Tuesday, January 25, 2011

ಅನುರಾಗ ಮೂಡಿದಾಗ



ಚಿತ್ರ : ಕುಂಕುಮ ತಂದ ಸೌಭಾಗ್ಯ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಎಂ. ರಂಗರಾವ್
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ
ವರ್ಷ: ೧೯೮೫

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ ಸಂಗಾತಿ ಕೇಳು

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ ಸಂಗಾತಿ ಕೇಳು

ನಗುತಿರು ನಗುತಿರು ಎಂದೂ ಹೀಗೆ ಚೆಲುವೆ
ನಗುತಿರು ನಗುತಿರು ಎಂದೂ ಹೀಗೆ ಚೆಲುವೆ
ಪ್ರಣಯ ಗೀತೆ ತಂದ ನಿನಗೆ ನಾನು ತಂದ ಪ್ರೀತಿಗೆ
ಕಂಡೆ ನೀನು ತಂದ ಕಾಣಿಕೆ
ಬದುಕೆಲ್ಲ ಹೀಗೆ ಸಂತೋಷದಿಂದ ಬಾಳೋ ಆಸೆ ತಂದೆ ನನಗೆ

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ

ಮಗುವಿನ ನಗುಮೊಗ ಹೀಗೇ ನೋಡುತಿರಲು
ಮಗುವಿನ ನಗುಮೊಗ ಹೀಗೇ ನೋಡುತಿರಲು
ನನ್ನನ್ನು ನಾನು ಮರೆವೆ ಈ ಲೋಕವನ್ನೇ ಮರೆವೆ ಆ ಕ್ಷಣ
ಪಾವನವಾಯ್ತು ನನ್ನ ಜೀವನ
ಪ್ರತಿ ವರುಷ ಹೀಗೆ ಹೊಸದೊಂದು ಮಗುವ ಕೊಡೋ ಆಸೆ ಬಂತು ನನಗೆ

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ ಸಂಗಾತಿ ಕೇಳು

No comments: