Showing posts with label ಡಾ|| ರಾಜ್ ಕುಮಾರ್. Show all posts
Showing posts with label ಡಾ|| ರಾಜ್ ಕುಮಾರ್. Show all posts
Thursday, July 7, 2011
ಒಂದು ಮಾತು... ನನಗೆ ಗೊತ್ತು
ಚಿತ್ರ : ಕೆರಳಿದ ಸಿಂಹ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಸತ್ಯಂ
ಗಾಯನ : ಡಾ|| ರಾಜ್ ಕುಮಾರ್, ಸುಲೋಚನ
ವರ್ಷ: ೧೯೮೨
ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ
ಈ ದಿನ ಬೇರೆ ವಿಷಯ ತಿಳಿಸುವೆ
ಅಲ್ಲಿಗೆ ಬಂದರೆ ಸುಮ್ಮನೆ ಕೆಣಕುವೆ
ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ
ಸಂಜೆಯ ಕೆಂಪು ಗಾಳಿಯ ತಂಪು
ಹೊಸ ಹೊಸ ಬಯಕೆ ತಂದಾಗ
ತುಂಬದ ವಿರಹ ಬಂದರೆ ಸನಿಹ
ಸಾರ್ಥಕ ನಮ್ಮ ಅನುರಾಗ
ಮೋಹದ ಮಾತನಾಡಿ
ಕಣ್ಣಲೇ ಮೋಡಿ ಮಾಡಿ
ಈಗೇಕೆ ನನ್ನಲಿ ಆಸೆಯ ತರುವೆ
ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ
ತೋಳಲಿ ಹೀಗೆ ಬಳಸಿದೆ ಏಕೆ
ಎದೆ ಜಿಲ್ ಎಂದಿದೆ ನನಗೀಗ
ಮೈಯಲಿ ಮಿಂಚು ತುಂಬುವ ಸಂಚು
ಮಾಡುವೆ ಏಕೆ ನೀನೀಗ
ಯಾರೂ ಇಲ್ಲದಾಗ ಆಸೆಯು ಮೂಡಿದಾಗ
ಈ ಬಿಂಕ ಬಿಗುಮಾನ ನಿನಗೇತಕೆ
ಒಂದು ಮಾತು
ನನಗೆ ಗೊತ್ತು
ಅದಲ್ಲ
ಇನ್ನೇನು ?
ಹತ್ತಿರ ಬಂದರೆ ಕಿವಿಯಲಿ ಹೇಳುವೆ
ದಿನವೂ ಹೀಗೆಯೇ ನನ್ನ ಕರೆಯುವೆ
ಈ ದಿನ ಬೇರೆ ವಿಷಯ ತಿಳಿಸುವೆ
ಅಲ್ಲಿಗೆ ಬಂದರೆ ಸುಮ್ಮನೆ ಕೆಣಕುವೆ
Labels:
೧೯೮೨,
ಕೆರಳಿದ ಸಿಂಹ,
ಚಿ. ಉದಯಶಂಕರ್,
ಡಾ|| ರಾಜ್ ಕುಮಾರ್,
ಸತ್ಯಂ,
ಸುಲೋಚನ
ಹಾಯಾಗಿ ಕುಳಿತಿರು ನೀನು
ಚಿತ್ರ: ಹಾಲು ಜೇನು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ|| ರಾಜ್ ಕುಮಾರ್, ಸರಿತಾ
ವರ್ಷ: ೧೯೮೨
ಲೇ ಲೇ..
ಏನ್ರೀ..
ಒಂದ್ ಮಾತು
ಹೇಳಿ
ಹೇಳಿದ್ರೆ ಕೇಳ್ತೀಯಾ?
ನಿಮ್ ಮಾತ್ ಯಾವತ್ ಕೇಳಿಲ್ಲ?
ಹಾಗಾದ್ರೆ, ಆ ಪಾತ್ರೆ ಅಲ್ಲಿಡು
ಹೂಂ.. ಇಟ್ಟೆ
ಬಾ ಇಲ್ಲಿ
ಹೂಂ?
ಬಾರೆ ಅಂದ್ರೆ
ಹೂಂ..
ಕೂತ್ಕೋ ಇಲ್ಲಿ ಮಂಚದ್ ಮೇಲೆ
ಏನ್ರೀ ಇದು ಇಷ್ಟೊತ್ನಲ್ಲಿ
ಅಯ್ಯಯ್ಯೋ! ಅದಕ್ಕಲ್ವೇ..
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ
ಮಹಾರಾಣಿಯ ಹಾಗೆ
ಮನೆ ಕೆಲ್ಸ ಯಾರ್ರೀ ಮಾಡೋದು ನಿಮ್ಮಾವನ?
ಆಯಾಸ ಪಡದಿರು ಇನ್ನು ಕೂಗುತ ಹೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ
ನೀನೇ ಆಗ ಮೆಚ್ಚಿಕೊಳ್ಳುವೆ
ಪಬಬಂ ಪಬಬಂ ಪಬಬಂ
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ
ಮಹಾರಾಣಿಯ ಹಾಗೆ
ಅಯ್ಯಯ್ಯೋ ಏನ್ರೀ ಇದು ಅವತಾರ?
ಗಂಡ್ಸಾಗ್ ಹುಟ್ಟಿ ನೀವ್ ಅಡುಗೆ ಮಾಡ್ತೀರ?
ಭೀಮಸೇನ ನಳಮಹರಾಜರು ಗಂಡಸರಲ್ಲವೇ
ಭೀಮಸೇನ ನಳಮಹರಾಜರು ಗಂಡಸರಲ್ಲವೇ
ನನ್ನ ಹಾಗೆ ಮೀಸೆ ಹೊತ್ತ ಮಹನೀಯರಲ್ಲವೇ ಮಹನೀಯರಲ್ಲವೇ
ನೆನ್ನೆಯ ತನಕ ನೀನೆ ದುಡಿದೆ ಈ ಸಂಸಾರಕೆ ಜೀವ ತೇದೆ
ಈ ದಿನವಾದರೂ ನಿನ್ನ ಸೇವೆಯ ಮಾಡುವೆ ಚಿನ್ನ
ಪಬಬಂ ಪಬಬಂ ಪಬಬಂ
ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ
ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತ ಹೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ
ನೀನೇ ಆಗ ಮೆಚ್ಚಿಕೊಳ್ಳುವೆ
ತರರಂ ತರರಂ ತರರಂ
ಯಾ..ಯಾಕ್ರೀ ಕಣ್ಣೀರು
ಇದು ಕಣ್ಣೀರಲ್ವೇ ಪನ್ನೀರು ಪನ್ನೀರು
ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ?
ಚಿನ್ನದಂತ ಹೆಂಡತಿ ಇರಲು ಕಣ್ಣೀರೇತಕೆ?
ಮನಸನು ಅರಿತು ನಡೆಯುತಲಿರಲು ಚಿಂತೆಯ ಮಾತೇಕೆ
ನೀ ನಗುತಲಿರಲು ನಮ್ಮೀ ಮನೆಗೆ ಆ ಸ್ವರ್ಗವೇ ಜಾರಿದಂತೆ
ಹೆಂಡತಿ ಸೇವಕಿ ಅಲ್ಲ ಗಂಡನು ದೇವರು ಅಲ್ಲ
ಪಬಬಂ ಪಬಬಂ ಪಬಬಂ
ಹಾಯಾಗಿ ಕುಳಿತಿರು ನೀನು
ರಾಣಿಯ ಹಾಗೆ ಮಹಾರಾಣಿಯ ಹಾಗೆ
ಆಯಾಸ ಪಡದಿರು ಇನ್ನು ಕೂಗುತ ಹೀಗೆ
ಎಲ್ಲಾ ಕೆಲಸ ಮಾಡಿ ಮುಗಿಸುವೆ
ನೀನೇ ಆಗ ಮೆಚ್ಚಿಕೊಳ್ಳುವೆ
ಪಬಬಂ ಪಬಬಂ ಪಬಬಂ
Labels:
೧೯೮೨,
ಚಿ. ಉದಯಶಂಕರ್,
ಜಿ. ಕೆ. ವೆಂಕಟೇಶ್,
ಡಾ|| ರಾಜ್ ಕುಮಾರ್,
ಸರಿತಾ,
ಹಾಲು ಜೇನು
Monday, June 6, 2011
ಅರಳಿದೆ ತನು ಮನ ನೋಡುತ ನಿನ್ನ
ಚಿತ್ರ: ಅಪೂರ್ವ ಸಂಗಮ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯಕರು: ಡಾ|| ರಾಜ್ ಕುಮಾರ್, ಎಸ್.ಜಾನಕಿ
ವರ್ಷ: ೧೯೮೪
ಅರಳಿದೆ ತನು ಮನ ನೋಡುತ ನಿನ್ನ
ಹೊಸತನ ನನ್ನಲ್ಲಿಯೇ ಕಂಡೆನು ನಾ
ಅರಳಿದೆ ತನು ಮನ ನೋಡುತ ನಿನ್ನ
ಹೊಸತನ ನನ್ನಲ್ಲಿಯೇ ಕಂಡೆನು ನಾ
ಅರಳಿದೆ ತನು ಮನ ನೋಡುತ ನಿನ್ನ
ಚಲಿಸುವ ತಂಗಾಳಿಯು ಚೆಲುವೆ ನಿನ್ನ ನೋಡಿ
ನಲಿಯುತ ಓಡಿದೆ ಮುಂಗುರುಳ ಹಿಡಿದು ಆಡಿ
ಅರಳಿದ ಗುಲಾಬಿಯು ಸೋಕಿ ಪರಿಮಳ ಹೀರಿ
ಸರಸಕೆ ಬಂದಿದೆ ಈ ನಿನ್ನ ಅಂದ ನೋಡಿ
ಸುಖ ತರುತಿದೆ ಹಿತ ಕರೆದಿದೆ ಚಲುವ
ಅರಳಿದೆ ತನು ಮನ ನೋಡುತ ನಿನ್ನ
ಎದೆಯಲಿ ಹೊಮ್ಮಿ ಹೊಮ್ಮಿ ನೂರು ಬಯಕೆ ಈಗ
ಕೆಣಕಲು ಸೋತೆನು ನನ್ನಿನಿಯ ನಿನ್ನ ನೋಡಿ
ಪ್ರಣಯದ ಸಂಗೀತದ ಇಂಪು ಕಿವಿಯ ತುಂಬಿ
ಕನಸನು ಕಂಡೆನು ಸಂಗಾತಿಯೇ ನಿನ್ನ ಸೇರಿ
ಇನ್ನು ಬಿಡುವೆನೇ ನನ್ನೇ ಕೊಡುವೆ ನಾ ಚೆಲುವೆ
ಅರಳಿದೆ ತನು ಮನ ನೋಡುತ ನಿನ್ನ
ಹೊಸತನ ನನ್ನಲ್ಲಿಯೇ ಕಂಡೆನು ನಾ
Labels:
೧೯೮೪,
ಅಪೂರ್ವ ಸಂಗಮ,
ಉಪೇಂದ್ರ ಕುಮಾರ್,
ಎಸ್. ಜಾನಕಿ,
ಚಿ. ಉದಯಶಂಕರ್,
ಡಾ|| ರಾಜ್ ಕುಮಾರ್
ಚಂದಿರ ತಂದ ಹುಣ್ಣಿಮೆ ರಾತ್ರಿ
ಚಿತ್ರ: ಚಲಿಸುವ ಮೋಡಗಳು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
ಗಾಯಕರು : ಡಾ|| ರಾಜ್ ಕುಮಾರ್, ಎಸ್. ಜಾನಕಿ
ವರ್ಷ: ೧೯೮೨
ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಆ ದಿಂಬು ಹಾಸಿಗೆ ನನ್ನ ನೂಕಿತು
ಈ ನನ್ನ ನಲ್ಲನ ತೂಗೆಂದಿತು
ಆ ದಿಂಬು ಹಾಸಿಗೆ ನನ್ನ ನೂಕಿತು ಈ ನನ್ನ ನಲ್ಲನ ತೂಗೆಂದಿತು
ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಈ ನನ್ನ ಮಂಚವು ಮಾತಾಡಿತು
ನಿನ್ನನ್ನು ಆಚೆಗೆ ನೂಕೆಂದಿತು
ಈ ನನ್ನ ಮಂಚವು ಮಾತಾಡಿತು ನಿನ್ನನ್ನು ಆಚೆಗೆ ನೂಕೆಂದಿತು
ಏನು ತೊಂದರೆ ಅಲ್ಲಿ ಬಂದರೆ ಸೇವೆ ಮಾಡುವೆನು
ಹೂವನು ಹಾಸಿ ನಿಮ್ಮ ಮಲಗಿಸಿ ಲಾಲಿ ಹಾಡುವೆನು
ಮೈಯ್ಯ ಮುಟ್ಟದೆ ಕೈಯ ಎಳೆಯದೆ ದೂರ ನಿಲ್ಲುವೆಯ
ನನ್ನ ನೆಮ್ಮದಿ ಹಾಳು ಮಾಡದೆ ಹೊರಗೆ ಹೋಗುವೆಯ
ಭಾರಿ ಬ್ರಹ್ಮಚಾರಿ ನೀನು ಬಲ್ಲೆ ಎಲ್ಲ ಹೆಣ್ಣೇ ನಿನ್ನ ಆರೋಗ್ಯ ಸರಿಯಾಗಿಲ್ಲ
ಪ್ರೀತಿಯೆಂದರೆ ಗೊತ್ತೆ ಇಲ್ಲ ನನಗೆ ಪ್ರೀತಿಯೆ ಬೇಕಾಗಿಲ್ಲ
ಬೇಡವೆಂದರು ನಾ ಬಿಡುವುದಿಲ್ಲ
ಅಯ್ಯೊ .. ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಈ ನನ್ನ ಮಂಚವು ಮಾತಾಡಿತು
ನಿನ್ನನ್ನು ಆಚೆಗೆ ನೂಕೆಂದಿತು
ಆ ದಿಂಬು ಹಾಸಿಗೆ ನನ್ನ ನೂಕಿತು ಈ ನನ್ನ ನಲ್ಲನ ತೂಗೆಂದಿತು
ಅತ್ತೆ ಕಂಡರೆ ಮಾವ ಬಂದರೆ ಮಾನ ಹೋಗುವುದು
ಅಪ್ಪನು ರೇಗಿ ಗದರಿಸಿದಾಗ ಎನು ಹೇಳುವುದು
ಏಕೆ ಹೆದರುವೆ ಕದವ ಹಾಕುವೆ ಏನೂ ಕೇಳಿಸದು
ಸದ್ದು ಮಾಡದೆ ದೀಪ ಆರಿಸು ಏನೂ ಕಾಣಿಸದು
ಅಯ್ಯೋ ನಿನ್ನಾ ನಿನ್ನ ಹೆಣ್ಣು ಆಂದೋರಿಗೆ ಬುದ್ಧಿ ಇಲ್ಲ ಏನೇ ಹೇಳು ನಿನ್ನ ಬಿಟ್ಟು ಬಾಳೋದಿಲ್ಲ
ಕೋಪ ಬಂದರೆ ಸುಮ್ಮನಿರಲ್ಲ ಆಗಲೇ ನೀನು ಚೆನ್ನ ನಲ್ಲ
ಅಯ್ಯೋ ಎನು ಮಾಡಲಿ ಆ ದೇವರೆ ಬಲ್ಲ
ಚಂದಿರ ತಂದ ಹುಣ್ಣಿಮೆ ರಾತ್ರಿ ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು ಆ ದಿಂಬು ಹಾಸಿಗೆ ನನ್ನ ನೂಕಿತು
ಈ ನನ್ನ ನಲ್ಲನ ತೂಗೆಂದಿತು
ಈ ನನ್ನ ಮಂಚವು ಎನೆಂದಿತು ನಿನ್ನನ್ನು ಆಚೆಗೆ ನೂಕೆಂದಿತು
Labels:
೧೯೮೨,
ಎಸ್. ಜಾನಕಿ,
ಚಲಿಸುವ ಮೋಡಗಳು,
ಚಿ. ಉದಯಶಂಕರ್,
ಡಾ|| ರಾಜ್ ಕುಮಾರ್,
ರಾಜನ್-ನಾಗೇಂದ್ರ
Thursday, June 2, 2011
ಈ ಮೌನವಾ ತಾಳೆನು
ಚಿತ್ರ: ಮಯೂರ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ|| ರಾಜ್ಕುಮಾರ್, ಎಸ್. ಜಾನಕಿ
ವರ್ಷ: ೧೯೭೫
ಈ ಮೌನವಾ ತಾಳೆನು
ಈ ಮೌನವಾ ತಾಳೆನು ಮಾತಾಡೆ ದಾರಿಯ ಕಾಣೆನು
ಓ ರಾಜಾ..ಈ ಮೌನವಾ ತಾಳೆನು
ನೀ ಹೇಳದೇ ಬಲ್ಲೆನು ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿ...ನೀ ಹೇಳದೇ ಬಲ್ಲೆನು
ನಾನಂದು ನಿನ್ನ ಕಂಡಾಗ ಚಿನ್ನ ಏನೇನೋ ಹೊಸ ಭಾವನೆ
ಹೂವಾಗಿ ಮನಸು ಏನೇನೋ ಕನಸು ನಾ ಕಾಣದ ಕಲ್ಪನೆ
ಇನ್ನು ನಿನ್ನ ಬಿಡೆನು ಈ ದೂರ ಸಹಿಸೆನು
ನೀ ಹೇಳದೇ ಬಲ್ಲೆನು ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿ...ನೀ ಹೇಳದೇ ಬಲ್ಲೆನು
ಈ ಅಂದ ಕಂಡು ನಾ ಮೋಹಗೊಂಡು ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು ಕಂಡಾಗ ನವಿಲು ಕುಣಿವಂತೆ ನನಗಾಯಿತು
ಈ ಅಂದ ಕಂಡು ನಾ ಮೋಹಗೊಂಡು ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು ಕಂಡಾಗ ನವಿಲು ಕುಣಿವಂತೆ ನನಗಾಯಿತು
ಅಂದೇ ನಿನಗೆ ಸೋತೆ ನಾ ಜಗವನೆ ಮರೆತೆ
ಈ ಮೌನವಾ ತಾಳೆನು ಮಾತಾಡೆ ದಾರಿಯ ಕಾಣೆನು
ಓ ರಾಜಾ..ಓ ರಾಣಿ...ಓ ರಾಜಾ..ಓ ರಾಣಿ.
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ|| ರಾಜ್ಕುಮಾರ್, ಎಸ್. ಜಾನಕಿ
ವರ್ಷ: ೧೯೭೫
ಈ ಮೌನವಾ ತಾಳೆನು
ಈ ಮೌನವಾ ತಾಳೆನು ಮಾತಾಡೆ ದಾರಿಯ ಕಾಣೆನು
ಓ ರಾಜಾ..ಈ ಮೌನವಾ ತಾಳೆನು
ನೀ ಹೇಳದೇ ಬಲ್ಲೆನು ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿ...ನೀ ಹೇಳದೇ ಬಲ್ಲೆನು
ನಾನಂದು ನಿನ್ನ ಕಂಡಾಗ ಚಿನ್ನ ಏನೇನೋ ಹೊಸ ಭಾವನೆ
ಹೂವಾಗಿ ಮನಸು ಏನೇನೋ ಕನಸು ನಾ ಕಾಣದ ಕಲ್ಪನೆ
ಇನ್ನು ನಿನ್ನ ಬಿಡೆನು ಈ ದೂರ ಸಹಿಸೆನು
ನೀ ಹೇಳದೇ ಬಲ್ಲೆನು ನಿನ್ನಾಸೆ ಕಣ್ಣಲ್ಲೇ ಕಂಡೆನು
ಓ ರಾಣಿ...ನೀ ಹೇಳದೇ ಬಲ್ಲೆನು
ಈ ಅಂದ ಕಂಡು ನಾ ಮೋಹಗೊಂಡು ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು ಕಂಡಾಗ ನವಿಲು ಕುಣಿವಂತೆ ನನಗಾಯಿತು
ಈ ಅಂದ ಕಂಡು ನಾ ಮೋಹಗೊಂಡು ಮನ ಹಿಗ್ಗಿ ಹೂವಾಯಿತು
ಬಾನಲ್ಲಿ ಮುಗಿಲು ಕಂಡಾಗ ನವಿಲು ಕುಣಿವಂತೆ ನನಗಾಯಿತು
ಅಂದೇ ನಿನಗೆ ಸೋತೆ ನಾ ಜಗವನೆ ಮರೆತೆ
ಈ ಮೌನವಾ ತಾಳೆನು ಮಾತಾಡೆ ದಾರಿಯ ಕಾಣೆನು
ಓ ರಾಜಾ..ಓ ರಾಣಿ...ಓ ರಾಜಾ..ಓ ರಾಣಿ.
Labels:
೧೯೭೫,
ಎಸ್. ಜಾನಕಿ,
ಚಿ. ಉದಯಶಂಕರ್,
ಜಿ. ಕೆ. ವೆಂಕಟೇಶ್,
ಡಾ|| ರಾಜ್ ಕುಮಾರ್,
ಮಯೂರ
Friday, February 25, 2011
ಹೊಸ ಬೆಳಕು ಮೂಡುತಿದೆ
ಚಿತ್ರ: ಹೊಸ ಬೆಳಕು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕರು: ಡಾ|| ರಾಜ್ ಕುಮಾರ್
ವರ್ಷ: ೧೯೮೨
ಹೊಸ ಬೆಳಕು ಮೂಡುತಿದೆ ಬಂಗಾರದ ರಥವೇರುತ
ಆಕಾಶದಿ ಓಡಾಡುತ ಅತ್ತಾ-ಇತ್ತಾ ಸುತ್ತಾ-ಮುತ್ತಾ ಚೆಲ್ಲಿದಾ
ಕಾಂತಿಯಾ.. ರವಿ ಕಾಂತಿಯಾ....
ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ-ಇಲ್ಲಿ ಹೂವ ಕಂಪ ಹರಡುತಲಿದೆ
ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ-ಇಲ್ಲಿ ಹೂವ ಕಂಪ ಹರಡುತಲಿದೆ
ಹಕ್ಕಿ ಮುಗಿಲನ್ನು ನೋಡಿ ಬೆಳಕು ಬಂತೆಂದು ಹಾಡಿ
ಹಕ್ಕಿ ಮುಗಿಲನ್ನು ನೋಡಿ ಬೆಳಕು ಬಂತೆಂದು ಹಾಡಿ
ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ ಬಾನಿಗೆ.. ಹಾರಿದೆ...
ಹೊಸ ಬೆಳಕು ಮೂಡುತಿದೆ
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಳ್ಳಿ ಬೆಳಕನ್ನು ನೋಡಿ ಮಂಜು ಮರೆಯಾಗಿ ಓಡಿ
ಬೆಳ್ಳಿ ಬೆಳಕನ್ನು ನೋಡಿ ಮಂಜು ಮರೆಯಾಗಿ ಓಡಿ
ಎಲೆಯ ಮರೆಯ ಸೇರಿ ನಲಿವ ಕೋಗಿಲೆ.. ಹಾಡಿದೆ..
ಹೊಸ ಬೆಳಕು ಮೂಡುತಿದೆ ಬಂಗಾರದ ರಥವೇರುತ
ಆಕಾಶದಿ ಓಡಾಡುತ ಅತ್ತಾ-ಇತ್ತಾ ಸುತ್ತಾ-ಮುತ್ತಾ ಚೆಲ್ಲಿದಾ..
ಕಾಂತಿಯಾ.. ರವಿ ಕಾಂತಿಯಾ...
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯಕರು: ಡಾ|| ರಾಜ್ ಕುಮಾರ್
ವರ್ಷ: ೧೯೮೨
ಹೊಸ ಬೆಳಕು ಮೂಡುತಿದೆ ಬಂಗಾರದ ರಥವೇರುತ
ಆಕಾಶದಿ ಓಡಾಡುತ ಅತ್ತಾ-ಇತ್ತಾ ಸುತ್ತಾ-ಮುತ್ತಾ ಚೆಲ್ಲಿದಾ
ಕಾಂತಿಯಾ.. ರವಿ ಕಾಂತಿಯಾ....
ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ-ಇಲ್ಲಿ ಹೂವ ಕಂಪ ಹರಡುತಲಿದೆ
ಬಳ್ಳಿಯಲ್ಲಿ ಮೊಗ್ಗು ಹಿಗ್ಗಿ ನಗುತಲಿದೆ ತಣ್ಣನೆ ಗಾಳಿ ಪರಿಮಳ ಹೀರಿ
ಅಲ್ಲಿ-ಇಲ್ಲಿ ಹೂವ ಕಂಪ ಹರಡುತಲಿದೆ
ಹಕ್ಕಿ ಮುಗಿಲನ್ನು ನೋಡಿ ಬೆಳಕು ಬಂತೆಂದು ಹಾಡಿ
ಹಕ್ಕಿ ಮುಗಿಲನ್ನು ನೋಡಿ ಬೆಳಕು ಬಂತೆಂದು ಹಾಡಿ
ರೆಕ್ಕೆ ಬಿಚ್ಚಿ ಮೇಲೆ ಚಿಮ್ಮಿ ಬಾನಿಗೆ.. ಹಾರಿದೆ...
ಹೊಸ ಬೆಳಕು ಮೂಡುತಿದೆ
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಟ್ಟದಿಂದ ನೀರು ಜಾರಿ ಧುಮುಕುತಿದೆ ಸಾಗರ ಸೇರೊ ಆಸೆಯ ತೋರಿ
ಗಾಳಿಯಂತೆ ವೇಗವಾಗಿ ಹರಿಯುತಲಿದೆ
ಬೆಳ್ಳಿ ಬೆಳಕನ್ನು ನೋಡಿ ಮಂಜು ಮರೆಯಾಗಿ ಓಡಿ
ಬೆಳ್ಳಿ ಬೆಳಕನ್ನು ನೋಡಿ ಮಂಜು ಮರೆಯಾಗಿ ಓಡಿ
ಎಲೆಯ ಮರೆಯ ಸೇರಿ ನಲಿವ ಕೋಗಿಲೆ.. ಹಾಡಿದೆ..
ಹೊಸ ಬೆಳಕು ಮೂಡುತಿದೆ ಬಂಗಾರದ ರಥವೇರುತ
ಆಕಾಶದಿ ಓಡಾಡುತ ಅತ್ತಾ-ಇತ್ತಾ ಸುತ್ತಾ-ಮುತ್ತಾ ಚೆಲ್ಲಿದಾ..
ಕಾಂತಿಯಾ.. ರವಿ ಕಾಂತಿಯಾ...
Labels:
೧೯೮೨,
ಎಂ. ರಂಗರಾವ್,
ಚಿ. ಉದಯಶಂಕರ್,
ಡಾ|| ರಾಜ್ ಕುಮಾರ್,
ಹೊಸಬೆಳಕು
Tuesday, December 21, 2010
ಬಾನಿಗೊಂದು ಎಲ್ಲೆ ಎಲ್ಲಿದೆ
ಚಿತ್ರ: ಪ್ರೇಮದ ಕಾಣಿಕೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕರು: ಡಾ|| ರಾಜ್ ಕುಮಾರ್
ವರ್ಷ: ೧೯೭೬
ಬಾನಿಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ...
ಏಕೆ ಕನಸು ಕಾಣುವೆ... ನಿಧಾನಿಸು ನಿಧಾನಿಸು...
ಬಾನಿಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ...
ಏಕೆ ಕನಸು ಕಾಣುವೆ... ನಿಧಾನಿಸು ನಿಧಾನಿಸು...
ಆಸೆ ಎಂಬ ಬಿಸಿಲುಗುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನೂ ಸಾಗದು
ನಾವು ನೆನೆಸಿದಂತೆ ಬಾಳಲೇನು ನಡೆಯದು
ವಿಷಾದವಾಗಲೀ ವಿನೋದವಾಗಲೀ ಅದೇನೆ ಆಗಲೀ ಅವನೆ ಕಾರಣ
ಬಾನಿಗೊಂದು ಎಲ್ಲೆ ಎಲ್ಲಿದೆ...
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆಯೇತಕೆ ನಿರಾಸೆಯೇತಕೆ ಅದೇನೇ ಬಂದರೂ ಅವನ ಕಾಣಿಕೆ
ಬಾನಿಗೊಂದು ಎಲ್ಲೆ ಎಲ್ಲಿದೆ... ನಿನ್ನಾಸೆಗೆಲ್ಲಿ ಕೊನೆಯಿದೆ...
ಏಕೆ ಕನಸು ಕಾಣುವೆ... ನಿಧಾನಿಸು ನಿಧಾನಿಸು...
ನಿಧಾನಿಸು ನಿಧಾನಿಸು...
Labels:
೧೯೭೬,
ಉಪೇಂದ್ರ ಕುಮಾರ್,
ಚಿ. ಉದಯಶಂಕರ್,
ಡಾ|| ರಾಜ್ ಕುಮಾರ್,
ಪ್ರೇಮದ ಕಾಣಿಕೆ
Saturday, October 9, 2010
If you come today
ಚಿತ್ರ: ಆಪರೇಶನ್ ಡೈಮಂಡ್ ರಾಕೆಟ್
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಜಿ. ಕೆ. ವೆಂಕಟೇಶ್
ಗಾಯಕರು: ಡಾ|| ರಾಜ್ ಕುಮಾರ್
ವರ್ಷ: ೧೯೭೮
If you come today it is too early
If you come tomorrow it is too late
If you come today it is too early
If you come tomorrow it is too late
you pick your time,
tick tick tick tick tick tick a tick tick tick tick tick tick
tick tick tick tick tick tick a tick tick tick tick tick tick
Daaaarling!
If you come today it is too early
If you come tomorrow it is too late
Did you say morning? No No it's not good
Did you say evening? No No it's too bad
Did you say noon? No No it's not the time
What did you say? Hey What did you say?
Nothing? Oh it's alright.
You pick the time...
tick tick tick tick tick tick a tick tick tick tick tick tick
tick tick tick tick tick tick a tick tick tick tick tick tick
Daaaarling!
If you come today it is too early
If you come tomorrow it is too late
Million drums beat in my heart Million dreams haunt my heart
Million desires swing in my heart Million memories sieze my heart
Million drums beat in my heart Million dreams haunt my heart
Million desires swing in my heart Million memories seize my heart
You pick the time...
tick tick tick tick tick tick a tick tick tick tick tick tick
If you come today, it is too early
If you come tomorrow, it is too late
You pick the time...
tick tick tick tick tick tick a tick tick tick tick tick tick
tick tick tick tick tick tick a tick tick tick tick tick tick
Daaaarling!
Friday, September 24, 2010
ಹಾಲಲ್ಲಾದರೂ ಹಾಕು ನೀರಲ್ಲಾದರೂ
ಚಿತ್ರ : ದೇವತಾ ಮನುಷ್ಯ
ಸಾಹಿತ್ಯ : ಚಿ.ಉದಯ್ ಶಂಕರ್
ಸಂಗೀತ : ಉಪೇಂದ್ರ ಕುಮಾರ್
ಗಾಯಕರು : ಡಾ|| ರಾಜ್ ಕುಮಾರ್ ಹಾಗೂ ಬಿ. ಆರ್. ಛಾಯಾ
ವರ್ಷ : ೧೯೮೮
ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ.
ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ.
ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ.
ಮುಳ್ಳಲ್ಲಾದರೂ ನೂಕು, ಕಲ್ಲಲ್ಲಾದರೂ ನೂಕು, ರಾಘವೇಂದ್ರ.
ಮುಳ್ಳಲ್ಲಾದರೂ ನೂಕು, ಕಲ್ಲಲ್ಲಾದರೂ ನೂಕು, ರಾಘವೇಂದ್ರ.
ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ, ಒಂದಾಗಿರುವೆ ರಾಘವೇಂದ್ರ.
ಬಿಸಿಲಲ್ಲೇ ಒಣಗಿಸು, ನೆರಳಲ್ಲೇ ಮಲಗಿಸು, ರಾಘವೇಂದ್ರ.
ಬಿಸಿಲಲ್ಲಿ ಕೆಂಪಾಗಿ, ನೆರಳಲ್ಲಿ ತಂಪಾಗಿ, ನಗುನಗುತಾಲಿರುವೆ ರಾಘವೇಂದ್ರ.
ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.
ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ
ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು, ನೀನೇ ಹೇಳು, ರಾಘವೇಂದ್ರ.
ಎಲ್ಲಿದ್ದಾರೇನು ನಾ, ಹೇಗಿದ್ದರೇನು ನಾ, ರಾಘವೇಂದ್ರ.
ನಿನ್ನಲ್ಲಿ ಶರಣಾಗಿ, ನೀ ನನ್ನ ಉಸಿರಾಗಿ, ಬಾಳಿದರೆ ಸಾಕು ರಾಘವೇಂದ್ರ.
Labels:
೧೯೮೮,
ಉಪೇಂದ್ರ ಕುಮಾರ್,
ಚಿ. ಉದಯಶಂಕರ್,
ಡಾ|| ರಾಜ್ ಕುಮಾರ್,
ದೇವತಾ ಮನುಷ್ಯ,
ಬಿ. ಆರ್. ಛಾಯಾ
Subscribe to:
Posts (Atom)