Wednesday, November 10, 2010

ಮನೆಯನು ಬೆಳಗಿದೆ ಇಂದು



ಚಿತ್ರ : ಚಂದನದ ಗೊಂಬೆ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು:ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ವರ್ಷ: ೧೯೭೯

ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ

ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು

ಬೇರೆ ಏನೂ ಬೇಡದ ಹಾಗೆ ಮೋಡಿಯ ನೀ ಮಾಡಿದೆ
ಈ ನಿನ್ನ ಚೆಲುವ ಈ ನನ್ನ ಒಲವ ಸವಿಯಲ್ಲಿ ಕರಗಿ ಹೋದೆ
ಬೇರೆ ಏನೂ ಕಾಣದ ಹಾಗೆ ಮಾಯವ ನೀ ಮಾಡಿದೆ
ಈ ನಿನ್ನ ರೂಪ ನನ್ನೆದೆಯ ದೀಪ ಆದಂದೆ ಸೋತು ಹೋದೆ
ನಾನಂದೇ ಸೋತು ಹೋದೆ

ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು

ನೂರು ಜನುಮ ಮಾಡಿದ ಪುಣ್ಯ ನಿನ್ನನು ನಾ ಹೊಂದಿದೆ
ನೀ ನೀಡಿ ಹರುಷ ನೂರಾರು ವರುಷ ಬದುಕುವ ಬಯಕೆ ತಂದೆ
ನೋಡಿ ನೋಡಿ ತಣಿಯದೇ ಮನವು ದಣಿಯದೇ ಹಾಡಿ ಕುಣಿದಿದೆ
ಬಾಳೆಲ್ಲ ಹೀಗೆ ಬಳಿಯಲ್ಲೆ ಇರುವ ಹೊನ್ನಾಸೆ ನೀನು ತಂದೆ
ನೀ ನನ್ನ ಜೀವವಾದೆ

ಮನೆಯನು ಬೆಳಗಿದೆ ಇಂದು ನೀ ಬಂದು ಸುಖ ತಂದು
ಕಣ್ಣಲಿ ಕಲೆತೆ ಉಸಿರಲಿ ಬೆರೆತೆ ನೀನು ನನ್ನಲ್ಲೇ ಸೇರಿ ಹೋದೆ
ಮನವನು ತುಂಬಿದೆ ಇಂದು ನೀ ಬಂದು ಹಿತ ತಂದು

No comments: