Showing posts with label ೧೯೮೮. Show all posts
Showing posts with label ೧೯೮೮. Show all posts

Friday, November 12, 2010

ಈ ಹೃದಯ ಹಾಡಿದೆ



ಚಿತ್ರ: ಸುಪ್ರಭಾತ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ,ಚಿತ್ರ
ವರ್ಷ: ೧೯೮೮

ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ

ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ
ಕನಸು ಮನಸಲ್ಲಿ ಉಸಿರು ಉಸಿರಲ್ಲಿ ನಿನ್ನ ಚಿಂತೆ ತುಂಬಿದೆ
ಗಾಳಿಯು ಬೀಸಲು ಭ್ರಮೆಯಿಂದ ಅಲೆದಾಡಿದೆ

ಹಗಲು ಇರುಳಾಗಿ ಇರುಳು ಹಗಲಾಗಿ ದಿನ ರಾತ್ರಿ ಓಡಿದೆ
ಮರೆಯುವ ರೀತಿಯ ನನ್ನಾಣೆ ನಾ ಕಾಣದೆ
ನೆನಪು ಎದೆಯಲ್ಲಿ ತುಳುಕಾಡಿದೆ

ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಈ ಹೃದಯ ಹಾಡಿದೆ ಆಸೆಗಳ ತಾಳದೆ

ಚಿಗುರು ಎಳೆಯಾಗಿ ಮೊಗ್ಗು ಹೂವಾಗಿ ಋತುಕಾಲ ಓಡಿದೆ
ಚಿಗುರು ಎಳೆಯಾಗಿ ಮೊಗ್ಗು ಹೂವಾಗಿ ಋತುಕಾಲ ಓಡಿದೆ
ತಡೆಯುವ ಶಕುತಿಯು ನಿನ್ನಾಣೆ ನನಗಿಲ್ಲದೆ

ಕಡಲು ಮುಗಿಲಾಗಿ ಮುಗಿಲು ಮಳೆಯಾಗಿ ನದಿಯಾಗಿ ಓಡಿದೆ
ಬಯಕೆಯು ಮುಗಿಯದೆ ಸುಖ ಶಾಂತಿ ನಾ ಕಾಣದೆ
ನಯನ ಕಣ್ಣೀರ ಹನಿಯಾಗಿದೆ

ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ

Monday, September 27, 2010

ನನ್ನ ಹಾಡು ನನ್ನದು ನನ್ನ ರಾಗ ನನ್ನದು



ಚಿತ್ರ : ಸುಪ್ರಭಾತ
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್-ನಾಗೇಂದ್ರ
 
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ : ೧೯೮೮


ಹ ಹ ಹ ಹ ಹ ಹ ಹಾ... ಹ ಹ ಹ ಹ ಹ ಹ ಹಾ..
ಲ ಲ ಲ ಲ ಲ ಲ ಲಾ... ಲ ಲ ಲ ಲ ಲ ಲ ಲಾ...
ನನ್ನ ಹಾಡು ನನ್ನದು, ನನ್ನ ರಾಗ ನನ್ನದು,
ನನ್ನ ತಾಳ ನನ್ನದು, ನನ್ನ ಆಸೆ ನನ್ನದು
ಎಲ್ಲೆಲ್ಲಿಯೂ ಎಂದೆಂದಿಗೂ, ಎಲ್ಲೆಲ್ಲಿಯೂ ಎಂದೆಂದಿಗೂ,
ನನ್ನಂತೆ ನಾನು ಇರುವೆನು, ನುಡಿವೆನು, ನಡೆವೆನು, ದುಡಿವೆನು.. ಈ ಬಾಳಲಿ...
ನನ್ನ ಹಾಡು ನನ್ನದು, ನನ್ನ ರಾಗ ನನ್ನದು,
ನನ್ನ ತಾಳ ನನ್ನದು, ನನ್ನ ಆಸೆ ನನ್ನದು

ನೋಡು ನೀಲಿ ಬಾನಿಗೆ, ಮೋಡ ಅಂದ ತಂದಿದೆ
ಹಕ್ಕಿ ಹಾಡಿ ಹಾರಡಿದೆ. ಹಾಯಾಗಿ ಆನಂದದೇ...
ತಂಪು ಗಾಳಿ ಬೀಸಿದೆ, ನದಿಯ ನೀರು ಓಡಿದೆ
ಹಸಿರು ಮೆತ್ತೆಯ ಹಾಸಿದೆ. ಲತೆಯಲ್ಲಿ ಹೂ ನಗುತಿದೆ.
ಜಗದ ಸೊಬಗು ನನಗೆ ತಾನೇ...
ನನ್ನ ಹಾಡು ನನ್ನದು, ನನ್ನ ರಾಗ ನನ್ನದು,
ನನ್ನ ತಾಳ ನನ್ನದು, ನನ್ನ ಆಸೆ ನನ್ನದು

ನೂರು ಜನರು ಬಂದರು, ನೂರು ಜನರು ಹೋದರು
ನನಗೆ ನಾನೇ ಸಂಗಾತಿಯು, ನಾನೆಂದೂ ಸುಖಜೀವಿಯು
ನೂರು ಜನರು ಬಂದರು, ನೂರು ಜನರು ಹೋದರು
ನನಗೆ ನಾನೇ ಸಂಗಾತಿಯು, ನಾನೆಂದೂ ಸುಖಜೀವಿಯು
ಉರಿವ ಬಿಸಿಲೆ ಬಂದರೂ, ಗುಡುಗು ಮಳೆಯೇ ಸುರಿದರೂ
ನನಗೆ ಎಲ್ಲ ಸಂತೋಷವೇ, ದಿನಕೊಂದು ಹೊಸ ನೋಟವೇ
ಹಗಲು ಇರುಳು ಸೊಗಸೂ ತಾನೇ...

ಎಲ್ಲೆಲ್ಲಿಯೂ ಎಂದೆಂದಿಗೂ, ಎಲ್ಲೆಲ್ಲಿಯೂ ಎಂದೆಂದಿಗೂ,
ನನ್ನಂತೆ ನಾನು ಇರುವೆನು, ನುಡಿವೆನು, ನಡೆವೆನು, ದುಡಿವೆನು.. ಈ ಬಾಳಲಿ...
ನನ್ನ ಹಾಡು ನನ್ನದು, ನನ್ನ ರಾಗ ನನ್ನದು,
ನನ್ನ ತಾಳ ನನ್ನದು, ನನ್ನ ಆಸೆ ನನ್ನದು

Friday, September 24, 2010

ಹಾಲಲ್ಲಾದರೂ ಹಾಕು ನೀರಲ್ಲಾದರೂ



ಚಿತ್ರ : ದೇವತಾ ಮನುಷ್ಯ
ಸಾಹಿತ್ಯ : ಚಿ.ಉದಯ್ ಶಂಕರ್
ಸಂಗೀತ : ಉಪೇಂದ್ರ ಕುಮಾರ್
ಗಾಯಕರು : ಡಾ|| ರಾಜ್ ಕುಮಾರ್ ಹಾಗೂ ಬಿ. ಆರ್. ಛಾಯಾ
ವರ್ಷ : ೧೯೮೮

ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ.
ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ.
ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ, ಹಾಯಾಗಿರುವೆ ರಾಘವೇಂದ್ರ.

ಮುಳ್ಳಲ್ಲಾದರೂ ನೂಕು, ಕಲ್ಲಲ್ಲಾದರೂ ನೂಕು, ರಾಘವೇಂದ್ರ.
ಮುಳ್ಳಲ್ಲಾದರೂ ನೂಕು, ಕಲ್ಲಲ್ಲಾದರೂ ನೂಕು, ರಾಘವೇಂದ್ರ.
ಮುಳ್ಳಲ್ಲಿ ಮುಳ್ಳಾಗಿ, ಕಲ್ಲಲ್ಲಿ ಕಲ್ಲಾಗಿ, ಒಂದಾಗಿರುವೆ ರಾಘವೇಂದ್ರ.
ಬಿಸಿಲಲ್ಲೇ ಒಣಗಿಸು, ನೆರಳಲ್ಲೇ ಮಲಗಿಸು, ರಾಘವೇಂದ್ರ.
ಬಿಸಿಲಲ್ಲಿ ಕೆಂಪಾಗಿ, ನೆರಳಲ್ಲಿ ತಂಪಾಗಿ, ನಗುನಗುತಾಲಿರುವೆ ರಾಘವೇಂದ್ರ.

ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು, ರಾಘವೇಂದ್ರ.

ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ
ಸುಖವನ್ನೇ ನೀಡೆಂದು ಎಂದೂ ಕೇಳೆನು ನಾನು, ರಾಘವೇಂದ್ರ
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು, ನೀನೇ ಹೇಳು, ರಾಘವೇಂದ್ರ.
ಎಲ್ಲಿದ್ದಾರೇನು ನಾ, ಹೇಗಿದ್ದರೇನು ನಾ, ರಾಘವೇಂದ್ರ.
ನಿನ್ನಲ್ಲಿ ಶರಣಾಗಿ, ನೀ ನನ್ನ ಉಸಿರಾಗಿ, ಬಾಳಿದರೆ ಸಾಕು ರಾಘವೇಂದ್ರ.