ಚಿತ್ರ: ಮೂಗನ ಸೇಡು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸತ್ಯಂ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೦
ಬಂಗಾರದ ಬೊಂಬೆಯೇ ಮಾತನಾಡೇ
ಬಂಗಾರದ ಬೊಂಬೆಯೇ ಮಾತನಾಡೇ
ಸಿಂಗಾರಿಯ ಬಾಳು ಬೆಳದಿಂಗಳಾಯಿತು
ಬಂಗಾರದ ಕೋಗಿಲೆ ನನ್ನ ಕಂಡು
ಬಂಗಾರದ ಕೋಗಿಲೆ ನನ್ನ ಕಂಡು
ಸಂಗಾತಿಯೆಂದಾಗ ಭೂವಿ ಸ್ವರ್ಗವಾಯಿತು
ಬಂಗಾರದ ಕೋಗಿಲೆ...
ಕವಿಯಂತೆ ನೀನಂದ ಸವಿಯಾದ ಮಾತಿಂದ
ಹೊಸದಾದ ಆನಂದ ನಾ ಕಂಡೆನು
ಕಣ್ಣಲಿ ನಿನ್ನಂದ ತುಂಬಿ ನನ್ನಿಂದ
ಕಣ್ಣಲಿ ನಿನ್ನಂದ ತುಂಬಿ ನನ್ನಿಂದ
ನುಡಿಸಲು ನಾನಿಂದು ಕವಿಯಾದೆನು
ಬಂಗಾರದ ಬೊಂಬೆಯೇ
ಜೊತೆಯಾಗಿ ನಡೆದಾಗ ಹಿತವಾಗಿ ಸೆಳೆದಾಗ
ಅನುರಾಗ ಹೊಸ ರಾಗ ಕೇಳೆಂದಿತು
ಕಲ್ಲಿನ ವೀಣೆಯ ನುಡಿಸೋ ಜಾಣ್ಮೆಯ
ಕಲ್ಲಿನ ವೀಣೆಯ ನುಡಿಸೋ ಜಾಣ್ಮೆಯ
ಕಾಣಲು ನಿನ್ನಲ್ಲಿ ಮನ ಸೋತಿತು
ಬಂಗಾರದ ಕೋಗಿಲೆ ನನ್ನ ಕಂಡು
ಸಂಗಾತಿಯೆಂದಾಗ ಭೂವಿ ಸ್ವರ್ಗವಾಯಿತು
No comments:
Post a Comment