ನೂ  ಸರಿಯಲ್ಲ
ನನ್ನಾಸೆ ನಿನ್ನಲ್ಲಿ ಏಕಿಲ್ಲ ಈ ಮೌನ ನಿನಗಿನ್ನೂ  ಸರಿಯಲ್ಲ
ನೋಡು ನೀನಿಲ್ಲಿ ಬೇರೆ ಯಾರಿಲ್ಲ ಕಣ್ಣಲ್ಲೇ ಕೊಲುವೆಯಾ
ಇಲ್ಲ ಮುತ್ತೊಂದ ಕೊಡುವೆಯಾ

ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ

Tuesday, October 26, 2010

ಕುಂಕುಮವಿರುವುದೇ ಹಣೆಗಾಗಿ



ಚಿತ್ರ: ನಾನಿರುವುದೆ ನಿನಗಾಗಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೯

ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ

ಕೈಜಾರಿದ ಮುತ್ತೊಂದು ಕೈ ಸೇರಿತು ತಾ ಬಂದು
ಹೊಸ ಹರುಷ ಪ್ರತಿ ನಿಮಿಷ ಶಾಂತಿ ನೀಡಿತು ನನಗಿಂದು

ನಿನಗಾಸರೆ ನಾನಾಗಿ ನನ್ನ ಕೈಸೆರೆ ನೀನಾಗಿ
ಕನಸುಗಳು ನನಸಾಗಿ ಬಾಳು ಹೊನ್ನಿನ ಕಡಲಾಗಿ
ಹೊಸತನ ಕಾಣುವ ಹಾಯಾಗಿ

ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ

ನನ್ನಾಸೆಯ ಹೂವಾಗಿ ನನ್ನೊಲವಿನ ಜೇನಾಗಿ
ಜೊತೆಯಲ್ಲೆ ಒಂದಾಗಿ ಎಂದು ನೀನಿರು ಸುಖವಾಗಿ

ನಾ ನೋಡುವ ಕಣ್ಣಾಗಿ ನಾ ಹಾಡುವ ಹಾಡಾಗಿ
ಬಾಳಿನಲಿ ಬೆಳಕಾಗಿ ಸೇರು ನನ್ನಲಿ ಹಿತವಾಗಿ
ಹೊಸತನ ಕಾಣುವ ಹಾಯಾಗಿ

ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ

ಹೂವಂತೆ ಹೆಣ್ಣು ನಗುತಿರಬೇಕು



ಚಿತ್ರ: ಕಿಲಾಡಿ ಕಿಟ್ಟು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಮೋಹನ್ ಕುಮಾರ್
ಗಾಯಕರು: ಕೆ. ಜೆ. ಯೇಸುದಾಸ್
ವರ್ಷ: ೧೯೭೬

ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು

ಬಂಗಾರವಲ್ಲ ಸಿಂಗಾರಕಲ್ಲ
ಕೊರಳಿನಲಿ ಮೆರೆದಿರಲು ಮಾಂಗಲ್ಯವಿಲ್ಲ
ಸುಮವ ಕೊಡುವ ಲತೆಗೆ ಹಸಿರೇ ಉಸಿರಾಗಿದೆ
ಗೃಹಿಣಿ ಇರುವ ಗುಡಿಗೆ ತಾಳಿ ಬೆಳಕಾಗಿದೆ
ಸಂತೋಷವೇನು ನೋವಾದರೇನು
ವಿರಸ ಮರೆತು ಸರಸದಿಂದ ಬಾಳಲು ಸೊಗಸು

ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು

ಆಕಾಶ ರವಿಯ ಈ ಭೂಮಿ ಗಿರಿಯ
ಮರೆಯುವುದೆ ತೊರೆಯುವುದೆ ಸಂಬಂಧ ನೂಕಿ
ಒಲಿದ ಹೃದಯ ಬೆರೆತ ಜೀವ
ಬಿಡದೆಂದಿಗೂ ಮದುವೆ ತಂದ ಬೆಸುಗೆ ಕೆಡದು ಎಂದೆಂದಿಗೂ
ಈ ರೋಷ ತಂದ ಆವೇಶದಿಂದ
ಸಹನೆ ಮರೆವೆ ಕಡೆಗೆ ಕೆಡುವೆ ಯಾತನೆ ಪಡುವೆ

ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು

Monday, October 25, 2010

ನಾನೇನು ನೀನೇನು ಅವನೇನು



ಚಿತ್ರ: ಗಾಳಿಮಾತು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ

ಕಪ್ಪನೆಯ ಮೋಡಗಳು ಕರಗುತ ನೀರಾಗಿ
ಮಳೆಯನು ನೆಲದಲಿ ಹರಿಸುತಿದೆ
ನೆಲವೆಲ್ಲ ನಗುನಗುತ ಹಚ್ಚನೆ ಹಸಿರಾಗಿ
ಬೆಳೆಯನು ಜನರಿಗೆ ಕೊಡುತಲಿರೆ
ಸಂತೋಷದಿ ನೀ ಬಾಳದೇ
ಹೇ ಸಂತೋಷದಿ ನೀ ಬಾಳದೇ
ಏಕೆ ಹೊಡೆದಾಡಿ ಕಾದಾಡುವೇ

ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ

ಗಾಳಿಯನು ನೀರನ್ನು ತಂದವ ನೀನಲ್ಲ
ಈ ನಿಜ ಏತಕೆ ಅರಿತಿಲ್ಲ
ಹಣ್ಣಿನಲಿ ಸಿಹಿಯನ್ನು ತಂದವ ನೀನಲ್ಲ
ಅರಿಯುವ ಜಾಣ್ಮೆಯೂ ಏಕಿಲ್ಲ
ನಿನದಲ್ಲದ ಸಂಪತ್ತಿಗೆ
ಹೇ ನಿನದಲ್ಲದ ಈ ಸಂಪತ್ತಿಗೆ ಏಕೆ ಬಡಿದಾಡಿ ಹೋರಾಡುವೆ

ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ
ಬಡ ಜನರು ಬಲ್ಲಿದರು ನಮ್ಮವರೇ ಎಲ್ಲಾ ನಮ್ಮವರೇ..
ನಾನೇನು ನೀನೇನು ಅವನೇನು..
ಒಂದೇ ಎಲ್ಲರೂ