Showing posts with label ಎಂ. ರಂಗರಾವ್. Show all posts
Showing posts with label ಎಂ. ರಂಗರಾವ್. Show all posts

Monday, June 6, 2011

ಸಂತೋಷ ಅಹಾ ಅಹಾ ಸಂಗೀತ ಓಹೋ ಓಹೋ

ಚಿತ್ರ: ಎಡಕಲ್ಲು ಗುಡ್ಡದ ಮೇಲೆ
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಪಿ. ಸುಶೀಲ
ವರ್ಷ: ೧೯೭೩

ಸಂತೋಷ ಅಹಾ ಅಹಾ ಸಂಗೀತ ಓಹೋ ಓಹೋ
ರಸಮಯ ಸಂತೋಷ, ಸುಖಮಯ ಸಂಗೀತ
ಹೊಸ ಹೊಸ ಭಾವತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ

ಏಳು ಸ್ವರಗಳ ಭಾವಗೀತೆಯ ಸಂಗೀತ ಏಳು ಬಣ್ಣದ ಭೂಮಿ ರಮಣಿಗೆ ಸಂತೋಷ
ರಾಗ ಸಂಗೀತ ಗೆಲುವಿನ ಯೋಗ ಸಂತೋಷ
ರಾಗ ಸಂಗೀತ ಗೆಲುವಿನ ಯೋಗ ಸಂತೋಷ
ಹಾದಿಗೆಲ್ಲಾ ಹೂವು ಚೆಲ್ಲಿ
ಹಾದಿಗೆಲ್ಲಾ ಹೂವು ಚೆಲ್ಲಿ ಓಡಿ ಓಡಿ ಸಾಗುವಲ್ಲಿ ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ

ಸಂತೋಷ ಅಹಾ ಅಹಾ ಸಂಗೀತ ಹೆಹೇ ಹೆಹೇ
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವತುಂಬಿ ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ

ಜುಳು ಜುಳು ಹರಿಯುವ ನೀರಿನ ಅಲೆಗಳ ಸಂಗೀತ ಸುಯ್ ಸುಯ್ ಎನ್ನುತ ಬೀಸುವ ಗಾಳಿಗೆ ಸಂತೋಷ
ಸ್ವರ್ಗ ಸಂಗೀತ ನಿಸರ್ಗ ಸಂತೋಷ
ಸ್ವರ್ಗ ಸಂಗೀತ ನಿಸರ್ಗ ಸಂತೋಷ
ಸನ್ನೆ ಮಾಡಿ ಕೈಯಾ ಬೀಸಿ
ಸನ್ನೆ ಮಾಡಿ ಕೈಯಾಬೀಸಿ ಗುಟ್ಟು ಹೇಳಿ ಬೆಟ್ಟ ಸಾಲು ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ.

ಕದ್ದು ಹಾಡುವ ಕೋಗಿಲೆ ಕೊರಳಿನ ಸಂಗೀತ ಮುದ್ದು ಜಿಂಕೆಗೆ ಜಿಗಿದು ನೆಗೆಯುವ ಸಂತೋಷ
ನಾದ ಸಂಗೀತ ಉನ್ಮಾದ ಸಂತೋಷ
ನಾದ ಸಂಗೀತ ಉನ್ಮಾದ ಸಂತೋಷ
ಉಬ್ಬಿ ಹಬ್ಬಿ ಬಾಚಿ ತಬ್ಬಿ
ಉಬ್ಬಿ ಹಬ್ಬಿ ಬಾಚಿ ತಬ್ಬಿ ನಾಚಿ ನಿಂತ ಹೂವು ಬಳ್ಳಿ ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ

Wednesday, June 1, 2011

ಪ್ರೇಮದಲ್ಲಿ ಸ್ನೇಹದಲ್ಲಿ

ಚಿತ್ರ : ರಂಗನಾಯಕಿ
ಸಾಹಿತ್ಯ: ಎಂ. ಎನ್. ವ್ಯಾಸರಾವ್
ಸಂಗೀತ: ಎಂ. ರಂಗರಾವ್
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ಹಾಯ್ ಬೇಬೀಸ್...
ಪ್ರೇಮದಲ್ಲಿ ಸ್ನೇಹದಲ್ಲಿ ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ
ಸೋ ನಾವೆಲ್ಲ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್ ಮೈ ಡಿಯರ್ಸ್
ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ

ನನ್ನ ಭಾಷೆ ಚೌ ಚೌ ಭಾಷೆ ನನ್ನ ಆಸೆ ಮಸಾಲ ದೋಸೆ
ನನ್ನ ಭಾಷೆ ಚೌ ಚೌ ಭಾಷೆ ನನ್ನ ಆಸೆ ಮಸಾಲ ದೋಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ದಯವ ತೋರಿ ದಾನ ಮಾಡಿ ಹತ್ತು ಪೈಸೆ
ಶಾಸ್ತ್ರೀಜಿ ರೀಟಾಜಿ ತಂಗಮ್ಮ ನಿಂಗಮ್ಮ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್ ಓಹ್ ಡಿಯರ್ಸ್ ಕ್ಯೂಂ ಭಾಯ್

ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ

ನನ್ನ ಮಾತು ಕೇಸರಿ ಭಾತು ನನ್ನ ಕೋಪ ಖಾರ ಭಾತು
ನನ್ನ ಮಾತು ಕೇಸರಿ ಭಾತು ನನ್ನ ಕೋಪ ಖಾರ ಭಾತು
ದಿಲ್ ಖೋಲ್ಕೆ ನೀವು ಆಡಿ ಕನ್ನಡ ಮಾತು
ದಿಲ್ ಖೋಲ್ಕೆ ನೀವು ಆಡಿ ಕನ್ನಡ ಮಾತು ಕನ್ನಡ ಮಾತು
ಅಬ್ದುಲ್ಲ ಸೈದುಲ್ಲ ಆಂಟೋನಿ ಅವಧಾನಿ
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್
ಕೂಡುವ ಹಾರುವ ಹಾಡುವ ಓಹ್ ಡಿಯರ್ಸ್ ಮೈ ಡಿಯರ್ಸ್
ವಾಟ್ ಡಾರ್ಲಿಂಗ್ ವಾಟ್ ಡು ಯು ಸೇ

ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಷ ವೇಷ ಎಲ್ಲ ಒಂದೇ.. ಒಂದೇ

ಕನ್ನಡ ನಾಡಿನ ರಸಿಕರ ಮನವ

ಚಿತ್ರ : ರಂಗನಾಯಕಿ
ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ
ಸಂಗೀತ: ಎಂ.ರಂಗರಾವ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ

ಕಲೆಯ ರಸ ಗಂಗೆಯಲ್ಲಿ ನಿಂದ ಸೌಂದರ್ಯವಲ್ಲಿ
ಕಲೆಯ ರಸ ಗಂಗೆಯಲ್ಲಿ ನಿಂದ ಸೌಂದರ್ಯವಲ್ಲಿ
ಮಾತಂಗಿ ತಂಗಿ ಲಲಿತ ಲತಾಂಗಿ
ತಂಗಿ ಲಲಿತ ಲತಾಂಗಿ

ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ

ಬಣ್ಣದ ಬದುಕಿಂದ
ಬಣ್ಣದ ಬದುಕಿಂದ ಚಿನ್ನದ ಬಾಳಿಗೆ ಮನ್ನಣೆ ಪಡೆದ
ಭಾಗ್ಯವತಿ ಸೌಭಾಗ್ಯವತಿ

ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನಾಯಕಿ
ರಂಗನಾಯಕಿ ರಂಗನಾಯಕಿ

ನಿನ್ನ ಹೃದಯ ಹಸಿರಾಗಿರಲಿ
ನಿನ್ನ ಹೃದಯ ಹಸಿರಾಗಿರಲಿ ನಿನ್ನ ನೆನಪು ಸವಿಯಾಗಿರಲಿ
ಹೋಗಿ ಬಾ ಹೋಗಿ ಬಾ ಹೋಗಿ ಬಾ
ದೀರ್ಘಸುಮಂಗಲಿ ದೀರ್ಘಸುಮಂಗಲಿ
ದೀರ್ಘಸುಮಂಗಲಿ ದೀರ್ಘಸುಮಂಗಲಿ

Wednesday, March 9, 2011

ನನ್ನೆದೆ ವೀಣೆಯು ಮಿಡಿಯುವುದು



ಚಿತ್ರ: ಕಥಾನಾಯಕ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಎಂ. ರಂಗರಾವ್
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ,. ವಾಣಿ ಜಯರಾಂ
ವರ್ಷ: ೧೯೮೬

ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು.....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

ಎಂದೂ ಕಾಣೆ ನಂಬು ಜಾಣೆ ನಿನ್ನಾ ಸೇರಲು
ನೂರೂ ಮಾತು ನೂರೂ ಕವಿತೆ ಕಣ್ಣೇ ಆಡಲು
ನಿನ್ನಾ ನೋಟ ನಿನ್ನಾ ಆಟ ನನ್ನಾ ಸೆಳೆಯಲು
ಒಂಟಿ ಬಾಳು ಸಾಕು ಎಂದು ಮನಸೂ ಹೇಳಲು
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಮಿಂಚಿನ ಬಳ್ಳಿಯು ಒಡಲಲಿ ಓಡುತ ನಾಚಿ ನೋಡಿದಾಗ

ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

ಮೇಲೆ ಸೂರ್ಯ ಜಾರಿ ಜಾರಿ ಬಿಸಿಲು ಕರಗಲು
ಸಂಜೆ ಬಂದು ರಂಗು ತಂದು ಮೇಲೆ ಎರಚಲು
ತಂಪು ಗಾಳಿ ಬೀಸಿ ಬಳ್ಳಿ ಬಳುಕಿ ಆಡಲು
ಹಾಗೇ ಹೀಗೆ ಆಡಿ ಹೂವು ಕಂಪು ಚೆಲ್ಲಲೂ
ದುಂಬಿ ನೋಡಿದಾಗ ಸಂಗೀತ ಹಾಡಿದಾಗ
ದುಂಬಿ ನೋಡಿದಾಗ ಸಂಗೀತ ಹಾಡಿದಾಗ
ಮನಸಿನ ಹಕ್ಕಿಯು ಕನಸನು ಕಾಣುತ ದೂರ ಹಾರಿದಾಗ

ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

Friday, February 25, 2011

ಹೊಸ ಬೆಳಕು ಮೂಡುತಿದೆ



ಚಿತ್ರ: ಹೊಸ ಬೆಳಕು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕರು: ಡಾ|| ರಾಜ್ ಕುಮಾರ್
ವರ್ಷ: ೧೯೮೨

ಹೊಸ ಬೆಳಕು ಮೂಡುತಿದೆ ಬಂಗಾರದ ರಥವೇರುತ
ಆಕಾಶದಿ ಓಡಾಡುತ ಅತ್ತಾ-ಇತ್ತಾ ಸುತ್ತಾ-ಮುತ್ತಾ ಚೆಲ್ಲಿದಾ
ಕಾಂತಿಯಾ.. ರವಿ ಕಾಂತಿಯಾ....

ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ-ಇಲ್ಲಿ ಹೂವ ಕಂಪ ಹರಡುತಲಿದೆ
ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ-ಇಲ್ಲಿ ಹೂವ ಕಂಪ ಹರಡುತಲಿದೆ
ಹಕ್ಕಿ ಮುಗಿಲನ್ನು ನೋಡಿ ಬೆಳಕು ಬಂತೆಂದು ಹಾಡಿ
ಹಕ್ಕಿ ಮುಗಿಲನ್ನು ನೋಡಿ ಬೆಳಕು ಬಂತೆಂದು ಹಾಡಿ
ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ ಬಾನಿಗೆ.. ಹಾರಿದೆ...

ಹೊಸ ಬೆಳಕು ಮೂಡುತಿದೆ

ಬೆಟ್ಟದಿಂದ ನೀರು ಜಾರಿ ಧುಮುಕುತಿದೆ ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಳ್ಳಿ ಬೆಳಕನ್ನು ನೋಡಿ ಮಂಜು ಮರೆಯಾಗಿ ಓಡಿ
ಬೆಳ್ಳಿ ಬೆಳಕನ್ನು ನೋಡಿ ಮಂಜು ಮರೆಯಾಗಿ ಓಡಿ
ಎಲೆಯ ಮರೆಯ ಸೇರಿ ನಲಿವ ಕೋಗಿಲೆ.. ಹಾಡಿದೆ..

ಹೊಸ ಬೆಳಕು ಮೂಡುತಿದೆ ಬಂಗಾರದ ರಥವೇರುತ
ಆಕಾಶದಿ ಓಡಾಡುತ ಅತ್ತಾ-ಇತ್ತಾ ಸುತ್ತಾ-ಮುತ್ತಾ ಚೆಲ್ಲಿದಾ..
ಕಾಂತಿಯಾ.. ರವಿ ಕಾಂತಿಯಾ...

Tuesday, January 25, 2011

ಅನುರಾಗ ಮೂಡಿದಾಗ



ಚಿತ್ರ : ಕುಂಕುಮ ತಂದ ಸೌಭಾಗ್ಯ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಎಂ. ರಂಗರಾವ್
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ
ವರ್ಷ: ೧೯೮೫

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ ಸಂಗಾತಿ ಕೇಳು

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ ಸಂಗಾತಿ ಕೇಳು

ನಗುತಿರು ನಗುತಿರು ಎಂದೂ ಹೀಗೆ ಚೆಲುವೆ
ನಗುತಿರು ನಗುತಿರು ಎಂದೂ ಹೀಗೆ ಚೆಲುವೆ
ಪ್ರಣಯ ಗೀತೆ ತಂದ ನಿನಗೆ ನಾನು ತಂದ ಪ್ರೀತಿಗೆ
ಕಂಡೆ ನೀನು ತಂದ ಕಾಣಿಕೆ
ಬದುಕೆಲ್ಲ ಹೀಗೆ ಸಂತೋಷದಿಂದ ಬಾಳೋ ಆಸೆ ತಂದೆ ನನಗೆ

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ

ಮಗುವಿನ ನಗುಮೊಗ ಹೀಗೇ ನೋಡುತಿರಲು
ಮಗುವಿನ ನಗುಮೊಗ ಹೀಗೇ ನೋಡುತಿರಲು
ನನ್ನನ್ನು ನಾನು ಮರೆವೆ ಈ ಲೋಕವನ್ನೇ ಮರೆವೆ ಆ ಕ್ಷಣ
ಪಾವನವಾಯ್ತು ನನ್ನ ಜೀವನ
ಪ್ರತಿ ವರುಷ ಹೀಗೆ ಹೊಸದೊಂದು ಮಗುವ ಕೊಡೋ ಆಸೆ ಬಂತು ನನಗೆ

ಅನುರಾಗ ಮೂಡಿದಾಗ ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ ಸಂಗಾತಿ ಕೇಳು

Tuesday, November 16, 2010

ಕಾವೇರಿ ತೀರದಲ್ಲಿ ಒಂದು ಕಾಡು



ಚಿತ್ರ : ಜನ್ಮ ರಹಸ್ಯ
ಸಾಹಿತ್ಯ: ಎಂ. ನರೇಂದ್ರ ಬಾಬು
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಜಾನಕಿ
ವರ್ಷ: ೧೯೭೨

ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ

ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ

ಗಂಭೀರ ನಡೆ ಹಾಕಿ ಆನೆ ಬಂತು
ಸೊಂಡಿಲಲ್ಲಿ ಬಾಳೆ ಗೊನೆಯನು ತಂತು
ಡೊಂಕು ಹೆಜ್ಜೆ ಹಾಕುತ ಕರಡಿ ಬಂತು
ಡೊಂಕು ಹೆಜ್ಜೆ ಹಾಕುತ ಕರಡಿ ಬಂತು
ಹಲಸು ಜೇನು ಕಲೆಸುತ ತಾನು
ಹಲಸು ಜೇನು ಕಲೆಸುತ ತಾನು
ಕಾಣಿಕೆಯಾಗಿ ತಂತು

ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ

ಬಣ್ಣ ಬಣ್ಣದ ಗರಿಗಳ ತೆರೆದು
ನವಿಲು ಕುಣಿಯಿತು ಆಡಿ
ಬಣ್ಣ ಬಣ್ಣದ ಗರಿಗಳ ತೆರೆದು
ನವಿಲು ಕುಣಿಯಿತು ಆಡಿ
ರಾಜನ ನೋಡಿ ಹರುಷದಿ ಕೂಡಿ
ರಾಜನ ನೋಡಿ ಹರುಷದಿ ಕೂಡಿ
ಕೋಗಿಲೆ ಮೆರೆಯಿತು ಹಾಡಿ
ಹಾಡನು ಕೇಳಿ ಸ್ಫೂರ್ತಿಯ ತಾಳಿ
ಹಾಡನು ಕೇಳಿ ಸ್ಫೂರ್ತಿಯ ತಾಳಿ
ಕತ್ತೆಯು ಹಾಡಿತು ಜೊತೆಗೂಡಿ

ಕಾವೇರಿ ತೀರದಲ್ಲಿ ಒಂದು ಕಾಡು
ಆ ಕಾಡೊಂದು ಮೃಗಗಳ ಬೀಡು
ಮೃಗರಾಜನಿಗೆ ಜನುಮ ದಿನ
ಅದು ಎಲ್ಲ ಪ್ರಾಣಿಗಳು ನಲಿವ ದಿನ

ಆಡೋಣ ಬನ್ನಿ ಆಡೋಣ ಬನ್ನಿ ಅಪ್ಪಾಲೆ ತಿಪ್ಪಾಲೆ
ಹಾಕೋಣ ಬನ್ನಿ ಹಾಕೋಣ ಬನ್ನಿ ರಾಜಾಗೆ ಹೂಮಾಲೆ

ಕೋರುವೆವಿಂದು ದೇವರು ನಿನ್ನ ಸುಖವಾಗಿಡಲೆನುತ
ನ್ಯಾಯವ ನುಡಿದು ಕೀರುತಿ ಪಡೆದು ಬಾಳಲಿ ಎಂದೆನುತ
ನಗುನಗುತ ನಲಿನಲಿತ ಗೆಳೆಯರಿಗೆ ಸೈಎನುತ
ಸಾವಿರ ವರುಷ ಗೆಲ್ಲುತ ಹರುಷ ನೀನಿರು ಅನವರತ

Friday, November 12, 2010

ನೀ ಇರಲು ಜೊತೆಯಲ್ಲಿ



ಚಿತ್ರ: ಗುಣ ನೋಡಿ ಹೆಣ್ಣು ಕೊಡು
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಎಂ. ರಂಗರಾವ್
ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ, ಎಸ್. ಜಾನಕಿ
ವರ್ಷ: ೧೯೮೨

ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ
ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ

ಮಾತಲ್ಲಿ ಏನೊ ಹೊಸತನ ಮಗುವನ್ನು ಹೋಲೊ ಹೂಮನ
ರಸಕಾವ್ಯ ನಿನ್ನ ಯೌವ್ವನ ಎದೆ ತುಂಬಿ ನಿಂತೆ ಪ್ರತಿಕ್ಷಣ
ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ
ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ ಬೆರೆತೆ ಉಸಿರಲ್ಲಿ ಒಂದಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ

ಈ ನೀಲಿ ಕಣ್ಣ ಬೆಳಕಲಿ ಮನೆಯೆಲ್ಲ ಎಂದು ಬೆಳಗಲಿ
ನೀ ತಂದ ಪ್ರೀತಿ ಲತೆಯಲಿ ನಗುವೆಂಬ ಹೂವು ಅರಳಲಿ
ಅಗಲಿ ನಿನ್ನನು ಬಾಳಲಾರೆನು
ಅಗಲಿ ನಿನ್ನನು ಬಾಳಲಾರೆನು ಜೀವ ಒಡಲಿಂದ ದೂರಾದಂತೆ

ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ
ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ಬಾಳೆಲ್ಲ ಹಸಿರಾದಂತೆ ಬಾಳೆಲ್ಲ ಹಸಿರಾದಂತೆ..

Thursday, November 11, 2010

ಅರಳಿದೆ ಅರಳಿದೆ



ಚಿತ್ರ: ಮುದುಡಿದ ತಾವರೆ ಅರಳಿತು
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಜಾನಕಿ
ವರ್ಷ: ೧೯೮೩

ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ
ಬಯಸಿದೆ ಬಯಸಿದೆ ಪ್ರಿಯತಮನಾಸರೆ ಬಯಸಿದೆ
ಹರೆಯದ ಕರೆ ಸರಿದಿದೆ ತೆರೆ
ಕೇಳದೆ ಈ ಮೊರೆ ಬಾಳಿನಾ ದೊರೆ
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ

ಶಬರಿಯ ಮುಕುತಿಗೆ ಜಾನಕಿರಾಮನು ನೀನಾದೆ
ಕಮರಿದೆ ಬದುಕಿಗೆ ಆಸೆಯ ಚಿಲುಮೆಯು ನೀನಾದೆ
ಶಬರಿಯ ಮುಕುತಿಗೆ ಜಾನಕಿರಾಮನು ನೀನಾದೆ
ಕಮರಿದೆ ಬದುಕಿಗೆ ಆಸೆಯ ಚಿಲುಮೆಯು ನೀನಾದೆ
ಮಿಡಿದಿದೆ ಮನ ರಸಮಯ ಕ್ಷಣ
ಮಿಡಿದಿದೆ ಮನ ರಸಮಯ ಕ್ಷಣ
ಪ್ರೀತಿಗೆ ಸೇವೆಗೆ ಬಾಗಿದೆ ಚರಣಕೆ
ಪ್ರೀತಿಗೆ ಸೇವೆಗೆ ಬಾಗಿದೆ ಚರಣಕೆ
ಜೀವಾ ಭಾವ ನಿನದೇ
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ

ಚಲುವಿನ ಬೆಡಗಿನ ಒಲವನು ಚೆಲ್ಲಿದೆ ಮಧುವನ
ಚಂದ್ರನ ಯೌವನ ಬೆರೆತರೆ ಜೀವನ ಪಾವನ
ಚಲುವಿನ ಬೆಡಗಿನ ಒಲವನು ಚೆಲ್ಲಿದೆ ಮಧುವನ
ಚಂದ್ರನ ಯೌವನ ಬೆರೆತರೆ ಜೀವನ ಪಾವನ
ಪಪಮಗ ಮಪ ನಿನಿಪಮ ಪನಿ
ನೀ ಪಮ ಸಾನಿಪ ಗಾರಿನಿಸಾ
ಸೂರ್ಯನ ಉದಯಕೆ ಚಂದಿರನಾಸರೆ
ಸೂರ್ಯನ ಉದಯಕೆ ಚಂದಿರನಾಸರೆ
ಬಾರಾ ಬಾರಾ ಬಳಿಗೆ

ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ
ಬಯಸಿದೆ ಬಯಸಿದೆ ಪ್ರಿಯತಮನಾಸರೆ ಬಯಸಿದೆ
ಹರೆಯದ ಕರೆ ಸರಿದಿದೆ ತೆರೆ
ಕೇಳದೆ ಈ ಮೊರೆ ಬಾಳಿನಾ ದೊರೆ
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ

ಮುಂಜಾನೆ ಮೂಡಿದ ಹಾಗೆ



ಚಿತ್ರ: ಮುದುಡಿದ ತಾವರೆ ಅರಳಿತು
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೩

ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ
ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ

ಹಸಿರಾದ ಪ್ರೀತಿಯ ಕಂಡು ಉಸಿರಾಗ ಬಂದೆನು ನಾನು
ಹಸಿರಾದ ಪ್ರೀತಿಯ ಕಂಡು ಉಸಿರಾಗ ಬಂದೆನು ನಾನು
ಸಸಿಯಾದ ಸ್ನೇಹ ಮೋಹ ಬಲು
ಬೆಳೆದು ನಿಂತಿರಲು ಓಡಿ ಬಂದೆ ಬಳಿಗೆ

ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ

ಹೊಸದಾದ ಆಸೆಯ ತೋರಿ ಶಶಿಯಂತೆ ಬೆಳಗುವೆ ನೀನು
ಹೊಸದಾದ ಆಸೆಯ ತೋರಿ ಶಶಿಯಂತೆ ಬೆಳಗುವೆ ನೀನು
ಚೆಲುವಾದ ಬಾಳ ಕಡಲಿನಲಿ
ಒಲುಮೆ ದೋಣಿಯಲಿ ತೇಲು ನನ್ನ ಜೊತೆಗೆ

ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ
ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ

Wednesday, November 10, 2010

ಹೊಸಬಾಳು ಸೊಗಸೆಂದುಕೊಂಡೆ

 

ಚಿತ್ರ : ಪಟ್ಟಣಕ್ಕೆ ಬಂದ ಪತ್ನಿಯರು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ.ರಂಗರಾವ್
ಗಾಯಕರು:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ವರ್ಷ: ೧೯೮೦

ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ
ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ

ಏಕೆ ವಿಷಾದ ಬಿಡು ಶೋಕ ನನ್ನೇತಕೆ ನೋಯಿಸುವೆ
ಹೀಗೆತಕೆ ಗೋಳಾಡುವೆ
ಹೆಣ್ಣೇ ನೀ ಕೇಳು ಇದೇ ನಾಕ ಸಂತೋಷದೆ ನೀನಿರಲು
ನಿನ್ನಾಸೆಗೆ ಮಿತಿ ಬೇಡವೆ
ಹೇ.. ಹೇ.. ಅತಿ ಆಸೆ ಒಳ್ಳೆದಲ್ಲ

ಯಾವುದು ಅತಿ ಆಸೆ ? ಪಟ್ಟಣಕೆ ಹೋಗಬೇಕು ಅನ್ನೋದಾ?
ನೆಮ್ಮದಿಯಿಂದ ಇರಬೇಕು ಅನ್ನೋದಾ? ನಗುನಗುತಾ ಬಾಳಬೇಕು ಅನ್ನೋದಾ?

ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ

ಸಾಕು ನಿರಾಸೆ ಬಿಡು ಚಿಂತೆ ನನ್ನಂತೆ ನೀ ಬಾಳಿದರೆ
ಈ ಹಳ್ಳಿಯೆ ಸಾಕೆನ್ನುವೆ
ನಲ್ಲೆ ನೀನೆಂದು ನನ್ನ ಮನೆಗೆ ಆನಂದವ ತುಂಬಿದರೆ
ನೀನಿಲ್ಲಿಯೇ ಸುಖ ಕಾಣುವೆ
ಹೇ... ಹೇ... ಸುಖ ಸಂತೋಷ ಅಂಗಡೀಲಿ ಮಾರೋದಿಲ್ಲ

ನಂಗೊತ್ತಿದೆ ನಿಮ್ ಸುಖ ಸಂತೋಷ
ಕೊಟ್ಟಿಗೆ ಗುಡಿಸೋದರಲ್ಲಿದೆ ಸಗಣಿ ಎತ್ತೋದರಲ್ಲಿದೆ
ಬೆರಣಿ ತಟ್ಟೋದರಲ್ಲಿದೆ

ಹೊಸಬಾಳು ಸೊಗಸೆಂದುಕೊಂಡೆ ಈ ಮನೆಗೆ ಸೊಸೆಯಾಗಿ ಬಂದೆ
ಏನೇನೊ ಹೊಸ ಆಸೆ ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ
ಕಂಡೆ ಕಡೆಗೆಲ್ಲ ಕನಸಾಗಿ ನೊಂದೆ..ಕನಸಾಗಿ ನೊಂದೆ

Thursday, October 7, 2010

ತೆರೆದಿದೆ ಮನೆ ಓ ಬಾ ಅತಿಥಿ



ಚಿತ್ರ: ಹೊಸಬೆಳಕು 
ಸಾಹಿತ್ಯ: ಕುವೆಂಪು
ಸಂಗೀತ: ಎಂ. ರಂಗರಾವ್
ಗಾಯಕರು: ಎಸ್. ಜಾನಕಿ , ವಾಣಿ ಜಯರಾಂ
ವರ್ಷ: ೧೯೮೨ 

ಆ......   ತಾ... ನ.. ನಾ...
ತೆರೆದಿದೆ ಮನೆ ಓ ಬಾ ಅತಿಥಿ
ಆ......
ತೆರೆದಿದೆ ಮನೆ ಓ ಬಾ ಅತಿಥಿ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ನೇಸರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ ಬಾ
ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ ಬಾ
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಕಡಲಾಗಿ ಬಾ ಬಾನಾಗಿ ಬಾ
ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ
ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ
ಹೊಸಬಾಳನು ತಾ ಅತಿಥಿ
ಹೊಸಬಾಳನು ತಾ ಅತಿಥಿ