Showing posts with label ನಾನಿರುವುದೆ ನಿನಗಾಗಿ. Show all posts
Showing posts with label ನಾನಿರುವುದೆ ನಿನಗಾಗಿ. Show all posts
Wednesday, January 19, 2011
ಒಲವಿನ ಗೆಳೆಯನೆ ನಿನಗೆ
ಚಿತ್ರ: ನಾನಿರುವುದೆ ನಿನಗಾಗಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಜಾನಕಿ
ವರ್ಷ: ೧೯೭೯
ನಲ್ಲ ಎನ್ನಲೆ ನಿನ್ನ… ಇನಿಯ ಎಂದು ಕೂಗಲೆ ನಿನ್ನ…
ನನ್ನೆದೆಯಾಳದಲಿ… ನೆಲೆಸಿರುವ ದೇವನೆ ನಿನ್ನ…
ಏನೆಂದು ಕರೆಯಲಿ… ಏನೆಂದು ಬರೆಯಲಿ…
ಗೆಳೆಯ ಪ್ರಿಯ ಗೆಳೆಯ
ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ
ನನಗಾಗಿ ನೀನಿರುವೆ ನಿನಗಾಗಿ ನಾ ಬಾಳುವೆ
ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ
ನಿನ್ನ ಮನಸು ಬಲ್ಲೆನು ನಾನು
ನಿನ್ನಾಸೆ ಬಲ್ಲೆನು ನಾನು
ಹೂವಂಥ ಹೃದಯವು ನಿನ್ನದು ಅಂಥ
ಜೇನಂಥ ನುಡಿಗಳು ನಿನ್ನದು
ನಿನ್ನ ನೆರಳಿನಾಸರೆಯಲ್ಲಿ ಸಂತೋಷದರಮನೆಯಲ್ಲಿ
ಹಾಯಾಗಿ ಬಾಳುವ ಕನಸು ನೂರಾರು ಕಂಡಿತು ಮನಸು
ಏನೇನೊ ಕೇಳಿದೆನು ಏನೇನೊ ಬೇಡಿದೆನು
ಕೊನೆಗೇನೂ ಕಾಣೆನು
ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ ನಾ ಬರೆವೆ
ನೀ ನಡೆವ ಹಾದಿಯೆ ಬೇರೆ
ನನ್ನ ಬಾಳ ದಾರಿಯೆ ಬೇರೆ
ಒಂದಾಗಿ ಸೇರೆವು ನಾವು
ಗತಿ ಒಂದೇ ಸಂಕಟ ನೋವು
ನನ್ನ ಮನದ ಮಾತುಗಳನ್ನು ಕಣ್ಣೀರ ಹನಿಗಳು ಬರೆದು
ನಿನಗಾಗಿ ಕಳಿಸಿದೆ ಇಂದು ನನ್ನೆದೆಗೆ ವೇದನೆ ತಂದು
ನೀ ನನ್ನ ದೂರದಿರು ಏನನ್ನು ಹೇಳದಿರು ನಾ ದೂರವಾದರೂ
ಒಲವಿನ ಗೆಳೆಯನೆ ನೀನೇ ನನ್ನ ಜೀವ ನನ್ನ ದೈವ
ನಿನ್ನ ಸುಖವೇ ನನ್ನ ಸುಖವು ನಿನಗೆಂದೂ ಶುಭ ಕೋರುವೆ
ಒಲವಿನ ಗೆಳೆಯನೆ ನೀನೇ ನನ್ನ ಜೀವ ನನ್ನ ದೈವ
ನನ್ನ ಜೀವ ನನ್ನ ದೈವ
Labels:
೧೯೭೯,
ಎಸ್. ಜಾನಕಿ,
ಚಿ. ಉದಯಶಂಕರ್,
ನಾನಿರುವುದೆ ನಿನಗಾಗಿ,
ರಾಜನ್-ನಾಗೇಂದ್ರ
Tuesday, October 26, 2010
ಕುಂಕುಮವಿರುವುದೇ ಹಣೆಗಾಗಿ
ಚಿತ್ರ: ನಾನಿರುವುದೆ ನಿನಗಾಗಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೯
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ಕೈಜಾರಿದ ಮುತ್ತೊಂದು ಕೈ ಸೇರಿತು ತಾ ಬಂದು
ಹೊಸ ಹರುಷ ಪ್ರತಿ ನಿಮಿಷ ಶಾಂತಿ ನೀಡಿತು ನನಗಿಂದು
ನಿನಗಾಸರೆ ನಾನಾಗಿ ನನ್ನ ಕೈಸೆರೆ ನೀನಾಗಿ
ಕನಸುಗಳು ನನಸಾಗಿ ಬಾಳು ಹೊನ್ನಿನ ಕಡಲಾಗಿ
ಹೊಸತನ ಕಾಣುವ ಹಾಯಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನನ್ನಾಸೆಯ ಹೂವಾಗಿ ನನ್ನೊಲವಿನ ಜೇನಾಗಿ
ಜೊತೆಯಲ್ಲೆ ಒಂದಾಗಿ ಎಂದು ನೀನಿರು ಸುಖವಾಗಿ
ನಾ ನೋಡುವ ಕಣ್ಣಾಗಿ ನಾ ಹಾಡುವ ಹಾಡಾಗಿ
ಬಾಳಿನಲಿ ಬೆಳಕಾಗಿ ಸೇರು ನನ್ನಲಿ ಹಿತವಾಗಿ
ಹೊಸತನ ಕಾಣುವ ಹಾಯಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
Labels:
೧೯೭೯,
SPB,
ಚಿ. ಉದಯಶಂಕರ್,
ನಾನಿರುವುದೆ ನಿನಗಾಗಿ,
ರಾಜನ್-ನಾಗೇಂದ್ರ
Subscribe to:
Posts (Atom)