ಚಿತ್ರ: ಬೆಂಕಿಯ ಬಲೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೩
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಹರುಷ ಹರುಷ ಎಲ್ಲೆಲ್ಲೂ ಜೊತೆಗೆ ನೀನಿರೆ
ಸರಸ ಸರಸ ಬಾಳೆಲ್ಲ ಸನಿಹ ನೀನಿರೆ
ನಿನ್ನ ಮಾತಿಗೆ ನಿನ್ನ ಪ್ರೇಮಕೆ ನಾ ಸೋತು ಹೋದೆನು
ನಿನ್ನ ಸ್ನೇಹಕೆ ನಿನ್ನ ಪ್ರೀತಿಗೆ ಮಂಕಾಗಿ ಹೋದೆನು
ನನ್ನನ್ನೇ ಮರೆತೆನು
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಚೆಲುವ ನಿನ್ನ ನುಡಿ ಕೇಳಿ ಗಿಳಿಯು ನಾಚಿತು
ಚೆಲುವೆ ನಿನ್ನ ನಡೆ ನೋಡಿ ನವಿಲು ಕುಣಿಯಿತು
ನಗುನಗುತ ನೀ ಬರಲು ಹೊಸ ಆಸೆ ಚಿಮ್ಮಿತು
ನಿನ್ನ ಕಣ್ಣ ಮಿಂಚು ಮೂಡಲು ಮನವೇಕೋ ಬೆಚ್ಚಿತು
ಜಗವನ್ನೇ ಮರೆಸಿತು
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ
ನಿನ್ನ ನಗುವು ಹೂವಂತೆ ನಿನ್ನ ನುಡಿಯು ಹಾಡಂತೆ
ನಿನ್ನ ನುಡಿಯು ಹಾಡಂತೆ
Showing posts with label ಬೆಂಕಿಯ ಬಲೆ. Show all posts
Showing posts with label ಬೆಂಕಿಯ ಬಲೆ. Show all posts
Friday, June 3, 2011
Friday, November 19, 2010
ನನಗಾಗಿ ಬಂದ
ಚಿತ್ರ: ಬೆಂಕಿಯ ಬಲೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೩
ನನಗಾಗಿ ಬಂದ ಹೊ... ಆನಂದ ತಂದ.. ಹಾ...
ನನಗಾಗಿ ಬಂದ ಆನಂದ ತಂದ ಹೆಣ್ಣೇ ಮಾತಾಡು ಬಾ
ಈ ನಾಚಿಕೆ ನಿನಗೇತಕೆ ಈ ಮೌನವು ಇನ್ನೇತಕೆ
ನನಗಾಗಿ ಬಂದ ಆನಂದ ತಂದ ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..
ನಮಗಾಗೆ ಇಲ್ಲಿ ಮಂಚ ಹಾಕಿದೆ ಘಮಘಮಿಸೊ ಮಲ್ಲೆ ಹೂವ ಚೆಲ್ಲಿದೆ
ಹಾಲಿದೆ ಹಣ್ಣಿದೆ ನಿನ್ನ ಹಸಿವೆಗೆ ಹೇ.. ಕಾದಿಹೆ ಪ್ರೇಮದಿ ನಿನ್ನ ಸೇವೆಗೆ
ಮುಗಿಲಿಂದ ಚಂದ್ರ ಇಣುಕಿ ನೋಡಿದೆ ತಂಗಾಳಿ ತಂಪು ತಂದು ಚೆಲ್ಲಿದೆ
ಈ ಚಳಿ ತಾಳದೇ ತನುವು ನಡುಗಿದೆ ಪ್ರೀತಿಯ ತೋರುತ ಅಪ್ಪಿಕೊಳ್ಳದೇ
ಹ.. ಬೆಚ್ಚುವೆ ಹೀಗೇಕೆ ಹ.. ಕೆನ್ನೆಯು ಕೆಂಪೇಕೆ
ತುಟಿಯ ಬಳಿ ತುಟಿಗಳನು ನಾನು ತಂದಾಗ ಹೊ....
ನನಗಾಗಿ ಬಂದ.. ಹ.. ಹ.. ಹ.. ಹ.. ಹ.. ಹ.. ಹ..
ಆನಂದ ತಂದ.. ಹೋಯ್.. ಹೋಯ್.. ಹೋಯ್.. ಹೋಯ್..
ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..
ಕಣ್ಣಲ್ಲಿ ನೂರಾಸೆ ಸೇರಿಕೊಂಡಿದೆ ಮೈಯಲ್ಲ ಬಿಸಿಯೇರಿ ನಿನ್ನ ಕೂಗಿದೆ
ಕಾತುರ ತಾಳದೆ ಮನವು ನೊಂದಿದೆ ಹಾ.. ಆತುರ ನನ್ನೆದೆ ತುಂಬಿಕೊಂಡಿದೆ
ಅನುರಾಗದಾನಂದ ಹೃದಯ ತುಂಬಿದೆ ಮುತ್ತೊಂದು ಬೇಕೆಂದು ತುಟಿಯ ಕೇಳಿದೆ
ಜೀವವು ನಿಲ್ಲದು ಬಯಕೆ ಮುಗಿಯದೇ ಬೇಡುವೆ ಬಾರೆಯಾ ಬೇಗ ಸನಿಹಕೆ
ಅಂದದ ಹೆಣ್ಣೊಂದು ಅರೆ ಹಾ.. ಬಳಿಯಲಿ ನಿಂತಾಗ
ಕೈಯ ಕಟ್ಟಿ ಕುಳಿತಿರಲು ಕಲ್ಲು ನಾನಲ್ಲ.. ಹಾ.. ಹ.. ಹ.. ಹ..
ನನಗಾಗಿ ಬಂದ ಹೊ... ಆನಂದ ತಂದ.. ಹಾ...
ನನಗಾಗಿ ಬಂದ ಆನಂದ ತಂದ ಹೆಣ್ಣೇ ಮಾತಾಡು ಬಾ
ಈ ನಾಚಿಕೆ ನಿನಗೇತಕೆ ಈ ಮೌನವು ಇನ್ನೇತಕೆ
ನನಗಾಗಿ ಬಂದ.. ಹ.. ಹ.. ಹ.. ಹ.. ಹ.. ಹ.. ಹ..
ಆನಂದ ತಂದ.. ಹೊ.. ಹೊ.. ಹೊ.. ಹೊ.. ಹೊ.. ಹೊ.. ಹೊ..
ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..
ಹೆಣ್ಣೇ ಮಾತಾಡು ಬಾ.. ಬಾ.. ಬಾ.. ಬಾ..
Labels:
೧೯೮೩,
SPB,
ಚಿ. ಉದಯಶಂಕರ್,
ಬೆಂಕಿಯ ಬಲೆ,
ರಾಜನ್-ನಾಗೇಂದ್ರ
Subscribe to:
Posts (Atom)