Showing posts with label PBS. Show all posts
Showing posts with label PBS. Show all posts

Monday, June 6, 2011

ಕನ್ನಡ ನಾಡಿನ ವೀರರಮಣಿಯ



ಚಿತ್ರ: ನಾಗರಹಾವು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯಕರು: ಪಿ. ಬಿ. ಶ್ರೀನಿವಾಸ್
ವರ್ಷ: ೧೯೭೨

ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿದ ಸಿರಿನಾಡು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ವೀರಮದಕರಿ ಆಳುತಲಿರಲು ಹೈದಾರಾಲಿಯು ಯುಧ್ಧಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು ಸತತ ಧಾಳಿಯು ವ್ಯರ್ಥವಾಗಲು
ವ್ಯೆರಿ ಚಿಂತೆಯಲಿ ಬಸವಳಿದ ದಾರಿಗಾಣದೆ ಮಂಕಾದ
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಗೂಢಚಾರರು ಅಲೆದು ಬಂದರು ಹೈದಾರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಸುತ್ತ ಮುತ್ತಲು ಕಪ್ಪು ಕತ್ತಲೆಯು ಮುತ್ತಿರಲು
ವೀರ ಕಾವಲುಗಾರ ಭೋಜನಕ್ಕೆ ನೆಡೆದಿರಲು
ಸಿಹಿನೀರ ತರಲೆಂದು ಅವನ ಸತಿ ಬಂದಿರಲು ಕಳ್ಳಗಂಡಿಯ ಹಿಂದೆ ಪಿಸುಮಾತ ಕೇಳಿದಳು
ಆಲಿಸಿದಳು ಇಣುಕಿದಳು ವೈರಿ ಪಡೆ ಕೋಟೆಯತ್ತ ಬರುವುದನ್ನು ಕಂಡಳು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿಯ ಸಿರಿನಾಡು
ಅಮರಳಾದಳು ಓಬವ್ವ ಅಮರಳಾದಳು ಓಬವ್ವ

Thursday, June 2, 2011

ಬರೆದೆ ನೀನು ನಿನ್ನ ಹೆಸರ

ಚಿತ್ರ: ಸೀತಾ
ಸಾಹಿತ್ಯ : ಅರ್. ಎನ್. ಜಯಗೋಪಾಲ್
ಸಂಗೀತ : ವಿಜಯಭಾಸ್ಕರ್
ಗಾಯಕರು : ಪಿ.ಬಿ. ಶ್ರೀನಿವಾಸ್
ವರ್ಷ: ೧೯೭೦

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೆ ಅಳಿಸಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ

ಮಿಡಿದೆ ನೀನು ಪ್ರಣಯನಾದ ಹೃದಯ ವೀಣೆ ಅದರಲಿ
ಮಿಡಿದೆ ನೀನು ಪ್ರಣಯನಾದ ಹೃದಯ ವೀಣೆ ಅದರಲಿ
ಮಿಡಿದ ಹಾಡು ಮುಗಿವ ಮುನ್ನ ಎಲ್ಲಿ ಹೋದೆ ಮರೆಯಲಿ

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ

ಅಂದು ನನ್ನ ತೇಲಿಸಿದೆ ನಿನ್ನ ಮಾತ ಹೊನಲಲಿ
ಅಂದು ನನ್ನ ತೇಲಿಸಿದೆ ನಿನ್ನ ಮಾತ ಹೊನಲಲಿ
ಇಂದು ನನ್ನ ಮುಳುಗಿಸಿದೆ ಕಣ್ಣ ನೀರ ಹೊಳೆಯಲಿ

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೆ ಅಳಿಸಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ

Wednesday, May 25, 2011

ರವಿವರ್ಮನ ಕುಂಚದ



ಚಿತ್ರ: ಸೊಸೆ ತಂದ ಸೌಭಾಗ್ಯ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ಜಿ.ಕೆ.ವೆಂಕಟೇಶ್
ಗಾಯಕರು : ಪಿ.ಬಿ. ಶ್ರೀನಿವಾಸ್
ವರ್ಷ: ೧೯೭೭

ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ಕವಿಕಲ್ಪನೆ ಕಾಣುವಾ ಚೆಲುವಿನಾ ಜಾಲವೋ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ

ಉಯ್ಯಾಲೆಯಾ ಆಡಿ ನಲಿವಾ ರೂಪಸೀ
ಉಯ್ಯಾಲೆಯಾ ಆಡಿ ನಲಿವಾ ರೂಪಸೀ
ಸುರಲೋಕದಿಂದ ಇಳಿದು ಬಂದ ನಿಜ ಊರ್ವಶೀ
ನನ್ನೊಲವಿನ ಪ್ರೇಯಸಿ

ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ

ಹೂರಾಶಿಯ ನಡುವೆ ನಗುವ ಕೋಮಲೇ
ಹೂರಾಶಿಯ ನಡುವೆ ನಗುವ ಕೋಮಲೇ
ಕವಿ ಕಾಳಿದಾಸ ಕಾವ್ಯರಾಣಿ ಶಾಕುಂತಲೇ..
ಚಿರಯೌವ್ವನ ನಿನ್ನಲೇ

ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ಕವಿಕಲ್ಪನೆ ಕಾಣುವಾ ಚೆಲುವಿನಾ ಜಾಲವೋ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ

Wednesday, March 9, 2011

ಮಲೆನಾಡ ಹೆಣ್ಣ ಮೈ ಬಣ್ಣ



ಚಿತ್ರ: ಭೂತಯ್ಯನ ಮಗ ಅಯ್ಯು
ಸಾಹಿತ್ಯ : ಆರ್. ಎನ್. ಜಯಗೋಪಾಲ್
ಸಂಗೀತ : ಜಿ. ಕೆ. ವೆಂಕಟೇಶ್
ಗಾಯಕರು : ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ
ವರ್ಷ: ೧೯೭೪

ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ನಾ ಮನಸೋತೆನೆ ಚಿನ್ನ
ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ

ಬಯಲು ಸೀಮೆಯ ಗಂಡು ಬಲುಗುಂಡು
ಜಗಮೊಂಡು ದುಂಡು ಹೂ ಚೆಂಡು
ನನ್ನ ಸರದಾಗೆ ರಸಗುಂಡು ನನ್ನ ಸರದಾಗೆ ರಸಗುಂಡು

ಮಾತು ನಿಂದು ಹುರಿದಾ ಅರಳು ಸಿಡಿದಂಗೆ
ಕಣ್ಣುಗಳು ಮಿಂಚಂಗೆ ನಿನ್ನ ನಗೆಯಲ್ಲೆ ಸೆಳೆದ್ಯಲ್ಲೆ
ಮನದಾಗೆ ನಿಂತ್ಯಲ್ಲೆ ನನ್ನ ಮನದಾಗೆ ನಿಂತ್ಯಲ್ಲೆ

ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ

ಕಾಡಬೇಡಿ ನೋಡಿಯಾರು ನನ್ನೋರು
ನನ್ನ ಹಿರಿಯೋರು ಬಿಡಿ ನನ್ನ ಕೈಯ್ಯ ದಮ್ಮಯ್ಯ
ತುಂಟಾಟ ಸಾಕಯ್ಯ ಈ ತುಂಟಾಟ ಸಾಕಯ್ಯ

ದೂರದಿಂದ ಬಂದೆ ನಿನ್ನ ಹಂಬಲಿಸಿ
ಗೆಳೆತನ ನಾ ಬಯಸಿ

ಆದ ನಾ ಬಲ್ಲೇ ನಾ ಬಲ್ಲೆ ನಾಚಿ ಮೊಗ್ಗಾದೆ ನಾನಿಲ್ಲೆ
ನಾಚಿ ಮೊಗ್ಗಾದೆ ನಾನಿಲ್ಲೆ

ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ

Wednesday, February 16, 2011

ವೇದಾಂತಿ ಹೇಳಿದನು



ಚಿತ್ರ: ಮಾನಸ ಸರೋವರ
ಸಾಹಿತ್ಯ : ಜಿ.ಎಸ್. ಶಿವರುದ್ರಪ್ಪ
ಸಂಗೀತ : ವಿಜಯಭಾಸ್ಕರ್
ಗಾಯಕರು : ಪಿ. ಬಿ. ಶ್ರೀನಿವಾಸ್
ವರ್ಷ: ೧೯೮೩

ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು
ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು... ಈ ಹೆಣ್ಣು ಮಾಯೆ, ಮಾಯೇ...
ಕವಿಯೊಬ್ಬ ಕನವರಿಸಿದನು.. ಓ.. ಇವಳೇ ಚೆಲುವೆ...
ಇವಳ ಜೊತೆಯಲ್ಲಿ ನಾನು ಸ್ವರ್ಗವನೆ ಗೆಲ್ಲುವೆ... ಸ್ವರ್ಗವನೇ ಗೆಲ್ಲುವೆ...

ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು.. ಈ ಬದುಕು ಶೂನ್ಯ ಶೂನ್ಯ
ಕವಿ ನಿಂತು ಸಾರಿದನು.. ಓ.. ಇದು ಅಲ್ಲ ಶೂನ್ಯ.
ಜನ್ಮ ಜನ್ಮದಿ ಸವಿಯೇ.. ನಾನೆಷ್ಟು ಧನ್ಯ ನಾನೆಷ್ಟು ಧನ್ಯ

ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು
ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು
ಮಣ್ಣೆಲ್ಲ ಹೊನ್ನು ಹೊನ್ನು ಮಣ್ಣೆಲ್ಲ ಹೊನ್ನು ಹೊನ್ನು

Wednesday, September 29, 2010

ನೀರಿನಲ್ಲಿ ಅಲೆಯ ಉಂಗುರ

ಚಿತ್ರ: ಬೇಡಿ ಬಂದವಳು
ಸಾಹಿತ್ಯ: ಆರ್.ಎನ್. ಜಯಗೋಪಲ್
ಸಂಗೀತ: ಆರ್. ಸುದರ್ಶನಂ
ಗಾಯಕರು: ಪಿ.ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ
ವರ್ಷ: ೧೯೬೮

ನೀರಿನಲ್ಲಿ ಅಲೆಯ ಉಂಗುರ ಭೂಮಿ ಮೇಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ

ನೀರಿನಲ್ಲಿ ಅಲೆಯ ಉಂಗುರ ಭೂಮಿ ಮೇಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ
ನೀರಿನಲ್ಲಿ ಅಲೆಯ ಉಂಗುರ ಭೂಮಿ ಮೇಲೆ ಹೂವಿನುಂಗುರ

ಅಂದಿಗೆಯೂ ಕಾಲಿನುಂಗುರ ಅದರ ದನಿ ಎಷ್ಟು ಸುಂದರ
ತರುವು ಲತೆಯೂ ಸೇರಿದ ಕಥೆಯೂ
ತರುವು ಲತೆಯೂ ಸೇರಿದ ಕಥೆಯೂ
ತನುವ ಬಳಸಿ ತೋಳಿನುಂಗುರ
ನೀರಿನಲ್ಲಿ ಅಲೆಯ ಉಂಗುರ ನೀರಿನಲ್ಲಿ ಅಲೆಯ ಉಂಗುರ

ಮಣ್ಣಿನಲ್ಲಿ ಕಂಡ ಉಂಗುರ ಹೆಣ್ಣು ನಾಚಿ ಗೀರಿದುಂಗುರ
ಬೆರಳಿನಿಂದ ತೀಡಿದುಂಗುರ
ಬೆರಳಿನಿಂದ ತೀಡಿದುಂಗುರ
ಕಣ್ಣ ಸೆಳೆವ ಕುರುಳುಗುಂಗುರ
ನೀರಿನಲ್ಲಿ ಅಲೆಯ ಉಂಗುರ ನೀರಿನಲ್ಲಿ ಅಲೆಯ ಉಂಗುರ

ಆಗಿ ನಿನ್ನ ಕೈಯ ಸಂಚರ ಎನ್ನ ಹೃದಯವೊಂದು ಢಂಗುರ
ನಾನೂ ನುಡಿಯೆ ಕಿವಿಯಲಿಂಚರ
ನಾನೂ ನುಡಿಯೆ ಕಿವಿಯಲಿಂಚರ
ಹಣೆಯ ಮೇಲೆ ಬೆವರಿನುಂಗುರ...
ನೀರಿನಲ್ಲಿ ಅಲೆಯ ಉಂಗುರ ನೀರಿನಲ್ಲಿ ಅಲೆಯ ಉಂಗುರ