Showing posts with label ಪಾವನ ಗಂಗ. Show all posts
Showing posts with label ಪಾವನ ಗಂಗ. Show all posts

Thursday, February 3, 2011

ಮೊದಲನೆ ದಿನವೇ ಒಲಿದೆ



ಚಿತ್ರ: ಪಾವನ ಗಂಗ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೭

ಮೊದಲನೆ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾಡಿದೆ ಕವಿತೆ ಕಂಗಳಲೇ ಮೌನದಲೇ
ಮೊದಲನೆ ದಿನವೇ ಸೋತೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ

ಬಾಳಿನ ಲತೆಯಲಿ ಹೂವಾದೆ ಬಾಳಿನ ಕುಸುಮಕೆ ಜೇನಾದೆ
ಬಾಳಿನ ಲತೆಯಲಿ ಹೂವಾದೆ ಬಾಳಿನ ಕುಸುಮಕೆ ಜೇನಾದೆ
ಬಾಳ ಬಯಕೆಯೇ ನೀನಾದೆ ಬಾಳಿಗಾನಂದ ನೀ ತಂದೆ

ಪ್ರೇಮದ ಕಡಲಲಿ ಮುತ್ತಾದೆ ಪ್ರೇಮದ ಬದುಕಿಗೆ ಕಣ್ಣಾದೆ
ಪ್ರೇಮ ಪಲ್ಲವಿ ನೀನಾದೆ ಪ್ರೇಮದಾನಂದ ನೀ ತಂದೆ
ಪ್ರೇಮದಾನಂದ ನೀ ತಂದೆ

ಮೊದಲನೆ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ

ಈ ದಿನ ಹೊಸತನ ನೀ ತಂದೆ ನಾಳಿನ ಬದುಕಿಗೆ ಬೆಳಕಾದೆ
ಈ ದಿನ ಹೊಸತನ ನೀ ತಂದೆ ನಾಳಿನ ಬದುಕಿಗೆ ಬೆಳಕಾದೆ
ಪ್ರಾಣ ಪದಕವೇ ನೀನಾದೆ ನಾನು ನಿನ್ನಲ್ಲಿ ಒಂದಾದೆ

ಆಡುವ ಮಾತಿಗೆ ದನಿಯಾದೆ ಹಾಡುವ ಗೀತೆಗೆ ಶ್ರುತಿಯಾದೆ
ಜೀವ ಜೀವವೇ ನೀನಾದೆ ನಿನ್ನ ಮನದಲ್ಲಿ ನಾನಾದೆ
ನಿನ್ನ ಮನದಲ್ಲಿ ನಾನಾದೆ

ಮೊದಲನೆ ದಿನವೇ ಒಲಿದೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾಡಿದೆ ಕವಿತೆ ಕಂಗಳಲೇ ಮೌನದಲೇ
ಮೊದಲನೆ ದಿನವೇ ಸೋತೆ ನಿನ್ನ ನಡೆಗೆ ಸವಿ ನುಡಿಗೆ
ನಿನ್ನ ನಡೆಗೆ ಸವಿ ನುಡಿಗೆ

ಆಕಾಶ ದೀಪವು ನೀನು



ಚಿತ್ರ: ಪಾವನ ಗಂಗ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೭೭

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು

ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಹೃದಯದ ವೀಣೆಯನು ಹಿತವಾಗಿ ನುಡಿಸುತಲಿ
ಆನಂದ ತುಂಬಲು ನೀನು ನಾ ನಲಿವೆನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು

ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಹೃದಯವು ಧರಿಸಿದೆ ಈ ಜೀವ ಸೋಲುತಿದೆ
ಸಂಗಾತಿ ಆದರೆ ನೀನು ನಾ ಉಳಿವೆನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ನಿನ್ನ ಕಂಡಾಗ ಸಂತೋಷವೇನು

ಹೂವಾದ ಆಸೆಯೆಲ್ಲ ಮುಳ್ಳಾಗಿ ಹೋಯಿತಲ್ಲ
ಜೀವ ನೋವ ತಾಳದಲ್ಲ ಸುಖ ಶಾಂತಿ ಇನ್ನಿಲ್ಲ
ನೆಮ್ಮದಿಯ ಕಾಣೆನು ನಾ ಸೋತೆನು

ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು
ಆ ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು

Tuesday, January 4, 2011

ಹೂವೊಂದು ಬೇಕು ಬಳ್ಳಿಗೆ



ಚಿತ್ರ: ಪಾವನ ಗಂಗ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಜಾನಕಿ
ವರ್ಷ:  ೧೯೭೭

ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ
ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ
ಕಂದನಾ ಸಂತೋಷವೇ ತಾಯಿಯ ಸೌಭಾಗ್ಯಾವು
ಬಾಳಿನ ಆನಂದವು
ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ

ಬಿಸಿಲಿಗೆ ನೆರಳಿನಂತೆ ಇರುಳಿಗೆ ಬೆಳಕಿನಂತೆ
ಬಾಳಿಗೆ ಕಂಗಳಂತೆ ಮಗುವಿನ ಪ್ರೀತಿಯಂತೆ
ಕಂದನ ತೊದಲು ನುಡಿ ಜೇನಿನ ಹನಿಗಳಂತೆ
ಕೋಪದಿ ಅಳುವಾಗ ಜೋಗುಳ ಹಾಡಿದಂತೆ
ಸರಸವೆ ದಿನಾ ಅನುದಿನ ಹೊಸತನ ಹೊಸತನ

ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ

ಒಣಗಿದ ರಂಬೆಯಲಿ ಹಸುರೆಲೆ ಮೂಡುವುದೇ
ಸೊರಗಿದ ಹರೈದಯದಲಿ ಸಂತಸ ಕಾಣುವುದೇ
ಮೂಡಿದ ಬಯಕೆಗಳು ಮುಗಿಯಲು ಕನಸಿನೊಳು
ಆಸೆಯು ಚಿಗುರುವುದೇ ಹರುಷವು ಉಳಿಯುವುದೇ
ಬಳಲಿದೆ ಮನ ಅನುದಿನ ಅನುಕ್ಷಣಾ ಅನುಕ್ಷಣಾ

ಹೂವೊಂದು ಬೇಕು ಬಳ್ಳಿಗೆ ಮಗುವೊಂದು ಬೇಕು ಹೆಣ್ಣಿಗೆ
ಕಂದನಾ ಸಂತೋಷವೇ ತಾಯಿಯ ಸೌಭಾಗ್ಯಾವು
ಬಾಳಿನ ಆನಂದವು