Wednesday, March 9, 2011

ಭಾಗ್ಯಾದ ಲಕ್ಷ್ಮೀ ಬಾರಮ್ಮ



ಚಿತ್ರ: ಭಾಗ್ಯದ ಲಕ್ಷ್ಮೀ ಬಾರಮ್ಮ
ರಚನೆ: ಚಿ. ಉದಯಶಂಕರ್
ಸಂಗೀತ: ಸಿಂಗೀತಂ ಶ್ರೀನಿವಾಸರಾವ್
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೬

ಭಾಗ್ಯಾದ ಲಕ್ಷ್ಮೀ ಬಾರಮ್ಮ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ

ಉಸಿರನ್ನಾಡಲು ಪ್ರಾಣವು ಬೇಕು ಪ್ರಾಣವು ನಿಲ್ಲಲು ಊಟವು ಬೇಕು
ಊಟವ ಮಾಡಲು ಹಣವಿರಬೇಕು ಎಲ್ಲಕು ಲಕ್ಷ್ಮಿಯ ದಯೆ ಇರಬೇಕು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಜೇಬಿನ ತುಂಬ ಇದ್ದರೆ ನೋಟು ಸುಲಭದಿ ಸಿಗುವುದು ಕಾಲೇಜು ಸೀಟು
ದೊರಕದ ವೋಟಿನ ಬೇಟೆಗೆ ಕೂಡ ಇರಲೇಬೇಕು ಬಗೆ ಬಗೆ ನೋಟು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಕಾಸು ಬಿಚ್ಚಿದರೆ ಶೀಘ್ರ ದರುಶನ ಕಾಸಿಲ್ಲದಿರೆ ಧರ್ಮ ದರುಶನ
ಈ ಕಲಿಯುಗದಲಿ ಎಲ್ಲೇ ಹೋಗಲಿ ದೇವರು ಕೂಡ ನೋಡನು ಬಡವನ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ದೊರಕದ ಲೈಸೆನ್ಸ್ ದೊರಕುವುದುಂಟು ದೊರಕದ ವಸ್ತುವು ದೊರಕುವುದುಂಟು
ಟೇಬಲ್ ಕೆಳಗಡೆ ನೋಟು ತಳ್ಳಿದರೆ ಎಲ್ಲ ಕೆಲಸಕು ಸ್ಯಾಂಕ್ಷನ್ ಉಂಟು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ವೈದ್ಯರ ಆಸೆ ಬಡವನಿಗೇಕೆ ರೋಗವು ಬಂದರೆ ಅಳುವುದು ಏಕೆ
ಧರ್ಮಾಸ್ಪತ್ರೆಗೆ ಹೋದರು ರೋಗಿಯು ಲಂಚ ಲಂಚ ಎಂದರೆ ಮಂಚ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಕೆಲಸ ದೊರಕಲು ಹಣ ಕೊಡಬೇಕು ತಾಳಿಯ ಕಟ್ಟಲು ಕೂಲಿಯು ಬೇಕು
ಸಾಧು ಸನ್ಯಾಸಿಗಳಾದರೆ ಏನು ಪಾದ ಪೂಜೆಗೂ ನೋಟಿರಬೇಕು
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಗೌರವ ಧನವಿದು ಎಂದರೂ ಒಂದೇ ಮೆಚ್ಚಿಗೆಗಾಗಿ ಎಂದರೂ ಒಂದೇ
ವಿಶ್ವಾಸಕೆ ಕಿರುಗಾಣಿಕೆ ಎಂದರೂ ಎಲ್ಲಾ ಒಂದೇ ಲಂಚದ ಕಂತೆ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಝಣ ಝಣ ಎಂದು ಸದ್ದನು ಮಾಡು ಹೆಣವೂ ಬಾಯ್ ಬಾಯ್ ಬಿಡುವುದು ನೋಡು
ಹಣವಿದ್ದರೆ ನೀ ದಿನಕರನಂತೆ ಇಲ್ಲದಿದ್ದರೆ ಶ್ವಾನದಂತೆ
ಭಾಗ್ಯಾದ ಲಕ್ಷ್ಮೀ ಬಾರಮ್ಮ

ಇಲ್ಲದ ಬುಧ್ದಿಯ ಇದೆ ಎನ್ನುವರು ಇಲ್ಲದ ಅಂದವ ಇದೆ ಎನ್ನುವರು
ಒಲ್ಲದೆ ಹೋದರೂ ಓಲೈಸುವರು ಬಲ್ಲಿದನಾದರೆ ಪಾದ ಹಿಡಿವರು
ಭಾಗ್ಯಾದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ
ಸೌಭಾಗ್ಯಾದ ಲಕ್ಷ್ಮೀ ಬಾರಮ್ಮ

ನನ್ನೆದೆ ವೀಣೆಯು ಮಿಡಿಯುವುದು



ಚಿತ್ರ: ಕಥಾನಾಯಕ
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಎಂ. ರಂಗರಾವ್
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ,. ವಾಣಿ ಜಯರಾಂ
ವರ್ಷ: ೧೯೮೬

ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು.....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

ಎಂದೂ ಕಾಣೆ ನಂಬು ಜಾಣೆ ನಿನ್ನಾ ಸೇರಲು
ನೂರೂ ಮಾತು ನೂರೂ ಕವಿತೆ ಕಣ್ಣೇ ಆಡಲು
ನಿನ್ನಾ ನೋಟ ನಿನ್ನಾ ಆಟ ನನ್ನಾ ಸೆಳೆಯಲು
ಒಂಟಿ ಬಾಳು ಸಾಕು ಎಂದು ಮನಸೂ ಹೇಳಲು
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಆಸೆ ಕೆಣಕಿದಾಗ ತೋಳಿಂದಾ ಬಳಸಿದಾಗ
ಮಿಂಚಿನ ಬಳ್ಳಿಯು ಒಡಲಲಿ ಓಡುತ ನಾಚಿ ನೋಡಿದಾಗ

ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

ಮೇಲೆ ಸೂರ್ಯ ಜಾರಿ ಜಾರಿ ಬಿಸಿಲು ಕರಗಲು
ಸಂಜೆ ಬಂದು ರಂಗು ತಂದು ಮೇಲೆ ಎರಚಲು
ತಂಪು ಗಾಳಿ ಬೀಸಿ ಬಳ್ಳಿ ಬಳುಕಿ ಆಡಲು
ಹಾಗೇ ಹೀಗೆ ಆಡಿ ಹೂವು ಕಂಪು ಚೆಲ್ಲಲೂ
ದುಂಬಿ ನೋಡಿದಾಗ ಸಂಗೀತ ಹಾಡಿದಾಗ
ದುಂಬಿ ನೋಡಿದಾಗ ಸಂಗೀತ ಹಾಡಿದಾಗ
ಮನಸಿನ ಹಕ್ಕಿಯು ಕನಸನು ಕಾಣುತ ದೂರ ಹಾರಿದಾಗ

ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು
ಹೊಸ ಭಾವಗಳು ಕುಣಿದಾಡುವುದು...
ನಿನ್ನ ನೋಡಿದಾಗ..ಕಣ್ಣು ಕೂಡಿದಾಗ ಅನುರಾಗ ಮೂಡಿದಾಗ....
ನನ್ನೆದೆ ವೀಣೆಯು ಮಿಡಿಯುವುದು ಹೊಸರಾಗದಲಿ ಹೊರಹೊಮ್ಮುವುದು

ಮಲೆನಾಡ ಹೆಣ್ಣ ಮೈ ಬಣ್ಣ



ಚಿತ್ರ: ಭೂತಯ್ಯನ ಮಗ ಅಯ್ಯು
ಸಾಹಿತ್ಯ : ಆರ್. ಎನ್. ಜಯಗೋಪಾಲ್
ಸಂಗೀತ : ಜಿ. ಕೆ. ವೆಂಕಟೇಶ್
ಗಾಯಕರು : ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ
ವರ್ಷ: ೧೯೭೪

ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ನಾ ಮನಸೋತೆನೆ ಚಿನ್ನ
ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ

ಬಯಲು ಸೀಮೆಯ ಗಂಡು ಬಲುಗುಂಡು
ಜಗಮೊಂಡು ದುಂಡು ಹೂ ಚೆಂಡು
ನನ್ನ ಸರದಾಗೆ ರಸಗುಂಡು ನನ್ನ ಸರದಾಗೆ ರಸಗುಂಡು

ಮಾತು ನಿಂದು ಹುರಿದಾ ಅರಳು ಸಿಡಿದಂಗೆ
ಕಣ್ಣುಗಳು ಮಿಂಚಂಗೆ ನಿನ್ನ ನಗೆಯಲ್ಲೆ ಸೆಳೆದ್ಯಲ್ಲೆ
ಮನದಾಗೆ ನಿಂತ್ಯಲ್ಲೆ ನನ್ನ ಮನದಾಗೆ ನಿಂತ್ಯಲ್ಲೆ

ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ

ಕಾಡಬೇಡಿ ನೋಡಿಯಾರು ನನ್ನೋರು
ನನ್ನ ಹಿರಿಯೋರು ಬಿಡಿ ನನ್ನ ಕೈಯ್ಯ ದಮ್ಮಯ್ಯ
ತುಂಟಾಟ ಸಾಕಯ್ಯ ಈ ತುಂಟಾಟ ಸಾಕಯ್ಯ

ದೂರದಿಂದ ಬಂದೆ ನಿನ್ನ ಹಂಬಲಿಸಿ
ಗೆಳೆತನ ನಾ ಬಯಸಿ

ಆದ ನಾ ಬಲ್ಲೇ ನಾ ಬಲ್ಲೆ ನಾಚಿ ಮೊಗ್ಗಾದೆ ನಾನಿಲ್ಲೆ
ನಾಚಿ ಮೊಗ್ಗಾದೆ ನಾನಿಲ್ಲೆ

ಮಲೆನಾಡ ಹೆಣ್ಣ ಮೈ ಬಣ್ಣ
ಬಲು ಚೆನ್ನಾ ಆ ನಡು ಸಣ್ಣ ಅಹಾ ಮನಸೋತೆನೆ ಚಿನ್ನ
ನಾ ಮನಸೋತೆನೆ ಚಿನ್ನ