ಚಿತ್ರ: ಮಾತು ತಪ್ಪದ ಮಗ
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಇಳಯರಾಜ
ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೮
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು ಕನ್ನಡ ನಾಡಿದು ಚಿನ್ನದಾ ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಹರಿಯುವ ನೀರು ಹಸುರಿನ ಪೈರು ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು ಮರಗಳ ಸಂಪು ಎಲ್ಲೂ ಆ ತಾಯಿ ನಗೆಯೇ
ಹರಿಯುವ ನೀರು ಹಸುರಿನ ಪೈರು ಎಲ್ಲೆಡೆ ಆ ತಾಯ ಸಿರಿಯೇ
ಹೂಗಳ ಕೆಂಪು ಮರಗಳ ಸಂಪು ಎಲ್ಲೂ ಆ ತಾಯಿ ನಗೆಯೇ
ಭಾರತ ಮಾತೆಯಾ ಈ ತನುಜಾತೆಯ ಚೆಲುವನು ನೋಡುತ ನಲಿಯುವೆ ಮೆರೆಯುವೆ ನಾ..
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಎಲ್ಲೇ ಇರಲಿ ಹೇಗೇ ಇರಲಿ ನಮ್ಮೂರ ಸವಿನೋಟ ಚಂದ
ಸಾವಿರ ಭಾಷೆಯ ಕಲಿತರೂ ಮನಕೆ ಕನ್ನಡ ನುಡಿಮುತ್ತೆ ಅಂದ
ಪೂರ್ವದ ಪುಣ್ಯವೊ ಪಡೆದಿಹ ಭಾಗ್ಯವೊ ಹುಟ್ಟಿದೆ ಪಾವನ ಕನ್ನಡ ಮಣ್ಣಲಿ ನಾ...
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
ಗಂಧದ ಗೂಡಿದು ಕಲೆಗಳ ತೌರಿದು ಕನ್ನಡ ನಾಡಿದು ಚಿನ್ನದಾ ಮಣ್ಣಿದು
ಎಂಥಾ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು
Showing posts with label ಮಾತು ತಪ್ಪದ ಮಗ. Show all posts
Showing posts with label ಮಾತು ತಪ್ಪದ ಮಗ. Show all posts
Wednesday, June 1, 2011
Saturday, October 9, 2010
ಬಾನು ಭೂಮಿಯ ಮಿಲನವ ಬಯಸುತ
ಚಿತ್ರ: ಮಾತು ತಪ್ಪದ ಮಗ
ಸಾಹಿತ್ಯ: :ಆರ್. ಎನ್. ಜಯಗೋಪಾಲ್
ಸಂಗೀತ: ಇಳಯರಾಜ
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಗಾಯಕರು: ಎಸ್. ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ವರ್ಷ: ೧೯೭೮
ಬಾನು ಭೂಮಿಯ ಮಿಲನವ ಬಯಸುತ ಬಾಗಿದೆ
ಮುಗಿಲಲ್ಲಿ ಮಿಂಚಾಡಿದೆ ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೆ
ಬಾನು ಭೂಮಿಯ ನಡುವಲಿ ಅಂತರ ತುಂಬಿದೆ
ಮುಗಿಲಿಂದ ಮಿಂಚೋಡಿದೆ ಹೂ ಚಿಂತೆ ರವಿಗೆಲ್ಲಿದೆ
ಭ್ರಮೆ ತುಂಬಿದೆ ಸಂಗಮದೆ
ಬಾಳೆಂಬ ಬನದೆ ಒಲವೆಂಬ ಹೂವ ಸೌಗಂಧ ನೀ ತಂದೆ
ಬಾಗಿದ ಲತೆಗೆ ಆಸರೆ ತಂದು ಮನದಲ್ಲಿ ನೀ ನಿಂದೆ
ಮೌನದ ಮಾತಲಿ ತುಂಬಿದೆ ಅರ್ಥ ತಂದೆ ನಾನಾಗ ಮೂಡಿತು ಅನುರಾಗ
ಬಾನು ಭುಮಿಯ ನಡುವಲಿ ಅಂತರ ತುಂಬಿದೆ
ಮುಗಿಲಿಂದ ಮಿಂಚೋಡಿದೆ ಹೂ ಚಿಂತೆ ರವಿಗೆಲ್ಲಿದೆ
ಅಂಜಿಕೆ ಶಂಕೆ ತುಂಬಿದೆ ಮನದೆ ಮುಂದೇನು ಎನ್ನುತಲಿ
ಎಂದಿಗು ನಿನ್ನ ಕೈಬಿಡೆ ಚಿನ್ನ ನೋವೆನೆ ಬಂದಿರಲಿ
ಭರವಸೆ ತಂದ ಹರುಶದೊಳಿಂದ ಏನೊ ಆವೇಗ ಸೋತೆ ನಾನೀಗ
ಬಾನು ಭೂಮಿಯ ಮಿಲನವ ಬಯಸುತ ಬಾಗಿದೆ
ಮುಗಿಲಲ್ಲಿ ಮಿಂಚಾಡಿದೆ ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೆ
Labels:
೧೯೭೮,
SPB,
ಆರ್.ಎನ್. ಜಯಗೋಪಾಲ್,
ಇಳಯರಾಜ,
ಎಸ್. ಜಾನಕಿ,
ಮಾತು ತಪ್ಪದ ಮಗ
Subscribe to:
Posts (Atom)