ಚಿತ್ರ: ರಥಸಪ್ತಮಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
ವರ್ಷ: ೧೯೮೬
ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ...
ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಎಂದು ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ....
ಆ ಬಾನ ನೆರಳಲ್ಲಿ ಆ ಸೂರ್ಯನೆದುರಲ್ಲಿ
ಒಲವಿಂದ ನಾವೀಗ ಈ ಗಂಗೆ ದಡದಲ್ಲಿ
ಒಂದಾಗಿ ಸವಿಯಾದ ಮಾತೊಂದ ನುಡಿವ
ಈ ಸಂಜೆ ರಂಗಲ್ಲಿ ಈ ತಂಪು ಗಾಳೀಲಿ
ಜೊತೆಯಾಗಿ ನಾವೀಗ ಶಂಕರನ ಎದುರಲ್ಲಿ
ಇಂಪಾಗಿ ಹಿತವಾದ ಮಾತೊಂದ ನುಡಿವಾ
ನೀನೆ ನನ್ನ ಪ್ರಾಣ ನಮ್ಮ ಪ್ರಣಯ ಮಧುರ ಗಾನ
ನೀನೆ ನನ್ನ ಪ್ರಾಣ ನಮ್ಮ ಪ್ರಣಯ ಮಧುರ ಗಾನ
ಜೊತೆಯಾಗಿ ಹಿತವಾಗಿ ಸೇರಿ ನಡೆವ ಸೇರಿ ನುಡಿವ
ಕನಸಲ್ಲಿ ಕಂಡಾಸೆ ಮನಸಲ್ಲಿ ಇರುವಾಸೆ
ಎಲ್ಲವೂ ಒಂದೇನೇ ನಿನ್ನನ್ನು ಪಡೆವಾಸೆ
ಇನ್ನೇನು ಬೇಕಿಲ್ಲ ನನ್ನಾಣೆ ನಲ್ಲ
ಹಗಲಲ್ಲಿ ಕಂಡಾಸೆ ಇರುಳಲ್ಲಿ ಬಂದಾಸೆ
ಎಲ್ಲಾವೂ ಒಂದೇನೆ ನಿನ್ನೊಡನೆ ಇರುವಾಸೆ
ಬೇರೇನು ನಾ ಕೇಳೆ ನನ್ನಾಣೆ ನಲ್ಲೆ
ಎಂದೂ ಹೀಗೆ ಇರುವ ನಾವು ಎಂದೂ ಹೀಗೆ ನಲಿವ
ಎಂದೂ ಹೀಗೆ ಇರುವ ನಾವು ಎಂದೂ ಹೀಗೆ ನಲಿವ
ನಿನ್ನ ಬಿಡಲಾರೆ ನಾನೆಂದಿಗೂ
ಸೇರಿ ನಡೆವ ಸೇರಿ ನುಡಿವ
ನನ್ನ ಬದುಕಲ್ಲಿ ನೀ ಎಂದು ಬೆಳಕಾಗಿರು
ನನ್ನ ಉಸಿರಲ್ಲಿ ನೀ ಉಸಿರಾಗಿರು
ನಿನ್ನ ಬಿಡಲಾರೆ ನಾನೆಂದಿಗೂ
No comments:
Post a Comment