ಚಿತ್ರ: ಮುಳ್ಳಿನ ಗುಲಾಬಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಸತ್ಯಂ
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೮೨
ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ನಿನಗಾಗಿ ಕೇಳೇ ಓ ರತೀ
ನಿನಗಾಗಿ ಕೇಳೇ ಓ ರತೀ
ನನ್ನೀ ಕಣ್ಣಲಿ ಕಾತರವೇನು ನಿನ್ನನು ಕಾಣುವ ಆತುರವೇನು
ನನ್ನೀ ಕಣ್ಣಲಿ ಕಾತರವೇನು ನಿನ್ನನು ಕಾಣುವ ಆತುರವೇನು
ಆತುರ ತರುವ ವೇದನೆ ಏನು
ಆತುರ ತರುವ ವೇದನೆ ಏನು ಜೀವದ ಜೀವವು ಪ್ರಿಯತಮೆ ನೀನು
ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ನಿನಗಾಗಿ ಕೇಳೇ ಓ ರತೀ
ನಿನಗಾಗಿ ಕೇಳೇ ಓ ರತೀ
ನೀರನು ತೊರೆದರೆ ಕಮಲಕೆ ಸಾವು ಹೂವನು ಮರೆತರೆ ದುಂಬಿಗೆ ಸಾವು
ನೀರನು ತೊರೆದರೆ ಕಮಲಕೆ ಸಾವು ಹೂವನು ಮರೆತರೆ ದುಂಬಿಗೆ ಸಾವು
ಕಾಣದೆ ಹೋದರೆ ಅರೆಕ್ಷಣ ನಿನ್ನ
ಕಾಣದೆ ಹೋದರೆ ಅರೆಕ್ಷಣ ನಿನ್ನ ಮರುಕ್ಷಣ ಪ್ರಿಯತಮೆ ನನ್ನ ಸಾವು
ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ ನಿನಗಾಗಿ ಕೇಳೇ ಓ ರತೀ
ನಿನಗಾಗಿ ಕೇಳೇ ಓ ರತೀ
No comments:
Post a Comment