ಚಿತ್ರ: ಸೀತಾ
ಸಾಹಿತ್ಯ : ಅರ್. ಎನ್. ಜಯಗೋಪಾಲ್
ಸಂಗೀತ : ವಿಜಯಭಾಸ್ಕರ್
ಗಾಯಕರು : ಪಿ.ಬಿ. ಶ್ರೀನಿವಾಸ್
ವರ್ಷ: ೧೯೭೦
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೆ ಅಳಿಸಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಮಿಡಿದೆ ನೀನು ಪ್ರಣಯನಾದ ಹೃದಯ ವೀಣೆ ಅದರಲಿ
ಮಿಡಿದೆ ನೀನು ಪ್ರಣಯನಾದ ಹೃದಯ ವೀಣೆ ಅದರಲಿ
ಮಿಡಿದ ಹಾಡು ಮುಗಿವ ಮುನ್ನ ಎಲ್ಲಿ ಹೋದೆ ಮರೆಯಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅಂದು ನನ್ನ ತೇಲಿಸಿದೆ ನಿನ್ನ ಮಾತ ಹೊನಲಲಿ
ಅಂದು ನನ್ನ ತೇಲಿಸಿದೆ ನಿನ್ನ ಮಾತ ಹೊನಲಲಿ
ಇಂದು ನನ್ನ ಮುಳುಗಿಸಿದೆ ಕಣ್ಣ ನೀರ ಹೊಳೆಯಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೆ ಅಳಿಸಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
Showing posts with label ಆರ್.ಎನ್. ಜಯಗೋಪಾಲ್. Show all posts
Showing posts with label ಆರ್.ಎನ್. ಜಯಗೋಪಾಲ್. Show all posts
Thursday, June 2, 2011
Wednesday, June 1, 2011
ಸಂಪಿಗೆ ಮರದ ಹಸಿರೆಲೆ ನಡುವೆ
ಚಿತ್ರ: ಉಪಾಸನೆ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯಕರು : ಬಿ.ಕೆ. ಸುಮಿತ್ರಾ
ವರ್ಷ: ೧೯೭೪
ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ… ಚಿಕ್ಕವ್ವ… ಎನ್ನುತ ತನ್ನಯ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ
ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್…
ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ
ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ…
ಮಂಜುಳ ನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ, ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯಕರು : ಬಿ.ಕೆ. ಸುಮಿತ್ರಾ
ವರ್ಷ: ೧೯೭೪
ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ… ಚಿಕ್ಕವ್ವ… ಎನ್ನುತ ತನ್ನಯ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ
ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್…
ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ
ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ…
ಮಂಜುಳ ನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ, ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ
Labels:
೧೯೭೪,
ಆರ್.ಎನ್. ಜಯಗೋಪಾಲ್,
ಉಪಾಸನೆ,
ಬಿ. ಕೆ. ಸುಮಿತ್ರ,
ವಿಜಯಭಾಸ್ಕರ್
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ಚಿತ್ರ: ಸಾಹಸ ಸಿಂಹ
ಸಾಹಿತ್ಯ: ಅರ್.ಎನ್.ಜಯಗೋಪಾಲ್
ಸಂಗೀತ: ಸತ್ಯಂ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೨
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೆ ಹೇ...ನಿನಗಾಗಿ ಅರಸಿ ಬಂದೆ
ನೀ ಎಲ್ಲೋ ಅಲ್ಲೇ ನಾನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ಕನಸಲ್ಲೂ ನಿನ್ನ ರೂಪ ಈ ಮನದಲ್ಲಿ ತರಲು ತಾಪ
ಕಣ್ಣಲ್ಲಿ ಮುಚ್ಚಿ ನಿನ್ನಾ ನಾ ಕರೆದೊಯ್ವ ಆಸೆ ಚಿನ್ನಾ
ನಗುವೆಂಬ ಬಲೆಯ ಬೀಸಿ ನಾ ನುಡಿಯಲ್ಲಿ ಜೇನಾ ಸೂಸಿ
ಸೆರೆಹಿಡಿವೆ ಬಿಡದೆ ನಿನ್ನಾ....
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ಮಿಂಚಂತೆ ಸುಳಿದು ನೀನು ಮರೆಯಾಗಿ ಹೋದರೇನು
ಸುಳಿವನ್ನು ತಿಳಿಯಬಲ್ಲ ಹೊಸ ಮೋಡಿ ಬಲ್ಲೆ ನಾನು
ಬಾಳಲ್ಲಿ ಬಿಡಿಸದಂಥ ಎಂದೆಂದೂ ಮುರಿಯದಂಥ
ಬಂಧನದೇ ಹಿಡಿವೆ ನಿನ್ನ...
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೆ ಹೇ...ನಿನಗಾಗಿ ಅರಸಿ ಬಂದೆ
ನೀ ಎಲ್ಲೋ ಅಲ್ಲೇ ನಾನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ಸಾಹಿತ್ಯ: ಅರ್.ಎನ್.ಜಯಗೋಪಾಲ್
ಸಂಗೀತ: ಸತ್ಯಂ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೨
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೆ ಹೇ...ನಿನಗಾಗಿ ಅರಸಿ ಬಂದೆ
ನೀ ಎಲ್ಲೋ ಅಲ್ಲೇ ನಾನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ಕನಸಲ್ಲೂ ನಿನ್ನ ರೂಪ ಈ ಮನದಲ್ಲಿ ತರಲು ತಾಪ
ಕಣ್ಣಲ್ಲಿ ಮುಚ್ಚಿ ನಿನ್ನಾ ನಾ ಕರೆದೊಯ್ವ ಆಸೆ ಚಿನ್ನಾ
ನಗುವೆಂಬ ಬಲೆಯ ಬೀಸಿ ನಾ ನುಡಿಯಲ್ಲಿ ಜೇನಾ ಸೂಸಿ
ಸೆರೆಹಿಡಿವೆ ಬಿಡದೆ ನಿನ್ನಾ....
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ಮಿಂಚಂತೆ ಸುಳಿದು ನೀನು ಮರೆಯಾಗಿ ಹೋದರೇನು
ಸುಳಿವನ್ನು ತಿಳಿಯಬಲ್ಲ ಹೊಸ ಮೋಡಿ ಬಲ್ಲೆ ನಾನು
ಬಾಳಲ್ಲಿ ಬಿಡಿಸದಂಥ ಎಂದೆಂದೂ ಮುರಿಯದಂಥ
ಬಂಧನದೇ ಹಿಡಿವೆ ನಿನ್ನ...
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ನಿನಗಾಗಿ ಅರಸಿ ಬಂದೆ ಹೇ...ನಿನಗಾಗಿ ಅರಸಿ ಬಂದೆ
ನೀ ಎಲ್ಲೋ ಅಲ್ಲೇ ನಾನು
ಮರೆಯದಾ ನೆನಪನು ಎದೆಯಲ್ಲಿ ತಂದೆ ನೀನು
ಎಂಥಾ ಸೌಂದರ್ಯ ನೋಡು
ಚಿತ್ರ: ಮಾತು ತಪ್ಪದ ಮಗ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಇಳಯರಾಜ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೮
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು ಕನ್ನಡ ನಾಡಿದು ಚಿನ್ನದಾ ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಹರಿಯುವ ನೀರು ಹಸುರಿನ ಪೈರು ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು ಮರಗಳ ಸಂಪು ಎಲ್ಲೂ ಆ ತಾಯಿ ನಗೆಯೇ
ಹರಿಯುವ ನೀರು ಹಸುರಿನ ಪೈರು ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು ಮರಗಳ ಸಂಪು ಎಲ್ಲೂ ಆ ತಾಯಿ ನಗೆಯೇ
ಭಾರತ ಮಾತೆಯಾ ಈ ತನುಜಾತೆಯ ಚೆಲುವನು ನೋಡುತ ನಲಿಯುವೆ ಮೆರೆಯುವೆ ನಾ..
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಎಲ್ಲೇ ಇರಲಿ ಹೇಗೇ ಇರಲಿ ನಮ್ಮೂರ ಸವಿನೋಟ ಚಂದ
ಸಾವಿರ ಭಾಷೆಯ ಕಲಿತರೂ ಮನಕೆ ಕನ್ನಡ ನುಡಿಮುತ್ತೆ ಅಂದ
ಪೂರ್ವದ ಪುಣ್ಯವೊ ಪಡೆದಿಹ ಭಾಗ್ಯವೊ ಹುಟ್ಟಿದೆ ಪಾವನ ಕನ್ನಡ ಮಣ್ಣಲಿ ನಾ...
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು ಕನ್ನಡ ನಾಡಿದು ಚಿನ್ನದಾ ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಇಳಯರಾಜ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೮
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು ಕನ್ನಡ ನಾಡಿದು ಚಿನ್ನದಾ ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಹರಿಯುವ ನೀರು ಹಸುರಿನ ಪೈರು ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು ಮರಗಳ ಸಂಪು ಎಲ್ಲೂ ಆ ತಾಯಿ ನಗೆಯೇ
ಹರಿಯುವ ನೀರು ಹಸುರಿನ ಪೈರು ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು ಮರಗಳ ಸಂಪು ಎಲ್ಲೂ ಆ ತಾಯಿ ನಗೆಯೇ
ಭಾರತ ಮಾತೆಯಾ ಈ ತನುಜಾತೆಯ ಚೆಲುವನು ನೋಡುತ ನಲಿಯುವೆ ಮೆರೆಯುವೆ ನಾ..
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಎಲ್ಲೇ ಇರಲಿ ಹೇಗೇ ಇರಲಿ ನಮ್ಮೂರ ಸವಿನೋಟ ಚಂದ
ಸಾವಿರ ಭಾಷೆಯ ಕಲಿತರೂ ಮನಕೆ ಕನ್ನಡ ನುಡಿಮುತ್ತೆ ಅಂದ
ಪೂರ್ವದ ಪುಣ್ಯವೊ ಪಡೆದಿಹ ಭಾಗ್ಯವೊ ಹುಟ್ಟಿದೆ ಪಾವನ ಕನ್ನಡ ಮಣ್ಣಲಿ ನಾ...
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು ಕನ್ನಡ ನಾಡಿದು ಚಿನ್ನದಾ ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
Labels:
೧೯೭೮,
SPB,
ಆರ್.ಎನ್. ಜಯಗೋಪಾಲ್,
ಇಳಯರಾಜ,
ಮಾತು ತಪ್ಪದ ಮಗ
Wednesday, May 25, 2011
ರವಿವರ್ಮನ ಕುಂಚದ
ಚಿತ್ರ: ಸೊಸೆ ತಂದ ಸೌಭಾಗ್ಯ
ಸಾಹಿತ್ಯ : ಆರ್.ಎನ್.ಜಯಗೋಪಾಲ್
ಸಂಗೀತ : ಜಿ.ಕೆ.ವೆಂಕಟೇಶ್
ಗಾಯಕರು : ಪಿ.ಬಿ. ಶ್ರೀನಿವಾಸ್
ವರ್ಷ: ೧೯೭೭
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ಕವಿಕಲ್ಪನೆ ಕಾಣುವಾ ಚೆಲುವಿನಾ ಜಾಲವೋ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ಉಯ್ಯಾಲೆಯಾ ಆಡಿ ನಲಿವಾ ರೂಪಸೀ
ಉಯ್ಯಾಲೆಯಾ ಆಡಿ ನಲಿವಾ ರೂಪಸೀ
ಸುರಲೋಕದಿಂದ ಇಳಿದು ಬಂದ ನಿಜ ಊರ್ವಶೀ
ನನ್ನೊಲವಿನ ಪ್ರೇಯಸಿ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ಹೂರಾಶಿಯ ನಡುವೆ ನಗುವ ಕೋಮಲೇ
ಹೂರಾಶಿಯ ನಡುವೆ ನಗುವ ಕೋಮಲೇ
ಕವಿ ಕಾಳಿದಾಸ ಕಾವ್ಯರಾಣಿ ಶಾಕುಂತಲೇ..
ಚಿರಯೌವ್ವನ ನಿನ್ನಲೇ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ಕವಿಕಲ್ಪನೆ ಕಾಣುವಾ ಚೆಲುವಿನಾ ಜಾಲವೋ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
Labels:
೧೯೭೭,
PBS,
ಆರ್.ಎನ್. ಜಯಗೋಪಾಲ್,
ಜಿ. ಕೆ. ವೆಂಕಟೇಶ್,
ಸೊಸೆ ತಂದ ಸೌಭಾಗ್ಯ
Wednesday, March 9, 2011
ಮಲೆನಾಡ ಹೆಣ್ಣ ಮೈ ಬಣ್ಣ
ಚಿತ್ರ: ಭೂತಯ್ಯನ ಮಗ ಅಯ್ಯು
ಸಾಹಿತ್ಯ : ಆರ್. ಎನ್. ಜಯಗೋಪಾಲ್
ಸಂಗೀತ : ಜಿ. ಕೆ. ವೆಂಕಟೇಶ್
ಗಾಯಕರು : ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ
ವರ್ಷ: ೧೯೭೪
ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ನಾ ಮನಸೋತೆನೆ ಚಿನ್ನ
ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ
ಬಯಲು ಸೀಮೆಯ ಗಂಡು ಬಲುಗುಂಡು
ಜಗಮೊಂಡು ದುಂಡು ಹೂ ಚೆಂಡು
ನನ್ನ ಸರದಾಗೆ ರಸಗುಂಡು ನನ್ನ ಸರದಾಗೆ ರಸಗುಂಡು
ಮಾತು ನಿಂದು ಹುರಿದಾ ಅರಳು ಸಿಡಿದಂಗೆ
ಕಣ್ಣುಗಳು ಮಿಂಚಂಗೆ ನಿನ್ನ ನಗೆಯಲ್ಲೆ ಸೆಳೆದ್ಯಲ್ಲೆ
ಮನದಾಗೆ ನಿಂತ್ಯಲ್ಲೆ ನನ್ನ ಮನದಾಗೆ ನಿಂತ್ಯಲ್ಲೆ
ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ
ಕಾಡಬೇಡಿ ನೋಡಿಯಾರು ನನ್ನೋರು
ನನ್ನ ಹಿರಿಯೋರು ಬಿಡಿ ನನ್ನ ಕೈಯ್ಯ ದಮ್ಮಯ್ಯ
ತುಂಟಾಟ ಸಾಕಯ್ಯ ಈ ತುಂಟಾಟ ಸಾಕಯ್ಯ
ದೂರದಿಂದ ಬಂದೆ ನಿನ್ನ ಹಂಬಲಿಸಿ
ಗೆಳೆತನ ನಾ ಬಯಸಿ
ಆದ ನಾ ಬಲ್ಲೇ ನಾ ಬಲ್ಲೆ ನಾಚಿ ಮೊಗ್ಗಾದೆ ನಾನಿಲ್ಲೆ
ನಾಚಿ ಮೊಗ್ಗಾದೆ ನಾನಿಲ್ಲೆ
ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ
Labels:
೧೯೭೪,
PBS,
ಆರ್.ಎನ್. ಜಯಗೋಪಾಲ್,
ಎಸ್. ಜಾನಕಿ,
ಜಿ. ಕೆ. ವೆಂಕಟೇಶ್,
ಭೂತಯ್ಯನ ಮಗ ಅಯ್ಯು
Friday, November 12, 2010
ಸುಖದಾ ಸ್ವಪ್ನಗಾನ
ಚಿತ್ರ: ಮರೆಯದ ಹಾಡು
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ : ಜಿ.ಕೆ. ವೆಂಕಟೇಶ್
ಗಾಯನ : ಎಸ್. ಜಾನಕಿ
ವರ್ಷ: ೧೯೮೧
ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ
ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ
ಸ್ವರವೇಳು ಕಲೆತ ರಾಗ ಸ೦ಪೂರ್ಣ ಜೀವರಾಗ
ಉಸಿರೆರಡು ಬೆರೆತ ವೇಗ ಅನುರಾಗ ಭಾವಯೋಗ
ಜನುಮ ಜನುಮದಾ ಬ೦ಧಾ ಅನುಬ೦ಧಾ ನಮ್ಮದೂ
ತಪಸಿನಾ ಫಲವಿದೂ ದೈವದಾ ವರವಿದೂ
ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ
ಸವಿ ಮುರಳಿ ಕರೆದ ವೇಳೆ ಆ ರಾಧೆ ಓಡಿದ೦ತೆ
ಮಾಧವನ ನೆನಪಿನಲ್ಲೇ ಆ ಮೀರಾ ಹಾಡಿದ೦ತೆ
ನಿಮ್ಮೊಲವಿನಲ್ಲೆ ಮಿ೦ದೂ ನಾನಿ೦ದೂ
ಹಾಡುವೇ ನನ್ನನೇ ಮರೆಯುವೇ ನಿಮ್ಮಲೇ ಬೆರೆಯುವೆ
ಶೃತಿಲಯದ ಮಿಲನದಲ್ಲೇ ದೈವೀಕ ನಾದ ಲೀಲೆ
ಸತಿಪತಿಯ ಒಲವಿನಲ್ಲೇ ಸ೦ಸಾರ ನೌಕೆ ತೇಲೆ
ನೆನಪಿನ ತೋಟದ ಮಲ್ಲೇ ಹೂ ಮಾಲೆ
ಎ೦ದಿಗೂ ಬಾಡದಾ ಹೂವಿದು ಮುಗಿಯದಾ ಹಾಡಿದು
ಸುಖದಾ ಸ್ವಪ್ನಗಾನ ಎದೆಯಾ ಆಸೆತಾನ
ಒಲವಾ ಭಾವವೀಣಾ ನೀ ಮಿಡಿಯೆ ನಾ ನುಡಿಯೆ ಅದುವೆ ಜೀವನ
ಅದುವೆ ಜೀವನ
Labels:
೧೯೮೧,
ಆರ್.ಎನ್. ಜಯಗೋಪಾಲ್,
ಎಸ್. ಜಾನಕಿ,
ಜಿ. ಕೆ. ವೆಂಕಟೇಶ್,
ಮರೆಯದ ಹಾಡು
ನೀ ಇರಲು ಜೊತೆಯಲ್ಲಿ
ಚಿತ್ರ: ಗುಣ ನೋಡಿ ಹೆಣ್ಣು ಕೊಡು
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ಎಂ. ರಂಗರಾವ್
ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ, ಎಸ್. ಜಾನಕಿ
ವರ್ಷ: ೧೯೮೨
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ
ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ಮಾತಲ್ಲಿ ಏನೊ ಹೊಸತನ ಮಗುವನ್ನು ಹೋಲೊ ಹೂಮನ
ರಸಕಾವ್ಯ ನಿನ್ನ ಯೌವ್ವನ ಎದೆ ತುಂಬಿ ನಿಂತೆ ಪ್ರತಿಕ್ಷಣ
ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ
ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ ಬೆರೆತೆ ಉಸಿರಲ್ಲಿ ಒಂದಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ಈ ನೀಲಿ ಕಣ್ಣ ಬೆಳಕಲಿ ಮನೆಯೆಲ್ಲ ಎಂದು ಬೆಳಗಲಿ
ನೀ ತಂದ ಪ್ರೀತಿ ಲತೆಯಲಿ ನಗುವೆಂಬ ಹೂವು ಅರಳಲಿ
ಅಗಲಿ ನಿನ್ನನು ಬಾಳಲಾರೆನು
ಅಗಲಿ ನಿನ್ನನು ಬಾಳಲಾರೆನು ಜೀವ ಒಡಲಿಂದ ದೂರಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ
ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ಬಾಳೆಲ್ಲ ಹಸಿರಾದಂತೆ ಬಾಳೆಲ್ಲ ಹಸಿರಾದಂತೆ..
Labels:
೧೯೮೨,
SPB,
ಆರ್.ಎನ್. ಜಯಗೋಪಾಲ್,
ಎಂ. ರಂಗರಾವ್,
ಎಸ್. ಜಾನಕಿ,
ಗುಣ ನೋಡಿ ಹೆಣ್ಣು ಕೊಡು
Monday, November 8, 2010
ಉಷೆ ಮೂಡಿದಾಗ
ಚಿತ್ರ: ಪ್ರೀತಿವಾತ್ಸಲ್ಯ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೪
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು ನಗೆ ಮಿಂಚು ನಿನ್ನದು
ನೆನಪಾಗಿ ಬಂದಿದೆ ಸಿಹಿ ನೋವ ತಂದಿದೆ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಹೂವರಳಿ ನಿಂತ ವೇಳೆ ಕಣ್ಮುಂದೆ ಬಂದಿತಲ್ಲೇ
ಪ್ರಿಯೆ ನಿನ್ನ ಕಾಡಿಗೆ ಕಣ್ಣ ಆ ನೋಟದಂದವೇ
ಕರೆ ನೀಡಿ ನೋಟದಲ್ಲಿ ನೀ ನಿಂತೆ ದೂರದಲ್ಲಿ
ಬಳಿ ಬಂದೆ ಬಯಸಿ ನಿನ್ನ ನೀ ಹೋದೆ ಕಾಣದೆ
ಆ ನೆನಪು ಕಾಡಿದೆ ನನ್ನ ಈ ಬೇಗೆ ತಾಳೆನು ಚಿನ್ನ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಕಾವೇರಿ ನೀರಿನಲ್ಲೂ ಕನ್ನಡದ ಕಾವ್ಯದಲ್ಲೂ
ಬೇಲೂರ ಬಾಲೆಯಲ್ಲೂ ನಾ ಕಂಡೆ ನಿನ್ನನು
ಒಂದೊಂದು ಭಂಗಿಯಲ್ಲೂ ಒಂದೊಂದು ಭಾವದಲ್ಲೂ
ಒಂದೊಂದು ಮಾತಿನಲ್ಲೂ ನೀ ಸೆಳೆದೆ ನನ್ನನು
ನೀ ನಿಂತೆ ಕಣ ಕಣದಲ್ಲೂ ನನ್ನೆದೆಯ ಉಸಿರುಸಿರಲ್ಲೂ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು ನಗೆ ಮಿಂಚು ನಿನ್ನದು
ನೆನಪಾಗಿ ಬಂದಿದೆ ಸಿಹಿ ನೋವ ತಂದಿದೆ
ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ
ರಂಗನ್ನು ನೋಡಿದೆ ಮೈ ಮರೆತು ಹಾಡಿದೆ
Labels:
೧೯೮೪,
SPB,
ಆರ್.ಎನ್. ಜಯಗೋಪಾಲ್,
ಪ್ರೀತಿವಾತ್ಸಲ್ಯ,
ರಾಜನ್-ನಾಗೇಂದ್ರ
ಸ್ನೇಹಿತರೇ ನಿಮಗೆ ಸ್ವಾಗತ
ಚಿತ್ರ: ಪ್ರೀತಿವಾತ್ಸಲ್ಯ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೪
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಓ ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ರಸಪೂರ್ಣ ರಂಗಾದ ಸಂಜೆಯಲ್ಲಿ
ಸವಿ ಸ್ನೇಹ ತಂದಂಥ ವೇಳೆಯಲ್ಲಿ
ನಾ ಹಾಡುವ ಈ ಹಾಡಿನ ತಾಳಮೇಳ ಸೇರಿ ನಿಮ್ಮ ಕೂಗಲೀಗ
ಕ್ಷಣವೊಂದು ಕಣ್ಣೋಟ ಸೇರಿದಾಗ
ಸವಿ ಮಾತು ತಮ್ಮಲ್ಲೇ ಆಡಿದಾಗ
ಆ ಮೌನದ ಪಿಸುಮಾತಿಗೆ ಸಾಟಿಯಾದ ಯಾವ ಪ್ರೇಮ ಕಾವ್ಯವಿಲ್ಲ
ಹೃದಯ ಹಗುರಾಗಿ ಇರಲಿ
ಪ್ರೀತಿವಾತ್ಸಲ್ಯ ನಗಲಿ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಹೇ ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ತನ್ನಾಸೆ ಮಗನಲ್ಲಿ ತಾಯಿಯ ಪ್ರೀತಿ
ಒಲಿದಂತ ಪತಿಯಲ್ಲಿ ಪತ್ನಿಯ ಪ್ರೀತಿ
ಒಡಹುಟ್ಟಿದ ಸಂಬಂಧವು ತರುವಂಥ ಸವಿಯಾದ ಸುಮಧುರ ಪ್ರೀತಿ
ಪ್ರಿಯನಲ್ಲಿ ಪ್ರೆಯಸಿಯು ತೋರುವ ಪ್ರೀತಿ
ನಿಜ ಸ್ನೇಹ ತಂದಂಥ ನಿರ್ಮಲ ಪ್ರೀತಿ
ಈ ಪ್ರೀತಿಯೂ ವಿಶ್ವಾಸವೂ ಬಾಳಲ್ಲಿ ಇರಲೆಂದು ಶಾಶ್ವತ ರೀತಿ
ಮನಸು ಹಾಯಾಗಿ ಇರಲಿ
ಪ್ರೀತಿವಾತ್ಸಲ್ಯ ನಗಲಿ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಹೇ ಎಂದೆಂದೂ ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯ ಪ್ರೀತಿ ಸ್ವಾಗತ
Labels:
೧೯೮೪,
SPB,
ಆರ್.ಎನ್. ಜಯಗೋಪಾಲ್,
ಪ್ರೀತಿವಾತ್ಸಲ್ಯ,
ರಾಜನ್-ನಾಗೇಂದ್ರ
Saturday, October 9, 2010
ಬಾನು ಭೂಮಿಯ ಮಿಲನವ ಬಯಸುತ
ಚಿತ್ರ: ಮಾತು ತಪ್ಪದ ಮಗ
ಸಾಹಿತ್ಯ: :ಆರ್. ಎನ್. ಜಯಗೋಪಾಲ್
ಸಂಗೀತ: ಇಳಯರಾಜ
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ವರ್ಷ: ೧೯೭೮
ಬಾನು ಭೂಮಿಯ ಮಿಲನವ ಬಯಸುತ ಬಾಗಿದೆ
ಮುಗಿಲಲ್ಲಿ ಮಿಂಚಾಡಿದೆ ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೆ
ಬಾನು ಭೂಮಿಯ ನಡುವಲಿ ಅಂತರ ತುಂಬಿದೆ
ಮುಗಿಲಿಂದ ಮಿಂಚೋಡಿದೆ ಹೂ ಚಿಂತೆ ರವಿಗೆಲ್ಲಿದೆ
ಭ್ರಮೆ ತುಂಬಿದೆ ಸಂಗಮದೆ
ಬಾಳೆಂಬ ಬನದೆ ಒಲವೆಂಬ ಹೂವ ಸೌಗಂಧ ನೀ ತಂದೆ
ಬಾಗಿದ ಲತೆಗೆ ಆಸರೆ ತಂದು ಮನದಲ್ಲಿ ನೀ ನಿಂದೆ
ಮೌನದ ಮಾತಲಿ ತುಂಬಿದೆ ಅರ್ಥ ತಂದೆ ನಾನಾಗ ಮೂಡಿತು ಅನುರಾಗ
ಬಾನು ಭುಮಿಯ ನಡುವಲಿ ಅಂತರ ತುಂಬಿದೆ
ಮುಗಿಲಿಂದ ಮಿಂಚೋಡಿದೆ ಹೂ ಚಿಂತೆ ರವಿಗೆಲ್ಲಿದೆ
ಅಂಜಿಕೆ ಶಂಕೆ ತುಂಬಿದೆ ಮನದೆ ಮುಂದೇನು ಎನ್ನುತಲಿ
ಎಂದಿಗು ನಿನ್ನ ಕೈಬಿಡೆ ಚಿನ್ನ ನೋವೆನೆ ಬಂದಿರಲಿ
ಭರವಸೆ ತಂದ ಹರುಶದೊಳಿಂದ ಏನೊ ಆವೇಗ ಸೋತೆ ನಾನೀಗ
ಬಾನು ಭೂಮಿಯ ಮಿಲನವ ಬಯಸುತ ಬಾಗಿದೆ
ಮುಗಿಲಲ್ಲಿ ಮಿಂಚಾಡಿದೆ ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೆ
Labels:
೧೯೭೮,
SPB,
ಆರ್.ಎನ್. ಜಯಗೋಪಾಲ್,
ಇಳಯರಾಜ,
ಎಸ್. ಜಾನಕಿ,
ಮಾತು ತಪ್ಪದ ಮಗ
Wednesday, September 29, 2010
ನೀರಿನಲ್ಲಿ ಅಲೆಯ ಉಂಗುರ
ಚಿತ್ರ: ಬೇಡಿ ಬಂದವಳು
ಸಾಹಿತ್ಯ: ಆರ್.ಎನ್. ಜಯಗೋಪಲ್
ಸಂಗೀತ: ಆರ್. ಸುದರ್ಶನಂ
ಗಾಯಕರು: ಪಿ.ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ
ವರ್ಷ: ೧೯೬೮
ವರ್ಷ: ೧೯೬೮
ನೀರಿನಲ್ಲಿ ಅಲೆಯ ಉಂಗುರ ಭೂಮಿ ಮೇಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ
ನೀರಿನಲ್ಲಿ ಅಲೆಯ ಉಂಗುರ ಭೂಮಿ ಮೇಲೆ ಹೂವಿನುಂಗುರ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಮನ ಸೆಳೆದ ನಲ್ಲ ಕೊಟ್ಟನಲ್ಲ
ಕೆನ್ನೆ ಮೇಲೆ ಪ್ರೇಮದುಂಗುರ
ನೀರಿನಲ್ಲಿ ಅಲೆಯ ಉಂಗುರ ಭೂಮಿ ಮೇಲೆ ಹೂವಿನುಂಗುರ
ಅಂದಿಗೆಯೂ ಕಾಲಿನುಂಗುರ ಅದರ ದನಿ ಎಷ್ಟು ಸುಂದರ
ತರುವು ಲತೆಯೂ ಸೇರಿದ ಕಥೆಯೂ
ತರುವು ಲತೆಯೂ ಸೇರಿದ ಕಥೆಯೂ
ತನುವ ಬಳಸಿ ತೋಳಿನುಂಗುರ
ನೀರಿನಲ್ಲಿ ಅಲೆಯ ಉಂಗುರ ನೀರಿನಲ್ಲಿ ಅಲೆಯ ಉಂಗುರ
ಮಣ್ಣಿನಲ್ಲಿ ಕಂಡ ಉಂಗುರ ಹೆಣ್ಣು ನಾಚಿ ಗೀರಿದುಂಗುರ
ಬೆರಳಿನಿಂದ ತೀಡಿದುಂಗುರ
ಬೆರಳಿನಿಂದ ತೀಡಿದುಂಗುರ
ಕಣ್ಣ ಸೆಳೆವ ಕುರುಳುಗುಂಗುರ
ನೀರಿನಲ್ಲಿ ಅಲೆಯ ಉಂಗುರ ನೀರಿನಲ್ಲಿ ಅಲೆಯ ಉಂಗುರ
ಆಗಿ ನಿನ್ನ ಕೈಯ ಸಂಚರ ಎನ್ನ ಹೃದಯವೊಂದು ಢಂಗುರ
ನಾನೂ ನುಡಿಯೆ ಕಿವಿಯಲಿಂಚರ
ನಾನೂ ನುಡಿಯೆ ಕಿವಿಯಲಿಂಚರ
ಹಣೆಯ ಮೇಲೆ ಬೆವರಿನುಂಗುರ...
ನೀರಿನಲ್ಲಿ ಅಲೆಯ ಉಂಗುರ ನೀರಿನಲ್ಲಿ ಅಲೆಯ ಉಂಗುರ
Labels:
೧೯೬೮,
PBS,
ಆರ್. ಸುದರ್ಶನಂ,
ಆರ್.ಎನ್. ಜಯಗೋಪಾಲ್,
ಪಿ. ಸುಶೀಲ,
ಬೇಡಿ ಬಂದವಳು
Subscribe to:
Posts (Atom)