Showing posts with label ಕೆ. ಜೆ. ಯೇಸುದಾಸ್. Show all posts
Showing posts with label ಕೆ. ಜೆ. ಯೇಸುದಾಸ್. Show all posts
Wednesday, July 20, 2011
ಪ್ರೇಮ ಪ್ರೀತಿ ನನ್ನುಸಿರು
ಚಿತ್ರ: ಸಿಂಗಾಪುರದಲ್ಲಿ ರಾಜಾ ಕುಳ್ಳ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಜೆ. ಯೇಸುದಾಸ್
ವರ್ಷ: ೧೯೭೮
ವಾಟ್ ಈಸ್ ಲೈಫ್ ಲೈಫ್ ಈಸ್ ಎ ಸಾಂಗ್
ದೆನ್ ಸಿಂಗ್ ಇಟ್ ಐ ಸೇ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು
ಅನ್ಯಾಯ ಕಂಡಾಗ ಸಿಡಿಗುಂಡು ಸಿಡಿದಂತೆ
ಅಪರಾಧಿ ಎಲ್ಲೆಂದು ಹುಡುಕಾಡಿ ಹುಲಿಯಂತೆ
ಹೋರಾಡುವಾ ಬಾ ಓ ಗೆಳೆಯ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು
ಹೂವಂತೆ ಮೃದುವಾಗಬಲ್ಲೆ ಮುಳ್ಳಂತೆ ಮೊನಚಾಗಬಲ್ಲೆ
ಹಣ್ಣಂತೆ ಸಿಹಿಯಾಗಬಲ್ಲೆ ವಿಷದಂತೆ ಕಹಿಯಾಗಬಲ್ಲೆ
ಬಾಳೋದು ಹೇಗೆಂದು ನಾ ಬಲ್ಲೆ ಆಳೋದು ಹೇಗೆಂದು ಬಲ್ಲೆ
ಪ್ರೀತಿ ಪ್ರೀತಿಗೆ ರೋಷ ರೋಷಕೆ ನಮ್ಮ ರೀತಿಯೆನ್ನುವಾ
ವಾಟ್ ಈಸ್ ಲೈಫ್ ಲೈಫ್ ಈಸ್ ಎ ಡ್ಯೂಟಿ
ದೆನ್ ಪರ್ಫಾರ್ಮ್ ಇಟ್ ಐ ಸೇ
ಬಾಳು ಎಂದೂ ಹೂವಲ್ಲಾ ಬಾಳು ಎಂದೂ ಮುಳ್ಳಲ್ಲಾ
ಕಾಣೋದು ನಿಜವಲ್ಲ ಮಾತೆಲ್ಲಾ ಮುತ್ತಲ್ಲ
ಕಾಲಕ್ಕೆ ತಕ್ಕಂತೆ ಜಗದಲ್ಲಿ ಜನರೆಲ್ಲ
ಬಾಳೆಂಬುವಾ ಈ ಹಾದಿಯಲಿ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು
ಸವಿಯಾದ ಮಾತಾಡಬಲ್ಲೆ ಕವಿಯಾಗಿ ನಾ ಹಾಡಬಲ್ಲೆ
ಸಂತೋಷ ನಾ ಹಂಚಬಲ್ಲೆ ನೋವೆಲ್ಲಾ ನಾ ನುಂಗಬಲ್ಲೆ
ತಂಗಾಳಿ ನಾನಾಗಿ ಬರಬಲ್ಲೆ ಬಿರುಗಾಳಿ ನಾನಾಗಬಲ್ಲೆ
ಎಲ್ಲೆ ನೀನಿರು ಹೇಗೆ ನೀನಿರು ಎಂದೂ ಸ್ನೇಹದಿಂದಿರು
ಸೋ ವಾಟ್ ಈಸ್ ಲೈಫ್ ಲೈಫ್ ಈಸ್ ಎ ಗೇಮ್
ಆಹಾ ದೆನ್ ಪ್ಲೇ ಇಟ್ ಐ ಸೇ
ಹಗಲು ಇರುಳು ಇರುವಂತೆ ಸೋಲು ಗೆಲುವು ಜೊತೆಯಂತೆ
ಉಲ್ಲಾಸ ಸಂತೋಷ ಎಂದೆಂದೂ ಇರದೆಂದು
ನೋವೊಂದೇ ಸುಖವೊಂದೇ ಬಾಳಲ್ಲಿ ಬರದೆಂದು
ಈ ಸತ್ಯವಾ ನಾ ಅರಿತಿರುವೆ
ಪ್ರೇಮ ಪ್ರೀತಿ ನನ್ನುಸಿರು ನ್ಯಾಯ ನೀತಿ ನನ್ನುಸಿರು
ಎವೆರಿಬಡೀ…
Friday, February 4, 2011
ಹೇ.... ಕವಿತೆ ನೀನು ರಾಗ ನಾನು
ಚಿತ್ರ: ಪ್ರಿಯ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಇಳಯರಾಜ
ಗಾಯಕರು : ಕೆ. ಜೆ. ಯೇಸುದಾಸ್, ಎಸ್.ಜಾನಕಿ
ವರ್ಷ: ೧೯೭೯
ಹೇ.... ಕವಿತೆ ನೀನು ರಾಗ ನಾನು
ನಾನು ನೀನು ಒಂದಾಗೆ ಈ ಬಾಳೇ ಪ್ರೇಮಗೀತೆಯಂತೆ
ಹೇ...ಕವಿತೆ ನೀನು ರಾಗ ನಾನು..
ನಿನ್ನ ರೂಪ ಕಂಡು ತಂಗಾಳಿ ಬಂದಿದೆ
ನಿನ್ನ ರೂಪ ಕಂಡು ತಂಗಾಳಿ ಬಂದಿದೆ
ಹೊನ್ನ ಮೈಯ್ಯ ಸೋಕಿ ಆನಂದ ಹೊಂದಿದೆ
ಹೋಯ್..ಹೋಯ್.. ಹೊನ್ನ ಮೈಯ್ಯ ಸೋಕಿ ಆನಂದ ಹೊಂದಿದೆ
ತನ್ನಾಸೆ ಇನ್ನೂ ತೀರದಾಗಿ ಬೀಸಿ ಬೀಸಿ ಬಂದು ಹೋಗಿ
ಹೇ.... ಕವಿತೆ ನೀನು ರಾಗ ನಾನು
ನಿನ್ನ ಮಾತು ಕೇಳಿ ಆ ಗಿಳಿಯೇ ನಾಚಿದೆ
ನಿನ್ನ ಮಾತು ಕೇಳಿ ಆ ಗಿಳಿಯೇ ನಾಚಿದೆ
ಮುದ್ದು ಮಾತ ಮರೆತು ಕಲ್ಲಾಗಿ ಹೋಗಿದೆ
ಹೋಯ್ ಹೋಯ್.. ಮುದ್ದು ಮಾತ ಮರೆತು ಕಲ್ಲಾಗಿಹೋಗಿದೆ
ನಿನ್ನಿಂದ ಪ್ರೀತಿ ಮಾತು ಇನ್ನು ಕೇಳಿ ಕೇಳಿ ಕಲಿವಾ ಆಸೆ
ಹೇ.... ಕವಿತೆ ನೀನು ರಾಗ ನಾನು
ನಿನ್ನ ಕಂಡ ಮನಸು ಕವಿಯಂತೆ ಹಾಡಿದೆ
ನಿನ್ನ ಕಂಡ ಮನಸು ಕವಿಯಂತೆ ಹಾಡಿದೆ
ನೆನ್ನೆ ಕಂಡ ಕನಸು ನನಸಾಗಿ ಹೋಗಿದೆ
ಹೋಯ್ ಹೋಯ್ .. ನೆನ್ನೆ ಕಂಡ ಕನಸು ನನಸಾಗಿ ಹೋಗಿದೆ
ನಿನ್ನಿಂದ ನನ್ನ ಯಾರೂ ಇನ್ನು ಎಂದೂ ದೂರ ಮಾಡಲಾರದೆಂದೂ
ಹೇ....ಕವಿತೆ ನೀನು ರಾಗ ನಾನು
ನಾನು ನೀನು ಒಂದಾಗೆ ಈ ಬಾಳೇ ಪ್ರೇಮಗೀತೆಯಂತೆ
ಹೇ....ಕವಿತೆ ನೀನು ರಾಗ ನಾನು
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಇಳಯರಾಜ
ಗಾಯಕರು : ಕೆ. ಜೆ. ಯೇಸುದಾಸ್, ಎಸ್.ಜಾನಕಿ
ವರ್ಷ: ೧೯೭೯
ಹೇ.... ಕವಿತೆ ನೀನು ರಾಗ ನಾನು
ನಾನು ನೀನು ಒಂದಾಗೆ ಈ ಬಾಳೇ ಪ್ರೇಮಗೀತೆಯಂತೆ
ಹೇ...ಕವಿತೆ ನೀನು ರಾಗ ನಾನು..
ನಿನ್ನ ರೂಪ ಕಂಡು ತಂಗಾಳಿ ಬಂದಿದೆ
ನಿನ್ನ ರೂಪ ಕಂಡು ತಂಗಾಳಿ ಬಂದಿದೆ
ಹೊನ್ನ ಮೈಯ್ಯ ಸೋಕಿ ಆನಂದ ಹೊಂದಿದೆ
ಹೋಯ್..ಹೋಯ್.. ಹೊನ್ನ ಮೈಯ್ಯ ಸೋಕಿ ಆನಂದ ಹೊಂದಿದೆ
ತನ್ನಾಸೆ ಇನ್ನೂ ತೀರದಾಗಿ ಬೀಸಿ ಬೀಸಿ ಬಂದು ಹೋಗಿ
ಹೇ.... ಕವಿತೆ ನೀನು ರಾಗ ನಾನು
ನಿನ್ನ ಮಾತು ಕೇಳಿ ಆ ಗಿಳಿಯೇ ನಾಚಿದೆ
ನಿನ್ನ ಮಾತು ಕೇಳಿ ಆ ಗಿಳಿಯೇ ನಾಚಿದೆ
ಮುದ್ದು ಮಾತ ಮರೆತು ಕಲ್ಲಾಗಿ ಹೋಗಿದೆ
ಹೋಯ್ ಹೋಯ್.. ಮುದ್ದು ಮಾತ ಮರೆತು ಕಲ್ಲಾಗಿಹೋಗಿದೆ
ನಿನ್ನಿಂದ ಪ್ರೀತಿ ಮಾತು ಇನ್ನು ಕೇಳಿ ಕೇಳಿ ಕಲಿವಾ ಆಸೆ
ಹೇ.... ಕವಿತೆ ನೀನು ರಾಗ ನಾನು
ನಿನ್ನ ಕಂಡ ಮನಸು ಕವಿಯಂತೆ ಹಾಡಿದೆ
ನಿನ್ನ ಕಂಡ ಮನಸು ಕವಿಯಂತೆ ಹಾಡಿದೆ
ನೆನ್ನೆ ಕಂಡ ಕನಸು ನನಸಾಗಿ ಹೋಗಿದೆ
ಹೋಯ್ ಹೋಯ್ .. ನೆನ್ನೆ ಕಂಡ ಕನಸು ನನಸಾಗಿ ಹೋಗಿದೆ
ನಿನ್ನಿಂದ ನನ್ನ ಯಾರೂ ಇನ್ನು ಎಂದೂ ದೂರ ಮಾಡಲಾರದೆಂದೂ
ಹೇ....ಕವಿತೆ ನೀನು ರಾಗ ನಾನು
ನಾನು ನೀನು ಒಂದಾಗೆ ಈ ಬಾಳೇ ಪ್ರೇಮಗೀತೆಯಂತೆ
ಹೇ....ಕವಿತೆ ನೀನು ರಾಗ ನಾನು
Labels:
೧೯೭೯,
ಇಳಯರಾಜ,
ಎಸ್. ಜಾನಕಿ,
ಕೆ. ಜೆ. ಯೇಸುದಾಸ್,
ಚಿ. ಉದಯಶಂಕರ್,
ಪ್ರಿಯ
Thursday, December 2, 2010
ಎಂಥಾ ಲೋಕವಯ್ಯಾ
ಚಿತ್ರ:: ನಾರದ ವಿಜಯ
ಸಾಹಿತ್ಯ : ಚಿ. ಉದಯ ಶಂಕರ್
ಸಂಗೀತ: ಅಶ್ವಥ್-ವೈದಿ
ಗಾಯಕರು: ಕೆ.ಜೆ.ಯೇಸುದಾಸ್
ವರ್ಷ: ೧೯೮೦
ಎಂಥಾ ಲೋಕವಯ್ಯಾ.. ಇದು ಎಂಥಾ ಲೋಕವಯ್ಯಾ
ಹೊಸತನವ ಕೊಡುವ ಹೊಸ ವಿಷಯ ಅರಿವ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ
ಇದು ಎಂಥಾ ಲೋಕವಯ್ಯ
ಕಡಲಲ್ಲಿ ಧುಮುಕಿ ಹೋರಾಡುವಾ ಮುಗಿಲೇರಿ ಮೇಲೆ ತೇಲಾಡುವಾ
ಆ ಚಂದ್ರನೆಡೆಗೆ ಹಾರಾಡುವಾ ಗ್ರಹತಾರೆಗಳಿಗೆ ಕೈ ಚಾಚುವಾ
ಜನರಿಂದ ತುಂಬಿ ಮೆರೆವಾ ಆ......
ಜನರಿಂದ ತುಂಬಿ ಮೆರೆವಾ
ಇದು ಎಂಥಾ ಲೋಕವಯ್ಯ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ
ಬಡತನದ ಜೊತೆಗೆ ಬಡಿದಾಡುವಾ ಸುಖವನ್ನು ಅರಸಿ ಅಲೆದಾಡುವಾ
ಹೊಸದನ್ನು ದಿನವು ಹುಡುಕಾಡುವಾ ಛಲವನ್ನು ಬಿಡದೆ ಸೆಣಸಾಡುವಾ
ಜನರಿಂದ ತುಂಬಿ ಮೆರೆವಾ ಆ......
ಜನರಿಂದ ತುಂಬಿ ಮೆರೆವಾ
ಇದು ಎಂಥಾ ಲೋಕವಯ್ಯ
ಹೊಸತನವ ಕೊಡುವ ಹೊಸ ವಿಷಯ ಅರಿವ
ಬಯಕೆತರುವ ಇದು ಎಂಥಾ ಲೋಕವಯ್ಯ
ಆ..... .ಆ..... ಆ...... ಆ.......
Labels:
೧೯೮೦,
ಅಶ್ವಥ್-ವೈದಿ,
ಕೆ. ಜೆ. ಯೇಸುದಾಸ್,
ಚಿ. ಉದಯಶಂಕರ್,
ನಾರದ ವಿಜಯ
Tuesday, October 26, 2010
ಹೂವಂತೆ ಹೆಣ್ಣು ನಗುತಿರಬೇಕು
ಚಿತ್ರ: ಕಿಲಾಡಿ ಕಿಟ್ಟು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಮೋಹನ್ ಕುಮಾರ್
ಗಾಯಕರು: ಕೆ. ಜೆ. ಯೇಸುದಾಸ್
ವರ್ಷ: ೧೯೭೬
ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು
ಬಂಗಾರವಲ್ಲ ಸಿಂಗಾರಕಲ್ಲ
ಕೊರಳಿನಲಿ ಮೆರೆದಿರಲು ಮಾಂಗಲ್ಯವಿಲ್ಲ
ಸುಮವ ಕೊಡುವ ಲತೆಗೆ ಹಸಿರೇ ಉಸಿರಾಗಿದೆ
ಗೃಹಿಣಿ ಇರುವ ಗುಡಿಗೆ ತಾಳಿ ಬೆಳಕಾಗಿದೆ
ಸಂತೋಷವೇನು ನೋವಾದರೇನು
ವಿರಸ ಮರೆತು ಸರಸದಿಂದ ಬಾಳಲು ಸೊಗಸು
ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು
ಆಕಾಶ ರವಿಯ ಈ ಭೂಮಿ ಗಿರಿಯ
ಮರೆಯುವುದೆ ತೊರೆಯುವುದೆ ಸಂಬಂಧ ನೂಕಿ
ಒಲಿದ ಹೃದಯ ಬೆರೆತ ಜೀವ
ಬಿಡದೆಂದಿಗೂ ಮದುವೆ ತಂದ ಬೆಸುಗೆ ಕೆಡದು ಎಂದೆಂದಿಗೂ
ಈ ರೋಷ ತಂದ ಆವೇಶದಿಂದ
ಸಹನೆ ಮರೆವೆ ಕಡೆಗೆ ಕೆಡುವೆ ಯಾತನೆ ಪಡುವೆ
ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ ಸೌಭಾಗ್ಯ ಕೊಡುವ
ಮನವ ಗೆಲುವ ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು
Labels:
೧೯೭೬,
ಕಿಲಾಡಿ ಕಿಟ್ಟು,
ಕೆ. ಜೆ. ಯೇಸುದಾಸ್,
ಚಿ. ಉದಯಶಂಕರ್,
ಮೋಹನ್ ಕುಮಾರ್
Subscribe to:
Posts (Atom)