Showing posts with label ವಿಜಯಭಾಸ್ಕರ್. Show all posts
Showing posts with label ವಿಜಯಭಾಸ್ಕರ್. Show all posts

Wednesday, July 20, 2011

ವಸಂತ ಬರೆದನು ಒಲವಿನ ಓಲೆ



ಚಿತ್ರ: ಬೆಸುಗೆ
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
ವರ್ಷ: ೧೯೭೬

ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ
ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ
ಪಂಚಮದಲ್ಲಿ ಹಾಡಿತು ಕೋಗಿಲೆ ಪ್ರೇಮಿಗೆ ಓರ್ವಳೆ ನಲ್ಲೆ
ಪ್ರೇಮಿಗೆ ಓರ್ವಳೆ ನಲ್ಲೆ

ಹೂಗಳು ದುಂಬಿಯ ಚುಂಬನದಿಂದ ಪುಳಕಿತವಾಗಿಹ ಕಾಲ
ಮಧುಮಯ ಯೌವನ ಮೈ ಮನ ತುಂಬಿ ಮೆರೆದಿಹ ವಸಂತ ಕಾಲ
ತೀರದ ಆಸೆಯ ಆರದ ಉರಿಯ ವಿರಹಿಗೆ ತಂದಿಹ ಕಾಲ
ವಿರಹಿಗೆ ತಂದಿಹ ಕಾಲ
ವಸಂತ ಬರೆದನು ಒಲವಿನ ಓಲೆ ಚಿಗುರಿದ ಎಲೆ ಎಲೆ ಮೇಲೆ

ಬಯಕೆಯು ಅನಂತ ಮುಖದಲಿ ಹೊಮ್ಮಿ ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು ಎಲ್ಲೆಡೆ ಕಾಣುವ ಕಾಲ
ಬಯಕೆಯು ಅನಂತ ಮುಖದಲಿ ಹೊಮ್ಮಿ ಚಿಮ್ಮುವ ಆನಂದ ಕಾಲ
ಬಗೆಬಗೆ ಬಣ್ಣದ ಕಾಮನಬಿಲ್ಲು ಎಲ್ಲೆಡೆ ಕಾಣುವ ಕಾಲ
ಬಳ್ಳಿಯು ಹೆಮ್ಮರ ಆಸರೆ ಕೋರಿ ತೋಳನು ಬಳಸುವ ಕಾಲ
ತೋಳನು ಬಳಸುವ ಕಾಲ

Monday, June 6, 2011

ಕನ್ನಡ ನಾಡಿನ ವೀರರಮಣಿಯ



ಚಿತ್ರ: ನಾಗರಹಾವು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯಕರು: ಪಿ. ಬಿ. ಶ್ರೀನಿವಾಸ್
ವರ್ಷ: ೧೯೭೨

ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿದ ಸಿರಿನಾಡು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ವೀರಮದಕರಿ ಆಳುತಲಿರಲು ಹೈದಾರಾಲಿಯು ಯುಧ್ಧಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು ಸತತ ಧಾಳಿಯು ವ್ಯರ್ಥವಾಗಲು
ವ್ಯೆರಿ ಚಿಂತೆಯಲಿ ಬಸವಳಿದ ದಾರಿಗಾಣದೆ ಮಂಕಾದ
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಗೂಢಚಾರರು ಅಲೆದು ಬಂದರು ಹೈದಾರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಸುತ್ತ ಮುತ್ತಲು ಕಪ್ಪು ಕತ್ತಲೆಯು ಮುತ್ತಿರಲು
ವೀರ ಕಾವಲುಗಾರ ಭೋಜನಕ್ಕೆ ನೆಡೆದಿರಲು
ಸಿಹಿನೀರ ತರಲೆಂದು ಅವನ ಸತಿ ಬಂದಿರಲು ಕಳ್ಳಗಂಡಿಯ ಹಿಂದೆ ಪಿಸುಮಾತ ಕೇಳಿದಳು
ಆಲಿಸಿದಳು ಇಣುಕಿದಳು ವೈರಿ ಪಡೆ ಕೋಟೆಯತ್ತ ಬರುವುದನ್ನು ಕಂಡಳು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿಯ ಸಿರಿನಾಡು
ಅಮರಳಾದಳು ಓಬವ್ವ ಅಮರಳಾದಳು ಓಬವ್ವ

Thursday, June 2, 2011

ಭಾವವೆಂಬ ಹೂವು ಅರಳಿ

ಚಿತ್ರ: ಉಪಾಸನೆ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ವಿಜಯಭಾಸ್ಕರ್
ಗಾಯನ : ವಾಣಿ ಜಯರಾಂ
ವರ್ಷ: ೧೯೭೪

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ
ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ
ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ಸ.ಗ.ಮ.ದ.ಗಾ.ಮಾ.ದ ಸ.ಮ.ದ.ನಿ.ಸಾ.ದ.ನಿ

ಗಾನಕೆ ನಲಿಯದ ಮನಸೇ ಇಲ್ಲ ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ನಲಿಯದ ಮನಸೇ ಇಲ್ಲ ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ಒಲಿಯದ ದೇವರೆ ಇಲ್ಲ ಗಾನವೆ ತುಂಬಿದೆ ಈ ಜಗವೆಲ್ಲಾ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ದಾಸರು ಹರಿಯ ಸ್ಮರಣೆಯ ಮಾಡಿ ದರುಶನ ಪಡೆದರು ಅನುದಿನ ಪಾಡಿ
ದಾಸರು ಹರಿಯ ಸ್ಮರಣೆಯ ಮಾಡಿ ದರುಶನ ಪಡೆದರು ಅನುದಿನ ಪಾಡಿ
ಶರಣರು ಹರನ ನೆನೆಯುತ ಬೇಡಿ ಶಿವನಾ ಕಂಡರು ವಚನವ ಹಾಡಿ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ

ವಿಶ್ವವೆ ಅರಳಿತು ಓಂಕಾರದಲಿ ವಾಣಿಯ ವೀಣೆಯ ಝೆಂಕಾರದಲಿ
ವಿಶ್ವವೆ ಅರಳಿತು ಓಂಕಾರದಲಿ ವಾಣಿಯ ವೀಣೆಯ ಝೆಂಕಾರದಲಿ
ಕುಣಿಯಿತು ನಾರದನ ಗಾನದಲ್ಲಿ ತಣಿಯಿತು ಕೃಷ್ಣನ ಮುರಳಿಯಲಿ

ಭಾವವೆಂಬ ಹೂವು ಅರಳಿ ಗಾನವೆಂಬ ಗಂಧ ಚೆಲ್ಲಿ
ರಾಗವೆಂಬ ಜೇನ ಹೊನಲು ತುಂಬಿ ಹರಿಯಲಿ
ಜಗವಾ ಕುಣಿಸಿ ತಣಿಸಲಿ

ಬರೆದೆ ನೀನು ನಿನ್ನ ಹೆಸರ

ಚಿತ್ರ: ಸೀತಾ
ಸಾಹಿತ್ಯ : ಅರ್. ಎನ್. ಜಯಗೋಪಾಲ್
ಸಂಗೀತ : ವಿಜಯಭಾಸ್ಕರ್
ಗಾಯಕರು : ಪಿ.ಬಿ. ಶ್ರೀನಿವಾಸ್
ವರ್ಷ: ೧೯೭೦

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೆ ಅಳಿಸಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ

ಮಿಡಿದೆ ನೀನು ಪ್ರಣಯನಾದ ಹೃದಯ ವೀಣೆ ಅದರಲಿ
ಮಿಡಿದೆ ನೀನು ಪ್ರಣಯನಾದ ಹೃದಯ ವೀಣೆ ಅದರಲಿ
ಮಿಡಿದ ಹಾಡು ಮುಗಿವ ಮುನ್ನ ಎಲ್ಲಿ ಹೋದೆ ಮರೆಯಲಿ

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ

ಅಂದು ನನ್ನ ತೇಲಿಸಿದೆ ನಿನ್ನ ಮಾತ ಹೊನಲಲಿ
ಅಂದು ನನ್ನ ತೇಲಿಸಿದೆ ನಿನ್ನ ಮಾತ ಹೊನಲಲಿ
ಇಂದು ನನ್ನ ಮುಳುಗಿಸಿದೆ ಕಣ್ಣ ನೀರ ಹೊಳೆಯಲಿ

ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಅದರ ಮಧುರ ಸ್ಮೃತಿಯ ನಾನು ಹೇಗೆ ತಾನೆ ಅಳಿಸಲಿ
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ

Wednesday, June 1, 2011

ಸಂಪಿಗೆ ಮರದ ಹಸಿರೆಲೆ ನಡುವೆ

ಚಿತ್ರ: ಉಪಾಸನೆ
ಸಾಹಿತ್ಯ: ಆರ್.ಎನ್. ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯಕರು : ಬಿ.ಕೆ. ಸುಮಿತ್ರಾ
ವರ್ಷ: ೧೯೭೪

ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ… ಚಿಕ್ಕವ್ವ… ಎನ್ನುತ ತನ್ನಯ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್…
ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ…
ಮಂಜುಳ ನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ, ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ

Wednesday, February 16, 2011

ವೇದಾಂತಿ ಹೇಳಿದನು



ಚಿತ್ರ: ಮಾನಸ ಸರೋವರ
ಸಾಹಿತ್ಯ : ಜಿ.ಎಸ್. ಶಿವರುದ್ರಪ್ಪ
ಸಂಗೀತ : ವಿಜಯಭಾಸ್ಕರ್
ಗಾಯಕರು : ಪಿ. ಬಿ. ಶ್ರೀನಿವಾಸ್
ವರ್ಷ: ೧೯೮೩

ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು
ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು... ಈ ಹೆಣ್ಣು ಮಾಯೆ, ಮಾಯೇ...
ಕವಿಯೊಬ್ಬ ಕನವರಿಸಿದನು.. ಓ.. ಇವಳೇ ಚೆಲುವೆ...
ಇವಳ ಜೊತೆಯಲ್ಲಿ ನಾನು ಸ್ವರ್ಗವನೆ ಗೆಲ್ಲುವೆ... ಸ್ವರ್ಗವನೇ ಗೆಲ್ಲುವೆ...

ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು.. ಈ ಬದುಕು ಶೂನ್ಯ ಶೂನ್ಯ
ಕವಿ ನಿಂತು ಸಾರಿದನು.. ಓ.. ಇದು ಅಲ್ಲ ಶೂನ್ಯ.
ಜನ್ಮ ಜನ್ಮದಿ ಸವಿಯೇ.. ನಾನೆಷ್ಟು ಧನ್ಯ ನಾನೆಷ್ಟು ಧನ್ಯ

ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು
ವೇದಾಂತಿ ಹೇಳಿದನು.. ಹೊನ್ನೆಲ್ಲ ಮಣ್ಣು ಮಣ್ಣು
ಕವಿಯೊಬ್ಬ ಹಾಡಿದನು.. ಮಣ್ಣೆಲ್ಲ ಹೊನ್ನು ಹೊನ್ನು
ಮಣ್ಣೆಲ್ಲ ಹೊನ್ನು ಹೊನ್ನು ಮಣ್ಣೆಲ್ಲ ಹೊನ್ನು ಹೊನ್ನು

Tuesday, February 8, 2011

ಬೆಸುಗೆ ಬೆಸುಗೆ



ಚಿತ್ರ: ಬೆಸುಗೆ
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ
ವರ್ಷ: ೧೯೭೬

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ
ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ರಾಗದ ಜೊತೆಗೆ ತಾಳದ ಬೆಸುಗೆ
ರಾಗತಾಳಕೆ ಭಾವದ ಬೆಸುಗೆ
ರಾಗದ ಜೊತೆಗೆ ತಾಳದ ಬೆಸುಗೆ
ರಾಗತಾಳಕೆ ಭಾವದ ಬೆಸುಗೆ
ಭಾವದ ಜೊತೆಗೆ ಗೀತೆಯ ಬೆಸುಗೆ
ಗೀತೆಯ ಜೊತೆ ಸಂಗೀತದ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
ಹರೆಯದ ಹೆಣ್ಣಿಗೆ ಲಜ್ಜೆಯ ಬೆಸುಗೆ
ಮಿರುಗುವ ಕಣ್ಣಿಗೆ ಆಸೆಯ ಬೆಸುಗೆ
ಯೌವನದಲ್ಲಿ ಮೋಹದ ಬೆಸುಗೆ
ಮೈ ಮನದಲ್ಲಿ ಬಯಕೆಯ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ

ಎರಡು ಮನಸಿಗೆ ಒಲವಿನ ಬೆಸುಗೆ
ಎರಡು ಬಾಳಿನ ಬಂಧನ ಬೆಸುಗೆ
ಎರಡು ಮನಸಿಗೆ ಒಲವಿನ ಬೆಸುಗೆ
ಎರಡು ಬಾಳಿನ ಬಂಧನ ಬೆಸುಗೆ
ಮಧುರ ಮಿಲನಕೆ ಪ್ರೀತಿಯ ಬೆಸುಗೆ
ಜನುಮ ಜನುಮಕೂ ಆತ್ಮದ ಬೆಸುಗೆ

ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜೀವನವೆಲ್ಲ ಸುಂದರ ಬೆಸುಗೆ
ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ ಬೆಸುಗೆ
ಜನುಮ ಜನುಮಕೂ ಆತ್ಮದ ಬೆಸುಗೆ

Tuesday, February 1, 2011

ಸ್ನೇಹದ ಕಡಲಲ್ಲಿ



ಚಿತ್ರ: ಶುಭಮಂಗಳ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೫

ಸ್ನೇಹದ ಕಡಲಲ್ಲಿ.... ನೆನಪಿನ ದೋಣೀಯಲೀ...
ಸ್ನೇಹದ ಕಡಲಲ್ಲಿ.... ನೆನಪಿನ ದೋಣೀಯಲೀ...
ಪಯಣಿಗ ನಾನಮ್ಮ ಪಯಣಿಗ ನಾನಮ್ಮ
ಪ್ರೀತಿಯ ತೀರವ ಸೇರುವುದೊಂದೇ
ಪ್ರೀತಿಯ ತೀರವ ಸೇರುವುದೊಂದೇ
ಬಾಳಿನ ಗುರಿಯಮ್ಮ ಬಾಳಿನ ಗುರಿಯಮ್ಮ...

ಸ್ನೇಹದ ಕಡಲಲ್ಲಿ... ನೆನಪಿನ ದೋಣೀಯಲೀ...
ಪಯಣಿಗ ನಾನಮ್ಮ ಪಯಣಿಗ ನಾನಮ್ಮ

ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮಾಸಿಲ್ಲ
ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮಾಸಿಲ್ಲ
ಆಟದೆ ಸೋತು ರೋಷದೆ ಕಚ್ಚಿದ ಆಟದೆ ಸೋತು ರೋಷದೆ ಕಚ್ಚಿದ
ಗಾಯವ ಮರೆತಿಲ್ಲ.. ಗಾಯವ ಮರೆತಿಲ್ಲ

ಸ್ನೇಹದ ಕಡಲಲ್ಲಿ... ನೆನಪಿನ ದೋಣೀಯಲೀ...
ಪಯಣಿಗ ನಾನಮ್ಮ ಪಯಣಿಗ ನಾನಮ್ಮ

ಶಾಲೆಗೆ ಚಕ್ಕರ್ ಊಟಕೆ ಹಾಜರ್ ಲೆಕ್ಕದೆ ಬರಿ ಸೊನ್ನೆ
ಶಾಲೆಗೆ ಚಕ್ಕರ್ ಊಟಕೆ ಹಾಜರ್ ಲೆಕ್ಕದೆ ಬರಿ ಸೊನ್ನೆ
ಎನ್ನುತ ನಾನು ಕೆಣಕಲು ನಿನ್ನ
ಎನ್ನುತ ನಾನು ಕೆಣಕಲು ನಿನ್ನ ಉದಿಸಿದೆ ಕೆನ್ನೆ... ನಾನದ ಮರೆಯುವೆನೆ?

ಸ್ನೇಹದ ಕಡಲಲ್ಲಿ... ನೆನಪಿನ ದೋಣೀಯಲೀ...
ಪಯಣಿಗ ನಾನಮ್ಮ ಪಯಣಿಗ ನಾನಮ್ಮ
ಪ್ರೀತಿಯ ತೀರವ ಸೇರುವುದೊಂದೇ
ಪ್ರೀತಿಯ ತೀರವ ಸೇರುವುದೊಂದೇ
ಬಾಳಿನ ಗುರಿಯಮ್ಮ ಬಾಳಿನ ಗುರಿಯಮ್ಮ

Friday, January 28, 2011

ಪ್ರೀತಿಸಿ ನೋಡು ಪ್ರೇಮಿಸಿ ನೋಡು



ಚಿತ್ರ: ಪ್ರೀತಿಸಿ ನೋಡು
ಸಾಹಿತ್ಯ: ಗೀತಪ್ರಿಯ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೧

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು
ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

ಪ್ರೀತಿಸಿ ನೋಡು ಪ್ರೀತಿಸಿ ನೋಡು
ಪ್ರೀತಿಸಿ ನೋಡು ಪ್ರೀತಿಸಿ ನೋಡು

ಪ್ರೀತಿಯೇ ದೇವನು ನೀಡಿದ ಕೊಡುಗೆ ಪ್ರೀತಿಯೇ ಆಗಲಿ ಮನಸಿನ ಉಡುಗೆ
ಪ್ರೀತಿಯೇ ಒಂದು ಪಾವನ ಜ್ಯೋತಿ
ಪ್ರೀತಿಯೇ ಒಂದು ಪಾವನ ಜ್ಯೋತಿ ಪ್ರೀತಿಯ ಬಾಳಿಗೆ ಪ್ರೀತಿಯೇ ನೀತಿ

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

ತಾಯಿಯ ಮಡಿಲಲಿ ಪ್ರೀತಿಯ ಬೆಸುಗೆ ಹರೆಯದ ವಯಸಲಿ ಪ್ರೀತಿಯ ಒಸಗೆ
ಪ್ರೀತಿಯ ಭಾವದ ಆಳ ಅಪಾರ
ಪ್ರೀತಿಯ ಭಾವದ ಆಳ ಅಪಾರ ಪ್ರೀತಿಯೇ ಬಾಳಿಗೆ ಅಮೃತಧಾರ

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

ಪ್ರೀತಿಸಿ ನೋಡು ಪ್ರೀತಿಸಿ ನೋಡು
ಪ್ರೀತಿಸಿ ನೋಡು ಪ್ರೀತಿಸಿ ನೋಡು

ಪ್ರೀತಿಯೇ ಲೋಕಕೆ ಆಸೆಯ ಹೊನಲು ಪ್ರೀತಿಯು ಇದ್ದರೆ ದಿನ ಹೊಸ ಹಗಲು
ಮನಸಿನ ಭಾವಕೆ ಪ್ರೀತಿಯೇ ಚಿಲುಮೆ
ಮನಸಿನ ಭಾವಕೆ ಪ್ರೀತಿಯೇ ಚಿಲುಮೆ ಸನಿಹಕೆ ತರುವುದೆ ಪ್ರೀತಿಯ ಹಿರಿಮೆ

ಪ್ರೀತಿಸಿ ನೋಡು ಪ್ರೇಮಿಸಿ ನೋಡು
ಪ್ರೀತಿಯೇ ಬಾಳಿನ ಒಲುಮೆಯ ಹಾಡು

Tuesday, December 21, 2010

ಒಲುಮೆ ಸಿರಿಯ ಕಂಡು



ಚಿತ್ರ: ಬಂಗಾರದ ಜಿಂಕೆ
ಸಾಹಿತ್ಯ : ದೊಡ್ಡರಂಗೇಗೌಡ
ಸಂಗೀತ : ವಿಜಯಭಾಸ್ಕರ್
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೦

ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ..
ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ..

ಚೆಂದಾಗಿ ಕೂಡಿದ ಸುಂದರ ಸಮಯ ಕನಸಾಗಿದೆ
ಓಡೋಡಿ ನಲಿದ ಸೊಂಪಾದ ಗಾನವ ಮರೆತಾಗಿದೆ
ಚೆಂದಾಗಿ ಕೂಡಿದ ಸುಂದರ ಸಮಯ ಕನಸಾಗಿದೆ
ಓಡೋಡಿ ನಲಿದ ಸೊಂಪಾದ ಗಾನವ ಮರೆತಾಗಿದೆ
ಮಾತಾಡದೆ..ಬಳಿಬಾರದೆ..
ಮಾತಾಡದೆ..ಬಳಿಬಾರದೆ..ನನ್ನಿಂದ ನೀ ದೂರ ಹೋದೆ

ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ

ನೂರಾರು ಜನ್ಮದ ಅನುಬಂಧ ನಮ್ಮದು ಅರಿವಾಗದೆ
ಒಂದಾಗಿ ಹಾಡಿದ ರಾಗದ ಧಾಟಿಯು ನೆನಪಾಗದೆ
ನೂರಾರು ಜನ್ಮದ ಅನುಬಂಧ ನಮ್ಮದು ಅರಿವಾಗದೆ
ಒಂದಾಗಿ ಹಾಡಿದ ರಾಗದ ಧಾಟಿಯು ನೆನಪಾಗದೆ
ಬೇರಾಗದೆ ದೂರಾಗದೆ
ಬೇರಾಗದೆ ದೂರಾಗದೆ...ನನ್ನನ್ನು ನೀ ಸೇರು ಇಂದೆ

ಒಲುಮೆ ಸಿರಿಯ ಕಂಡು ಬಯಕೆ ಸಿಹಿಯ ಉಂಡು
ಪ್ರೀತಿ ಮಾತಾಡಿದೆ ಬಾಳು ರಂಗಾಗಿದೆ

Friday, December 3, 2010

ಹಾಡು ಹಳೆಯದಾದರೇನು



ಚಿತ್ರ : ಮಾನಸ ಸರೋವರ
ಸಾಹಿತ್ಯ : ಡಾ|| ಜಿ.ಎಸ್.ಶಿವರುದ್ರಪ್ಪ
ಸಂಗೀತ : ವಿಜಯಭಾಸ್ಕರ್
ಗಾಯಕರು : ವಾಣಿ ಜಯರಾಂ
ವರ್ಷ: ೧೯೮೩

ಹಾಡು...ಹಾಡು ...
ಹಾಡು ಹಳೆಯದಾದರೇನು ಭಾವ ನವನವೀನ
ಹಾಡು...ಹಾಡು ...
ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ

ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ

ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ
ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ

ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ

ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ

ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ

ಹಾಡು...ಹಾಡು ...
ಹಾಡು ಹಳೆಯದಾದರೇನು ಭಾವ ನವನವೀನ

Friday, October 29, 2010

ಯಾವ ಹೂವು ಯಾರ ಮುಡಿಗೋ



ಚಿತ್ರ: ಬೆಸುಗೆ
ಸಾಹಿತ್ಯ: ಶ್ಯಾಮಸುಂದರ್ ಕುಲಕರ್ಣಿ
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೬

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಒಂದು ಮನದ ಯೋಚನೆ ಒಂದು ಮನಕೆ ಸೂಚನೆ
ಯಾರೂ ಅರಿಯಲಾರರು ಯಾರ ಪಾಲು ಯಾರಿಗೋ ಯಾರಿಗೋ...

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಮೋಹ ಪಾಶ ಎಸೆಯಿತು ಒಂದು ಪಾಠ ಕಲಿಸಿತು
ಇಂಥ ಪಾಠ ಕಲಿಸಲು ಗುರುವು ಯಾರು ಯಾರಿಗೋ ಯಾರಿಗೋ...

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಮನದ ಕದವ ತೆರೆಯಲು ಬೇರೆ ಗುರಿಯ ಮುಟ್ಟಿತು
ಯಾರು ಹೇಳಬಲ್ಲರು ಯಾರ ಪಯಣ ಎಲ್ಲಿಗೋ ಎಲ್ಲಿಗೋ...

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

Saturday, October 9, 2010

ಕೆಂಪಾದವೋ ಎಲ್ಲ ಕೆಂಪಾದವೋ



ಚಿತ್ರ: ಎಲ್ಲಿಂದಲೋ ಬಂದವರು
ಸಾಹಿತ್ಯ: ಪಿ.ಲಂಕೇಶ್
ಸಂಗೀತ: ವಿಜಯಭಾಸ್ಕರ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೦

ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಕುಡೀದ್ಹಾಂಗೆ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೊ
ಹಸುರಿದ್ದ ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಕುಡೀದ್ಹಾಂಗೆ ಕೆಂಪಾದವೋ


ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೋ
ಊರು ಕಂದಮ್ಮಗಳು ಕೆಂಪಾದವೋ
ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೋ
ಊರು ಕಂದಮ್ಮಗಳು ಕೆಂಪಾದವೋ

ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿಗು ಹೋದಾಗ ಪಚ್ಚೆಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವೋ
ನನಗಾಗ ಕೆಂಪಾದವೋ
ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂತ
ಕಾಯುತ್ತ ಕುಂತಾಗ ಕಪ್ಪಾಗಿ ಕವಿದಂತ
ನುಡಿ ನುಡಿಗು ಹೋದಾಗ ಪಚ್ಚೆಯ ತೆನೆಯಂತ
ಭೂಮಿಯು ಎಲ್ಲಾನು ಕೆಂಪಾದವೋ
ನನಗಾಗ ಕೆಂಪಾದವೋ

ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ

ಓ ಗುಣವಂತ



ಚಿತ್ರ: ಮಸಣದ ಹೂವು
ಸಾಹಿತ್ಯ : ವಿಜಯನಾರಸಿಂಹ
ಸಂಗೀತ : ವಿಜಯಭಾಸ್ಕರ್
ಗಾಯಕರು : ಎಸ್.ಜಾನಕಿ
ವರ್ಷ: ೧೯೮೪

ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ

ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ

ದಾರಿದೀಪ ತೋರುತಾ ತೋರುತಾ
ಕರುಣೆ ಕಿರಣ ಬೀರುತಾ ಬೀರುತಾ
ಬಂದೆ ನೀನು ಓ ಸ್ನೇಹಿತ ಸ್ನೇಹಿತ
ನನ್ನ ಬಾಳು ಬೆಳಗಿದೆ ಬೆಳಗಿದೆ
ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ

ಹೃದಯ ನಿನಗೆ ಸೋತಿದೆ ಸೋತಿದೆ
ನುಡಿಯೇ ನಾಲಿಗೆ ನಾಚಿದೆ ನಾಚಿದೆ
ಬಗೆಬಗೆ ಭಾವ ಮೂಡಿದೆ ಮೂಡಿದೆ
ಮನವು ನಿನ್ನೇ ಹೊಗಳಿದೆ ಹೊಗಳಿದೆ
ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ

ಪ್ರೇಮದಾಸೆ ತೋರಲಾರೆ ತೋರಲಾರೆ
ಪ್ರಣಯ ಲೀಲೆ ಆಡಲಾರೆ ಆಡಲಾರೆ
ಭಾಷೆಯ ಮೀರಿದೆ ಭಾವನೆ ಕಾಮನೆ
ಆಸೆಯ ಮೀರಿದೆ ಮೋಹದ ಪ್ರೇರಣೆ
ಓ ಗುಣವಂತ ಓ ಗುಣವಂತ
ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ
ಪದಗಳೇ ಸಿಗುತಿಲ್ಲ

Friday, September 24, 2010

ಸೂರ್ಯಂಗೂ ಚಂದ್ರಂಗೂ ಬಂದಾರೆ



ಚಿತ್ರ: ಶುಭಮಂಗಳ
ಸಾಹಿತ್ಯ: ಎಂ.ಎನ್. ವ್ಯಾಸರಾವ್
ಸಂಗೀತ: ವಿಜಯಭಾಸ್ಕರ್
ಗಾಯಕರು: ರವೀ (ಕೆ.ಎಸ್‌.ಎಲ್‌.ಸ್ವಾಮಿ)
ವರ್ಷ: ೧೯೭೫

ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು,
ಅರಮನ್ಯಾಗೆ ಏನೈತೆ ಸೊಗಸು

ಮನೆತುಂಬ ಹರಿದೈತೆ ಕೆನೆಹಾಲು ಮೊಸರು
ಎದೆಯಾಗೆ ಬೆರೆತೈತೆ ಬ್ಯಾಸರದಾ ಉಸಿರು, ಬ್ಯಾಸರದಾ ಉಸಿರು
ಗುಡಿಯಾಗೆ ಬೆಳ್‍ಗೈತೆ ತುಪ್ಪಾದ ದೀಪ
ನುಡಿಯಾಗೆ ನಡೆಯಾಗೆ ಸಿಡಿದೈತೆ ಕ್ವಾಪ, ಸಿಡಿದೈತೆ ಕ್ವಾಪ

ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು

ಬೆಳದಿಂಗಳು ಚೆಲ್ಲೈತೆ ಅಂಗಳದಾ ಹೊರಗೇ
ಕರಿಮೋಡ ಮುಸುಕೈತೆ ಮನಸಿನಾ ಒಳಗೇ
ಬಯಲಾಗೆ ತುಳುಕೈತೆ ಹರುಸದಾ ಒನಲು
ಪ್ರೀತಿಯಾ ತೇರಿಗೇ ಬಡಿದೈತೆ ಸಿಡಿಲು,ಬಡಿದೈತೆ ಸಿಡಿಲು

ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು

ಮುಂಬಾಗಿಲ ರಂಗೋಲಿ ಮನಗೈತೆ ಹಾಯಾಗೀ
ಕಿರುನಗೆಯ ಮುಖವೆಲ್ಲ ಮುದುಡೈತೆ ಸೊರಗೀ
ಆನಂದ ಸಂತೋಸ ಈ ಮನೆಗೆ ಬರಲೀ
ಬೇಡುವೆನು ಕೈಮುಗಿದು ಆ ನನ್ನ ಸಿವನಾ,ಆ ನನ್ನ ಸಿವನಾ

ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ಸೂರ್ಯಗೂ ಚಂದ್ರಂಗೂ ಬಂದಾರೆ ಮುನಿಸು
ನಗತಾದ ಭೂತಾಯಿ ಮನಸು
ರಾಜಂಗೂ ರಾಣೀಗೂ ಮುರಿದೋದ್ರೆ ಮನಸು
ಅರಮನ್ಯಾಗೆ ಏನೈತೆ ಸೊಗಸು, ಅರಮನ್ಯಾಗೆ ಏನೈತೆ ಸೊಗಸು