Showing posts with label ಅನುಪಮ. Show all posts
Showing posts with label ಅನುಪಮ. Show all posts
Tuesday, December 7, 2010
ಒಲುಮೆ ಪೂಜೆಗೆಂದೇ
ಚಿತ್ರ: ಅನುಪಮ
ಸಾಹಿತ್ಯ: ದೊಡ್ಡರಂಗೇಗೌಡ
ಸಂಗೀತ: ಅಶ್ವಥ್-ವೈದಿ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೧
ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ
ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ...
ಮಮತೆ ಮೀಟಿ ಮಿಲನ ಕಂಡೆ ನಿನ್ನ ಸ್ನೇಹ ಸೌಭಾಗ್ಯ ಮಿಂದೆ
ಹರೆಯ ತೂಗಿ ಸನಿಹ ಬಂದೆ ಎಲ್ಲ ಪ್ರೀತಿ ಸಮ್ಮೋಹ ತಂದೆ
ಹರುಷ ತಂದೆ ಹಾದಿಯೇ ಚಂದ
ಹರುಷ ತಂದೆ ಹಾದಿಯೇ ಚಂದ ಒಲವಿನಾಸರೆ ರೋಮಾಂಚ ಬಂಧ
ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ
ಜೊತೆಯ ಸೇರಿ ಬರುವೆ ನಾನು ನನ್ನ ಬಾಳ ಬಂಗಾರ ನೀನು
ಬೆಳಕು ನೀನು ಕಿರಣ ನಾನು ನಿನ್ನ ಕೂಡಿ ಹೊಂಬಿಸಿಲ ಬಾನು
ನಿನಗೆ ನಾನು ನನಗೆ ನೀನು
ನಿನಗೆ ನಾನು ನನಗೆ ನೀನು ಪ್ರೇಮ ಜೀವನ ಎಂದೆಂದೂ ಜೇನು
ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ
ರಾಗ ತಾನ ಪ್ರೇಮ ಗಾನ ಸಂಜೀವನ...
ಸಂಜೀವನ... ಸಂಜೀವನ...
Labels:
೧೯೮೧,
SPB,
ಅನುಪಮ,
ಅಶ್ವಥ್-ವೈದಿ,
ಎಸ್. ಜಾನಕಿ,
ದೊಡ್ಡರಂಗೇಗೌಡ
Subscribe to:
Posts (Atom)