Friday, February 25, 2011

ಹೊಸ ಬೆಳಕು ಮೂಡುತಿದೆ



ಚಿತ್ರ: ಹೊಸ ಬೆಳಕು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕರು: ಡಾ|| ರಾಜ್ ಕುಮಾರ್
ವರ್ಷ: ೧೯೮೨

ಹೊಸ ಬೆಳಕು ಮೂಡುತಿದೆ ಬಂಗಾರದ ರಥವೇರುತ
ಆಕಾಶದಿ ಓಡಾಡುತ ಅತ್ತಾ-ಇತ್ತಾ ಸುತ್ತಾ-ಮುತ್ತಾ ಚೆಲ್ಲಿದಾ
ಕಾಂತಿಯಾ.. ರವಿ ಕಾಂತಿಯಾ....

ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ-ಇಲ್ಲಿ ಹೂವ ಕಂಪ ಹರಡುತಲಿದೆ
ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ-ಇಲ್ಲಿ ಹೂವ ಕಂಪ ಹರಡುತಲಿದೆ
ಹಕ್ಕಿ ಮುಗಿಲನ್ನು ನೋಡಿ ಬೆಳಕು ಬಂತೆಂದು ಹಾಡಿ
ಹಕ್ಕಿ ಮುಗಿಲನ್ನು ನೋಡಿ ಬೆಳಕು ಬಂತೆಂದು ಹಾಡಿ
ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ ಬಾನಿಗೆ.. ಹಾರಿದೆ...

ಹೊಸ ಬೆಳಕು ಮೂಡುತಿದೆ

ಬೆಟ್ಟದಿಂದ ನೀರು ಜಾರಿ ಧುಮುಕುತಿದೆ ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಳ್ಳಿ ಬೆಳಕನ್ನು ನೋಡಿ ಮಂಜು ಮರೆಯಾಗಿ ಓಡಿ
ಬೆಳ್ಳಿ ಬೆಳಕನ್ನು ನೋಡಿ ಮಂಜು ಮರೆಯಾಗಿ ಓಡಿ
ಎಲೆಯ ಮರೆಯ ಸೇರಿ ನಲಿವ ಕೋಗಿಲೆ.. ಹಾಡಿದೆ..

ಹೊಸ ಬೆಳಕು ಮೂಡುತಿದೆ ಬಂಗಾರದ ರಥವೇರುತ
ಆಕಾಶದಿ ಓಡಾಡುತ ಅತ್ತಾ-ಇತ್ತಾ ಸುತ್ತಾ-ಮುತ್ತಾ ಚೆಲ್ಲಿದಾ..
ಕಾಂತಿಯಾ.. ರವಿ ಕಾಂತಿಯಾ...

Wednesday, February 16, 2011

ಕಂಗಳು ತುಂಬಿರಲು ಕಂಬನಿ ಧಾರೆಯಲಿ



ಚಿತ್ರ: ಚಂದನದ ಗೊಂಬೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಜಾನಕಿ
ವರ್ಷ: ೧೯೭೯

ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ
ಮೇಣದ ದೀಪದಂತೆ ನೊಂದು ನೊಂದು ನೀರಾದೇ..
ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ..

ನಿಮ್ಮ ರೂಪ ಕಣ್ಣಿನಲಿ ನಿಮ್ಮ ಮಾತೇ ಕಿವಿಗಳಲಿ
ನಿಮ್ಮ ರೂಪ ಕಣ್ಣಿನಲಿ ನಿಮ್ಮ ಮಾತೇ ಕಿವಿಗಳಲಿ
ನಿಮ್ಮ ನೋಟ ಇನ್ನೂ ನನ್ನ ಹೃದಯವೀಣೆ ಮೀಟಿರಲು
ನಿಮ್ಮ ಸ್ನೇಹ ಮನಸಿನಲಿ ನಿಮ್ಮ ಪ್ರೇಮ ನೆನಪಿನಲಿ
ನಿಮ್ಮ ಮುದ್ದು ಕಂದಾ ನನ್ನಾ ಅಮ್ಮಾ ಎಂದು ಕೂಗಿರಲು
ನೊಂದ ನನ್ನ ಜೀವ ಇಂದು ಎನೋ ಸುಖಾ ಕಾಣುತಿದೆ

ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ

ನೀವು ತಂದ ಈ ಮನೆಗೆ ನೀವು ತಂದ ಈ ಸಿರಿಗೆ
ನೀವು ತಂದ ಈ ಮನೆಗೆ ನೀವು ತಂದ ಈ ಸಿರಿಗೆ
ದೂರವಾಗಿ ಎಂದೆಂದಿಗೂ ಹೋಗಲಾರೆ ನಿಮ್ಮಾಣೆಗೂ
ನಿಮ್ಮ ಮನೆ ಬಾಗಿಲಿಗೆ ತೋರಣದ ಹಾಗಿರುವೆ
ನಿಮ್ಮ ಮನೆ ದೀಪವಾಗಿ ಬೆಳಗುವೆ ನನ್ನಾಣೆಗೂ
ನಿಮ್ಮ ನೆನಪಲ್ಲೇ ನನ್ನಾ ಬಾಳಾ ನಾನೂ ಸಾಗಿಸುವೆ

ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ
ಮೇಣದ ದೀಪದಂತೆ ನೊಂದು ನೊಂದು ನೀರಾದೇ..
ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ..

ವೇದಾಂತಿ ಹೇಳಿದನು



ಚಿತ್ರ: ಮಾನಸ ಸರೋವರ
ಸಾಹಿತ್ಯ : ಜಿ.ಎಸ್. ಶಿವರುದ್ರಪ್ಪ
ಸಂಗೀತ : ವಿಜಯಭಾಸ್ಕರ್
ಗಾಯಕರು : ಪಿ. ಬಿ. ಶ್ರೀನಿವಾಸ್
ವರ್ಷ: ೧೯೮೩

ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು
ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು... ಈ ಹೆಣ್ಣು ಮಾಯೆ, ಮಾಯೇ...
ಕವಿಯೊಬ್ಬ ಕನವರಿಸಿದನು.. ಓ.. ಇವಳೇ ಚೆಲುವೆ...
ಇವಳ ಜೊತೆಯಲ್ಲಿ ನಾನು ಸ್ವರ್ಗವನೆ ಗೆಲ್ಲುವೆ... ಸ್ವರ್ಗವನೇ ಗೆಲ್ಲುವೆ...

ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು.. ಈ ಬದುಕು ಶೂನ್ಯ ಶೂನ್ಯ
ಕವಿ ನಿಂತು ಸಾರಿದನು.. ಓ.. ಇದು ಅಲ್ಲ ಶೂನ್ಯ.
ಜನ್ಮ ಜನ್ಮದಿ ಸವಿಯೇ.. ನಾನೆಷ್ಟು ಧನ್ಯ ನಾನೆಷ್ಟು ಧನ್ಯ

ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು
ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು
ಮಣ್ಣೆಲ್ಲ ಹೊನ್ನು ಹೊನ್ನು ಮಣ್ಣೆಲ್ಲ ಹೊನ್ನು ಹೊನ್ನು

Tuesday, February 8, 2011

ಏನು ಮಾಯವೋ ಏನು ಮರ್ಮವೋ



ಚಿತ್ರ: ಭಾಗ್ಯದ ಲಕ್ಷ್ಮೀ ಬಾರಮ್ಮ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸಿಂಗೀತಂ ಶ್ರೀನಿವಾಸರಾವ್
ಗಾಯಕರು: , ವಾಣಿ ಜಯರಾಂ
ವರ್ಷ: ೧೯೮೬

ಏನು ಮಾಯವೋ ಏನು ಮರ್ಮವೋ
ಏನು ಮಾಯವೋ ಏನು ಮರ್ಮವೋ ಗೆಲ್ಲುವ ಕುದುರೆಯೇ ಎಂದೂ ಗೆಲುವುದು
ಹಳ್ಳದ ಕಡೆಗೇ ನೀರು ಹರಿವುದು ಹಣವಂತರಿಗೇ ಹಣ ಸೇರುವುದು....
ಏನು ಮಾಯವೋ ಏನು ಮರ್ಮವೋ

ಸಿಮೆಂಟು ಸಿಗದು ಎನ್ನುತಲಿದ್ದರೂ ಮನೆಗಳು ಏಳುತಲಿವೆಯಲ್ಲ
ಪೆಟ್ರೋಲ್ ಬೆಲೆಯು ಏರಿದರೇನು ಹೊಸ ಕಾರುಗಳಿಗೆ ಬರವಿಲ್ಲ
ಜನರಲಿ ಹಣವೇ ಇಲ್ಲ ಎಂದರೂ ಪೇಟೆಯು ಜಾತ್ರೆಯು ದಿನವೆಲ್ಲ
ಯುದ್ಧವೇ ಬರಲಿ ಕ್ಷಾಮವೇ ಬರಲಿ ಸಿನಿಮಾ ಡ್ರಾಮ ನಿಲ್ಲಲ್ಲ
ಇವರಿಗೆ ದೊರೆತ ಈ ಶ್ರೀಮಂತಿಕೆ ನಮಗೆ ಏಕೆ ಸಿಕ್ಕಿಲ್ಲ
ಅಯ್ಯೋ ಮಂಕೆ ತಿಳಿದುಕೋ ನಿಜವ
ನಮಗೆ ಅಂಥ ಲಕ್ಕಿಲ್ಲ ನಮಗೆ ಅಂಥ ಲಕ್ಕಿಲ್ಲ

ಏನು ಮಾಯವೋ ಏನು ಮರ್ಮವೋ

ಲಾಸು ಲಾಸು ಎನ್ನುತಲಿದ್ದರೂ ಬಿಸಿನೆಸ್ ಯಾವುದೂ ಡಲ್ಲಿಲ್ಲ
ಟ್ಯಾಕ್ಸು ರೈಡು ಎಂದರೆ ಏನೂ ಧನಿಕರ ಸಂಖ್ಯೆ ಕರಗಿಲ್ಲ
ತ್ರೀ ಸ್ಟಾರ್ ಫೈವ್ ಸ್ಟಾರ್ ಹೋಟೆಲ್ ಗಳಲೂ ಖಾಲಿ ರೂಮು ಒಂದಿಲ್ಲ
ಬಸ್ಸು ಟ್ರೈನು ಪ್ಲೈನೇ ಆಗಲಿ ಸತ್ತರೂ ಟಿಕೇಟು ಸಿಕ್ಕಲ್ಲ
ಹಣವನು ಮಾಡುವ ಸುಲಭೋಪಾಯ ನಿನಗೆ ಯಾಕೆ ತಿಳಿದಿಲ್ಲ
ನಿನ್ನನು ಬಿಟ್ಟು ಕಂಬಿಯ ಎಣಿಸೋ
ಆಸೆಯು ಇನ್ನೂ ಬಂದಿಲ್ಲ  ಆಸೆಯು ಇನ್ನೂ ಬಂದಿಲ್ಲ

ಏನು ಮಾಯವೋ ಏನು ಮರ್ಮವೋ
ಏನು ಮಾಯವೋ ಏನು ಮರ್ಮವೋ ಗೆಲ್ಲುವ ಕುದುರೆಯೇ ಎಂದೂ ಗೆಲುವುದು
ಹಳ್ಳದ ಕಡೆಗೇ ನೀರು ಹರಿವುದು ಹಣವಂತರಿಗೇ ಹಣ ಸೇರುವುದು....
ಏನು ಮಾಯವೋ ಏನು ಮರ್ಮವೋ ಏನು ಮಾಯವೋ ಏನು ಮರ್ಮವೋ

ಬೆಸುಗೆ ಬೆಸುಗೆ



ಚಿತ್ರ: ಬೆಸುಗೆ
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
ವರ್ಷ: ೧೯೭೬

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ
ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ರಾಗದ ಜೊತೆಗೆ ತಾಳದ ಬೆಸುಗೆ
ರಾಗತಾಳಕೆ ಭಾವದ ಬೆಸುಗೆ
ರಾಗದ ಜೊತೆಗೆ ತಾಳದ ಬೆಸುಗೆ
ರಾಗತಾಳಕೆ ಭಾವದ ಬೆಸುಗೆ
ಭಾವದ ಜೊತೆಗೆ ಗೀತೆಯ ಬೆಸುಗೆ
ಗೀತೆಯ ಜೊತೆ ಸಂಗೀತದ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
ಯೌವನದಲ್ಲಿ ಮೋಹದ ಬೆಸುಗೆ
ಮೈ ಮನದಲ್ಲಿ ಬಯಕೆಯ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ಎರಡು ಮನಸಿಗೆ ಒಲವಿನ ಬೆಸುಗೆ
ಎರಡು ಬಾಳಿನ ಬಂಧನ ಬೆಸುಗೆ
ಎರಡು ಮನಸಿಗೆ ಒಲವಿನ ಬೆಸುಗೆ
ಎರಡು ಬಾಳಿನ ಬಂಧನ ಬೆಸುಗೆ
ಮಧುರ ಮಿಲನಕೆ ಪ್ರೀತಿಯ ಬೆಸುಗೆ
ಜನುಮ ಜನುಮಕೂ ಆತ್ಮದ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ
ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜನುಮ ಜನುಮಕೂ ಆತ್ಮದ ಬೆಸುಗೆ

Friday, February 4, 2011

ಹೇ.... ಕವಿತೆ ನೀನು ರಾಗ ನಾನು



ಚಿತ್ರ: ಪ್ರಿಯ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಇಳಯರಾಜ
ಗಾಯಕರು : ಕೆ. ಜೆ. ಯೇಸುದಾಸ್, ಎಸ್.ಜಾನಕಿ
ವರ್ಷ: ೧೯೭೯

ಹೇ.... ಕವಿತೆ ನೀನು ರಾಗ ನಾನು
ನಾನು ನೀನು ಒಂದಾಗೆ ಈ ಬಾಳೇ ಪ್ರೇಮಗೀತೆಯಂತೆ
ಹೇ...ಕವಿತೆ ನೀನು ರಾಗ ನಾನು..

ನಿನ್ನ ರೂಪ ಕಂಡು ತಂಗಾಳಿ ಬಂದಿದೆ
ನಿನ್ನ ರೂಪ ಕಂಡು ತಂಗಾಳಿ ಬಂದಿದೆ
ಹೊನ್ನ ಮೈಯ್ಯ ಸೋಕಿ ಆನಂದ ಹೊಂದಿದೆ
ಹೋಯ್..ಹೋಯ್.. ಹೊನ್ನ ಮೈಯ್ಯ ಸೋಕಿ ಆನಂದ ಹೊಂದಿದೆ
ತನ್ನಾಸೆ ಇನ್ನೂ ತೀರದಾಗಿ ಬೀಸಿ ಬೀಸಿ ಬಂದು ಹೋಗಿ

ಹೇ.... ಕವಿತೆ ನೀನು ರಾಗ ನಾನು

ನಿನ್ನ ಮಾತು ಕೇಳಿ ಆ ಗಿಳಿಯೇ ನಾಚಿದೆ
ನಿನ್ನ ಮಾತು ಕೇಳಿ ಆ ಗಿಳಿಯೇ ನಾಚಿದೆ
ಮುದ್ದು ಮಾತ ಮರೆತು ಕಲ್ಲಾಗಿ ಹೋಗಿದೆ
ಹೋಯ್ ಹೋಯ್.. ಮುದ್ದು ಮಾತ ಮರೆತು ಕಲ್ಲಾಗಿಹೋಗಿದೆ
ನಿನ್ನಿಂದ ಪ್ರೀತಿ ಮಾತು ಇನ್ನು ಕೇಳಿ ಕೇಳಿ ಕಲಿವಾ ಆಸೆ

ಹೇ.... ಕವಿತೆ ನೀನು ರಾಗ ನಾನು

ನಿನ್ನ ಕಂಡ ಮನಸು ಕವಿಯಂತೆ ಹಾಡಿದೆ
ನಿನ್ನ ಕಂಡ ಮನಸು ಕವಿಯಂತೆ ಹಾಡಿದೆ
ನೆನ್ನೆ ಕಂಡ ಕನಸು ನನಸಾಗಿ ಹೋಗಿದೆ
ಹೋಯ್ ಹೋಯ್ .. ನೆನ್ನೆ ಕಂಡ ಕನಸು ನನಸಾಗಿ ಹೋಗಿದೆ
ನಿನ್ನಿಂದ ನನ್ನ ಯಾರೂ ಇನ್ನು ಎಂದೂ ದೂರ ಮಾಡಲಾರದೆಂದೂ

ಹೇ....ಕವಿತೆ ನೀನು ರಾಗ ನಾನು
ನಾನು ನೀನು ಒಂದಾಗೆ ಈ ಬಾಳೇ ಪ್ರೇಮಗೀತೆಯಂತೆ
ಹೇ....ಕವಿತೆ ನೀನು ರಾಗ ನಾನು

Thursday, February 3, 2011

ಮೊದಲನೆ ದಿನವೇ ಒಲಿದೆ



ಚಿತ್ರ: ಪಾವನ ಗಂಗ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೭

ಮೊದಲನೆ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾಡಿದೆ ಕವಿತೆ ಕಂಗಳಲೇ ಮೌನದಲೇ
ಮೊದಲನೆ ದಿನವೇ ಸೋತೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ

ಬಾಳಿನ ಲತೆಯಲಿ ಹೂವಾದೆ ಬಾಳಿನ ಕುಸುಮಕೆ ಜೇನಾದೆ
ಬಾಳಿನ ಲತೆಯಲಿ ಹೂವಾದೆ ಬಾಳಿನ ಕುಸುಮಕೆ ಜೇನಾದೆ
ಬಾಳ ಬಯಕೆಯೇ ನೀನಾದೆ ಬಾಳಿಗಾನಂದ ನೀ ತಂದೆ

ಪ್ರೇಮದ ಕಡಲಲಿ ಮುತ್ತಾದೆ ಪ್ರೇಮದ ಬದುಕಿಗೆ ಕಣ್ಣಾದೆ
ಪ್ರೇಮ ಪಲ್ಲವಿ ನೀನಾದೆ ಪ್ರೇಮದಾನಂದ ನೀ ತಂದೆ
ಪ್ರೇಮದಾನಂದ ನೀ ತಂದೆ

ಮೊದಲನೆ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ

ಈ ದಿನ ಹೊಸತನ ನೀ ತಂದೆ ನಾಳಿನ ಬದುಕಿಗೆ ಬೆಳಕಾದೆ
ಈ ದಿನ ಹೊಸತನ ನೀ ತಂದೆ ನಾಳಿನ ಬದುಕಿಗೆ ಬೆಳಕಾದೆ
ಪ್ರಾಣ ಪದಕವೇ ನೀನಾದೆ ನಾನು ನಿನ್ನಲ್ಲಿ ಒಂದಾದೆ

ಆಡುವ ಮಾತಿಗೆ ದನಿಯಾದೆ ಹಾಡುವ ಗೀತೆಗೆ ಶ್ರುತಿಯಾದೆ
ಜೀವ ಜೀವವೇ ನೀನಾದೆ ನಿನ್ನ ಮನದಲ್ಲಿ ನಾನಾದೆ
ನಿನ್ನ ಮನದಲ್ಲಿ ನಾನಾದೆ

ಮೊದಲನೆ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾಡಿದೆ ಕವಿತೆ ಕಂಗಳಲೇ ಮೌನದಲೇ
ಮೊದಲನೆ ದಿನವೇ ಸೋತೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ

ಆಕಾಶ ದೀಪವು ನೀನು



ಚಿತ್ರ: ಪಾವನ ಗಂಗ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೭

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು

ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಹೃದಯದ ವೀಣೆಯನು ಹಿತವಾಗಿ ನುಡಿಸುತಲಿ
ಆನಂದ ತುಂಬಲು ನೀನು ನಾ ನಲಿವೆನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು

ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಹೃದಯವು ಧರಿಸಿದೆ ಈ ಜೀವ ಸೋಲುತಿದೆ
ಸಂಗಾತಿ ಆದರೆ ನೀನು ನಾ ಉಳಿವೆನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು

ಹೂವಾದ ಆಸೆಯೆಲ್ಲ ಮುಳ್ಳಾಗಿ ಹೋಯಿತಲ್ಲ
ಜೀವ ನೋವ ತಾಳದಲ್ಲ ಸುಖ ಶಾಂತಿ ಇನ್ನಿಲ್ಲ
ನೆಮ್ಮದಿಯ ಕಾಣೆನು ನಾ ಸೋತೆನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು

Tuesday, February 1, 2011

ಸ್ನೇಹದ ಕಡಲಲ್ಲಿ



ಚಿತ್ರ: ಶುಭಮಂಗಳ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೫

ಸ್ನೇಹದ ಕಡಲಲ್ಲಿ.... ನೆನಪಿನ ದೋಣೀಯಲೀ...
ಸ್ನೇಹದ ಕಡಲಲ್ಲಿ.... ನೆನಪಿನ ದೋಣೀಯಲೀ...
ಪಯಣಿಗ ನಾನಮ್ಮ ಪಯಣಿಗ ನಾನಮ್ಮ
ಪ್ರೀತಿಯ ತೀರವ ಸೇರುವುದೊಂದೇ
ಪ್ರೀತಿಯ ತೀರವ ಸೇರುವುದೊಂದೇ
ಬಾಳಿನ ಗುರಿಯಮ್ಮ ಬಾಳಿನ ಗುರಿಯಮ್ಮ...

ಸ್ನೇಹದ ಕಡಲಲ್ಲಿ... ನೆನಪಿನ ದೋಣೀಯಲೀ...
ಪಯಣಿಗ ನಾನಮ್ಮ ಪಯಣಿಗ ನಾನಮ್ಮ

ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮಾಸಿಲ್ಲ
ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮಾಸಿಲ್ಲ
ಆಟದೆ ಸೋತು ರೋಷದೆ ಕಚ್ಚಿದ ಆಟದೆ ಸೋತು ರೋಷದೆ ಕಚ್ಚಿದ
ಗಾಯವ ಮರೆತಿಲ್ಲ.. ಗಾಯವ ಮರೆತಿಲ್ಲ

ಸ್ನೇಹದ ಕಡಲಲ್ಲಿ... ನೆನಪಿನ ದೋಣೀಯಲೀ...
ಪಯಣಿಗ ನಾನಮ್ಮ ಪಯಣಿಗ ನಾನಮ್ಮ

ಶಾಲೆಗೆ ಚಕ್ಕರ್ ಊಟಕೆ ಹಾಜರ್ ಲೆಕ್ಕದೆ ಬರಿ ಸೊನ್ನೆ
ಶಾಲೆಗೆ ಚಕ್ಕರ್ ಊಟಕೆ ಹಾಜರ್ ಲೆಕ್ಕದೆ ಬರಿ ಸೊನ್ನೆ
ಎನ್ನುತ ನಾನು ಕೆಣಕಲು ನಿನ್ನ
ಎನ್ನುತ ನಾನು ಕೆಣಕಲು ನಿನ್ನ ಉದಿಸಿದೆ ಕೆನ್ನೆ... ನಾನದ ಮರೆಯುವೆನೆ?

ಸ್ನೇಹದ ಕಡಲಲ್ಲಿ... ನೆನಪಿನ ದೋಣೀಯಲೀ...
ಪಯಣಿಗ ನಾನಮ್ಮ ಪಯಣಿಗ ನಾನಮ್ಮ
ಪ್ರೀತಿಯ ತೀರವ ಸೇರುವುದೊಂದೇ
ಪ್ರೀತಿಯ ತೀರವ ಸೇರುವುದೊಂದೇ
ಬಾಳಿನ ಗುರಿಯಮ್ಮ ಬಾಳಿನ ಗುರಿಯಮ್ಮ

ಏನೋ ಸಂತೋಷ ಏನೋ ಉಲ್ಲಾಸ



ಚಿತ್ರ: ಪುಟಾಣಿ ಏಜೆಂಟ್ ೧೨೩
ಸಾಹಿತ್ಯ: ಗೀತಪ್ರಿಯ
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೯

ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ
ಎಂದು ಮುಗಿಯದ ಪ್ರೇಮ ಬಂಧನ
ಜನ್ಮ ಜನ್ಮದ ಈ ಆತ್ಮ ಬಂಧನ
ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ
ಎಂದು ಮುಗಿಯದ ಪ್ರೇಮ ಬಂಧನ
ಜನ್ಮ ಜನ್ಮದ ಈ ಆತ್ಮ ಬಂಧನ

ನನ್ನಾಸೆ ನಿನ್ನಾಸೆ, ಒಂದಾಗಿ ಸೇರಿ ಏನೇನೊ ಕೋರಿ, ಉಯ್ಯಾಲೆ ತಾನಾಡಿದೆ
ನಿನ್ನಲ್ಲಿ ನನ್ನಲ್ಲಿ, ಒಲವೆಲ್ಲ ಕೂಡಿ ಗೆಲುವಿಂದ ಹಾಡಿ, ಎಲ್ಲೆಲ್ಲೊ ಓಲಾಡಿದೆ
ದಾಹವೊ ಮೋಹವೊ, ಹೂಬಳ್ಳಿಯೊಂದು, ಮರಸುತ್ತಿ ಬಂದು, ತಾ ನೀಡೆ ಆಲಿಂಗನ
ಸಂಚಿನ ಮಿಂಚಿನ, ಕಣ್ಣೆರೆಡು ಕೂಡಿ, ಮಾಡಿರಲು ಮೋಡಿ, ಮೈಯಲ್ಲಿ ಮೃದು ಕಂಪನ
ಇಂದೇಕೊ ನಮ್ಮಲ್ಲಿ ಇಂತಹ ತಲ್ಲಣ

ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ
ಎಂದು ಮುಗಿಯದ ಪ್ರೇಮ ಬಂಧನ
ಜನ್ಮ ಜನ್ಮದ ಈ ಆತ್ಮ ಬಂಧನ

ನೀನಲ್ಲಿ ನಾನಿಲ್ಲಿ, ಈ ನೋಟದಲ್ಲಿ, ಆ ನೋಟ ನಕ್ಕು, ಚೆಲ್ಲಾಟ ನೀನಾಡಿದೆ
ಹಾಡುತ ಆಡುತ, ಮನವೆಂಬ ಹಕ್ಕಿ, ಒಲವೆಲ್ಲೊ ಉಕ್ಕಿ, ಬಾನಲ್ಲಿ ಹಾರಾಡಿದೆ
ನಿನ್ನಿಂದ ನನ್ನೊಂದ, ಹೂವಲ್ಲಿ ಜೇನು, ನನ್ನಲ್ಲಿ ನೀನು, ಬಾಳೆಲ್ಲ ಹಾಯಾಗಿದೆ
ನಾವೆಂದು ಒಂದೆಂದು, ನಮ್ಮಂತರಂಗ ಆನಂದರಂಗ, ಅನುರಾಗ ತಾ ತಂದಿದೆ
ತಂಗಾಳಿ ತಂಪಾದ ಸಂದೇಶ ಸಾರಿದೆ

ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ
ಎಂದು ಮುಗಿಯದ ಪ್ರೇಮ ಬಂಧನ
ಆತ್ಮ ಬಂಧನ, ಆತ್ಮ ಬಂಧನ